ಕಚ್ಚಾತೈಲ ಬೆಲೆ 12,000 ರೂಪಾಯಿ ದಾಟುವ ಸಾಧ್ಯತೆ, ಶುರುವಾಯ್ತು ಹೊಸ ಆತಂಕ | Operation Roaring Lion
ಇರಾನ್ ವಿರುದ್ಧ ಶುರುವಾಗಿರುವ ಭೀಕರ ಯುದ್ಧದ ಪರಿಣಾಮ ಈಗಾಗಲೇ ಪೆಟ್ರೋಲ್ & ಡೀಸೆಲ್ ಬೆಲೆ ಪ್ರಪಂಚದ ಬಹುತೇಕ ದೇಶಗಳಲ್ಲಿ ಮುಗಿಲು ಮುಟ್ಟಿದೆ. ಹೀಗೆ ಆಕಾಶ ತಲುಪಿರುವ ಇಂಧನದ ಬೆಲೆ ಬಡವರ ಹೊಟ್ಟೆ ಉರಿಯುವಂತೆ ಮಾಡಿದ್ದು, ಜೀವನ ನಡೆಸುವುದೇ ಕಷ್ಟಕರ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲಿ ಎಲ್ಲಾ ವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತಾ ಇರುವುದು & ಇದರ ಪರಿಣಾಮ ಸಾಮಾನ್ಯ ಜನರು ಜೀವನ ನಡೆಸುವುದಕ್ಕೂ ಪರದಾಡುತ್ತಿರುವುದು ಹೆಚ್ಚಾಗುತ್ತಿದೆ. ಈ ಸಮಯದಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.
ಇರಾನ್ ತಮ್ಮ ಮಾತು ಕೇಳುತ್ತಿಲ್ಲ, ಪರಮಾಣು ಬಾಂಬ್ ವಿಚಾರದಲ್ಲಿ ಇರಾನ್ ತಪ್ಪು ಹೆಜ್ಜೆಯನ್ನ ಇಡುತ್ತಿದೆ ಎಂದು ಅಮೆರಿಕ ಹಾಗೂ ಇಸ್ರೇಲ್ ಒಟ್ಟಾಗಿ ಯುದ್ಧ ಆರಂಭ ಮಾಡಿದ್ದವು. ಹೀಗೆ ಇರಾನ್ ಮೇಲೆ ಇಬ್ಬರೂ ಸೇರಿ ಯುದ್ಧ ಶುರು ಮಾಡಿ ಈಗಾಗಲೇ 13 ದಿನ ಕಳೆದು ಹೋಗಿದ್ದು, 2 ವಾರದಲ್ಲೇ ಈ ಯುದ್ಧವು ಜಗತ್ತಿನ ಆರ್ಥಿಕತೆ ಪಾತಾಳ ಸೇರುವಂತೆ ಮಾಡಿದೆ. ಇಂತಹ ಸಮಯದಲ್ಲೇ ಮತ್ತೊಂದು ಆಘಾತಕಾರಿ ಚರ್ಚೆ ಶುರುವಾಗಿದೆ. ಹಾಗಾದರೆ ತೈಲ ಬೆಲೆ ಎಷ್ಟು ಹೆಚ್ಚಾಗಲಿದೆ? ಬಡವರ ಬದುಕು ಮುಂದೆ ಏನು? ಪ್ರಪಂಚದ ಯಾವ ಯಾವ ದೇಶಗಳು ಇದರ ಪರಿಣಾಮ ಎದುರಿಸಬಹುದು? ಮುಂದೆ ಓದಿ.

ಕಚ್ಚಾ ತೈಲ ಬೆಲೆ 12,000 ರೂಪಾಯಿ?
ಅದು ಏನೆಂದರೆ ಈಗ 100 ಡಾಲರ್ ಮೀರಿ ಹೋಗಿರುವ ಕಚ್ಚಾ ತೈಲ ಬೆಲೆ, ಇನ್ನೇನು ಪ್ರತಿ ಬ್ಯಾರಲ್ಗೆ ಬರೋಬ್ಬರಿ 130 ಡಾಲರ್ ತಲುಪಬಹುದು ಎಂಬ ಶಾಕಿಂಗ್ ಚರ್ಚೆ ಜೋರಾಗಿದೆ. ಅಕಸ್ಮಾತ್ ಹೀಗೆ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್ಗೆ 130 ಡಾಲರ್ ತಲುಪಿದರೆ, ಆಗ ಭಾರತದ ರೂಪಾಯಿ ಬೆಲೆಯಲ್ಲಿ ಬರೋಬ್ಬರಿ 12,000 ರೂಪಾಯಿ ಕೊಡಬೇಕಾಗಿ ಬರಲಿದೆ. ಇರಾನ್ ಸೇನೆ ತನ್ನ ಬಳಿ ಇರುವ ಸಾವಿರಾರು ಕ್ಷಿಪಣಿಗಳ ಮೂಲಕ ದೊಡ್ಡ, ದೊಡ್ಡ ದಾಳಿ ನಡೆಸುತ್ತಾ ಅರಬ್ ದೇಶಗಳ ತೈಲ ಘಟಕಗಳನ್ನು ನಾಶ ಮಾಡುತ್ತಿದೆ.
ಇನ್ನೊಂದು ಕಡೆ ಹೊರ್ಮುಜ್ ಜಲಸಂಧಿ ಕೂಡ ಬಂದ್ ಆಗಿರುವ ಕಾರಣ ಭಾರಿ ಪ್ರಮಾಣದಲ್ಲಿ ಕಚ್ಚಾ ತೈಲ ಅಲ್ಲೇ ನಿಂತು ಹೋಗಿದೆ. ಈ ಎಲ್ಲಾ ಬೆಳವಣಿಗೆಗಳು ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆಯ ಭೀತಿ ಹುಟ್ಟುಹಾಕಿದೆ. ಇನ್ನು ಪ್ರಮುಖವಾಗಿ ತೈಲ ಆಮದು ಮಾಡಿಕೊಳ್ಳುವ ದೇಶಗಳು ಈ ಬೆಳವಣಿಗೆ ನಂತರ ಒದ್ದಾಡುವ ಸನ್ನಿವೇಶ ನಿರ್ಮಾಣ ಆಗಬಹುದು. ಅದರಲ್ಲೂ ಕೆಲವೇ ದಿನಗಳಲ್ಲಿ ಆಫ್ರಿಕಾದ ದೇಶಗಳು ಹಾಗೂ ಏಷ್ಯಾದ ಬಡ ದೇಶಗಳಲ್ಲಿ ತೈಲ ಬೆಲೆ ಮುಗಿಲು ಮುಟ್ಟಿದರೂ ಅಚ್ಚರಿ ಪಡಬೇಕಿಲ್ಲ. ಇದೇ ಕಾರಣಕ್ಕೆ ಚಿಂತಾಕ್ರಾಂತ ಸ್ಥಿತಿ ನಿರ್ಮಾಣ ಆಗಿದ್ದು, ಪಾಪಿ ಪಾಕಿಸ್ತಾನದ ರಾಜಕೀಯ ನಾಯಕರು ಅಲ್ಲಿ ಈಗಾಗಲೇ ತೈಲ ಬೆಲೆಯನ್ನು ಮುಗಿಲು ಮುಟ್ಟಿಸಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications