ಅತ್ತ ವೋಲ್ವೊ ಸೇವೆ, ಇತ್ತ ಚಕ್ರ ಸ್ಫೋಟ!

ನಗರದ ಹೆದ್ದಾರಿಯುದ್ದಕ್ಕೂ ಸಾರಿಗೆ ಸಚಿವರ ಫೋಟೊ ಸಮೇತ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್ಗಳು ರಾರಾಜಿಸುತ್ತಿದ್ದವು. ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ ಸಾಲಾಗಿ ನಿಂತು ಸಚಿವರನ್ನು ಸ್ವಾಗತಿಸಲು ಕಾಯುತ್ತಿದ್ದರು. ಒಂದಷ್ಟು ಕಾರುಗಳ ಮೆರವಣಿಗೆ ಜೊತೆಗೆ ಮಹಾರಾಜರ ಗತ್ತಿನಲ್ಲಿ ಸಾರಿಗೆ ಸಚಿವರು ಆಗಮಿಸಿದರು.
ಅಪರಾಹ್ನ ನಾನು ಸರ್ಕಾರಿ ಬಸ್ ಹತ್ತಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ. ಜೀರ್ಣವಾಗಿಹೋಗಿದ್ದ ಲಟಾರಿ ಬಸ್ ಆದರೂ ಅದು ವೇಗವಾಗಿ ಓಡುತ್ತಿತ್ತು. ಮಾರ್ಗಮಧ್ಯೆ ಬಸ್ಸಿನ ಚಕ್ರ ಸ್ಫೋಟಗೊಂಡು ಚಕ್ರದೊಡನಿದ್ದ ರಿಂಗ್, ಪ್ಲೇಟ್ ಸಮೇತ ಎಲ್ಲ ಉಪಕರಣಗಳೂ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದವು.
ಬಸ್ಸು ಅಡ್ಡಾದಿಡ್ಡಿ ಓಡತೊಡಗಿತು. ವೇಗದಲ್ಲಿದ್ದಬಸ್ಸನ್ನು ಚಾಲಕನು ತಕ್ಷಣ ನಿಯಂತ್ರಣಕ್ಕೆ ತಂದಿರದಿದ್ದರೆ ಹಿಂದೆ ಬರುತ್ತಿದ್ದ ಖಾಸಗಿ ಬಸ್ ನಮ್ಮ ಬಸ್ಗೆ ಡಿಕ್ಕಿ ಹೊಡೆದು ಭಾರಿ ಅನಾಹುತ ಸಂಭವಿಸುತ್ತಿತ್ತು.
ಮಂತ್ರಿಗಳ ಕಾರಿನ ಚಕ್ರ ಸ್ಫೋಟಗೊಳ್ಳುವುದಿಲ್ಲ. ಏಕೆಂದರೆ ಅದು ಹಳೆಯ ಲಟಾರಿ ಕಾರ್ ಆಗಿರುವುದಿಲ್ಲ. ಮೇಲಾಗಿ ಒಳ್ಳೆಯ ಕಂಡೀಷನ್ನಲ್ಲಿರುತ್ತದೆ. ನಮ್ಮ ಬಸ್ಸು ಹೀಗೆ ಅವಘಡಕ್ಕೆ ತುತ್ತಾದಾಗ ಅತ್ತ ಮಂಡ್ಯದಲ್ಲಿ ಸಾರಿಗೆ ಮಂತ್ರಿಗಳು ಸಾರಿಗೆ ಸೇವೆಯ ಬಗ್ಗೆ ಸಮಾರಂಭದಲ್ಲಿ ಭಾಷಣ ಬಿಗಿಯುತ್ತಿದ್ದಿರಬಹುದು.
ಮಾನ್ಯ ಮಂತ್ರಿಗಳು ನಮಗೆ ವೋಲ್ವೊ ಸೇವೆ ನೀಡದಿದ್ದರೆ ಚಿಂತೆಯಿಲ್ಲ, ಇರುವ ಬಸ್ಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲಿ. ಜನರ ಜೀವಗಳೊಡನೆ ಚಕ್ಕಂದ ಆಡದಿರಲಿ. ಬಸ್ಗಳ ದೋಷಗಳಿಂದ ಸಾಕಷ್ಟು ಅಪಘಾತವಾಗುತ್ತಿವೆಯೆಂಬ ವಾಸ್ತವವನ್ನು ಸುಭದ್ರ ಐಷಾರಾಮಿ ಕಾರುಗಳಲ್ಲಿ ಸಂಚರಿಸುವ ಸಚಿವರು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಲಿ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications