ಮಂಗಳೂರು ನಗರದಲ್ಲಿ ಯುಟಿ ಖಾದರ್ ಖದರ್
ಬಿಜೆಪಿ ಅಭ್ಯರ್ಥಿಯ ಭಾರೀ ಗೊಂದಲದಲ್ಲಿದ್ದು ಮಲೆಯಾಳಿ ಬಿಲ್ಲವರಾಗಿರುವ ಚಂದ್ರಹಾಸ್ ಉಳ್ಳಾಲ್ ಅವರನ್ನು ಕಣಕ್ಕಿಳಿಸಿದೆ. ಪ್ರಸ್ತುತ ಶಾಸಕ ಯು.ಟಿ.ಖಾದರ್ ಅವರ ಬಗ್ಗೆ ಯಾವುದೇ ಬ್ಲಾಕ್ ಮಾರ್ಕ್ಗಳಿಲ್ಲದೆ ಒಳ್ಳೆಯ ಅಭಿವೃದ್ದಿ ಮಾಡಿದಾತ ಎಂದು ಗುರುತಿಸಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಅತ್ಯಧಿಕ ಪ್ರಶ್ನೆ ಕೇಳಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಯು.ಟಿ.ಖಾದರ್ಗೆ ಮುಸ್ಲಿಂಮರ ಜೊತೆಗೆ ಕ್ರೈಸ್ತ ಹಾಗೂ ಮೊಗವೀರರ ಮತವೂ ಸಿಗುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ಮತ್ತೆ ಯು.ಟಿ.ಖಾದರ್ ಜಯಭೇರಿ ಬಾರಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಮಂಗಳೂರು ದಕ್ಷಿಣ ಕ್ಷೇತ್ರ : ಈ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬಿಲ್ಲವ ಸಮುದಾಯದವರಿದ್ದಾರೆ. ಜೊತೆಗೆ ಜಿಎಸ್ಬಿ(ಕೊಂಕಣಿ) ಮತದಾರರು ಹೆಚ್ಚಿರೋದರಿಂದ ಪ್ರತೀಬಾರಿಯೂ ಇಲ್ಲಿ ಬಿಜೆಪಿಯೇ ಗೆಲುವು ಸಾಧಿಸುತ್ತಿದೆ. ಇದರ ಪರಿಣಾಮವಾಗಿ ಕಳೆದ 4 ಬಾರಿ ಸತತವಾಗಿ ಜಿಎಸ್ಬಿ ಸಮುದಾಯಕ್ಕೆ ಸೇರಿದ ಬಿಜೆಪಿಯ ಎನ್.ಯೋಗೀಶ್ ಭಟ್ ಅವರೇ ಈ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಇದೇ ಧೈರ್ಯದಿಂದ ಬಿಜೆಪಿ ಯೋಗೀಶ್ ಭಟ್ ಗೆ ಈ ಕ್ಷೇತ್ರದಲ್ಲಿ ಟಿಕೆಟ್ ನೀಡಿದೆ. ಬಿಲ್ಲವರು 50 ಸಾವಿರ ಹಾಗೂ ಕೊಂಕಣಿ ಮತದಾರರು ಅದರ ಅರ್ಧದಷ್ಟು ಅಂದರೆ 25 ಸಾವಿರದಷ್ಟು ಮತದಾರರು ಇರೋದರಿಂದಲೇ ಯೋಗೀಶ್ ಭಟ್ ಪದೇ ಪದೇ ಅದೇ ಕ್ಷೇತ್ರದಿಂದ ಆಯ್ಕೆಗೊಳ್ಳುತ್ತಿದ್ದಾರೆ.
ಈ ಕ್ಷೇತ್ರದಲ್ಲಿ 22 ಸಾವಿರ ಮುಸ್ಲಿಂ ಮತದಾರರು ಕ್ರೈಸ್ತರು, ದಲಿತರು, ಲಿಂಗಾಯತರು ಇರೋದರಿಂದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ನಿಲ್ಲಿಸಿದರೆ ಕಾಂಗ್ರೆಸ್ ಗೆಲ್ಲುತ್ತದೆ ಅನ್ನುವ ಲೆಕ್ಕಾಚಾರದಿಂದ ಪ್ರತೀ ಬಾರಿಯೂ ಅಲ್ಪಸಂಖ್ಯಾತರಿಗೇ ಕಾಂಗ್ರೆಸ್ ಟಿಕೆಟ್ ನೀಡುತ್ತಿದೆ. ಕಳೆದ ಬಾರಿ ಐವನ್ ಡಿಸೋಜಾಗೆ ಟಿಕೆಟ್ ನೀಡಿದ್ದು ಕಾಂಗ್ರೆಸ್ ಸೋಲುಂಡಿತ್ತು. ಈ ಬಾರಿ ಕ್ರೈಸ್ತ ಸಮುದಾಯದವರಾದ ಜೆ.ಆರ್.ಲೋಬೋ ಅವರಿಗೆ ಕಾಂಗ್ರೆಸ್ ಟಿಕೇಟ್ ನೀಡಿದ್ದು, ಅವರ ಗೆಲುವು ಕಷ್ಟಕರವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ನಡುವೆ ಈ ಕ್ಷೇತ್ರದಲ್ಲಿ ಜೆಡಿಎಸ್, ಸಿಪಿಐಎಂ ಪಕ್ಷವೂ ಸ್ಪರ್ಧಿಸಲಿದ್ದು ಇದು ಕಾಂಗ್ರೆಸ್ ನ ಹಿನ್ನಡೆಗೆ ಕಾರಣವಾಗಲಿದೆ.
ಬಂಟ್ವಾಳ ಕ್ಷೇತ್ರ : ಈ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬಿಲ್ಲವ ಸಮುದಾಯದವರೇ ಇರೋದು. ಎರಡನೇ ಸ್ಥಾನದಲ್ಲಿ ಮುಸ್ಲಿಂ ಮತದಾರರು ಇದ್ದಾರೆ. ಹೀಗಾಗಿ ಈ ಕ್ಷೇತ್ರ ಒಂದು ಬಾರಿ ಕಾಂಗ್ರೆಸ್ ಇನ್ನೊಂದು ಬಾರಿ ಬಿಜೆಪಿಯ ಪಾಲಾಗುತ್ತಿತ್ತು. ಕಾಂಗ್ರೆಸ್ನ ಬಿ.ರಮಾನಾಥ ರೈ ಈ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಸಚಿವರಾಗಿದ್ದರು. ನಂತರದ ಚುನಾವಣೆಯಲ್ಲಿ ಬಿಜೆಪಿಯ ನಾಗರಾಜ ಶೆಟ್ಟಿ ಜಯಭೇರಿ ಬಾರಿಸಿ ಸಚಿವರಾಗಿದ್ದರು. ಆದರೆ ಅವರು ಅಭಿವೃದ್ದಿ ಕೆಲಸ ಮಾಡಿಲ್ಲ ಎಂದು ಮತ್ತೆ ರಮಾನಾಥ ರೈ ಅವರನ್ನೇ ಮತದಾರರು ಆರಿಸಿದರು. ಬಿಲ್ಲವರೇ ಹೆಚ್ಚಾಗಿದ್ದರೂ ಬಂಟ ಸಮುದಾಯದವರನ್ನು ಇಲ್ಲಿ ಆಯ್ಕೆ ಮಾಡುತ್ತಿದ್ದಾರೆ. ಅದೂ ಕೂಡಾ ಪಕ್ಷ ಹಾಗೂ ಅಭ್ಯರ್ಥಿಯನ್ನು ನೋಡಿಯೇ ಮತ ಹಾಕುತ್ತಾರೆ. ಈ ಬಾರಿ ಕಾಂಗ್ರೆಸ್ ರಮಾನಾಥ ರೈ ಅವರಿಗೆ ಟಿಕೆಟ್ ನೀಡಿದ್ದು, ಬಿಜೆಪಿ ಇನ್ನೊರ್ವ ಬಂಟ ಸಮುದಾಯದ ಯುವನಾಯಕ ರಾಜೇಶ್ ನಾಯಕ್ರನ್ನು ಕಣಕ್ಕಿಳಿಸಿದೆ. ಇದರೊಂದಿಗೆ ಈ ಬಾರಿ ಜೆಡಿಎಸ್ ಈ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದು ಉದ್ಯಮಿ ಸೌಂದರ್ಯ ರಮೇಶ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ