ಮೂಡಬಿದಿರೆ, ಸುಳ್ಯ, ಬೆಳ್ತಂಗಡಿಯಲ್ಲಿ ಕಾದಾಟ
ಸುಳ್ಯ ಕ್ಷೇತ್ರ : ಈ ಕ್ಷೇತ್ರದಲ್ಲೂ ಒಕ್ಕಲಿಗರು ಹೆಚ್ಚಿನ ಮತದಾರರು. ಎರಡನೇ ಸ್ಥಾನದಲ್ಲಿ ಮುಸ್ಲಿಮರಿದ್ದರೂ ಇಲ್ಲಿ ಗೆಲುವು ಮಾತ್ರ ಬಿಜೆಪಿಯದ್ದೇ. ಬಿಜೆಪಿ ಕಳೆದ ಮೂರು ಬಾರಿ ದಲಿತ ಸಮುದಾಯದ ಎಸ್ ಅಂಗಾರ ಅವರನ್ನು ಕಣಕ್ಕಿಳಿಸಿ ಮೂರು ಬಾರಿಯೂ ಶಾಸಕರನ್ನಾಗಿಸಿದೆ. ಬಿಜೆಪಿಯ ಬಗ್ಗೆ ಒಲವಿರುವ ಒಕ್ಕಲಿಗರು, ಬಂಟ್ಸ್, ಬಿಲ್ಲವರು ಬಿಜೆಪಿಯನ್ನೇ ಹರಸುತ್ತಾರೆ. ಹೀಗಾಗಿ ಈ ಬಾರಿಯೂ ಬಿಜೆಪಿ ಅದೇ ಅಭ್ಯರ್ಥಿ ಎಸ್ ಅಂಗಾರ ಅವರನ್ನು ಕಣಕ್ಕಿಳಿಸಿದೆ. ಕಳೆದ ಬಾರಿ ಅವರಿಗೆ ಎದುರಾಳಿಯಾಗಿದ್ದ ಡಾ.ಸಿ.ರಘು ಅವರು ಈ ಬಾರಿಯೂ ಕಾಂಗ್ರೇಸ್ನಿಂದ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಜಾತಿ ರಾಜಕಾರಣಕ್ಕಿಂತಲೂ ಹಿಂದುತ್ವದ ರಾಜಕಾರಣವೇ ನಡೆಯುತ್ತದೆ. ಹೀಗಾಗಿಯೇ ಬಿಜೆಪಿ ಈ ಕ್ಷೇತ್ರದಲ್ಲಿ ಪ್ರತೀ ಬಾರಿಯೂ ಜಯಭೇರಿ ಬಾರಿಸುತ್ತಿದೆ.
ಬೆಳ್ತಂಗಡಿ ಕ್ಷೇತ್ರ : ಬಿಲ್ಲವರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಬಿಲ್ಲವ ಮತದಾರರೇ ನಿರ್ಣಾಯಕ. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಇಲ್ಲಿ ಬಿಲ್ಲವ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತಿದೆ. ಇಲ್ಲಿ ಇನ್ನೊಂದು ವಿಶೇಷತೆ ಏನಂದರೆ, ಎರಡೂ ರಾಷ್ಟ್ರೀಯ ಪಕ್ಷಗಳು ಸಹೋದರನ್ನು ಕಳೆದ ಹಲವು ಬಾರಿ ಕಣಕ್ಕಿಳಿಸಿದೆ. ಕಾಂಗ್ರೆಸ್ನಿಂದ ವಸಂತ ಬಂಗೇರ ಸ್ಪರ್ಧಿಸಿದರೆ ಬಿಜೆಪಿಯಿಂದ ಅವರ ತಮ್ಮ ಪ್ರಭಾಕರ ಬಂಗೇರ ಸ್ಪರ್ಧಿಸುತ್ತಾರೆ. ಒಂದು ಬಾರಿ ಅಣ್ಣ ಇನ್ನೊಂದು ಬಾರಿ ತಮ್ಮ ಬೇರೆ ಬೇರೆ ಪಕ್ಷಗಳಿಂದ ಜಯಬೇರಿ ಬಾರಿಸುತ್ತಿದ್ದರು. ಕಳೆದ ಬಾರಿ ಬಿಜೆಪಿಯ ಪ್ರಭಾಕರ ಬಂಗೇರವರನ್ನು ಸೋಲಿಸಿದ ಅಣ್ಣ ಕಾಂಗ್ರೆಸ್ ವಸಂತ ಬಂಗೇರ ಶಾಸಕರಾಗಿದ್ದರು. ಇದೇ ಲೆಕ್ಕಾಚಾರದಲ್ಲಿ ಈ ಬಾರಿಯೂ ಕಾಂಗ್ರೆಸ್ ವಸಂತ ಬಂಗೇರ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯಿಂದ ಈ ಬಾರಿ ರಾಜನ್ ಜಿ. ಗೌಡ ಅವರು ಕಣಕ್ಕಿಳಿಯಲಿದ್ದಾರೆ. ಒಟ್ಟಿನಲ್ಲಿ ಇಲ್ಲಿ ಯಾರೇ ಗೆಲವು ಸಾಧಿಸಿದರು ಅದು ಬಿಲ್ಲವ ಮತದಿಂದಲೇ ಅನ್ನೋದು ಮಹತ್ವದ ಅಂಶ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ