ಅಮೆಜಾನ್, ಕಾಂಗ್ನಿಜೆಂಟ್ ರಿಜೆಕ್ಟ್ ಮಾಡಿದ ಯುವಕನಿಗೆ ಮೈಕ್ರೋಸಾಫ್ಟ್ನಲ್ಲಿ 50 ಲಕ್ಷ ಸಂಬಳ !
ದೆಹರಾದುನ್ನಲ್ಲಿ ಯುಪಿಇಎಸ್ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ನಿಂದ ತೈಲ ಮತ್ತು ಅನಿಲ ಮಾಹಿತಿಯಲ್ಲಿ ಪರಿಣತಿ ಹೊಂದಿರುವ ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಓದುತ್ತಿರುವ ಹರಿಯಾಣದ ಅಂಬಾಲಾದ ಯುವಕ 50 ಲಕ್ಷ ರೂ. ಜಾಬ್ ಆಫರ್ ನೀಡಿರುವ ಮೈಕ್ರೋಸಾಫ್ಟ್ನಲ್ಲಿ ಕೆಲಸ ಪಡೆದುಕೊಂಡಿದ್ದಾನೆ.
ಈ ಯುವಕನಿಗೆ ಹೆಸರಾಂತ ಮೈಕ್ರೋಸಾಫ್ಟ್ ಕಂಪನಿಯು 50 ಲಕ್ಷ ರೂ. ಪ್ಯಾಕೇಜ್ ನೀಡಿದೆ. ತಮ್ಮ ತಂದೆ ಸಣ್ಣ ಅಂಗಡಿಯ ಪ್ಯಾಪಾರಿಯಾಗಿದ್ದು, ಇನ್ನು ನೀವು ನಂಬಬೇಕಿರುವ ಸಂಗತಿಯೆಂದರೆ 2018ರಿಂದ 2022ರ ಬ್ಯಾಚ್ನ ಬಿ.ಟೆಕ್ ವಿಧ್ಯಾರ್ಥಿಯಾಗಿರುವ ಈ ಯುವಕ ತನಗೆ ಈ 50 ಲಕ್ಷ ರೂ. ಪ್ಯಾಕೇಜ್ ಇರುವ ಹಾಗೂ ಈ ಕೆಲಸ ಸಿಗುವ ಮುನ್ನ ದೇಶದಲ್ಲಿ ಹೆಸರಾಂತ ಕಂಪನಿಗಳಾದ ಅಮೆಜಾನ್, ಕಾಂಗ್ನಿಜೆಂಟ್ ಹೀಗೆ ನಾಲ್ಕೈದು ಕಂಪನಿಗಳಿಂದ ಜಾಬ್ ಆಫರ್ ರಿಜೆಕ್ಟ್ ಮಾಡಿದ್ದನು.

50 ಲಕ್ಷ ರೂ. ಕೆಲಸ ಗಿಟ್ಟಿಸಿಕೊಂಡ ಮಧುರ್ ರಾಖೇಜಾ
ಹರಿಯಾಣದ ಅಂಬಾಲಾ ಕಂಟೋನ್ಮೆಂಟ್ ನಿವಾಸಿ ಮಧುರ್ ರಖೇಜಾ ಡೆಹ್ರಾಡೂನ್ನಲ್ಲಿ ಓದುತ್ತಿಕೊಂಡಿದ್ದಾರೆ. ಮೈಕ್ರೋಸಾಫ್ಟ್ನಿಂದ 50 ಲಕ್ಷ ರೂಪಾಯಿ ಉದ್ಯೋಗದ ಆಫರ್ ಸಿಕ್ಕಿದೆ. ಯುವಕನ ತಾಯಿ ಗೃಹಿಣಿ, ಅವರೂ ಮಗನ ಸಾಧನೆಯಿಂದ ತುಂಬಾ ಖುಷಿಯಾಗಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್, ಅಮೆಜಾನ್, ಆ್ಯಪಲ್, ಗೂಗಲ್ ಹೀಗೆ ದೊಡ್ಡ ಬ್ರಾಂಡ್ಗಳಲ್ಲಿ ಕೆಲಸ ಸಿಕ್ಕರೆ ಅವರ ಖುಷಿ ಎಲ್ಲಿಲ್ಲದಂತಾಗುತ್ತದೆ. ಈ ಕಂಪನಿಗಳಿಂದಲೇ ವೃತ್ತಿ ಜೀವನ ಆರಂಭವಾದರೆ ಅದೊಂದು ದೊಡ್ಡ ಬ್ರೇಕ್ ಎಂದು ಪರಿಗಣಿಸಿ ವಿದ್ಯಾರ್ಥಿಯೊಬ್ಬ ಈ ಕಂಪನಿಗಳ ಕೆಲಸವನ್ನು ತಿರಸ್ಕರಿಸಿ ಇದೀಗ ಮೈಕ್ರೋಸಾಫ್ಟ್ನಿಂದ 50 ಲಕ್ಷ ರೂ. ಎಲ್ಪಿಎ ಪ್ಯಾಕೇಜ್ ಹೊಂದಿರುವ ಕೆಲಸ ಗಿಟ್ಟಿಸಿಕೊಂಡಿದ್ದಾನೆ ಇನ್ನು ಹರಿಯಾಣ ಮೂಲದ ಈ ಯುವಕನ ತಂದೆ ಅವರು ಮಗನ ಸಾಧನೆಯಿಂದ ಖುಷಿಪಟ್ಟಿದ್ದು ಅವರು ಸಣ್ಣ ಸಾಧಾರಣ ಅಂಗಡಿ ನಡೆಸುತ್ತಿದ್ದಾರೆ.
ಮೈಕ್ರೋಸಾಫ್ಟ್ ವರ್ಕ್ ಕಲ್ಚರ್ ಅದ್ಭುತವಾಗಿರುವುದರಿಂದ ಮೈಕ್ರೋಸಾಫ್ಟ್ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಮಧುರ್ ಹೇಳಿದ್ದಾರೆ. ಅಲ್ಲಿ ಇಂಜಿನಿಯರ್ಗಳು ಮಾಡುವ ಕೆಲಸ ಬಹಳ ಪ್ರಭಾವಶಾಲಿಯಾಗಿದೆ. ನೌಕರರನ್ನು ನೋಡಿಕೊಳ್ಳಲಾಗುತ್ತದೆ. ಮೈಕ್ರೋಸಾಫ್ಟ್ ತನ್ನ ಉದ್ಯೋಗಿಗಳು ತಮ್ಮ ಹವ್ಯಾಸಗಳು ಮತ್ತು ಆಸಕ್ತಿಗಳನ್ನು ಮುಂದುವರಿಸಲು ಇಷ್ಟಪಡುತ್ತದೆ ಎಂದು ಮಧುರ್ ರಾಖೇಜಾ ತಮ್ಮ ಹೊಸ ಕೆಲಸದ ಕುರಿತು ಹೇಳಿಕೊಂಡಿದ್ದಾರೆ.

ಮೈಕ್ರೋಸಾಫ್ಟ್ ಆ ಪಟ್ಟಿಯಲ್ಲಿತ್ತು
ಮಧುರ್ ರಾಖೇಜಾ ಅವರು ಯುಪಿಇಎಸ್ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ನಿಂದ ಆಯಿಲ್ ಮತ್ತು ಗ್ಯಾಸ್ ಇನ್ಫರ್ಮ್ಯಾಟಿಕ್ಸ್ನಲ್ಲಿ ವಿಶೇಷತೆಯೊಂದಿಗೆ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದ್ದಾರೆ. ಮಧುರ್, "ನಾನು ಯಾವಾಗಲೂ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದೇನೆ ಮತ್ತು ಜಗತ್ತಿನಾದ್ಯಂತ ಲಕ್ಷಾಂತರ ಜನರ ಜೀವನವನ್ನು ಬದಲಾಯಿಸುವ ಮತ್ತು ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದ್ದೇನೆ ಮತ್ತು ಅಂತಹ ದೊಡ್ಡ ಕಂಪನಿಯ ಭಾಗವಾಗಲು ನಾನು ಯಾವಾಗಲೂ ಬಯಸುತ್ತೇನೆ." ಎಂದಿರುವ ಈ ಯುವಕ, 'ನನ್ನ ಮನಸ್ಸಿನಲ್ಲಿ ನಾನು ಆಯ್ಕೆಯಾಗಲು ಬಯಸುವ ಕಂಪನಿಗಳ ಪಟ್ಟಿಯನ್ನು ಹೊಂದಿದ್ದೆ. ಮೈಕ್ರೋಸಾಫ್ಟ್ ಆ ಪಟ್ಟಿಯಲ್ಲಿತ್ತು, ಮತ್ತು ನಾನು ಇತರ ಜನರ ಸಂದರ್ಶನದ ಅನುಭವಗಳನ್ನು ಓದುವ ಮೂಲಕ ಮತ್ತು ನನಗೆ ಬೇಕಾದ ಕೌಶಲ್ಯಗಳನ್ನು ಕಲಿಯುವ ಮೂಲಕ ಆಯ್ಕೆ ಪ್ರಕ್ರಿಯೆಗೆ ಸಿದ್ಧಪಡಿಸಿದೆ.' ಕ್ಯಾಂಪಸ್ ಪ್ಲೇಸ್ಮೆಂಟ್ನಿಂದ ಮಧುರ್ ಅವರಿಗೆ ಈ ಉದ್ಯೋಗದ ಆಫರ್ ಸಿಕ್ಕಿದೆ.

ಅಮೆಜಾನ್, ಕಾಗ್ನಿಜೆಂಟ್, ಇನ್ಫೋಸಿಸ್ ಕಂಪನಿ ಆಫರ್ ರಿಜೆಕ್ಟ್
ಮೈಕ್ರೋಸಾಫ್ಟ್ ಹೊರತುಪಡಿಸಿ, ಮಧುರ್ ಅವರು ಅಮೆಜಾನ್, ಡಿಇ ಶಾ, ಆಪ್ಟಮ್, ಕಾಗ್ನಿಜೆಂಟ್, ಇನ್ಫೋಸಿಸ್ ಮುಂತಾದ ಹಲವಾರು ಕಂಪನಿಗಳಿಗೆ ಆನ್-ಕ್ಯಾಂಪಸ್ ಮತ್ತು ಆಫ್-ಕ್ಯಾಂಪಸ್ ಎರಡನ್ನೂ ಅನ್ವಯಿಸಿದ್ದರು. "ಇವುಗಳಲ್ಲಿ, ನಾನು ಮೈಕ್ರೋಸಾಫ್ಟ್, ಆಪ್ಟಮ್ ಮತ್ತು ಕಾಗ್ನಿಜೆಂಟ್ನಿಂದ ಪೂರ್ಣ ಸಮಯದ ಕೊಡುಗೆಗಳನ್ನು ಮತ್ತು ಕ್ಯಾಂಪಸ್ ನಿಯೋಜನೆಗಳ ಭಾಗವಾಗಿ ಅಮೆಜಾನ್ನಿಂದ ಇಂಟರ್ನ್ಶಿಪ್ ಕೊಡುಗೆಗಳನ್ನು ಪಡೆದುಕೊಂಡಿದ್ದೇನೆ" ಎಂದು ಅವರು ಹೇಳಿದರು. ಇಂಟರ್ನ್ಶಿಪ್ನಲ್ಲಿ ನನ್ನ ಕಾರ್ಯಕ್ಷಮತೆಯ ಆಧಾರದ ಮೇಲೆ, ಅಮೆಜಾನ್ನಲ್ಲಿ ಎಸ್ಡಿಇ ಪಾತ್ರಕ್ಕಾಗಿ ನನಗೆ ಪೂರ್ಣ ಸಮಯದ ಕೊಡುಗೆಯೂ ಸಿಕ್ಕಿತ್ತು ಎಂದು ಮಧುರ್ ಹೇಳಿಕೊಂಡಿದ್ದಾನೆ.

ಮೈಕ್ರೋಸಾಫ್ಟ್ ಕಂಪನಿ ಆಯ್ಕೆ ಮಾಡಿದ್ದು ಯಾಕೆ?
ಮೈಕ್ರೋಸಾಫ್ಟ್ ಈ ವರ್ಕ್ ಕಲ್ಚರ್ ಅದ್ಭುತವಾಗಿರುವುದರಿಂದ ಮೈಕ್ರೋಸಾಫ್ಟ್ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಮಧುರ್ ಹೇಳಿದ್ದಾರೆ. ಅಲ್ಲಿ ಇಂಜಿನಿಯರ್ಗಳು ಮಾಡುವ ಕೆಲಸ ಬಹಳ ಪ್ರಭಾವಶಾಲಿಯಾಗಿದೆ. ನೌಕರರನ್ನು ನೋಡಿಕೊಳ್ಳಲಾಗುತ್ತದೆ. ಮೈಕ್ರೋಸಾಫ್ಟ್ ತನ್ನ ಉದ್ಯೋಗಿಗಳು ತಮ್ಮ ಹವ್ಯಾಸಗಳು ಮತ್ತು ಆಸಕ್ತಿಗಳನ್ನು ಮುಂದುವರಿಸಲು ಇಷ್ಟಪಡುತ್ತದೆ. ಮೈಕ್ರೋಸಾಫ್ಟ್ ವಿಭಿನ್ನ ಹಿನ್ನೆಲೆಯ ಜನರನ್ನು ಸ್ವಾಗತಿಸುತ್ತಾರೆ. ಸಂಬಳವು ಉತ್ತಮವಾಗಿದೆ ಮತ್ತು ಉದ್ಯೋಗಿಗಳಿಗೆ ಮೈಕ್ರೋಸಾಫ್ಟ್ ಷೇರುಗಳನ್ನು ಸಹ ನೀಡಲಾಗುತ್ತದೆ. ಇದಲ್ಲದೆ, ಇನ್ನೂ ಅನೇಕ ಪ್ರಯೋಜನಗಳಿವೆ ಎಂದು ಮಧುರ್ ರಾಖೇಜಾ ಹೇಳಿಕೊಂಡಿದ್ದಾನೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications