138839ಕಾಡುಹರಟೆನಮ್ಮೂರಿನ ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?/column/shreenidhi/2009/0106-sad-story-of-a-lake-in-karnataka.html* ಶ್ರೀನಿಧಿ ಡಿ.ಎಸ್.ಒಂದು ಉದ್ದನೆಯ ಏರಿ, ಏರಿಯ ಕೆಳಗೆ ದೊಡ್ಡ ಕೆರೆ. ನಿಂತು ನೋಡುತ್ತಿದ್ದರೆ, ಅದರ ತುದಿ ಕಾಣುವಷ್ಟರಲ್ಲಿ ಕಣ್ಣು ನೋಯಬೇಕು, ಅಷ್ಟು ದೊಡ್ಡದು. ಕೆರೆಯ ತುಂಬ ಗಾಳಿಗೆ ಅಲ್ಲಾಡುತ್ತ ನಿಂತ ತಾವರೆಯ ಹೂವುಗಳು. ಜೊತೆಗೆ ಹಸಿರು ಹುಲ್ಲ ಜೊಂಡು. ದಂಡೆಯ ಪಕ್ಕದಲ್ಲೇ ಸಾಲು ಮರಗಳು. ಕೆರೆಯ, ಅಕೋ ಆ ತುದಿಯಲ್ಲಿ ಒಂದು ಹಳೆಯ ಕಾಲದ ಶಿವನ 33924http://kannada.oneindia.com/img/2009/01/06-lake1.jpg138839ಕಾಡುಹರಟೆಸಿನಿಮಾ ನೋಡುವ ಸುಖದ ಕುರಿತು.../column/shreenidhi/2009/0120-the-joy-of-watching-acclaimed-movies.htmlಕ್ಲಾಸಿಗೆ ಚಕ್ಕರ್ ಹಾಕಿ, ಸ್ನೇಹಿತರೊಡಗೂಡಿ ಹಳ್ಳಿ ಚಿತ್ರಮಂದಿರಗಳಲ್ಲಿ ಕದ್ದುಮುಚ್ಚಿ ಚಲನಚಿತ್ರ ನೋಡುವ ಖುಷಿಯಿದೆಯಲ್ಲ, ಅದು ಯಾವ ಸಂತೋಷಕ್ಕೂ ಸಾಟಿಯಲ್ಲ. ಹಳ್ಳಿ ಹುಡುಗರನೇಕರು ಪಟ್ಟಣ ಸೇರಿಕೊಂಡು ಆ ಸುಖದಿಂದ ವಂಚಿತರಾಗುತ್ತಿರುವುದು ಅಷ್ಟೇ ಸತ್ಯ. ಈಗಂತೂ ಸಿನೆಮಾವನ್ನು ಡಿವಿಡಿಗಳಲ್ಲೇ ನೋಡುವ ಸೌಭಾಗ್ಯ ಲಭಿಸುತ್ತಿರುವುದರಿಂದ ಮನೆಯಲ್ಲಿ ಕೂತು ಸಿನೆಮಾ ನೋಡುವವರ ಸಂಖ್ಯೆ ಜಾಸ್ತಿಯಾಗ್ತಾಯಿದೆ. ಆದರೂ, ಧಿಯೇಟರಿಗೆ ಹೋಗಿ ಚಿತ್ರ ವೀಕ್ಷಿಸುವ ಸುಖವೇ 34175http://kannada.oneindia.com/img/2009/01/20-seven-pounds1.jpg138839ಕಾಡುಹರಟೆಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg138839ಕಾಡುಹರಟೆಈ ಮೇಲ್ ಭಯೋತ್ಪಾದನೆ!/column/shreenidhi/2009/0210-spam-junk-hoax-emails.htmlಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!* ಶ್ರೀನಿಧಿ ಡಿಎಸ್ಇತ್ತೀಚಿನ ದಿನಗಳಲ್ಲಿ ಕೆಲಬಾರಿ ದಿನವೂ 34579http://kannada.oneindia.com/img/2009/02/10-junk-emails1.gif138839ಕಾಡುಹರಟೆಮಲೆನಾಡ ಮದುವೆಯೆಂದರೆ.. ಸುಮ್ನೆನಾ?/column/shreenidhi/2009/0217-marriage-rituals-in-malenadu-karnataka.htmlನಗರಗಳಲ್ಲಿ ಮದುವೆಗಳೆಂದರೆ ಧಾರ್ಮಿಕ ಕಾರ್ಯಗಳಿಂದ ಹಿಡಿದು ಪ್ರತಿಯೊಂದನ್ನು ಕಾಂಟ್ರಾಕ್ಟ್ ಕೊಟ್ಟು ಕೈಬೀಸಿ ಮದುವೆ ಮಂಟಪಕ್ಕೆ ನಡೆದು ಬರುವಷ್ಟರ ಮಟ್ಟಕ್ಕೆ ಯಾಂತ್ರಿಕವಾಗಿವೆ. ಎಲ್ಲ ಮದುವೆಗಳೂ ಹೀಗೇ ಇಲ್ಲದಿದ್ದರೂ ಕಷ್ಟ ತಪ್ಪಿದರೆ ಸಾಕಪ್ಪ ಅನ್ನುವಂತಾಗಿವೆ. ಆದರೆ, ಮಲೆನಾಡುಗಳಲ್ಲಿ ಮದುವೆಗಳೆಂದೆ ಹೀಗಲ್ಲ. ಅಲ್ಲಿಯ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಊರಿನ ಪ್ರತಿಯೊಬ್ಬರೂ ಬಂಧುಗಳೇ. ಇಷ್ಟೊಂದು ಜನರನ್ನ ಹೇಗಪ್ಪ ಸಂಭಾಳಿಸುವುದು ಅಂದುಕೊಂಡರೂ ಮದುವೆ ಮುಗಿಸಿ 34711http://kannada.oneindia.com/img/2009/02/17-woman-havyaka1.jpg39203ಶಿವಮೊಗ್ಗಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ರಾಘವೇಂದ್ರ ಸ್ಪರ್ಧೆ /news/2009/02/27/yeddyurappa-son-b-y-raghavendra-tocontest-ls-poll.htmlಬೆಂಗಳೂರು. ಫೆ. 27 : ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮುಂದೊಂದು ದಿನ ತಮ್ಮ ನಿಲುವು ತೊಡರುಗಾಲು ಆಗುವುದು ಎಂದು ಉಹಿಸಿರಲಿಲ್ಲ. ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ತಮ್ಮಪುತ್ರ ರಾಘವೇಂದ್ರನನ್ನು ಕಣಕ್ಕಿಳಿಸುವ ಕುರಿತು ಒಲ್ಲದ ಮನಸ್ಸಿನಿಂದ ರಾಘು ಸ್ಪರ್ಧಿಸಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಗೆಲ್ಲುವು ಕುದುರೆಯ ತಲಾಶೆಯಲ್ಲಿರುವ ಬಿಜೆಪಿ ವರಿಷ್ಠರಿಗೆ ಸಿಎಂ ಪುತ್ರ 34902http://kannada.oneindia.com/img/2009/02/27-raghavendra1.jpg39203ಶಿವಮೊಗ್ಗಬಿಜೆಪಿಯಲ್ಲಿ ಸ್ವಜನ ಪಕ್ಷಪಾತ; ಭುಗಿಲೆದ್ದ ಅಸಮಾಧಾನ/news/2009/03/05/yeddyurappas-son-raghavendra-debut-ls-polls.htmlಬೆಂಗಳೂರು, ಮಾ.5:ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಏಕಪಕ್ಷೀಯ ತೀರ್ಮಾನ, ಕುಟುಂಬ ರಾಜಕಾರಣಕ್ಕೆ ಆಸ್ಪದ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕದಲ್ಲಿ ಸ್ವಜನ ಪಕ್ಷಪಾತ, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಇತ್ಯಾದಿ ಕಾರಣಕ್ಕೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಹಿರಿಯ ಮುಖಂಡರ ಮಾತಿಗೆ ಮನ್ನಣೆ ನೀಡದೇ, ಮುಖ್ಯಮಂತ್ರಿ ಯಡಿಯೂರಪ್ಪ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿರುವುದರಿಂದ ಪಕ್ಷದ ವಲಯದಲ್ಲಿ ಭಿನ್ನಮತ ಭುಗಿಲೆದ್ದಿದೆ. 34992http://kannada.oneindia.com/img/2009/03/05-raghavendra1.jpg39203ಶಿವಮೊಗ್ಗಬಿಜೆಪಿ 2ನೇ ಪಟ್ಟಿ ಪ್ರಕಟ, ರಾಘು ಸ್ಪರ್ಧೆ/news/2009/03/05/bjp-final-list-by-raghavendra-gets-ticket-ls-poll.htmlನವದೆಹಲಿ, ಮಾ. 5 : ಕಳೆದ ಒಂದು ತಿಂಗಳಿಂದ ತೀವ್ರ ಕುತೂಹಲ ಸೃಷ್ಟಿಸಿದ್ದ ಟಿಕೆಟ್ ಹಂಚಿಕೆಗೆ ಗುರುವಾರ ಕೊನೆಗೂ ಅಂತಿಮ ತೆರೆ ಬಿದ್ದಿದೆ. ನಿರೀಕ್ಷೆಯಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೆಲ್ಲುವ ಕುದುರೆಗೆ ಮಣೆ ಹಾಕಿರುವ ಬಿಜೆಪಿ ಹೈಕಮಾಂಡ್ ಶಿವಮೊಗ್ಗ ಕ್ಷೇತ್ರದಿಂದ ರಾಘವೇಂದ್ರನೇ ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸಿ 35021http://kannada.oneindia.com/img/2009/03/05-raghavendra1.jpg39203ಶಿವಮೊಗ್ಗಸಿಎಂ ಪುತ್ರ ಸ್ಪರ್ಧೆಗೆ ಕುಮಾರಸ್ವಾಮಿ ತೀವ್ರ ವಿರೋಧ/news/2009/03/06/bjp-party-has-no-ethics-hd-kumaraswamy-ls-polls.htmlಬೆಂಗಳೂರು, ಮಾ. 6 : ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸಿಎಂ ಪುತ್ರ ರಾಘವೇಂದ್ರ ಸ್ಪರ್ಧಿಸುವ ವಿಷಯ ಇದೀಗ ಪ್ರತಿಪಕ್ಷಗಳ ಮುಖಂಡರ ಟೀಕೆ, ಲೇವಡಿಯ ಅಸ್ತ್ರವಾಗಿ ಮಾರ್ಪಟಾಗಿದೆ. ರಾಘವೇಂದ್ರ ಸ್ಪರ್ಧೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಟು ಶಬ್ದಗಳಲ್ಲಿ ಟೀಕಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಇದೀಗ ಬಿಜೆಪಿ ಕೂಡ 'ಅಪ್ಪ ಮಕ್ಕಳ ಪಕ್ಷ' ಎಂದು ಲೇವಡಿ 35038http://kannada.oneindia.com/img/2009/03/06-kumaraswami8.jpg39203ಶಿವಮೊಗ್ಗಯಡಿಯೂರಪ್ಪ ಪುತ್ರ ವ್ಯಾಮೋಹಿ, ಮುತಾಲಿಕ್ ಟೀಕೆ/news/2009/03/08/pramod-mutalik-opposes-cm-sons-contest-ls-polls09.htmlಚಿಕ್ಕಮಗಳೂರು, ಮಾ. 8 : ಯಡಿಯೂರಪ್ಪ ಪುತ್ರ ರಾಘವೇಂದ್ರನಿಗೆ ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅನುಭವವೂ ಇಲ್ಲ, ಅರ್ಹತೆಯೂ ಇಲ್ಲ ಎಂದು ಶ್ರೀರಾಮಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ದೇಶ ಮುನ್ನೆಡೆಸುವ ಮಹತ್ವದ ಸ್ಥಾನಕ್ಕೆ ರಾಘವೇಂದ್ರ ಸ್ಪರ್ಧಿಸುವುದು ಉಚಿತವಲ್ಲ ಎಂದು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 35079http://kannada.oneindia.com/img/2009/03/08-raghavendra1.jpg110501kaaduharateಮನೆಯಿಂದ ಮನೆಗೆ../column/shreenidhi/2008/0826-old-memories-from-one-home-to-another.htmlಊರಿಂದ ಊರಿಗೆ ಹೋಗುವುದು, ಮನೆಯಿಂದ ಮನೆ ಬದಲಾಯಿಸುವುದು ಬಾಡಿಗೆದಾರರಿಗೆ, ವರ್ಗಾವಣೆಯ ಸರ್ಕಾರಿ ಕೆಲಸ ಇರುವವರಿಗೆ ತಪ್ಪದ ಕರ್ಮ. ಆದರೆ ಅದರಲ್ಲೂ ಸ್ವಾರಸ್ಯವಿರುತ್ತದೆ. ಪ್ರತಿ ಬಾಡಿಗೆ ಮನೆಯೂ ನಮ್ಮ ಸ್ವಂತ ಮನೆಯೇ, ಅದನ್ನು ಬಿಡುವವರೆಗೆ. ಇಂಥ ಅನುಭವಗಳು ಪ್ರತಿಯೊಬ್ಬರದೂ ಆಗಿರುತ್ತವೆ. ಮನೆ ಬದಲಾಯಿಸುವುದು ಸಾಮಾನು ಸರಂಜಾಮುಗಳ ಮೆರವಣಿಗೆ ಮಾತ್ರವಲ್ಲ ನೆನಪುಗಳ ಮೆರವಣಿಗೆ. ಅಂಕಣಕಾರ : ಶ್ರೀನಿಧಿ ಡಿ.ಎಸ್. ವರುಷ 1145http://kannada.oneindia.com/img/2009/09/23-loaded-van1.jpg110501kaaduharateಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif110501kaaduharateನಮ್ಮೂರಿನ ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?/column/shreenidhi/2009/0106-sad-story-of-a-lake-in-karnataka.html* ಶ್ರೀನಿಧಿ ಡಿ.ಎಸ್.ಒಂದು ಉದ್ದನೆಯ ಏರಿ, ಏರಿಯ ಕೆಳಗೆ ದೊಡ್ಡ ಕೆರೆ. ನಿಂತು ನೋಡುತ್ತಿದ್ದರೆ, ಅದರ ತುದಿ ಕಾಣುವಷ್ಟರಲ್ಲಿ ಕಣ್ಣು ನೋಯಬೇಕು, ಅಷ್ಟು ದೊಡ್ಡದು. ಕೆರೆಯ ತುಂಬ ಗಾಳಿಗೆ ಅಲ್ಲಾಡುತ್ತ ನಿಂತ ತಾವರೆಯ ಹೂವುಗಳು. ಜೊತೆಗೆ ಹಸಿರು ಹುಲ್ಲ ಜೊಂಡು. ದಂಡೆಯ ಪಕ್ಕದಲ್ಲೇ ಸಾಲು ಮರಗಳು. ಕೆರೆಯ, ಅಕೋ ಆ ತುದಿಯಲ್ಲಿ ಒಂದು ಹಳೆಯ ಕಾಲದ ಶಿವನ 33924http://kannada.oneindia.com/img/2009/01/06-lake1.jpg110501kaaduharateಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg110501kaaduharateಈ ಮೇಲ್ ಭಯೋತ್ಪಾದನೆ!/column/shreenidhi/2009/0210-spam-junk-hoax-emails.htmlಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!* ಶ್ರೀನಿಧಿ ಡಿಎಸ್ಇತ್ತೀಚಿನ ದಿನಗಳಲ್ಲಿ ಕೆಲಬಾರಿ ದಿನವೂ 34579http://kannada.oneindia.com/img/2009/02/10-junk-emails1.gifnews"> ಒಂದು ಮುಳುಗಿದ ಸಂಸ್ಕೃತಿಯ ನೆನೆದು.. | Damn with Dandavati irrigation project - ಒಂದು ಮುಳುಗಿದ ಸಂಸ್ಕೃತಿಯ ನೆನೆದು.. - Kannada Oneindia

ಒಂದು ಮುಳುಗಿದ ಸಂಸ್ಕೃತಿಯ ನೆನೆದು..

1966ರಲ್ಲಿ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗ ಅನುಮೋದನೆ ಪಡೆದಿದ್ದ ಶಿವಮೊಗ್ಗ ಜಿಲ್ಲೆಯ ದಂಡಾವತಿ ನೀರಾವರಿ ಯೋಜನೆ, ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ನೆನೆಗುದಿಗೆ ಬಿದ್ದು, 43 ವರುಷಗಳ ತರುವಾಯ ಮತ್ತೆ ಜೀವ ಪಡೆದುಕೊಂಡಿದೆ. 1950 ಎಕರೆಯಷ್ಟು ರೈತರ ಜಮೀನನ್ನು ಈ ಯೋಜನೆ ಸ್ವಾಹಾ ಮಾಡಲಿದೆ. ದಿಕ್ಕೆಟ್ಟ ರೈತರೆಲ್ಲರು ದಂಗೆ ಎದ್ದಿದ್ದಾರೆ. ನೀರು ಕುತ್ತಿಗೆ ಮಟ್ಟ ಬಂದಾಗಿದೆ. ಏನಾಗುತ್ತೋ? ಈ ಯೋಜನೆ ಇನ್ನೆಷ್ಟು ರೈತರನ್ನು ಬಲಿ ತೆಗೆದುಕೊಳ್ಳಲಿದೆಯೋ? ಒಂದು ಅಣೆಕಟ್ಟು ಹಲವು ಸಂಸ್ಕೃತಿಗಳನ್ನು ಹಾಳುಮಾಡಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿ ರೈತರ ಕಣ್ಣೀರ ಕಥೆ ಇಲ್ಲಿದೆ.

* ಶ್ರೀನಿಧಿ ಡಿ.ಎಸ್.

ಕೊಕ್ಕನಗುಡ್ಡಕ್ಕೆ ಬೈಲಿಗೆ ರಾಮನ ದೋಣಿಯಲ್ಲಿ ಹೋಗುತ್ತಿದ್ದರು ಅವರೆಲ್ಲ. ಒಟ್ಟು 7 ಜನ. ಧರೇಮನೆ ಶ್ರೀಧರಣ್ಣ ಮತ್ತು ಅವರ ಸಹೋದ್ಯೋಗಿಗಳು 4 ಜನ , ಶ್ರೀಧರಣ್ಣನ ತಮ್ಮ ಹಾಗೂ ನಾಲ್ಕನೇ ಕ್ಲಾಸು ಓದುವ ಮಗ, ಮತ್ತೆ ದೋಣಿ ರಾಮ. ಶ್ರೀಧರಣ್ಣ ಊರು ಬಿಟ್ಟು 12 ವರ್ಷವಾಗಿದೆ. ದೂರದ ಊರೊಂದಲ್ಲಿ ಏನೋ ಕೆಲಸ ಮಾಡಿಕೊಂಡಿದ್ದಾರೆ. ಹಾಗಂತ ಊರ ಕಡೆ ಬರುವುದನ್ನ ಬಿಟ್ಟಿಲ್ಲ. ತಾವು ಬರುವುದಲ್ಲದೇ ತಮ್ಮ ಜೊತೆಗೆ ಕೆಲಸ ಮಾಡುವ ಸ್ನೇಹಿತರನ್ನು ಕರೆದುಕೊಂಡು ಬರುತ್ತಾರೆ, ಹತ್ತಿರದ ಗುಡ್ಡ, ಬೆಟ್ಟ ಕಾಡು ಮೇಡು ಸುತ್ತುತ್ತಾರೆ. ಅವರಲ್ಲಿ ಯಾರಾದರೂ ತಾವು ತಿರುಗಾಡಿದ ಜಾಗಗಳ ಬಗ್ಗೆ ಪೇಪರಿನಲ್ಲಿ ಬರೆಯುತ್ತಾರೆ.
ಅಪ್ಪ ಅಲ್ಲಿ ಇಲ್ಲಿ ತಿರುಗಲು ಹೋಗುವ ಬಗ್ಗೆ ಮಗನಿಗೆ ಬಲು ಅಚ್ಚರಿ. ಉಳಿದವರ ಹಾಗೆ ರಜೆ ಬಂದರೆ ಮನೆಯಲ್ಲೇ ಇರದೆ ಯಾಕೆ ಊರೂರು ಸುತ್ತಬೇಕು? ಅಪ್ಪನ ಬಳಿ ಹೀಗೇ ಕೇಳಿದ್ದಕ್ಕೆ ಅವರೇನೋ ಉದ್ದುದ್ದ ಮಾತಾಡಿದ್ದರು ಒಮ್ಮೆ. ಅವನಿಗೇನೂ ಅರ್ಥವಾಗದೇ ಸುಮ್ಮನಿದ್ದು ಬಿಟ್ಟಿದ್ದ. ಕುತೂಹಲ ಅವನಿಗೆ, ಏನಿರುತ್ತದೆ ಇವರೆಲ್ಲ ಹೋಗುವ ಕಡೆಗೆ, ತಾನೂ ಹೋಗಿ ನೋಡಬೇಕು ಅನ್ನುವ ಆಸೆ ಹುಟ್ಟಿಕೊಂಡಿತ್ತು. ಈ ಬಾರಿ ಅಪ್ಪ ಎಲ್ಲಿಗಾದರೂ ಹೊರಗಡೆ ಹೊರಟರೆ ನನ್ನನ್ನೂ ಕರೆದುಕೊಂಡು ಹೋಗೆಂದು ಹಠ ಮಾಡಬೇಕು ಅಂತ ತೀರ್ಮಾನ ಮಾಡಿಯಾಗಿತ್ತು ಅವನು.

ಅಕ್ಟೋಬರು ರಜೆಯಲ್ಲಿ ನಿಟ್ಟೂರಿಗೆ ಹೋಗಿಯಾಯಿತು, ಎಂದಿನ ಹಾಗೆ. ನಿಟ್ಟೂರು ಹೊಸನಗರ ತಾಲೂಕಲ್ಲಿದೆ, ಕೊಲ್ಲೂರಿನಿಂದ 30 ಕಿಲೋಮೀಟರು. ಇನ್ನು 3 ದಿನದೊಳಗೆ ಅವರ ಸ್ನೇಹಿತರು ಬರುತ್ತಾರಂತೆ, ಎಲ್ಲೋ ಹೊಳೆ ಮಧ್ಯ ಇರುವ ಹಕ್ಕಿಗಳೇ ಇರುವ ಗುಡ್ಡಕ್ಕೆ ಹೋಗುತ್ತಾರೆ ಅಂತೆಲ್ಲ ಮಾತಾಡಿಕೊಳ್ಳುವುದು ಗೊತ್ತಾಯಿತು ಅವನಿಗೆ. ಅಪ್ಪನ ಬಳಿ ಹಠ ಮಾಡಿದರೆ ಈಗಲೇ ಮಾಡಬೇಕು, ಮಾಮಂದಿರು ಬಂದ ಮೇಲೆ ಮಾಡಿದರೆ ಮರ್ಯಾದೆ ಹೋಗುತ್ತದೆ ಅನ್ನುವುದು ಎಣಿಕೆ. ಮೆಲ್ಲನೆ ಹೋಗಿ, ಅಪ್ಪಾ ನಾನೂ ಬರುತ್ತೇನೆ ನಾಡಿದ್ದು ಅಂದ ಮೆಲ್ಲಗೆ. ಅವರು ಯಾವ ರೀತಿಯ ವಿರೋಧವನ್ನೂ ತೋರದೆ, ಹುಂ ಬಾ ಅಂದು ಬಿಟ್ಟಿದ್ದು ನೋಡಿ ನಿರಾಸೆಯಾಯಿತು, ತನಗೆ ಹಠ ಮಾಡುವ ಅವಕಾಶ ಸಿಗಲಿಲ್ಲ ಅಂತ.

ಹಾಡಿಕೈ ಬಳಿ ರಾಮನ ದೋಣಿ ಹತ್ತಿಯಾಯಿತು. ಹೋದ ಬಾರಿ ಏಪ್ರಿಲ್ ನಲ್ಲಿ ಇಲ್ಲಿ ಗದ್ದೆ ಇತ್ತಲ್ಲ, ಅಲ್ಲಿ ಈಗ ನೋಡಿದರೆ ನೀರು ನಿಂತು ದೊಡ್ಡ ಸಮುದ್ರವೇ ಆಗಿ ಬಿಟ್ಟಿದೆ. ಪುಟ್ಟ ಹುಡುಗನನ್ನ ಮಧ್ಯ ಹಾಕಿ ಎಲ್ಲ ಅಕ್ಕ ಪಕ್ಕ ಕಾಲು ಹಾಕಿ ಕೂತರು. ನೋಡ್ರಾ ಮಾಣಿ, ಹೊಳಿ ನೀರಿಗ್ ಕೈ ಗೀ ಹಾಕ್ಬೇಡಿ ಮತ್ತೆ ಜಾಗ್ರತಿ, ದೋಣಿ ವಲಿತದೆ, ಗೊತಾಯ್ತಾ? ಅಂದ ಸ್ವಲ್ಪ ಜೋರಾಗೇ ಹೇಳಿದ ರಾಮ. ಇವನಿಗೆ ರೇಗಿ ಹೋಯಿತು. ನಾನೇನು ಸಣ್ಣ ಹುಡುಗ ಅಲ್ಲ, ಅಷ್ಟೂ ಗೊತಾಗದೇ ಇರುವುದಕ್ಕೆ ಎಲ್ಲ ನಕ್ಕರು. ತನ್ನ ಅಪ್ಪನೂ ತನ್ನ ಸಹಾಯಕ್ಕೆ ಬರದೇ ಮತ್ತೂ ಕಿರಿಕಿರಿ ಅನಿಸಿತು ಅವನಿಗೆ.

ದೋಣಿ ಹೊರಡುವಾಗ ಖುಷಿ ಅನಿಸಿತ್ತು ಹುಡುಗನಿಗೆ. ಮುಂದೆ ಮುಂದೆ ಹೋದಂತೆಲ್ಲಾ ದಿಗಿಲಾಗತೊಡಗಿತು. ಎಲ್ಲಿ ನೋಡಿದರು ಬರಿಯ ನೀರೇ ನೀರು. ಅಲ್ಲಲ್ಲಿ ಮೇಲೆ ಬಂದ ಮರದ ಅವಶೇಷಗಳು. ರಾಮ ಬಹಳ ಚಾಕಚಕ್ಯತೆಯಿಂದ ಹುಟ್ಟು ಹಾಕುತ್ತಿದ್ದ. ಇನ್ನು 5 ಕಿಲೋಮೀಟರು ಹುಟ್ಟು ಹಾಕಬೇಕು ಅಂತ ಅಪ್ಪ ಸೀತಾರಾಮ ಮಾಮನ ಬಳಿ ಹೇಳುತಿದ್ದರು. ಇಲ್ಲಿ ಹೊಳೆಯ ಹಾಗೆ ನೀರು ಕೆಳಗೆ ಹರಿಯುತ್ತಿಲ್ಲ, ಸಮುದ್ರದ ಹಾಗೆ ಅಲೆಗಳಿಲ್ಲ, ಕೆರೆಯೋ, ಅದೂ ಅಲ್ಲ. ಸಣ್ಣನೆ ಧ್ವನಿಯಲ್ಲಿ ಕೇಳಿದ, ಎಷ್ಟ್ ಆಳ ಇದೆ ಇದು ಅಂತ. ಚಿಕ್ಕಪ್ಪ , ಸಟ್ಟನೆ ಹೇಳಿದರು, 300 ಫೀಟಾದ್ರು ಇದೆ ಅಂದು ಬಿಟ್ಟರು. ಯಪ್ಪಾ! ಗೊಮ್ಮಟೇಶ್ವರ, ಐವತ್ತು ಚಿಲ್ಲರೆ ಅಡಿ ಎತ್ತರ, ಆ ಮೂರ್ತಿಯೇ ಅಷ್ಟೆತ್ತರ ಅಂದರೆ ತನ್ನ ಕಾಲ ಕೆಳಗಿನ ಆಳ ಎಷ್ಟಿರಬಹುದು? ಸಿಕ್ಕಾಪಟ್ಟೆ ಹೆದರಿಕೆ ಆಗ ತೊಡಗಿತು. ಅಪ್ಪನ ಶರಟನ್ನ ಮೆಲ್ಲನೆ ಹಿಡಕೊಂಡ. ಅಪ್ಪನಿಗೆ ಮಗನ ಹೆದರಿಕೆ ಗೊತ್ತಾಯ್ತು , ಹತ್ತಿರಕ್ಕೆ ಎಳೆದುಕೊಂಡು ಕಥೆ ಹೇಳಲು ಶುರು ಮಾಡಿದರು.

ಈಗ ನೀನೇನು ನೋಡುತ್ತಿದ್ದೀಯಲ್ಲ, ಈ ನೀರ ರಾಶಿ, ಇದರ ಕೆಳಗೆ ಒಂದು ಕಾಲದಲ್ಲಿ ಹನ್ನಾರ ಅನ್ನುವ ದೊಡ್ಡ ಊರಿತ್ತು. ಬ್ರಿಟೀಷರು ಶರಾವತಿ ನದಿಗೆ ಬಹಳ ಹಿಂದೆ ಮಡೆನೂರು- ಹಿರೇಭಾಸ್ಕರ ಅಣೆಕಟ್ಟು ಕಟ್ಟಿದರು. ಆ ಸಮಯದಲ್ಲಿ ನಿಂತ ನೀರು, ಅರ್ಧ ಹನ್ನಾರವನ್ನು ನುಂಗಿ ಬಿಟ್ಟಿತು, ಊರು ಚಿಕ್ಕದಾಯಿತು. ಹನ್ನಾರ ಸೀಮೆ ಒಂದು ಕಾಲಕ್ಕೆ ಬಹಳ ಪ್ರಖ್ಯಾತಿ ಪಡೆದಿತ್ತು, ಸಾಗರ ಪೇಟೆಯಷ್ಟೇ ದೊಡ್ಡ ಊರಾಗಿತ್ತಂತೆ ಇದು. ದೇವಸ್ಥಾನ, ಶಾಲೆ, ಅಂಗಡಿ ಎಲ್ಲ ಇತ್ತು. ಕಲೆಕ್ಟರು ಇತ್ಯಾದಿ ದೊಡ್ಡ ಮನುಷ್ಯರೆಲ್ಲ ಬಂದು ಉಳಿದುಕೊಳ್ಳುವ ಊರಾಗಿತ್ತು.

ಇಷ್ಟಕ್ಕೇ ಸಾಕಾಗಲಿಲ್ಲ ಅಂತ ಲಿಂಗನ ಮಕ್ಕಿ ಅಣೆಕಟ್ಟು ಕಟ್ಟಿದರು ಈಗೊಂದು ನಲವತ್ತು ವರ್ಷಗಳ ಕೆಳಗೆ. ಈ ಅಣೆಕಟ್ಟೆ, ಉಳಿದರ್ಧ ಊರನ್ನು ಮುಳುಗಿಸಿ ಬಿಟ್ಟಿತು. ಒಂದು ಊರನ್ನ ಮಾತ್ರವಲ್ಲ, ಜಾಲ ಅನ್ನುವ ಇನ್ನೊಂದು ಪೇಟೆ, ಬೆನ್ನಟ್ಟಿ, ಮಳಲಿ ಹೀಗೆ ಹಲವು ಊರುಗಳು ಈ ನೀರ ಅಡಿಯಲ್ಲಿ ಕರಗಿ ಹೋಗಿವೆ. ಬೆನ್ನಟ್ಟಿ ಜಾತ್ರೆಗೆ ಹೋದ ನೆನಪು ನಂಗೆ ಇನ್ನೂ ಇದೆ, ಅಲ್ಲಿಯ ದೇವಿಯ ಜಾತ್ರೆ ಒಂದು ತಿಂಗಳ ಕಾಲ ನಡೆಯುತ್ತಿತ್ತು, ನಮಗೆಲ್ಲ ಆ ಜಾತ್ರೆಗೆ ಹೋಗಿ ಬರುವುದೆಂದರೆ ಭಾರೀ ದೊಡ್ಡ ಸಂಭ್ರಮ ಆವಾಗ.. ಜಾಲ ಎನ್ನುವ ಬೆಟ್ಟಗುಡ್ಡಗಳಿಂದ ಕೂಡಿದ ಊರು ಈಗ ನೀರ ನಡುವಿನ ಪುಟ್ಟ ದ್ವೀಪಗಳ ಸಮೂಹವಾಗಿವೆ. ಮನೆಯಿಂದ ಕಳ್ಳ ಬಿದ್ದು ಈಜಿಕೊಂಡು ಬಂದ ಎಮ್ಮೆಗಳ ಅಡಗುತಾಣ. ಸಾಗರ, ಹೊಸನಗರ ತಾಲೂಕಿನ ಅರ್ಧ ಪಾಲು ಈ ನೀರಿನೊಳಗೆ ಮುಳುಗಿದೆ. ಮರಬೀಡೀ ಸೀಮೆ ಕೂಡ ನೀರುಪಾಲೇ ಆಗಿದೆ. ಎಷ್ಟೊ ಸಾವಿರಗಟ್ಟಲೆ ಎಕರೆ ಅಡಿಕೆ ತೋಟಗಳು, ಗದ್ದೆ, ಎಲ್ಲ ನಾಶವಾಗಿದೆ. ಹೊಸ ತೋಟ ಗದ್ದೆ ಮತ್ತೆ ಮಾಡಿ ಮೊದಲ ಹಂತಕ್ಕೇ ತರಲು ಎಷ್ಟೋ ಸಮಯ ಬೇಕಾಯಿತು. ಕೆಲವರು ಇನ್ನೂ ಸುಧಾರಿಸಿಕೊಳ್ಳುತ್ತಿದ್ದಾರೆ.

ಅಲ್ಲೊಂದು ಉದ್ದನೆಯ ಸತ್ತ ಮರ ಕಾಣುತ್ತಿದೆಯಲ್ಲ, ಕವೆಯಾಕೃತಿಯದ್ದು, ಅದರೆ ಕೆಳಗಡೆಯೇ ಹನ್ನಾರ ರಾಮೇಶ್ವರ ಸ್ವಾಮಿಯ ದೇವಸ್ಥಾನವಿದ್ದಿದ್ದು. ಮುಳುಗಡೆಯಾಗುವ ಸಂದರ್ಭದಲ್ಲಿ ಇಲ್ಲಿಂದ ಎತ್ತಿ ನಿಟ್ಟೂರಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅಲ್ಲೇ ಪಕ್ಕದಲ್ಲಿ ಅಂಗಡಿ ಸಾಲುಗಳಿದ್ದವು. ನಾನು ಹನ್ನಾರ ಪೇಟೆ ಮುಳುಗುವಾಗ ನಿನ್ನಷ್ಟು ದೊಡ್ಡವನಾಗಿದ್ದೆ, ಊರಿಗೇ ಊರೇ ಹೊರಟು ನಿಂತಿತ್ತು, ನೀರು ದಿನದಿಂದ ದಿನಕ್ಕೆ ಮೇಲೇರುತ್ತಿತ್ತು. ಎಲ್ಲರಿಗೂ ಊರು ಬಿಟ್ಟು ಹೋಗುವ ಬೇಜಾರು , ಆದರೆ ಹೋಗದೇ ವಿಧಿಯಿಲ್ಲ.

ಅಪ್ಪ, ಅವರೆಲ್ಲ ಎಲ್ಲಿಗೆ ಹೋದರು? ಇಷ್ಟು ಹೊತ್ತು ಸುಮ್ಮನಿದ್ದವನು ಮಾತಾಡಿದ. ಎಲ್ಲರಿಗೂ ಬೇರೆ ಕಡೆ ಜಮೀನು ನೀಡಿದ್ದರು, ಶಿರಸಿಯ ಕಡೆಗೆ, ಶಿವಮೊಗ್ಗ, ಸೊರಬದ ಕಡೆಗೆ, ಇಲ್ಲೇ ಸ್ವಲ್ಪ ದೂರದೂರುಗಳಿಗೆ ಹೋಗಿ ಮನೆ ತೋಟ ಮಾಡಿಕೊಂಡರು ಹೆಚ್ಚಿನವರು. ಇನ್ನು ಕೆಲವರು ದುಡ್ಡು ತೆಗೆದುಕೊಂಡು ಎತ್ತಲೋ ಹೋದರು.

ನಮ್ಮ ಅಜ್ಜನ ಮನೆ, ಹೆಗ್ಗಳ ಮನೆ ಅಂತ, ಅದೂ ಲಿಂಗನ ಮಕ್ಕಿ ಅಣೆಕಟ್ಟಿನಲ್ಲೇ ಮುಳುಗಿತು. ಅಲ್ಲಿ ನಾವು ದೋಣಿ ಹತ್ತಿದೆವಲ್ಲ ಹಾಡಿಕೈ, ಅಲ್ಲಿಂದ 2 ಕಿಲೋಮೀಟರಾಗಬಹುದು ಅಷ್ಟೇ, ಅಲ್ಲಿತ್ತು. ಸುಮಾರು 60 ಅಂಕಣದ ದೊಡ್ಡ ಮನೆ, ಇಷ್ಟಿಷ್ಟು ದೊಡ್ಡ ತೊಲೆಗಳು, ಮನೆ ಸುತ್ತ ತೋಟ, ಅಪ್ಪೆ ಮಿಡಿ ಮಾವಿನ ಮರ, ಎಲ್ಲ ಇತ್ತು. ಮನೆಯ ತೊಲೆ ಕಳಚಿ ಸಾಧ್ಯವಾದಷ್ಟನ್ನ ಸಾಗಿಸಿದರು, ನೀರಲ್ಲಿ ತೇಲಿ ಬಿಟ್ಟು ಮುಂದೆಲ್ಲೋ ಹಿಡಿಯುವ ಸಾಹಸ ಮಾಡಿದರು, ಉಳಿದವನ್ನ ಹಾಗೇ ಬಿಟ್ಟರು. ಅಪ್ಪೆ ಮಿಡಿಯ ಮರವೊಂದು ಇವತ್ತಿಗೂ ಹಾಗೆಯೇ ಉಳಿದಿದೆ, ಅಲ್ವೇನೋ? ಕೃಷ್ಣ ಚಿಕ್ಕಪ್ಪ ಹುಂ ಅಂತ ತಲೆಯಾಡಿಸಿದರು.

ಕರೆಂಟು ಜಗತ್ತಿಗೆ ಕೊಡುವ ಆತುರದಲ್ಲಿ ನಾವೆಲ್ಲ ನಮ್ಮ ಜಮೀನು, ನೆಲ ಕಳೆದು ಕೊಂಡೆವು, ನಮ್ಮ ಪುಣ್ಯಕ್ಕೆ ನಮಗಿಲ್ಲೇ ಜಾಗ ಸಿಕ್ಕಿತು, ಹತ್ತಿರದಲ್ಲೇ. ಆದರೆ ಮೊದಲಿನ ಹಂತಕ್ಕೆ ಬರಲು ಇನ್ನು ಸಾಧ್ಯವಾಗಿಲ್ಲ. ಇಷ್ಟೆಲ್ಲ ಮಾಡಿದರೂ, ನಮ್ಮಗಳ ಮನೆಗೆಲ್ಲ ಇನ್ನೂ ವಿದ್ಯುತ್ ಬಂದಿಲ್ಲ, ಅದೇನೋ ಅನ್ನುತಾರಲ್ಲ, ದೀಪದ ಬುಡ ಕತ್ತಲೆ ಅಂತ, ಹಾಗಾಗಿದೆ ನಮ್ಮ ಕಥೆ ಅಂದರು ಚಿಕ್ಕಪ್ಪ. ದೂರದಲ್ಲೊಂದು ಅರ್ಧ ಮುಳುಗಿದ ಯಾವುದೋ ಜಾತಿಯ ಮರ, ಅದರ ಎಲೆಗಳ ಆಕೃತಿ ಸೇಬಿನ ಹಣ್ಣಿನಂತೆ ಕಾಣಿಸಿತು. ಹೆಚ್ಚಿನೆಲ್ಲ ನೀರಲ್ಲಿ ಇದ್ದ ಮರಗಳು ಸತ್ತು ಹೋಗಿದ್ದರೂ , ಈ ಮರ ಹೇಗೆ ಬದುಕಿದೆ ಅನ್ನುವುದು ಅಂದಾಜಾಗಲಿಲ್ಲ. ಯಾಕೋ ಅದನ್ನ ಕೇಳೋಕೆ ಹೋದರೆ ನಗಾಡಿಯಾರು ಎಂದು ಸುಮ್ಮನಾದ. ಸೀತಾರಾಮ ಮಾಮ ಅವರ ಕ್ಯಾಮರಾದಲ್ಲಿ ಆ ಮರದ ಫೋಟೋ ತೆಗೆದರು, ಆದರೆ ಅದಕ್ಕೂ ಮುನ್ನ ಅದರ ಚಿತ್ರ ಜೀವನದುಕ್ಕಕ್ಕೂ ನೆನಪಿರುವ ಹಾಗೆ ಅನವ ಚಿತ್ತ ಭಿತ್ತಿಯಲ್ಲಿ ಕೂತು ಬಿಟ್ಟಿತ್ತು.

ಅಲ್ಲಿಂದ ಮುಂದೆ ಕೊಕ್ಕನ ಗುಡ್ಡಕ್ಕೆ ಹೋಗಿ, ಅಲ್ಲಿನ ಹಕ್ಕಿಗಳನ್ನೆಲ್ಲ ನೋಡಿದರು ಎಲ್ಲರೂ, ಶ್ರೀಧರಣ್ಣನ ಮಗ ಸಣ್ಣವನಾಗಿದ್ದಕ್ಕಾಗಿ, ಅಲ್ಲಿನ ಶಿಂಗೇ ಮಟ್ಟಿಯ ಮೇಲೆ ಹತ್ತಿ ಹಕ್ಕಿಗಳ ಮೊಟ್ಟೇ ಮರಿಗಳನ್ನ ನೋಡುವ ಭಾಗ್ಯವೂ ಲಭಿಸಿತು. ಹಕ್ಕಿಗಳ ಹಿಕ್ಕೆಯಿಂದ ಹುಟ್ಟಿದ ಟೊಮೇಟೋ ಗಿಡಗಳನ್ನ ನೋಡಿ ಅಬ್ಬ ಅನಿಸಿತು! ಅಂಗಡಿಯಲ್ಲಿ ದುಡ್ದು ಕೊಳ್ಳುವ ವಸ್ತು ಇಲ್ಲಿ ಹೀಗೆ ಬೆಳೆದಿದೆಯಲ್ಲ ಅಂತ. ಅಲ್ಲಿಂದ ವಾಪಾಸು ಬರುವಾದ ಚಿಕ್ಕಪ್ಪ ಹೇಳುತಿದ್ದರು, ಈಗಲೂ ಬೇಸಿಗೆ ಕಾಲದಲ್ಲಿ ಲಿಂಗನ ಮಕ್ಕಿಯ ನೀರು ಕಡಿಮೆಯಾದಾಗ ಬಂದರೆ ಮುಳುಗಿ ಹೋದ ಊರಿನ ಅವಶೇಷಗಳನ್ನ ಆರಾಮಾಗಿ ನೋಡಬಹುದು. ಅಪ್ಪ ಮತ್ತು ಉಳಿದವರೆಲ್ಲ ಮುಂದಿನ ವರುಷ ಬರಬೇಕಾಯಿತು ಹಾಗಾದರೆ ಅಂತ ಮಾತಾಡಿಕೊಳ್ಳುತಿದ್ದರು.

ಸ್ವಲ್ಪ ದೂರ ಬರುವಷ್ಟರಲ್ಲೇ, ಮೋಡ ಕಟ್ಟಿ ರಪರಪನೆ ಮಳೆ ರಾಚತೊಡಗಿತು. ಆ ಮಳೆಯಲ್ಲಿ ನೆನೆಯುತ್ತ ಕೂತಿದ್ದ ಆ ಹುಡುಗ, ತನಗೆ ಅಪ್ಪ ಹೇಳಿದ ಈ ಕಥೆಗಳೆಲ್ಲ ಸರಿಯಾಗಿ ಅರ್ಥವಾದ ಮೇಲೆ ಉಳಿದವರಿಗೂ ಹೇಳುತ್ತೇನೆ, ಮತ್ತು ಅಪ್ಪನ ಹಾಗೆಯೇ ತಿರುಗಾಟ ಮಾಡುತ್ತಾ ತನ್ನ ಸ್ನೇಹಿತರನ್ನೂ ಮುಂದೊಂದು ದಿನ ಇಲ್ಲಿಗೆ ಕರೆದುಕೊಂಡು ಬರುತ್ತೇನೆಂದು ನಿರ್ಧರಿಸಿದ.

ಈ ಸುದ್ದಿಯನ್ನು ಓದಿರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+