278699kannada poetಹೊನಲ ಹಾಡು ಬರೆದ ಗೋಕುಲದ ಕವಿಯ ಹಬ್ಬ/literature/music/2009/0317-kannada-poet-putina-gokula-nirgamana-lyrics.htmlಕನ್ನಡ ಸಾಹಿತ್ಯ ಲೋಕದ ಇಬ್ಬರು ದಿಗ್ಗಜರಾದ ದಾರ್ಶನಿಕ ಕವಿ ಡಿ ವಿ ಗುಂಡಪ್ಪ, ಪು ತಿ ನ ಅವರು ಮಾರ್ಚ್ 17 ರಂದು ಜನಿಸಿರುವುದು ವಿಶೇಷ. ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಮೇಲುಕೋಟೆಯಲ್ಲಿ 1905 ಮಾರ್ಚ್ 17 ರಂದು ಜನಿಸಿದರು. ಇವರು 'ಗೋಕುಲ ನಿರ್ಗಮನ' ಸೇರಿದಂತೆ 11 ಕವನಸಂಕಲನಗಳನ್ನು ಹೊರತಂದರು. ಆಧ್ಯಾತ್ಮ, ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಇವರ 35283http://kannada.oneindia.com/img/2009/03/17-putina2.jpg278699kannada poetಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು/column/gv/2009/0518-bendre-prose-critical-analysis-narayanacharya.html'ದೇಸಿಯತೆಯಲ್ಲಿ ಬೇರೂರಿ ಅರಳಿದ ದತ್ತ ಪ್ರತಿಭೆ' ಎಂದು ವರ್ಣಿತರಾದ ಸಾಧಕ ಕವಿ ದ.ರಾ.ಬೇಂದ್ರೆ ಅವರ ಕವಿ, ಕಾವ್ಯ ಮತ್ತು ವಿಮರ್ಶೆ ಕುರಿತು 32 ಸೂತ್ರಗಳ ವಿಮರ್ಶಾಗ್ರಂಥವನ್ನು ಡಾ. ಕೆ.ಎಸ್. ನಾರಾಯಣಾಚಾರ್ಯರು ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಬರೆದ ಈ ಗ್ರಂಥ ಈಗ ಬಿಡುಗಡೆಯಾಗುತ್ತಿದೆ. ಈ ಗ್ರಂಥಕ್ಕೆ ಬೇಂದ್ರೆ ಅವರ ಮಗ ವಾಮನ ಬೇಂದ್ರೆ ಅವರು 50 ಪುಟಗಳ 36726http://kannada.oneindia.com/img/2009/05/18-bendre4.jpg278699kannada poetನಾರಾಯಣಾಚಾರ್ಯ ಬರೆದ ಪುಸ್ತಕದ ಪರಿಚಯ (ಭಾಗ 2)/column/gv/2009/0523-book-by-ks-narayanacharya-on-bendre-prose.htmlಬೇಂದ್ರೆಯವರ ಬರವಣಿಗೆಯಲ್ಲಿ ಹುದುಗಿದ್ದ ವಿಮರ್ಶಾ ಸೂತ್ರಗಳನ್ನು ಆಯ್ದ ಶ್ರೇಯಸ್ಸು ನಾರಾಯಣಾಚಾರ್ಯರಿಗೆ ಸಲ್ಲುತ್ತದೆ. ಪ್ರತಿಯೊಂದು ಸೂತ್ರಕ್ಕೂ ನಾರಾಯಣಾಚಾರ್ಯರು 'ಸಾಹಿತ್ಯದ ವಿರಾಟ ಸ್ವರೂಪ' ಗ್ರಂಥದಲ್ಲಿ ದೀರ್ಘವಾದ ವಿದ್ವತ್‌ಪೂರ್ಣವಾದ ವ್ಯಾಖ್ಯಾನವನ್ನು ಬರೆದಿದ್ದಾರೆ. ಪುಸ್ತಕ ಪರಿಚಯದ ಎರಡನೇ ಭಾಗ ಇಲ್ಲಿದೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಡಾ| ಕೆ.ಎಸ್. ನಾರಾಯಣಾಚಾರ್ಯರು ಬೇಂದ್ರೆಯವರ "ಸಾಹಿತ್ಯದ ವಿರಾಟ ಸ್ವರೂಪ" ಗ್ರಂಥದಿಂದ 32 ವಿಮರ್ಶಾ ಸೂತ್ರಗಳನ್ನು ಆರಿಸಿದ್ದಾರೆ. ಸಾಹಿತ್ಯದ 36851http://kannada.oneindia.com/img/2009/05/23-ks-narayanacharya2.jpg278699kannada poetಸರ್ವಜ್ಞ ಪ್ರತಿಮೆ ಅನಾವಣರಕ್ಕೆ ಚೆನ್ನೈ ಸಜ್ಜು/news/2009/08/12/sarvajna-statue-unveiling-in-chennai-on-aug-13.htmlಚೆನ್ನೈ, ಆ. 12 : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚೆನ್ನೈ ನಗರದ ಮದ್ಯಭಾಗದಲ್ಲಿರುವ ಕನ್ನಡಿಗರೇ ಹೆಚ್ಚಾಗಿರುವ ಅಯನಾವರಂನಲ್ಲಿ ಪ್ರದೇಶದ ಜೀವಾ ಪಾರ್ಕ್ ನಲ್ಲಿ ಕನ್ನಡದ ಆದಿಕವಿ ಸರ್ವಜ್ಞನ ಪ್ರತಿಮೆಯನ್ನು ಗುರುವಾರ ಸಾಯಂಕಾಲ 4 ಗಂಟೆಗೆ ಅನಾವರಣ ಮಾಡಲಿದ್ದಾರೆ.ಗುರುವಾರ ನಡೆಯಲಿರುವ ಸರಕಾರಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಆರಂಭವಾಗಿದ್ದು, ಮದ್ರಾಸ್ ಕನ್ನಡ ಸಂಘ ಸೇರಿದಂತೆ ಚೆನ್ನೈ ನಗರದಲ್ಲಿ ವಾಸವಾಗಿರುವ 38596http://kannada.oneindia.com/img/2009/08/12-sarvajna2.jpg278699kannada poetಚೆನ್ನೈ : ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ/news/2009/08/13/chennai-all-set-for-unveiling-for-sarvajna-statue.htmlಚೆನ್ನೈ, ಆ. 13 : ಬೆಂಗಳೂರಿನಲ್ಲಿ ನಡೆದ ತಿರುವಳ್ಳುವರ್ ಪ್ರತಿಮೆ ಅನಾವರಣದಷ್ಟೇ ಅದ್ಧೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಬೇಕು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗೂ ಬುಧವಾರ ಆರ್ ಪಿಎಫ್ ಮೈದಾನ ಮತ್ತು ಜೀವಾ ಪಾರ್ಕ್ ನಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ. ಕಾರ್ಯಕ್ರಮ 38601http://kannada.oneindia.com/img/2009/08/13-karunanidhi2e.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)/column/gv/2009/0117-vinayaka-krishna-gokak-part3.htmlಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಮಾಡಿ ಭಾರತಕ್ಕೆ ಮರಳಿದ ವಿನಾಯಕ ಕೃಷ್ಣ ಗೋಕಾಕ್ ಅವರು ಮಾಡಿಕೊಂಡ ದೊಡ್ಡ ಆಸ್ತಿಯೆಂದರೆ ಅಪಾರ ಶಿಷ್ಯವೃಂದ. ಹೇಮಂತ ಕುಲಕರ್ಣಿ, ಸುಬ್ಬಣ್ಣ ಎಕ್ಕುಂಡಿ, ವಿ.ಜಿ.ಭಟ್ಟ, ಗಾಂಗಾಧರ ಚಿತ್ತಾಲ ಮೊದಲಾದ ಖ್ಯಾತ ಲೇಖಕರು ಗೋಕಾಕರ ಗರಡಿಯಲ್ಲಿ ಪಳಗಿದವರೇ.* ಡಾ|ಜೀವಿ ಕುಲಕರ್ಣಿಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಂಗ್ಲಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.(ಆಗ್ಝನ್) ಡಿಗ್ರಿ ಪಡೆದು ವಿಕ್ರಮ ಸಾಧಿಸಿದ ಗೋಕಾಕರು 34120http://kannada.oneindia.com/img/2009/01/17-vk-gokak3e.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 4)/column/gv/2009/0124-vinayaka-krishna-gokak-part4.htmlಮಹರ್ಷಿ ಶ್ರೀ ಅರವಿಂದರ ಕೃತಿಗಳನ್ನು ಅರಗಿಸಿ ಕುಡಿದು ತಮ್ಮ ಜೀವನದಲ್ಲಿ ಹಾಗೂ ಸಾಹಿತ್ಯದಲ್ಲಿ ಅದರ ಬೆಳಕನ್ನು ಹರಡಿದ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲಿ ಗೋಕಾಕರೂ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ನಿಮಿತ್ತ ಲೇಖನ ಸರಣಿ ಮುಂದುವರಿಯುತ್ತಿದೆ.* ಡಾ|ಜೀವಿ ಕುಲಕರ್ಣಿ1947ರಲ್ಲಿ ಭಾರತಕ್ಕೆ ಸ್ವಾತಂತ್ಯ ದೊರೆತ ನಂತರ ಬರೋಡಾ ಸಂಸ್ಥಾನ ಭಾರತ ಸರಕಾರದಲ್ಲಿ 34269http://kannada.oneindia.com/img/2009/01/24-vk-gokak4.jpg99737gv kulkarniಧಾರವಾಡಕ್ಕೂ ಗೋಕಾಕರಿಗೂ ಬಿಡಲಾರದ ನಂಟು/column/gv/2009/0131-unforgettable-days-of-gokak-in-dharwad.htmlಧಾರವಾಡಕ್ಕೂ ವಿಕೆ ಗೋಕಾಕರಿಗೂ ಬಿಡಲಾರದ ನಂಟು. ಅವರು ಧಾರವಾಡಕ್ಕೆ ಬರುತ್ತಿದ್ದಾರೆಂದು ತಿಳಿದಕೂಡಲೆ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಗೋಕಾಕರ ಮಹತ್ವದ ಕೃತಿಗಳು ಪ್ರಕಟವಾಗಿದ್ದು ಅವರು ಧಾರವಾಡದಲ್ಲಿದ್ದಾಗಲೇ. ಧಾರವಾಡದಲ್ಲಿನ ಅವರ ಒಡನಾಟ, ವಿದ್ಯಾರ್ಥಿಗಳೊಂದಿಗಿನ ಬಾಂಧವ್ಯ, ಸಾಂಸ್ಕೃತಿಕ ನಗರಿಯಲ್ಲಿ ಕಳೆದ ಅವಿಸ್ಮರಣೀಯ ಗಳಿಗೆಗಳನ್ನು ಜೀವಿ ಕುಲಕರ್ಣಿಯವರು ಇಲ್ಲಿ ಮೆಲುಕು ಹಾಕಿದ್ದಾರೆ. ಗೋಕಾಕ್ ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಲೇಖನ ಸರಣಿಯ ಭಾಗ 34397http://kannada.oneindia.com/img/2009/01/31-vk-gokak4.jpg99737gv kulkarniಗೋಕಾಕರಿಗೆ ಸತ್ಯಸಾಯಿಬಾಬಾ ಅನುಗ್ರಹ/column/gv/2009/0207-vk-gokak-birth-centenary-part-6.htmlಶೈಕ್ಷಣಿಕವಾಗಿ ಮಾತ್ರ ವಿನಾಯಕ ಕೃಷ್ಣ ಗೋಕಾಕರು ಪರೀಕ್ಷೆಗಳನ್ನೆದುರಿಸಲಿಲ್ಲ ಜೀವನದುದ್ದಕ್ಕೂ ಅನೇಕ ಸತ್ವಪರೀಕ್ಷೆಗಳನ್ನು ಅವರು ಎದುರಿಸಿದರು. ಹೋದಲ್ಲೆಲ್ಲ ವಿಜಯಶಾಲಿಯಾದರು, ಗೆಳೆಯರನ್ನು ಸಂಪಾದಿಸಿದರು, ಶಿಷ್ಯಂದಿರನ್ನು ಹುಟ್ಟುಹಾಕಿದರು. ಅವರ ವ್ಯಕ್ತಿತ್ವವೇ ಅಂತಹುದಾಗಿದ್ದು. ಗೋಕಾಕರ ಜೀವನವನ್ನು, ವ್ಯಕ್ತಿತ್ವವನ್ನು ಬಣ್ಣಿಸುವ 'ಜೀವಿ' ಕುಲಕರ್ಣಿಯವರ ಸರಣಿ ಲೇಖನದ ಆರನೇ ಭಾಗ, ಗೋಕಾಕರ ಜನ್ಮಶತಮಾನೋತ್ಸವದ ನಿಮಿತ್ತ.ಗೋಕಾಕರು ಎರಡನೆಯ ಸಲ ಹೈದ್ರಾಬಾದ್‌ಗೆ ತೆರಳಿದ್ದು ಆಕಸ್ಮಿಕವಾಗಿದ್ದರೂ, ಒಂದು ರೀತಿಯಲ್ಲಿ, ಇದು 34531http://kannada.oneindia.com/img/2009/02/07-vk-gokak4.jpg382293bookಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ/column/gv/2009/0314-ajji-kathe-story-on-grandmother-by-hys.htmlನನ್ನ ಮೊದಲಿನ ಎರಡು ಅಮೇರಿಕಾ ಪ್ರವಾಸಗಳು(2000 ಮತ್ತು 2002) ಅವಿಸ್ಮರಣಿಯವಾಗಲು ಕಾರಣರಾದವರಲ್ಲಿ ಡಾ| ಎಚ್.ವಾಯ್.ರಾಜಗೋಪಾಲ ಒಬ್ಬರು. ನನ್ನ ಎರಡನೆಯ ಪ್ರವಾಸದಲ್ಲಿ ನಾನು ಅವರ ಆತಿಥ್ಯದಲ್ಲಿ ಎರಡು ವಾರ ಫಿಲೆಡೆಲ್ಫಿಯಾದಲ್ಲಿದ್ದೆ. ಅವರ ಅಣ್ಣ ಪ್ರಸಿದ್ಧ ಪತ್ರಕರ್ತ ಎಚ್.ವಾಯ್. ಶಾರದಾ ಪ್ರಸಾದ. ತಮ್ಮ ತಂದೆಯ ಜನ್ಮ ಶತಾಬ್ದಿಯ ನೆನಪಿಗಾಗಿ ಎಂಟು ಮಕ್ಕಳು ಸೇರಿ ಒಂದು ಅಪೂರ್ವ ಪುಸ್ತಕ ಬರೆದಿದ್ದಾರೆ. (ಸಂಗೀತದ 35217http://kannada.oneindia.com/img/2009/03/14-sharadaprasad2.jpg382293bookಹೊತ್ತಿಗೆ ರೂಪದಲ್ಲಿ ಏನ್ ಗುರು ಕಾಫಿ ಆಯ್ತಾ?/column/enguru/2009/0508-enguru-in-book-form.html2007ರಲ್ಲಿ ಬನವಾಸಿ ಬಳಗದ "ಏನ್ ಗುರು ಕಾಫಿ ಆಯ್ತಾ?" ಅಂಕಣಮಾಲೇನಾ ಶುರು ಮಾಡಲಾಯ್ತು. ಇದಕ್ಕೆ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ, ಉತ್ತೇಜನ ನಿಮ್ಮಿಂದ ಸಿಕ್ಕಿದೆ. ಈ ಬರಹಗಳನ್ನು ಬರೀತಾ ಬರೀತಾನೇ ನಮ್ಮ ಚಿಂತನೆಗಳೂ ಸ್ಪಷ್ಟರೂಪ ತೆಗೆದುಕೊಳ್ಳುತ್ತಾ ಸಾಗಿದ್ದು ಸುಳ್ಳಲ್ಲ. ನಿಮ್ಮ ಸಹಕಾರ ಮತ್ತು ಅಭಿಮಾನದಿಂದ ಈ ಬ್ಲಾಗು ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಜನ ಓದುಗರನ್ನು ಮುಟ್ಟಿದೆ.ಆದ್ರೆ ನಾವು 36498http://kannada.oneindia.com/img/2009/05/08-enguru1.jpg382293bookಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು/column/gv/2009/0518-bendre-prose-critical-analysis-narayanacharya.html'ದೇಸಿಯತೆಯಲ್ಲಿ ಬೇರೂರಿ ಅರಳಿದ ದತ್ತ ಪ್ರತಿಭೆ' ಎಂದು ವರ್ಣಿತರಾದ ಸಾಧಕ ಕವಿ ದ.ರಾ.ಬೇಂದ್ರೆ ಅವರ ಕವಿ, ಕಾವ್ಯ ಮತ್ತು ವಿಮರ್ಶೆ ಕುರಿತು 32 ಸೂತ್ರಗಳ ವಿಮರ್ಶಾಗ್ರಂಥವನ್ನು ಡಾ. ಕೆ.ಎಸ್. ನಾರಾಯಣಾಚಾರ್ಯರು ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಬರೆದ ಈ ಗ್ರಂಥ ಈಗ ಬಿಡುಗಡೆಯಾಗುತ್ತಿದೆ. ಈ ಗ್ರಂಥಕ್ಕೆ ಬೇಂದ್ರೆ ಅವರ ಮಗ ವಾಮನ ಬೇಂದ್ರೆ ಅವರು 50 ಪುಟಗಳ 36726http://kannada.oneindia.com/img/2009/05/18-bendre4.jpg382293bookನಾರಾಯಣಾಚಾರ್ಯ ಬರೆದ ಪುಸ್ತಕದ ಪರಿಚಯ (ಭಾಗ 2)/column/gv/2009/0523-book-by-ks-narayanacharya-on-bendre-prose.htmlಬೇಂದ್ರೆಯವರ ಬರವಣಿಗೆಯಲ್ಲಿ ಹುದುಗಿದ್ದ ವಿಮರ್ಶಾ ಸೂತ್ರಗಳನ್ನು ಆಯ್ದ ಶ್ರೇಯಸ್ಸು ನಾರಾಯಣಾಚಾರ್ಯರಿಗೆ ಸಲ್ಲುತ್ತದೆ. ಪ್ರತಿಯೊಂದು ಸೂತ್ರಕ್ಕೂ ನಾರಾಯಣಾಚಾರ್ಯರು 'ಸಾಹಿತ್ಯದ ವಿರಾಟ ಸ್ವರೂಪ' ಗ್ರಂಥದಲ್ಲಿ ದೀರ್ಘವಾದ ವಿದ್ವತ್‌ಪೂರ್ಣವಾದ ವ್ಯಾಖ್ಯಾನವನ್ನು ಬರೆದಿದ್ದಾರೆ. ಪುಸ್ತಕ ಪರಿಚಯದ ಎರಡನೇ ಭಾಗ ಇಲ್ಲಿದೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಡಾ| ಕೆ.ಎಸ್. ನಾರಾಯಣಾಚಾರ್ಯರು ಬೇಂದ್ರೆಯವರ "ಸಾಹಿತ್ಯದ ವಿರಾಟ ಸ್ವರೂಪ" ಗ್ರಂಥದಿಂದ 32 ವಿಮರ್ಶಾ ಸೂತ್ರಗಳನ್ನು ಆರಿಸಿದ್ದಾರೆ. ಸಾಹಿತ್ಯದ 36851http://kannada.oneindia.com/img/2009/05/23-ks-narayanacharya2.jpg382293bookಮೇ 31ರಂದು ನಟನದಲ್ಲಿ ರಂಗವಲ್ಲಿಯ ಲೋಕಾರ್ಪಣೆ/literature/book/2009/0529-mandya-ramesh-rangavalli-in-mysuru.htmlಮೈಸೂರು, ಮೇ 29 : ಜನಪ್ರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಬರೆದ 'ರಂಗವಲ್ಲಿ' ಕೃತಿ ಮೇ 31ರ ಭಾನುವಾರ ಸಂಜೆ 5.30ಕ್ಕೆ ರಾಮಕೃಷ್ಣನಗರದ ನಟನ ರಂಗಮಂಟಪದಲ್ಲಿ ಲೋಕಾರ್ಪಣೆಗೊಳ್ಳಲಿದೆ.ಡಾ|| ಹಾಲತಿ ಸೋಮಶೇಖರ್ ಅವರ ವಿಸ್ಮಯ ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಕುತೂಹಲ ಸಂಸ್ಥೆ ಲೋಕಾರ್ಪಣೆಗೊಳಿಸಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ, ಜನಪ್ರಿಯ ಲೇಖಕ ಡಾ|| ಸಿದ್ಧಲಿಂಗಯ್ಯ ಬಿಡುಗಡೆ 36989http://kannada.oneindia.com/img/2009/05/29-rangavalli-mandya-ramesh1.jpgnews"> ಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು | Da Ra Bendre | Narayanacharya | Vamana Bendre | GV - ಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು - Kannada Oneindia

ಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು

Dr. Da Ra Bendre
'ದೇಸಿಯತೆಯಲ್ಲಿ ಬೇರೂರಿ ಅರಳಿದ ದತ್ತ ಪ್ರತಿಭೆ' ಎಂದು ವರ್ಣಿತರಾದ ಸಾಧಕ ಕವಿ ದ.ರಾ.ಬೇಂದ್ರೆ ಅವರ ಕವಿ, ಕಾವ್ಯ ಮತ್ತು ವಿಮರ್ಶೆ ಕುರಿತು 32 ಸೂತ್ರಗಳ ವಿಮರ್ಶಾಗ್ರಂಥವನ್ನು ಡಾ. ಕೆ.ಎಸ್. ನಾರಾಯಣಾಚಾರ್ಯರು ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಬರೆದ ಈ ಗ್ರಂಥ ಈಗ ಬಿಡುಗಡೆಯಾಗುತ್ತಿದೆ. ಈ ಗ್ರಂಥಕ್ಕೆ ಬೇಂದ್ರೆ ಅವರ ಮಗ ವಾಮನ ಬೇಂದ್ರೆ ಅವರು 50 ಪುಟಗಳ ಸುದೀರ್ಘ ಮುನ್ನುಡಿ ಬರೆದಿದ್ದಾರೆ.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

"ಕವಿವರ್ಯ ಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು" ಎಂಬ ಗ್ರಂಥವನ್ನು ಎರಡು ವರ್ಷಗಳ ಹಿಂದೆ ಡಾ|| ಕೆ.ಎಸ್. ನಾರಾಯಣಾಚಾರ್ಯರು ಬರೆದರು. ಅದು ಈಗ ಬಿಡುಗಡೆ ಪಡೆಯುತ್ತಿರುವ ವಿಚಾರ ಬೇಂದ್ರೆ ಕಾವ್ಯಾಭ್ಯಾಸಿಗಳಿಗೆ ಸಂತಸವನ್ನುಂಟು ಮಾಡಿದೆ. ಹಾಗೆ ನೋಡಿದರೆ ನಾರಾಯಣಾಚಾರ್ಯರು ಬರೆದ ಎರಡನೆಯ ಗ್ರಂಥವಿದು. (ಮೊದಲನೆಯ ಪುಸ್ತಕ: ಬೇಂದ್ರೆ ಕಾವ್ಯದಲ್ಲಿ ಅಧ್ಯಾತ್ಮದ ನೆಲೆ ಮತ್ತು ಆರ್ಷದೃಷ್ಟಿ) "ಅಂಬಿಕಾತನಯ ಹಾಡಿದನೆಂದರೆ ಹೂವುಗಳು ಅರಳುವವು, ಕಲಿಯುಗ ಕೃತಯುಗವಾಗುವುದು", "ಕಲ್ಲರಳಿ ಹೂವಾಗಿ... ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ" ಎಂಬ ಸರ್ವಜ್ಞನ ವಚನ ನನಪಿಗೆ ಬರುತ್ತದೆ. ಬೇಂದ್ರೆಯವರ ವಿಮರ್ಶಾಭಾಷೆ ಸೂತ್ರಪ್ರಾಯವಾದದು, ವಜ್ರದ ಕಡಲೆಯಂತಿರುವದು. ಅವುಗಳ ಸೋಮರಸ ತೆಗೆಯಲು ನೃಸಿಂಹಶಕ್ತಿ ಬೇಕು, ಭೀಮ ಬಲಬೇಕು". ಋಗ್ವೇದ ಮಂತ್ರ ಪಠಿಸುತ್ತ, ಬಲದ ಉಪಾಸನೆ ಮಾಡಿದ ನಾರಾಯಣಾಚಾರ್ಯರು ಕಬ್ಬಿಣ ಕಡಲೆಗಳೆಂಬ 32 ಸೂತ್ರಗಳಿಂದ ಚಿಮ್ಮಿಸಿದ ದ್ರಾಕ್ಷಾರಸ ಪಾಕವಾಗಿದೆ ಈ ಗ್ರಂಥವೆಂದು ಡಾ||ವಾಮನ ಬೇಂದ್ರೆಯವರು ಈ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಹೇಳಿದ್ದಾರೆ.

ಈ ಗ್ರಂಥದ ವಿಮರ್ಶೆ ಮಾಡುವುದೆಂದರೆ, "ರತ್ನ ಪರೀಕ್ಷೆ" ಮಾಡಿದಂತೆ. ರನ್ನ ತನ್ನ ಕಾವ್ಯವನ್ನು ಪರೀಕ್ಷಿಸುವವನಿಗೆ ಎಂಟು ಎದೆ ಬೇಕು ಎಂದಿದ್ದು ಪ್ರಸ್ತುತದಲ್ಲಿ ನೆನಪಿಗೆ ಬರುತ್ತದೆ. ನಾನು ಇಲ್ಲಿ ಈ ಗ್ರಂಥದ ಪರಿಚಯವನ್ನು ಮಾತ್ರ ಮಾಡುವೆ. ಬೇಂದ್ರೆಯವರ ಗದ್ಯ ಬರವಣಿಗೆ ವಿರಾಟ್ ಸ್ವರೂಪದ್ದು. "ಸಾಹಿತ್ಯದ ವಿರಾಟ್ ಸ್ವರೂಪ" ಎಂಬ ಪ್ರಬಂಧವು ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ವರಕವಿ ಬೇಂದ್ರೆಯವರು ಮಾಡಿದ ಅಧ್ಯಕ್ಷೀಯ ಭಾಷಣ. ಅದರ ಹಿರಿಮೆ - ಗರಿಮೆಯ ಬಗ್ಗೆ ಸಮನ್ವಾಚಾರ್ಯ ವಿನಾಯಕ ಕೃಷ್ಣ ಗೋಕಾಕರು ತಮ್ಮ ಬಳ್ಳಾರಿ ಸಾಹಿತ್ಯ ಸಮ್ಮೇಲನದ ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತಾಪಿಸಿದ್ದನ್ನು ಇಲ್ಲಿ ನೆನೆಯಬಹುದು. "ಸಾಹಿತ್ಯದ ವಿರಾಟ್ ಸ್ವರೂಪ" ಶೀರ್ಷಿಕೆಯನ್ನು ಬೇಂದ್ರೆಯವರ ಸಮಗ್ರ ಗದ್ಯ ಬರವಣಿಗೆಗೆ ಇಟ್ಟದ್ದು ಸಾರ್ಥಕ ಅಷ್ಟೇ ಅಲ್ಲ ಅನ್ವರ್ಥಕವೂ ಆಗಿದೆ. ಬೇಂದ್ರೆಯವರ ಗದ್ಯ ಬರವಣಿಗೆಯ ಸಾಗರದಿಂದ ವಿಮರ್ಶಾಸೂತ್ರದ 32 ಅಣಿಮುತ್ತುಗಳನ್ನು ಹೆಕ್ಕಿ ತೆಗೆದು ಪ್ರಸ್ತುತಪಡಿಸಿ ಶ್ರೇಯಸ್ಸು ನಾರಾಯಣಾಚಾರ್ಯರಿಗೆ ಸಲ್ಲುತ್ತದೆ.

240 ಪುಟಗಳ ಈ ಪುಸ್ತಕದಲ್ಲಿ ಎಂಟು ಅಧ್ಯಾಯಗಳು ಇವೆ. 50 ಪುಟಗಳ ಸುದೀರ್ಘ ಮುನ್ನುಡಿಯನು ಡಾ|| ವಾಮನ ಬೇಂದ್ರೆಯವರು ಬರೆದಿದ್ದಾರೆ. ಸಾಮಾನ್ಯವಾಗಿ ಯಾವುದೇ ಪುಸ್ತಕಗಳ ಮುನ್ನುಡಿಗೆ ಶೀರ್ಷಿಕೆ ಇರುವುದಿಲ್ಲ. ಈ ಮುನ್ನುಡಿಗೆ ಇದೆ. ಇದು ಅದರ ವೈಷಿಷ್ಟ್ಯ. "ಸಾಹಿತ್ಯ ಶ್ರುತಿಗೆ ಬೇಂದ್ರೆ ಸಂಗೀತ ಠೇಕಾ: ತ್ರಿತಾಲ್". ಬೇಂದ್ರೆ ಸಾಹಿತ್ಯದ ಬಗ್ಗೆ ಬರೆದ ಒಂದು ಸಂಗೀತಮಯ ಪುಸ್ತಕಕ್ಕೆ ತಾವು ಹೇಗೆ ಠೇಕಾ ನೀಡುತ್ತಾರೆ, ತ್ರಿತಾಲ್ ಸಾಥ ನೀಡುತ್ತಾರೆ ಎಂಬುದನ್ನು ಇಲ್ಲಿ ಅವರು ಸೂಚಿಸಿದ್ದಾರೆ. ಒಂದೆಡೆ "ಹೃದಯಾರವಿಂದದಲ್ಲಿರುವ ನಾರಾಯಣನೆ ತಾನಾಗಿ ದತ್ತನರನು" ಆಗಿರುವ ಬೇಂದ್ರೆಯವರ ಕೃತಿ ಇದ್ದರೆ, ಇನ್ನೊಂದೆಡೆಗೆ ಅಂತಃಕರಣದ ವೈದಿಕ ವೀಣೆ ನುಡಿಸುವ ನಾರಾಯಣಾಚಾರ್ಯ ಇದ್ದಾರೆ. "ಇವರಿಬ್ಬರಲ್ಲಿ ನಡೆದ ಧ್ವನಿ ಹಾಗೂ ಪ್ರತಿಧ್ವನಿಗಳ ನುಡಿ ಈ ಗ್ರಂಥ" ಎಂದು ವಾಮನ ಬೇಂದ್ರೆ ಮಾರ್ಮಿಕವಾಗಿ ನುಡಿಯುತ್ತಾರೆ.

ಕೆ.ಎಸ್. ನಾರಾಯಣಾಚಾರ್ಯರು ಬೇಂದ್ರೆಯವರ ಸಾಹಿತ್ಯದ ವಿರಾಟ ಸ್ವರೂಪ" ಅಧ್ಯಯನಮಾಡಿ 32 ಸೂತ್ರಗಳನ್ನು ಆಯ್ಕೆಮಾಡಿದ್ದರ ಹಿನ್ನೆಲೆಯನ್ನು ಹಿಂಜುತ್ತ, ಆ ಸಂಖ್ಯೆ 32 ಆದ ಬಗೆಯನ್ನು ನಿರೂಪಿಸುತ್ತಾರೆ. "ಆಯಿ ದಲದರವಿಂದ ಸ್ಯಂದಮಾನಮ್ ಮರಂದಮ್| ತಪಕಿಮಪಿಲಿಹಂತೋ ಮಂಜ ಗುಂಜ್ಯತು ಭೃಂಗಾಃ| ದಿಶಿದಿಶಿ ನಿರಾಪೇಕ್ಷಃ ತಾವಕೀನಂ ವಿವೃಣ್‌ವನ್| ಪರಿಮಲವಯಮನ್ಯೋ ಬಾಂಧವೋ ಗಂಧವಾಹಃ" ಎಂಬ ಜಗನ್ನಾಥ ಪಂಡಿತನ ಸಾಲುಗಳನ್ನು ಬೇಂದ್ರೆಯವರು ಸದಾ ಸ್ಮರಿಸುತ್ತಿದ್ದರು. ಅದರ ಹಿನ್ನೆಲೆಯಲ್ಲಿ ಭೃಂಗವು ಬೇಂದ್ರೆಯವರ ಕಾವ್ಯದ ರೂಪಕವಾಗಿ ಬಂದ ವಿಚಾರವನ್ನು ತಿಳಿಸುತ್ತಾರೆ. (ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಬಾ ಭೃಂಗವೆ ಬಾ, ಕಂಪಿನ ಕರೆ ಮೊದಲಾದ ಕವನಗಳಲ್ಲಿ ಭೃಂಗ, ಬೇಂದ್ರೆಯವರ ಸಮಗ್ರ ಕಾವ್ಯದ ಪ್ರತಿಮೆ, ರೂಪಕ, ಧ್ವನಿಯಾಗಿರುವುದನ್ನು ಕಾಣಬಹುದು).

ಭಾರತೀಯ ಕಾವ್ಯ ಮೀಮಾಂಸೆಯ ಲಕ್ಷಣಕಾರರು - ರೂಪಕಕ್ಕೆ ಅಲಂಕಾರ ಸಂಪ್ರದಾಯದಲ್ಲಿ ವಿಶಿಷ್ಟ ಮಹತ್ವ ಕೊಡುತ್ತಾರೆ. ಬೇಂದ್ರೆಯವರು ರೂಪಕ = ಪ್ರತಿಮೆ= ಪ್ರತೀತ ಎಂಬ ನಿರ್ಣಯಕ್ಕೆ ತಲುಪಿದ್ದರು. ಮಹಾಕವಿ ಕುಮಾರವ್ಯಾಸನು ರೂಪಕ ಸಾಮ್ರಾಜ್ಯದ ಚಕ್ರವರ್ತಿ. ಆ ಪರಂಪರೆಯಲ್ಲಿಯೆ ಬೆಳೆದ ಅತ್ಯಂತ ಮಹತ್ವದ ಕವಿ ಬೇಂದ್ರೆ ಎಂಬ ಮಾತನ್ನು ಅನೇಕ ವಿಮರ್ಶಕರು ಆಡಿದ್ದಾರೆ. ಈ ಸಂದರ್ಭ ನೆನೆಯುತ್ತಾ ವಾಮನ ಬೇಂದ್ರೆಯವರು "ಇದು ನಭೋವಾಣಿ" ಸಂಗ್ರಹದ "ನವವಿಸರ್ಗ" ಎಂಬ ಕವನದ ಮಹತ್ವದ ಸಾಲುಗಳನ್ನು ಉದ್ಧರಿಸುತ್ತಾರೆ:

"ಭಾಷೆ ಏಕೆ ಬರಿ ಧ್ವನಿಯು ಸಾಕು; ಆ ಅಲಂಕಾರ ನೂಕು
ರೀತಿಗೀತಿ ಕೊಂಡಾಟ ಬೇಡ, ಗುಣಗಣದ ಷೋಕಿ ಝೋಕು
ಭಾವವೇನು ಎಣಿಸಾಟ ಉಂಟೆ? ಆ ಛಂದ ಗತ್ತುಗಿತ್ತು|
ಒಂದೆ ನಾಮದಲಿ ಪ್ರಣವಧಾಮ ಅಡಗಿತ್ತು, ಇಲ್ಲಾ; ಇತ್ತು".

ಅಂಬಿಕಾತನಯದತ್ತರದು ಉದ್ಭವಕಾವ್ಯ. ಬೇಂದ್ರೆ ಪಾಶ್ಚಿಮಾತ್ಯ ಕಾವ್ಯ ಮೀಮಾಂಸಾ ಲಕ್ಷಣಕಾರರನ್ನು ಬೆಂಬಲಿಸುವುದಿಲ್ಲ; ಭಾರತೀಯ ಸಂಸ್ಕೃತ ಕಾವ್ಯಲಕ್ಷಣಕಾರರ ದರ್ಶನಗಳನ್ನು ಹೊಸ ರೀತಿಯಲ್ಲಿ ಕಾಣುತ್ತಾರೆ.

ವೇದದ ಷಡಂಗಗಳಾದ ಶಿಕ್ಷಾ, ವ್ಯಾಕರಣ, ನಿರುಕ್ತ, ಛಂದಸ್ಸು, ಕಲ್ಪ, ಜ್ಯೋತಿಷ್ಯ- ಇವುಗಳ ಸೆಲೆಯಿಂದ ಬೇಂದ್ರೆ ಕಾವ್ಯ ಹರಿದುಬಂದಿದೆ ಎನ್ನುತ್ತಾರೆ. ಬೇಂದ್ರೆಯವರಿಂದ ಲಿಪಿಬದ್ಧವಾಗಿರುವಂತೆ ಬೇಂದ್ರೆ ತಮ್ಮ ಸಾಮವೇದದ ಛಂದಸ್ಸಿನಲ್ಲಿ ಕವನ ರಚಿಸಿದ್ದು ಹೆಮ್ಮೆಯ ವಿಷಯ ಬೇಂದ್ರೆ ಕಾವ್ಯದ ಆತ್ಮ-ಧ್ವನಿ. ಈ ಧ್ವನಿಯನ್ನು ಅವರು ತಮ್ಮ ಗಂಧರ್ವ ಕಂಠದಿಂದ ಹಾಡುತ್ತ ಜನಪ್ರಿಯರಾದುದು ಪ್ರಖ್ಯಾತ. ಇದಕ್ಕೇ ಡಾ||ಶಿವರುದ್ರಪ್ಪನವರು "ದೇಸಿಯತೆಯಲ್ಲಿ ಬೇರೂರಿ ಅರಳಿದ ದತ್ತ ಪ್ರತಿಭೆ" ಎಂದು ಸಾರಿದ್ದು ಗಮನಾರ್ಹ ಎನ್ನುತ್ತಾರೆ.

ಮನುಷ್ಯನಿಗೆ ಸಾಮಾನ್ಯ ಅವಸ್ಥೆ - ಜಾಗ್ರತೆ ಮತ್ತು ಸ್ವಪ್ನ. ಈ ಎರಡರ ಅಭ್ಯಾಸದಿಂದ ನಾರಾಯಣಾಚಾರ್ಯರು ಅನುಭವಿಸಿದ್ದು ಸುಷುಪ್ತಿ, ತುರೀಯ ಹಾಗೂ ತುರೀಯಾತೀತ. ಒಟ್ಟು ಪಂಚ ಅವಸ್ಥೆಗಳು. ಯಾವ ಕವಿಯ ಕಾರ್ಯ ತುರೀಯಾತೀತ ಅವಸ್ಥೆಯಿಂದ ನಡೆಯುತ್ತದೋ ಅವನು ಮಾತ್ರ ಋಷಿಕವಿ. ಬೇಂದ್ರೆ ನಿರ್ಮಿತ ಸಾಹಿತ್ಯ ವಿಮರ್ಶಾಸೂತ್ರ = 32. ಅರವಿಂದರು ಹಾಗೂ ಬೇಂದ್ರೆಯವರು ಅವತಾರಿ ಪುರುಷರಲ್ಲ, ಸಾಧಕ ಸಂತಪುರುಷರು. ಬೇಂದ್ರೆ, ಮೂಲದಲ್ಲಿ ಸಾಧಕ ತಪಸ್ವಿಕವಿ. ಅನಂತರ ಋಷಿ, ಅರವಿಂದರು ಮೂಲದಲ್ಲಿ ಋಷಿ, ಅನಂತರ ಕವಿ ಎಂದು ವಿನಾಯಕರು ಬರೆದಿದ್ದಾರೆ.

ಕವಿ, ಕಾವ್ಯ ಮತ್ತು ವಿಮರ್ಶೆ ಕುರಿತು 32 ಸೂತ್ರಗಳನ್ನು ನಿರ್ಮಿಸುವಾಗ, ಬೇಂದ್ರೆಯವರ ಚಿಂತನಮನೋಭೂಮಿಕೆಯ ನೆಲೆಗಳೂ ಹಾಗೂ ಪ್ರಶ್ನೆಗಳೂ ಮೂವತ್ತೆರಡೇ ಇದ್ದುದರ ಔಚಿತ್ಯದ ಬಗ್ಗೆ ಬರೆಯುತ್ತಾರೆ. ಕೊನೆಗೆ ಕಾವ್ಯ ಎಂಬ ಲೋಹ ಚುಂಬಕಕ್ಕೆ ಕವಿ ಮತ್ತು ಸಹೃದಯ ವಿಮರ್ಶಕ ಎಂಬ ಎರಡೇ ಧ್ರುವಗಳು. ಈ ದ್ವೈತವನ್ನು ಮೀರಿದ ಸಮರಸತೆಯ ಅದ್ವೈತ ಆನಂದ ಹಾಗೂ ಜೀವನ ಇವುಗಳ ಮಹತಿ ಎಂತಹದು ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ದೊರೆತ ಸೂತ್ರಗಳು 32 ಎನ್ನುತ್ತಾರೆ. ನಂತರ ನಾರಾಯಣಾಚಾರ್ಯರು ಬರೆದ ಎರಡು ಅಧ್ಯಾಯಗಳ 32 ಸೂತ್ರಗಳ ಸಾರವನ್ನು ಸಂಗ್ರಹಿಸುತ್ತಾರೆ.

ಕೆ.ಎಸ್. ನಾರಾಯಣಾಚಾರ್ಯರು ಬೇಂದ್ರೆಯವರು ಅವರಿಗೆ ಕೊಟ್ಟ ಸಪ್ನಾದೇಶವನ್ನು ಆಧರಿಸಿ ಈ ವಿಮರ್ಶಾಗ್ರಂಥವನ್ನು ಬರೆದಿದ್ದಾರೆ ಎಂಬ ಮಹತ್ವದ ಮಾತನ್ನು ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+