ರಂಗಭೂಮಿ ದಿನವೇ ರಾಜಕೀಯ ಬೃಹನ್ನಾಟಕಕ್ಕೆ ವೇದಿಕೆ ಸಿದ್ಧ!
ಬೆಂಗಳೂರು, ಮಾರ್ಚ್ 27 : 'ವಿಶ್ವ ರಂಗಭೂಮಿ ದಿನ'ದಂದೇ ಕಾಕತಾಳೀಯವಾಗಿ ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಘೋಷಿಸಿದೆ. ಜೊತೆಗೆ, ಕರ್ನಾಟಕ ವಿಧಾನಸಭೆ ಚುನಾವಣೆಯೆಂಬ ರಾಜಕೀಯ ಬೃಹನ್ನಾಟಕಕ್ಕೆ ವೇದಿಕೆ ಕಲ್ಪಿಸಿದೆ.
ಬಹು ದೃಶ್ಯಗಳ ಈ ಬೃಹನ್ನಾಟಕದ ಅಂಕಪರದೆ ಮೇ 12ರಂದು ಮೇಲೇಳುತ್ತದೆ ಮತ್ತು ರಾಜ್ಯದ ಜನರೇ ರಾಜಕಾರಣಿಗಳೆಂಬ ಪಾತ್ರಧಾರಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ. ನಂತರ, ಮೇ 15ರಂದು ನಾಟಕಕ್ಕೆ ತೆರೆಬೀಳಲಿದ್ದು, ಫಲಿತಾಂಶವೂ ಹೊರಬೀಳಲಿದೆ.
ಈ ನಾಟಕದಲ್ಲಿ ಪ್ರತಿಯೊಂದು ಪಕ್ಷಗಳಿಗೂ ಪ್ರತ್ಯೇಕ ಸೂತ್ರಧಾರಿಗಳು, ನಿರ್ದೇಶಕರು ಬೇರೆಬೇರೆ ಇರಲಿದ್ದು, ಅವರೇ ಪಾತ್ರಧಾರಿಗಳನ್ನು ಆಯ್ಕೆ ಮಾಡಲಿದ್ದಾರೆ. ಯಾರ್ಯಾರಿಗೆ ಈ ನಾಟಕದಲ್ಲಿ ಭಾಗವಹಿಸಲು, ನಟಿಸಿ ಮಿಂಚಲು ಅವಕಾಶ ಸಿಗುತ್ತದೋ ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.
Recommended Video


ಪಾತ್ರಧಾರಿಗಳು ತಮಗೆ ತಾವೇ ಬಣ್ಣಹಚ್ಚಿಕೊಳ್ಳಲಿದ್ದು, ನಾಟಕವಾಡಲು ಪ್ರತಿನಿತ್ಯ ನಿಮ್ಮ ಮುಂದೆ ಬರಲಿದ್ದಾರೆ. ಬೃಹತ್ ಸಮಾವೇಶಗಳಲ್ಲಿ, ಜಾಥಾಗಳಲ್ಲಿ, ಇಂಟರ್ನೆಟ್ಟುಗಳಲ್ಲಿ, ಟಿವಿಗಳಲ್ಲಿ, ಕಡೆಗೆ ಒಂದು ದಿನ ನಿಮ್ಮ ಮನೆಯ ಮುಂದೆಯೇ ಭರ್ಜರಿ ಅಭಿನಯವನ್ನು ನೀಡಲಿದ್ದಾರೆ.
ಏನೇನು ಡೈಲಾಗುಗಳನ್ನು ಹೊಡೆಯುತ್ತಾರೆ ಕಿವಿಗೊಟ್ಟು ಕೇಳಿರಿ. ಡೈಲಾಗುಗಳನ್ನು ಮರೆತರೆ, ಮರೆತಂತೆ ನಟಿಸಿದರೆ, ಹೇಳಬೇಕಾದುದನ್ನು ಬಿಟ್ಟು ಬೇರೆನನ್ನಾದರೂ ಹೇಳಿದರೆ, ತಿದ್ದಿ ಸರಿಯಾದ ಡೈಲಾಗು ಹೊಡೆಯಿಸಲು ಅಥವಾ ರಂಗದಿಂದಲೇ ಕೆಳಗಿಳಿಸಲು ಪ್ರೇಕ್ಷಕರಾದ ನೀವಂತೂ ಇದ್ದೇ ಇರುತ್ತೀರಿ.
ರಾಜಕಾರಣಿಗಳು ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ಸಂಭಾಷಣೆ ಒದಗಿಸುವಲ್ಲಿ ನಿಸ್ಸೀಮರು. ಇನ್ನು ನಟನೆಯಲ್ಲಂತೂ ಒಬ್ಬರನ್ನೊಬ್ಬರು ಮೀರಿಸುವವರಿದ್ದಾರೆ. ಅವರ ಹಾವಭಾವ, ಸನ್ನಿವೇಶಕ್ಕೆ ತಕ್ಕಂಥ ನಟನೆಯನ್ನು ಆಧರಿಸಿ ಅಂಕಗಳನ್ನು ನೀಡಿ, ಅತ್ಯುತ್ತಮ ನಟ, ನಟಿ, ನಿರ್ದೇಶಕ ಪ್ರಶಸ್ತಿಗಳನ್ನು ನೀಡಲು ಸಿದ್ಧರಾಗಿ.
ಕೆಲವರು ಅವಶ್ಯತೆ ಇಲ್ಲದಿದ್ದರೂ ಉದ್ದುದ್ದ ಡೈಲಾಗು ಹೊಡೆಯುವವರಿದ್ದಾರೆ, ಕೆಲವರು ಬರೆದುಕೊಟ್ಟ ಡೈಲಾಗನ್ನೂ ಸರಿಯಾಗಿ ಉಚ್ಚರಿಸಲು ಬರದವರಿದ್ದಾರೆ, ಕೆಲವರು ಮೌನದಿಂದಲೇ ತಮ್ಮ ಅಭಿನಯವನ್ನು ಪ್ರಚುರಪಡಿಸುವವರಿದ್ದಾರೆ, ಇನ್ನು ಕೆಲವರಿಗಂತೂ ಹಾವವೂ ಇಲ್ಲ, ಭಾವವಂತೂ ಇಲ್ಲವೇ ಇಲ್ಲ.
ಏನೇನು ಸನ್ನಿವೇಶಗಳು ಇರಲಿವೆ, ಯಾವ್ಯಾವ ಪಾತ್ರಧಾರಿಗಳು ಎಂಥ ಪಾತ್ರ ಮಾಡಲಿದ್ದಾರೆ, ಎಂತೆಂಥ ಸಂದರ್ಭಗಳು ಸೃಷ್ಟಿಯಾಗಲಿವೆ, ಸೂತ್ರಧಾರಿಗಳು ಯಾವಾಗ ಎಂಟ್ರಿ ತೆಗೆದುಕೊಳ್ಳುತ್ತಾರೆ, ಹಿನ್ನೆಲೆ ಸಂಗೀತ ಹೇಗಿರಲಿದೆ, ಎಂತೆಂಥ ಸೆಟ್ಟಿಂಗ್ ಗಳು ನಿರ್ಮಾಣವಾಗಲಿವೆ ನಿಮಗೆ ಊಹಿಸಲೂ ಸಾಧ್ಯವಿಲ್ಲ. ಎಲ್ಲವನ್ನೂ ಕಾದುನೋಡಬೇಕು.
ನಾಟಕಕ್ಕಾಗಿ ಕಾಸ್ಟ್ಯೂಮ್ ಗಳು ಈಗಾಗಲೆ ಸಿದ್ಧವಾಗಿವೆ. ಮೇಕಪ್ ಗಾಗಿ ಈಗಾಗಲೆ ಎಲ್ಲ ಪಾತ್ರಧಾರಿಗಳು ಬೇಸ್ ಹಚ್ಚಿಕೊಂಡು ಸಿದ್ಧರಾಗಿದ್ದಾರೆ. ಅಲ್ಲಲ್ಲಿ ಸ್ಟಾರ್ ಪ್ರಚಾರಕರಿಂದ ಐಟಂ ಸಾಂಗ್ ಗಳೂ ಇರಲಿವೆ. ಕೆಲವರು ಸನ್ನಿವೇಶಕ್ಕೆ ತಕ್ಕಂತೆ ಗ್ಲಿಸರಿನ್ ಬಳಸಿ ಕಣ್ಣೀರು ಸುರಿಸಿದರೂ ಅಚ್ಚರಿಯಿಲ್ಲ.
ರಾಮಾಯಣದ ನಡುವೆ ಮಹಾಭಾರತ, ಮಹಾಭಾರತದ ನಡುವೆ ರಾಮಾಯಣ, ಸ್ಕ್ರಿಪ್ಟೇ ಇಲ್ಲದಂಥ ನೀರಸ ನಾಟಕ, ಭೀಕರ ಡೈಲಾಗುಗಳಿರುವ ಅತ್ಯಾಧುನಿಕ ನಾಟಕ ನಿಮ್ಮ ಮುಂದೆ ಮುಂದಿನ ದಿನಗಳಲ್ಲಿ ತೆರೆದುಕೊಳ್ಳಲಿವೆ. ಮಾತಿಗೆ ಮಾತು, ನಟನೆಗೆ ನಟನೆ, ಪ್ರೇಕ್ಷಕರಾಗಿರುವ ಮತದಾರರಿಗೆ ಭರ್ಜರಿ ಮನರಂಜನೆ.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications