ಅಂತಾರಾಷ್ಟ್ರೀಯ ಯುವ ದಿನ 2022: ಯುವ ಶಕ್ತಿ ವೈಭವ, ದಿನದ ಪರಿಕಲ್ಪನೆ, ಮಹತ್ವ ತಿಳಿಯಿರಿ
ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎನ್ನುತ್ತಾರೆ. ಇಂದಿನ ಯುವಕರೇ ನಾಳೆಯ ನಾಯಕರು. ಯುವ ಶಕ್ತಿ ಈ ದೇಶದ ಅತಿದೊಡ್ಡ ಆಸ್ತಿ. ಇದೆಲ್ಲವೂ ಹೌದು.
ದೇಶದ ಬೆಳವಣಿಗೆಯ ಬೆನ್ನೆಲುಬಾಗಿರುವುದು ಯುವ ಸಮುದಾಯ. ಯಾವ ದೇಶದಲ್ಲಿ ಯುವ ಸಮುದಾಯ ಹೆಚ್ಚು ಸಂಖ್ಯೆಯಲ್ಲಿರುತ್ತದೋ, ಆ ಸಮುದಾಯ ಹೆಚ್ಚು ಕ್ರಿಯಾಶೀಲವಾಗಿರುತ್ತದೋ ಆ ದೇಶ ಸಮೃದ್ಧವಾಗಿರುತ್ತದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಅದೇ ಪವರ್ ಆಫ್ ಯೂಥ್.
ಅಂತೆಯೇ, ಯುವ ಸಮುದಾಯಕ್ಕೆ ಸಲಾಂ ಹೊಡೆಯಲಾದರೂ ಒಂದು ದಿನವಾಗಿ ಇಂದು ಆಗಸ್ಟ್ 12 ಇದೆ. ಪ್ರತೀ ವರ್ಷ ಈ ದಿನದಂದು ಇಂಟರ್ನ್ಯಾಷನಲ್ ಯೂತ್ ಡೇ ಅಥವಾ ಅಂತಾರಾಷ್ಟ್ರೀಯ ಯುವ ದಿನ ಆಗಿ ಆಚರಿಸಲಾಗುತ್ತದೆ.
ದೇಶದ ಬೆನ್ನೆಲುಬಾಗಿದ್ದರೂ ಯುವ ಸಮುದಾಯದ ಬಗ್ಗೆ ಕೆಲವೆಡೆ ದಿವ್ಯ ನಿರ್ಲಕ್ಷ್ಯ ಇದೆ. ರಾಜಕೀಯ ನಾಯಕರು ಯುವ ಜನರಿಗೆ ವಂಚನೆ ಎಸಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯುವಸಮುದಾಯದ ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಇಂಥ ಹೊತ್ತಿನಲ್ಲಿ ಯುವ ಸಮುದಾಯದ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಯುವ ದಿನವನ್ನು ಬಳಕೆ ಮಾಡಬಹುದಾಗಿದೆ.

ಯುವ ದಿನದ ಇತಿಹಾಸ
1965ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆ ಯುವ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಯತ್ನಗಳನ್ನು ಹಾಕತೊಡಗಿತು. ಜನರ ಮಧ್ಯೆ ಶಾಂತಿ, ಗೌರವ ಮತ್ತು ಅರಿವಿನ ಮೌಲ್ಯಕ್ಕೆ ಒತ್ತು ಕೊಡುವ ಘೋಷಣೆಗೆ ಬೆಂಬಲ ಕೊಡಲಾಯಿತು. ಯುವ ಸಮುದಾಯಕ್ಕೆ ಸಂಬಂಧಿಸಿದ ವಿವಿಧ ದೇಶಗಳ ಸಚಿವರ ವಿಶ್ವ ಸಭೆಯಲ್ಲಿ ವ್ಯಕ್ತವಾದ ಶಿಫಾರಸುಗಳನ್ನು 1999, ಡಿಸೆಂಬರ್ 17ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು. ಅದರಂತೆ ಅಂತಾರಾಷ್ಟ್ರೀಯ ಯುವ ದಿನವನ್ನು ನಿಗದಿ ಮಾಡಲಾಯಿತು.
2000, ಆಗಸ್ಟ್ 12ರಂದು ಇಂಟರ್ನ್ಯಾಷನಲ್ ಯೂತ್ ಡೇ ಅನ್ನು ಮೊದಲ ಬಾರಿಗೆ ಆಚರಿಸಲಾಯಿತು. ಆಗಿನಿಂದಲೂ ಪ್ರತೀ ವರ್ಷ ಜನಜಾಗೃತಿ ಮೂಡಿಲು ಈ ದಿನವನ್ನು ಬಳಸಿಕೊಳ್ಳಲಾಗುತ್ತಿದೆ.

ಯುವ ದಿನದ ಮಹತ್ವ
ವಿಶ್ವಾದ್ಯಂತ ಸಕಾರಾತ್ಮಕ ಬದಲಾವಣೆ ತರುತ್ತಿರುವ ಯುವಕರ ಕಾರ್ಯಗಳನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಲು ಈ ವೇದಿಕೆ ಇದೆ. ಸಾರ್ವಜನಿಕ ಜೀವನದ ಪ್ರವೇಶ, ಶಿಕ್ಷಣ, ಆರೋಗ್ಯ, ಉದ್ಯೋಗ, ಹಣಕಾಸು ಸೇವೆಗಳಲ್ಲಿ ಯುವಕರಿಗೆ ಸಂಪೂರ್ಣ ಅವಕಾಶ ಸಿಗುವಂತಾಗಬೇಕೆಂಬುದು ಇಂಟರ್ನ್ಯಾಷನಲ್ ಯೂತ್ ಡೇ ಧ್ಯೇಯ.

ಈ ವರ್ಷದ ಥೀಮ್
2022ರ ಇಂಟರ್ನ್ಯಾಷನಲ್ ಯೂತ್ ಡೇ ಪರಿಕಲ್ಪನೆ ವಿಭಿನ್ನವಾಗಿದೆ. "ಅಂತರ್ ತಲೆಮಾರು ಸಹಮತ' ತತ್ವ (Intergeneration Solidarity) ಹೊಂದಿದೆ. ಬೇರೆ ಬೇರೆ ತಲೆಮಾರುಗಳ ಮಧ್ಯೆ ಸಹಭಾಳ್ವೆ, ಎಲ್ಲಾ ವಯೋಮಾನದವರಿಗೂ ಸಮಾನವಾಗಿರುವ ಜಗತ್ತು ನಿರ್ಮಿಸುವ ಗುರಿ ಇದು.
ಎಲ್ಲಾ ತಲೆಮಾರಿನ ಜನರೂ ಕೂಡ ಅಜೆಂಡಾ 2030 ಗುರಿಯನ್ನು ತಲುಪಲು ಕೆಲಸ ಮಾಡಬೇಕು ಎಂಬುದು ಈ ವರ್ಷದ ಅಂತಾರಾಷ್ಟ್ರೀಯ ಯುವ ದಿನದ ವೇದಿಕೆಯ ಕರೆಯಾಗಿದೆ.
ಅಜೆಂಡಾ 2030 ಎಂಬದು ವಿಶ್ವಸಂಸ್ಥೆ ಸಾಮಾನ್ಯ ಸಭೆ ರೂಪಿಸಿದ ಗುರಿ. ನಮ್ಮ ಭೂಮಿಯನ್ನು ರಕ್ಷಿಸುವುದರ ಜೊತೆಗೆ ಬಡತನ, ಅಸಮಾನತೆ ಇತ್ಯಾದಿಯನ್ನು ನಿವಾರಿಸಲು ಒಂದು ನೀಲಿನಕ್ಷೆ ರೂಪಿಸಲಾಗಿದೆ. ಅದೇ ಅಜೆಂಡಾ ೨೦೨೦.

ವಿಶ್ ಮಾಡಿ
ಉದ್ಯೋಗ ಅರಸುವವರಾಗುವುದು ಬಿಟ್ಟು ಉದ್ಯೊಗ ಸೃಷ್ಟಿಕರ್ತರಾಗುವಂತೆ ಯುವಜನರನ್ನು ಅಣಿಗೊಳಿಸಬೇಕು- ಎಪಿಜೆ ಅಬ್ದುಲ್ ಕಲಾಂ
ಯುವಕನಾಗಿದ್ದಾಗ ನೋವು ತರುವ ಮತ್ತು ವರ್ಷಗಳ ಬಳಿಕ ಮಾಗಿದಾಗ ರುಚಿ ಕೊಡುವ ಏಕಾಂತದಲ್ಲಿ ನಾನು ಬದುಕುತ್ತೇನೆ - ಆಲ್ಬರ್ಟ್ ಐನ್ಸ್ಟೀನ್.
ಯುವ ಶಕ್ತಿಯು ಇಡೀ ವಿಶ್ವಕ್ಕೆ ಸಾಮಾನ್ಯ ಸಂಪತ್ತು. ಯುವ ಜನರು ನಮ್ಮ ಇತಿಹಾಸ, ನಮ್ಮ ವಾಸ್ತವ ಮತ್ತು ನಮ್ಮ ಭವಿಷ್ಯದ ಕನ್ನಡಿ. ಯುವ ಜನರ ಶಕ್ತಿ, ವಿಚಾರ, ಉತ್ಸಾಹ ಮತ್ತು ಧೈರ್ಯಕ್ಕೆ ನಮ್ಮ ಸಮಾಜದ ಬೇರೆ ಯಾವ ವರ್ಗವೂ ಸಾಟಿ ಅಲ್ಲ- ಕೈಲಾಶ್ ಸತ್ಯಾರ್ಥಿ.
(ಒನ್ಇಂಡಿಯಾ ಸುದ್ದಿ)
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications