Get Updates
Get notified of breaking news, exclusive insights, and must-see stories!

ಮುದ್ರಣಾಲಯಗಳ ಜಿಲ್ಲೆ ಗದಗದ ಪ್ರಮುಖ ಸಮಸ್ಯೆಗಳು

ಕುಮಾರವ್ಯಾಸನ ತವರು ನೆಲವಾದ ಗದಗ ಕನ್ನಡ ಸಾರಸ್ವತಲೋಕಕ್ಕೆ ನೀಡಿದ ಕೊಡುಗೆ ಅಪಾರ. ಗದುಗಿನ ನಾರಣಪ್ಪ ಎಂಬುದು ಕುಮಾರವ್ಯಾಸನ ಮೂಲ ಹೆಸರಾಗಿತ್ತು. ಗಾನಯೋಗಿ ಪಂಚಾಕ್ಷರಿ ಗವಾಯಿ ಅವರೂ ಗದಗದವರು.

ಗದಗದಲ್ಲಿ ಎಲ್ಲೇ ಕಲ್ಲು ಹೊಡೆದರೂ ಅದು ಪ್ರಿಂಟಿಂಗ್ ಪ್ರೆಸ್ ಅಥವಾ ಕೈಮಗ್ಗದ ಕಾರ್ಖಾನೆಗೆ ಹೋಗಿ ಬೀಳುತ್ತದೆ ಎಂಬಷ್ಟರ ಮಟ್ಟಿಗೆ ಈ ಜಿಲ್ಲೆಯಲ್ಲಿ ಮುದ್ರಣಾಲಯ ಮತ್ತು ಕೈಮಗ್ಗದ ಕಾರ್ಖಾನೆಗಳಿದ್ದವಂತೆ!

ಹಿಂದೂಸ್ತಾನಿ ಗಾಯಕ, ಭಾರತ ರತ್ನ ಪಂ.ಭೀಮಸೇನ ಜೋಶಿ ಅವರ ಮೂಲ ಊರೂ ಗದಗ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಖ್ಯಾತಿಯ ಹುಯಿಲಗೋಳ ನಾರಾಯಣ ರಾಯರು ಗದುಗಿನವರು. ಭಾರತ ಕಂಡ ಹೆಮ್ಮೆಯ ಕ್ರಿಕೆಟ್ ಪಟು ಸುನಿಲ್ ಜೋಶಿ ಸಹ ಇಲ್ಲಿನವರೇ.

ಇಂಥ ಗದಗ ಜಿಲ್ಲೆ ನೀರಿನ ಸಮಸ್ಯೆ, ಮೂಲಸೌಕರ್ಯಗಳ ಕೊರತೆಯಿಂದಾಗಿ ಇಂದು ಅಭಿವೃದ್ಧಿ ಪಥದಲ್ಲಿ ಸಾಗಲಾಗದೆ ಪರಿತಪಿಸುತ್ತಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇನ್ನಾದರೂ ಜನಪ್ರತಿನಿಧಿಗಳು ಗದಗದಗತ್ತ ಕಣ್ಣು ಹಾಯಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಜಿಲ್ಲೆಯ ಪ್ರಮುಖ ಸಮಸ್ಯೆಗಳು

ಜಿಲ್ಲೆಯ ಪ್ರಮುಖ ಸಮಸ್ಯೆಗಳು

ಜಿಲ್ಲೆಯ ಪ್ರಮುಖ ಸಮಸ್ಯೆಗಳುಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಯೋಚಿಸುವುದಾದರೆ ಮೊದಲು ನೆನಪಾಗುವುದು ನೀರಿನ ಸಮಸ್ಯೆ. ಕಳೆದ ಎರಡು ವರ್ಷಕ್ಕೂ ಮಿಗಿಲಾಗಿ ಗದಗದ ನರಗುಂದದಲ್ಲಿ ಕಳಸಾ ಬಂಡೂರಿ ಹೋರಾಟ ನಡೆಯುತ್ತಲೇ ಇದೆ.

ಜನಪ್ರತಿನಿಧಿಗಳ್ಯಾರೂ ಕ್ಷೇತ್ರದತ್ತ ತಲೆಹಾಕದಿರುವುದು, ಜನಸಾಮಾನ್ಯರ ಕೈಗೆ ಸಿಗದೆ ಇರುವುದು ಗದಗದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಇಲ್ಲಿ ಹಲವು ಪ್ರವಾಸಿ ತಾಣಗಳಿದ್ದರೂ, ತಲುಪುವುದಕ್ಕೆ ರಸ್ತೆಗಳೇ ಸರಿಯಾಗಿಲ್ಲ. ಜನರು ದಿನನಿತ್ಯದ ಓಡಾಟಕ್ಕೆ ಹಾಳುಬಿದ್ದ ರಸ್ತೆಯನ್ನೇ ಉಪಯೋಗಿಸಬೇಕಾಗಿದೆ.

ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಯೋಚಿಸುವುದಾದರೆ ಮೊದಲು ನೆನಪಾಗುವುದು ನೀರಿನ ಸಮಸ್ಯೆ. ಕಳೆದ ಎರಡು ವರ್ಷಕ್ಕೂ ಮಿಗಿಲಾಗಿ ಗದಗದ ನರಗುಂದದಲ್ಲಿ ಕಳಸಾ ಬಂಡೂರಿ ಹೋರಾಟ ನಡೆಯುತ್ತಲೇ ಇದೆ.

ಜನಪ್ರತಿನಿಧಿಗಳ ಸುಳಿವಿಲ್ಲ!

ಜನಪ್ರತಿನಿಧಿಗಳ ಸುಳಿವಿಲ್ಲ!

ಜನಪ್ರತಿನಿಧಿಗಳ್ಯಾರೂ ಕ್ಷೇತ್ರದತ್ತ ತಲೆಹಾಕದಿರುವುದು, ಜನಸಾಮಾನ್ಯರ ಕೈಗೆ ಸಿಗದೆ ಇರುವುದು ಗದಗದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಇಲ್ಲಿ ಹಲವು ಪ್ರವಾಸಿ ತಾಣಗಳಿದ್ದರೂ, ತಲುಪುವುದಕ್ಕೆ ರಸ್ತೆಗಳೇ ಸರಿಯಾಗಿಲ್ಲ. ಜನರು ದಿನನಿತ್ಯದ ಓಡಾಟಕ್ಕೆ ಹಾಳುಬಿದ್ದ ರಸ್ತೆಯನ್ನೇ ಉಪಯೋಗಿಸಬೇಕಾಗಿದೆ.

ಇಂಜಿನಿಯರಿಂಗ್ ಕಾಲೇಜು ಮತ್ತು ಮೆಡಿಕಲ್ ಕಾಲೇಜ್ ಎರಡೂ ಇರುವುದರಿಂದ ಶಿಕ್ಷಣ ಕ್ಷೇತ್ರದ ಬಗ್ಗೆ ತಕರಾರಿಲ್ಲ. ಆದರೆ ಮೂಲಸೌಕರ್ಯದ ಕೊರತೆಯೇ ಜನರನ್ನು ಹೈರಾಣಾಗಿಸಿದೆ. ಗೋಧಿ, ಜೋಳ, ಈರುಳ್ಳಿ, ಸೂರ್ಯಕಾಂತಿ ಮುಂತಾದ ಬೆಳೆಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯಲಾಗುತ್ತದೆಯಾದರೂ, ಇಲ್ಲಿನ ಮಾರುಕಟ್ಟೆ ವ್ಯವಸ್ಥೆ ಮತ್ತಷ್ಟು ಸುಧಾರಣೆ ಕಾಣಬೇಕಿದೆ.

ಗದಗದ ಕುರಿತು ಒಂದಷ್ಟು ಮಾಹಿತಿ

ಗದಗದ ಕುರಿತು ಒಂದಷ್ಟು ಮಾಹಿತಿ

ಗದಗ ಜಿಲ್ಲೆಯಲ್ಲಿ ಒಟ್ಟು 6 ತಾಲೂಕುಗಳಿವೆ: ಗದಗ, ಶಿರಹಟ್ಟಿ, ಮುಂಡರಗಿ, ರೋಣ, ಗಜೇಂದ್ರಗಡ, ನರಗುಂದ.

ವಿಧಾನಸಭಾ ಕ್ಷೇತ್ರಗಳು 4: ಗದಗ, ರೋಣ, ಶಿರಹಟ್ಟಿ, ನರಗುಂದ

ಪ್ರಮುಖ ಜನಾಂಗ: ಲಿಂಗಾಯತ, ಬಣಜಿಗ, ರೆಡ್ಡಿ, ಸಾದರ(ಸಾದರು) ಲಿಂಗಾಯತ

ಜಿಲ್ಲೆಯ ಪ್ರವಾಸೀ ತಾಣ

ಜಿಲ್ಲೆಯ ಪ್ರವಾಸೀ ತಾಣ

ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನಗಳು ಗದಗದ ಪ್ರಮುಖ ಪ್ರವಾಸಿ ತಾಣವಾಗಿದೆ. ಅಲ್ಲದೆ ಇಲ್ಲಿ ಸುಂದರ ಜೈನ ದೇವಾಲಯಗಳು ಸಹ ಇದ್ದು, ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ. ಹತ್ತು ಹಲವು ಐತಿಹಾಸಿಕ ತಾಣಗಳು ಈ ಜಿಲ್ಲೆಯಲ್ಲಿದ್ದರೂ ಇದನ್ನು ಸರಿಯಾಗಿ ನಿರ್ವಹಿಸಿ, ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಕೆಲಸ ಮಾತ್ರ ಇಂದಿಗೂ ಆಗಿಲ್ಲದಿರುವುದು ಖೇದಕರ. ಇಲ್ಲಿರುವ ಮೃಗಾಲಯವೊಂದು ಸರಿಯಾದ ನಿರ್ವಹಣೆ ಇಲ್ಲದೆ, ಪ್ರವಾಸಿಗರನ್ನು ಆಕರ್ಷಿಸಲು ವಿಫಲವಾಗುತ್ತಿದೆ.

ಜನಪ್ರತಿನಿಧಿಗಳು

ಜನಪ್ರತಿನಿಧಿಗಳು

ನರಗುಂದ: ಬಿ.ಆರ್.ಯಾವಗಲ್(ಕಾಂಗ್ರೆಸ್)
ರೋಣ: ಜಿ.ಎಸ್.ಪಾಟೀಲ್(ಕಾಂಗ್ರೆಸ್)
ಶಿರಹಟ್ಟಿ: ರಾಮಕೃಷ್ಣ ಸಿದ್ದಲಿಗಪ್ಪ(ಕಾಂಗ್ರೆಸ್)
ಗದಗ: ಎಚ್.ಕೆ.ಪಾಟೀಲ್ (ಕಾಂಗ್ರೆಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+