208345sriramuluಬೇಡ ಬಿಟಿ ಬದನೆ, ಶ್ರೀರಾಮುಲು ಅವರಿಗೆ ನಿವೇದನೆ/column/manikanth/2009/0128-bt-brinjal-how-safe-is-gm-crop.htmlಜೈವಿಕ ತಂತ್ರಜ್ಞಾನ ಬಳಸಿ ಬೆಳೆಯಲಾಗುವ ಆಹಾರದ ವಿರುದ್ಧ ಇಡೀ ದೇಶದಲ್ಲೇ ಹುಯಿಲೆದ್ದಿದೆ. ಕುಲಾಂತರಿ ಆಹಾರ ತಯಾರಿಗೆ, ಸಂಶೋಧನೆಗೆ ನಾನು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವರು ಕೂಡ ಘೋಷಿಸಿದ್ದಾರೆ. ರಾಜ್ಯದ ಆರೋಗ್ಯ ಸಚಿವರಾದ ಶ್ರೀರಾಮುಲು ಮಾತ್ರ ಬಾಯಿಗೆ ಬಿರಡೆ ಹಾಕಿ ಕುಳಿತಿದ್ದಾರೆ. ಸಾವಯವ ಕೃಷಿಗೆ ಉತ್ತೇಜನ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದರೂ ಜೈವಿಕ ತಂತ್ರಜ್ಞಾನದ ಬಳಕೆ 34337http://kannada.oneindia.com/img/2009/01/28-bt-brinjal1.jpg208345sriramuluಬಳ್ಳಾರಿ ಗಣಿ ಮಾಫಿಯಾ ವಿರುದ್ಧ ಗೌಡರ ದೂರು/news/2009/03/07/deve-gowda-complaints-against-bellary-mining-mafia.htmlಬೆಂಗಳೂರು, ಮಾ.7: ರಾಜ್ಯದ ಗಡಿಯನ್ನು ಬಳ್ಳಾರಿ ಗಣಿ ಮಾಫಿಯಾ ಒತ್ತುವರಿ ಮಾಡಿಕೊಂಡಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ರಾಜ್ಯಪಾಲರ ಮುಖೇನ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದಾರೆ. ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಅವರಿಂದ ಗಡಿ ಕಬಳಿಕೆ ನಡೆದಿದ್ದು, ರಾಜ್ಯದ ಏಕತೆ, ಸಮಗ್ರತೆಗೆ ಧಕ್ಕೆ ಉಂಟಾಗಿದೆ. ಇದನ್ನು ಸರಿಪಡಿಸಿ ಕೂಡಲೇ ಸೂಕ್ತ ಕ್ರಮ 35068http://kannada.oneindia.com/img/2009/03/07-devegowda3.jpg208345sriramuluತೆಲುಗು ಚಿತ್ರ ಅರ್ಪಿಸಿದ ಸಚಿವ ಜನಾರ್ದನರೆಡ್ಡಿ/news/2009/03/16/janardhan-reddy-presents-upendra-telugu-film.htmlಬೆಂಗಳೂರು, ಮಾ. 16 : ಬಳ್ಳಾರಿ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯ ವೈ ಎಸ್ ರಾಜಶೇಖರರೆಡ್ಡಿ ಹಾಗೂ ಪ್ರವಾಸೋಧ್ಯಮ ಸಚಿವ, ಗಣಿಧಣಿ ಜನಾರ್ದನರೆಡ್ಡಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಮಾಜಿ ಪ್ರಧಾನ ದೇವೇಗೌಡ ಮಾಡುತ್ತಿರುವ ಆರೋಪದಲ್ಲಿ ಸತ್ಯವಿದೆಯೋ ಏನೂ ಗೊತ್ತಿಲ್ಲ. ಆದರೆ, ಮಾನ್ಯ ಸಚಿವರು ತೆಲುಗು ಚಿತ್ರವೊಂದನ್ನು ಅರ್ಪಿಸುತ್ತಿರುವುದು ಸುದ್ದಿ ಮಾತ್ರ ನೂರಕ್ಕೆ ನೂರರಷ್ಟು ಸತ್ಯ. 35244http://kannada.oneindia.com/img/2009/03/16-upendra-buddimanthudu26.jpg208345sriramuluಬಿಜೆಪಿ ಭಿನ್ನಮತ : ರೆಡ್ಡಿ ನೇತೃತ್ವದಲ್ಲಿ ಸಭೆ /news/2009/06/05/bjp-jolt-continue-reddy-meeting-with-his-followers.htmlಬೆಂಗಳೂರು, ಜೂ. 5 : ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಬಳ್ಳಾರಿಯ ರೆಡ್ಡಿ ಸಹೋದರರು ಇಂದು ಸಚಿವ ಜನಾರ್ದನರೆಡ್ಡಿ ನೇತೃತ್ವದಲ್ಲಿ ಅವರ ಬೆಂಬಲಿಗರ ಸಭೆ ಬೆಂಗಳೂರಿನ ಚಾಲುಕ್ಯ ಹೋಟೆಲ್ ಹಿಂಭಾಗದ ಅಪಾರ್ಟ್ ಮೆಂಟ್ ವೊಂದರಲ್ಲಿ ಶುರುವಾಗಿದ್ದು, ಸಚಿವರು, ಶಾಸಕರು ಮತ್ತು ಬಿಜೆಪಿ ಮುಖಂಡರು ಭಾಗವಹಿಸಿದ್ದಾರೆ. ಆದರೆ, ಅತ್ತ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯು ಆರಂಭವಾಗಿದೆ. 37135http://kannada.oneindia.com/img/2009/06/05-janardhana-reddy2.jpg208345sriramuluಆರೋಗ್ಯ ಇಲಾಖೆ ಸತ್ತಿದೆ :ಎಂಸಿ ನಾಣಯ್ಯ/news/2009/07/13/siddu-slams-govt-on-insufficient-fertilizer-supply.htmlಬೆಂಗಳೂರು, ಜು. 13 : ಮೈಸೂರಿನ ಕ್ಯಾತಮಾರನಹಳ್ಳಿ ಗಲಭೆಯ ತಿಕ್ಕಾಟ ಮುಗಿದ್ದು, ಆರೋಗ್ಯ ಇಲಾಖೆಗಳ ಅವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಇಂದು ವಿಧಾನ ಪರಿಷತ್ ನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಯಿತು. ಜೆಡಿಎಸ್ ಸದಸ್ಯರಿಂದ ಬಾವಿಗಿಳಿದು ಪ್ರತಿಭಟನೆ. ಸಚಿವರಾದ ಜನಾರ್ದನರೆಡ್ಡಿ, ಶ್ರೀರಾಮುಲು ಮತ್ತು ಜೆಡಿಎಸ್ ನ ಎಂಸಿ ನಾಣಯ್ಯ ಅವರ ನಡುವೆ ವಾಕ್ಸಮರ. ಸರಕಾರದ ವಿರುದ್ದ 37957http://kannada.oneindia.com/img/2009/07/13-mc-nanaiah1.jpg518545h1n1ಬೆಂಗಳೂರಿನಲ್ಲಿ ನಾಲ್ವರಿಗೆ ಎಚ್1ಎನ್1 ಶಂಕೆ/news/2009/06/13/h1n1-four-new-cases-in-bengaluru.htmlಬೆಂಗಳೂರು, ಜೂ.13: ಬೆಂಗಳೂರಿನಲ್ಲಿ ನಾಲ್ಕು ಮಂದಿಗೆ ಎಚ್1ಎನ್1ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಚ್1ಎನ್1 ಶಂಕಿತ ರೋಗಿಗಳು ಪತ್ತೆಯಾಗಿದ್ದು ಅವರ ರಕ್ತದ ಮಾದರಿಗಳನ್ನು ಪುಣೆಯ ನ್ಯಾಶನಲ್ ಇನಿಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಸಾಫ್ಟ್ ವೇರ್ ದಂಪತಿ ಸೇರಿದಂತೆ ತಾಯಿ, ಮಗಳಿಗೆ ಎಚ್1ಎನ್1 ಸೋಂಕು ಇರುವ ಬಗ್ಗೆ ಶಂಕೆ 37317http://kannada.oneindia.com/img/2009/06/13-bial1.jpg518545h1n1ಹಂದಿಜ್ವರ ತುರ್ತುನಿಗಾ ಘಟಕ, ಆಸ್ಪತ್ರೆ ವಿಳಾಸ/mixed-bag/health/2009/0805-swine-influenza-critical-care-hospital-info.htmlಬೆಂಗಳೂರು, ಆ.5 : ಪ್ರಸಕ್ತ ಋತುವಿನ ಮಹಾಮಾರಿ ಹಂದಿಜ್ವರವು ಪ್ರಪಂಚ ಹಾಗೂ ಭಾರತದ ನಾನಾ ಪ್ರಾಂತ್ಯಗಳನ್ನು ವೇಗವಾಗಿ ಹಬ್ಬುತ್ತಿದೆ. ಈ ಜ್ವರದ ಕೆಂಗಣ್ಣಿಗೆ ಈಡಾದವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು ಜ್ವರ ಹತ್ತಿರ ಸುಳಿಯದಂತೆ ನಾಗರಿಕರು ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮಹಾರಾಷ್ಟ್ರದ ಪುಣೆ ನಗರ ಸ್ವೈನ್ ಫಿವರ್ ಹೆಡ್ ಕ್ವಾರ್ಟರ್ಸ್ ನಂತಾಗಿದೆ. ಮೊನ್ನೆ ಅಲ್ಲಿ ಓರ್ವ ಬಾಲಕಿ 38440http://kannada.oneindia.com/img/2009/08/05-pig1.jpg518545h1n1ಶ್ರೀರಾಮುಲು ಮೇಲೆ ಸದಾನಂದಗೌಡ ಕಿಡಿ/news/2009/08/10/medical0-kits-for-govt-hospitals-to-tackle-h1n1.htmlಬೆಂಗಳೂರು, ಆ.10: ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಶ ಸದಾನಂದಗೌಡ ತೀವ್ರವಾಗಿ ಕಿಡಿಕಾರಿದ್ದಾರೆ.ಹಂದಿಜ್ವರದ ಆತಂಕದ ಸಮಯದಲ್ಲಿ ಸಚಿವರ ನಿರ್ಲಕ್ಷ್ಯಕಾರ್ಯವೈಖರಿಯನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ಈ ಮಾರಣಾಂತಿಕ ರೋಗ ಎಚ್1ಎನ್1 ವ್ಯಾಪಿಸಿದ್ದರೂ ಶ್ರೀರಾಮುಲು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಅವರ ಕಾರ್ಯವೈಖರಿ ನಮಗೆ ತೃಪ್ತಿ ತಂದಿಲ್ಲ ಎಂದು ಗುಡುಗಿದ್ದಾರೆ.ಸಚಿವರು ಈ ಮಾರಣಾಂತಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ 38523http://kannada.oneindia.com/img/2009/08/10-sadananda-gowda1.jpg518545h1n1ಬೆಂಗಳೂರಲ್ಲಿ ನಾಲ್ವರಿಗೆ ಎಚ್1ಎನ್ 1 ಸೋಂಕು/mixed-bag/health/2009/0810-swine-flu-h1n1-influenza-hits-bengaluru-udupi.htmlಬೆಂಗಳೂರು, ಆ. 10: ನಗರದಲ್ಲಿ ಶಾಲಾ ಬಾಲಕ ಸೇರಿದಂತೆ, ನಾಲ್ವರಿಗೆ ಎಚ್ 1ಎನ್ 1 ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯಾಧಿಕಾರಿಗಳು ಸಮೀಕ್ಷೆ ನಡೆಸಿ, ಮುಂಜಾಗರೂಕತಾ ಕ್ರಮ ಕೈಗೊಳ್ಳಲು ತಯಾರಿ ನಡೆಸಿದ್ದಾರೆ.ಉಡುಪಿ, ಮಂಗಳೂರಿನಲ್ಲೂ ಹಂದಿಜ್ವರದ ಭೂತ ಆವರಿಸಿದೆ. ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಲ್ಲಿರುವ ಫ್ರಾಂಕ್ ಅಂಥೋನಿ ಶಾಲೆಯ ಬಾಲಕನೊಬ್ಬನಿಗೆ ಸೋಂಕು ತಗುಲಿರುವುದು 38531http://kannada.oneindia.com/img/2009/08/10-swine-flu-bengaluru1.jpg518545h1n1ಹಂದಿಜ್ವರದಿಂದ ದೂರವಿರಲು ಹತ್ತು ಸೂತ್ರಗಳು/mixed-bag/health/2009/0810-swine-flu-dos-and-donts.htmlPrecautions to keep swine flu at bayThe deadly Swine Flu has reached the Indian shores following the global outbreak and now, claimed six lives. However, Swine Flu is certainly one of those diseased where an ounce of prevention is worth a 38536http://kannada.oneindia.com/img/2009/08/10-swine-flu-mask1.jpg501424virusಡೆಂಗ್ಯೂ ಮತ್ತು ಚಿಕುನ್ ಗುನ್ಯಾ ಬಗ್ಗೆ ಎಚ್ಚರವಹಿಸಿ/mixed-bag/health/2009/0527-dengue-fever-chikungunya-awareness.htmlಮಳೆಗಾಲ ಪ್ರಾರಂಭವಾಯಿತೆಂದರೆ ನೀರು ಹರಿಯುವ ವ್ಯವಸ್ಥೆಯಿಲ್ಲದಿದ್ದರೆ ಆ ಪ್ರದೇಶ ಅನೇಕ ರೋಗಗಳ ತವರುಮನೆಯಾಗುತ್ತದೆ. ಅದರಲ್ಲೂ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ ಜ್ವರ ಮತ್ತು ಚಿಕುನ್ ಗುನ್ಯಾ ರೋಗಗಳು ರೋಗಿಯನ್ನು ತಿಂಗಳುಗಟ್ಟಲೆ ಮೇಲೇಳದಂತೆ ಮಾಡುತ್ತವೆ. ರೋಗ ಬಂದ ಮೇಲೆ ಜಾಗೃತರಾಗುವುದಕ್ಕಿಂತ ಮೊದಲೇ ಅರಿವಿದ್ದರೆ ಈ ರೋಗಗಳನ್ನು ನಿಯಂತ್ರಿಸಲು ಸಾಧ್ಯ.ಮಲೇರಿಯ, ಮೆದುಳು ಜ್ವರ, ಆನೆಕಾಲು ರೋಗ ಇತ್ಯಾದಿ ರೋಗಗಳ ಹಾಗೆ ಡೆಂಗ್ಯೂ 36929http://kannada.oneindia.com/img/2009/05/27-mosquito1.jpg501424virusಸಾಮಾಜಿಕ ಪಿಡುಗಾಗಿ ಪರಿಣಮಿಸುತ್ತಿರುವ ಸೈಬರ್ ಕ್ರೈಂ/cj/prashanth-mirle/2009/0615-cyber-crime-online-fraud.htmlಮನುಷ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರಿದಂತೆ ಜನಸಾಮಾನ್ಯರಿಗೆ ಅರ್ಥವಾಗದ, ಕಾನೂನಿನ ಚೌಕಟ್ಟಿಗೂ ಬಾರದಿರುವ ಅನೇಕ ಅಪರಾಧಗಳು ಹೆಚ್ಚುತ್ತಿವೆ. ಅಂಥವುಗಳಲ್ಲಿ ಸೈಬರ್ ಅಪರಾಧವೂ ಒಂದು. ಸೈಬರ್ ಅಪರಾಧವನ್ನು ಕಟ್ಟಿಹಾಕಲು ಭಾರತ ಮಾಹಿತಿ ತಂತ್ರಜ್ಞಾನ ಅಧಿನಿಯಮ 2000 ಜಾರಿತಂದಿದೆ. ಈ ಕಾನೂನಿನಿಂದ ಸೈಬರ್ ಕ್ರೈಮನ್ನು ನಿಗ್ರಹಿಸುವಲ್ಲಿ ಎಷ್ಟು ಸಫಲತೆ ದಕ್ಕಿದೆ? ಜನಸಾಮಾನ್ಯರಿಗೆ ಈ ಅಪರಾಧದ ಬಗ್ಗೆ ತಿಳಿವಳಿಕೆಯಾದರೂ ಎಷ್ಟಿದೆ? 37354http://kannada.oneindia.com/img/2009/06/15-prashanth-mirle1.jpg501424virusಸೈಬರ್ ಕ್ರೈಂ : ದೂರು ನೀಡುವುದು ಎಲ್ಲಿ ಹೇಗೆ?/cj/prashanth-mirle/2009/0622-cyber-crime-complaint-and-punishment.htmlಹಿಂದಿನ ಲೇಖನದಲ್ಲಿ ಸೈಬರ್ ಅಪರಾಧ ಎಂದರೇನು? ಅಪರಾಧ ಯಾವುದಕ್ಕೆ ಸಂಬಂಧಿಸಿರುತ್ತದೆ ಎಂದು ವಕೀಲರಾದ ಪ್ರಶಾಂತ್ ಮಿರ್ಲೆ ಅವರು ಕೂಲಂಕಷವಾಗಿ ವಿವರ ನೀಡಿದ್ದಾರೆ. ಮುಂದುವರಿದ ಭಾಗದಲ್ಲಿ ಯಾವ ಅಪರಾಧ ಸೈಬರ್ ಕ್ರೈಂ ಆಗುತ್ತದೆ, ಶಿಕ್ಷೆಯ ಪ್ರಮಾಣವೇನು, ದೂರು ನೀಡುವುದು ಎಲ್ಲಿ, ಹೇಗೆ ಎಂಬ ಬಗ್ಗೆ ವಿವರ ನೀಡಿದ್ದಾರೆ.ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಅಧಿನಿಯಮ, 2008ರ ಕಲಮು 65ರ ಮೇರೆಗೆ ಯಾವುದೇ 37501http://kannada.oneindia.com/img/2009/06/22-cybercrime1.jpg501424virusಸೈಬರ್ ಅಪರಾಧ : ಇ-ಮೇಲ್ ಬಂದರೆ ಎಚ್ಚರವಿರಲಿ/cj/prashanth-mirle/2009/0629-cyber-crime-email-hacking-stalking.htmlಯಾವುದೇ ಇ-ಮೇಲ್ ನಿಮಗೆ ಗೊತ್ತಿರುವ ವ್ಯಕ್ತಿಯಿಂದ ಸ್ವೀಕರಿಸಿದ್ದು ಆದರೆ ಆತನ ಇ-ಮೇಲ್ ವಿಳಾಸ ಅನುಮಾನಾಸ್ಪದವಾಗಿದ್ದರೆ ಅಂತಹ ಇ-ಮೇಲ್ ಗಳ ಬಗ್ಗೆ ಜಾಗರೂಕತೆಯಿಂದ ನಿರ್ವಹಿಸಿ ಮತ್ತು ಸೈಬರ್ ತಾಣಗಳಲ್ಲಿ ನಿಮ್ಮ ಇ-ಮೇಲ್ ಬಳಕೆ ಬಹಳ ಎಚ್ಚರಿಕೆಯಿಂದಿರಲಿ, ಸ್ವಲ್ಪ ಮೈಮರೆತರು ಭಾರಿ ಬೆಲೆ ತೆತ್ತಬೇಕಾಗುತ್ತದೆ.* ಪ್ರಶಾಂತ್ ಮಿರ್ಲೆ, ಬೆಂಗಳೂರು"ದಯವಿಟ್ಟು ಕ್ಷಮಿಸಿ, ನಾನು ವಿಚಾರ ಸಂಕೀರ್ಣಕ್ಕೆಂದು ಭಾಗವಹಿಸಲು ಇಂಗ್ಲೆಂಡ್‌ಗೆ ಪ್ರಯಾಣ ಬೆಳಸಿದ್ದನ್ನು 37655http://kannada.oneindia.com/img/2009/06/29-cyber-crime2.jpg501424virusಬೆಂಬಿಡದ ಹಂದಿಜ್ವರದ ಭೀತಿ ಮತ್ತು ಆರೋಗ್ಯ ಸಚಿವ/column/ravibelagere/2009/0817-h1n1-virus-swine-flu-and-sriramulu.htmlಆರೋಗ್ಯ ಸಚಿವ ಶ್ರೀರಾಮುಲು ಮಖ್ಯಮಂತ್ರಿಗಳ ಜೊತೆ ಕುಳಿತು ಅಧಿಕಾರಿಗಳ ಸಭೆ ನಡೆಸಿದ. ಗಾಬರಿ ಬಿದ್ದ ಜನರೊಂದಿಗೆ ಮಾತನಾಡಿದ. ಇದೆಲ್ಲ ಒಬ್ಬ ಸಚಿವ ಮಾಡಬೇಕಾದ ಕೆಲಸಗಳೇ. ಶ್ರೀರಾಮುಲು ಭಯಂಕರವಾದದ್ದೇನನ್ನೋ ಕಡೆದು ಕಟ್ಟಿಹಾಕಿದ ಅಂತಾಗಲೀ, ಆತನನ್ನು ಬೆಂಬಲಿಸಬೇಕು ಅಂತಾಗಲೀ ನಾನು ಇಷ್ಟುದ್ದ ಬರೆಯುತ್ತಿಲ್ಲ. ಹಂದಿಜ್ವರದಂಥ ಸಾಂಕ್ರಾಮಿಕ ರೋಗಗಳ ಜನಸಾಮಾನ್ಯರಲ್ಲಿ ಎಂಥ ಪ್ಯಾನಿಕ್ ಸೃಷ್ಟಿಸಿಬಿಡುತ್ತವೆ ಎಂಬ ಮಾತಿಗೆ ಹೇಳಿದೆ.* ರವಿ ಬೆಳಗೆರೆಹುಡುಗರು 38670http://kannada.oneindia.com/img/2009/08/17-sriramulu3.jpgnews"> ಅಕ್ಷರಶಃ ತಿಪ್ಪೆಗುಂಡಿಯಾಗಿರುವ ಬೆಂಗಳೂರು! | Sriramulu | Karnataka health care | BBMP | Garbage disposal | Anandarama sastry - ಅಕ್ಷರಶಃ ತಿಪ್ಪೆಗುಂಡಿಯಾಗಿರುವ ಬೆಂಗಳೂರು! - Kannada Oneindia

ಅಕ್ಷರಶಃ ತಿಪ್ಪೆಗುಂಡಿಯಾಗಿರುವ ಬೆಂಗಳೂರು!

H Anandarama Shastry, Bengaluru
ಈಚೆಗೆ ನನ್ನ ತಾಯಿಯವರನ್ನು ಚಿಕಿತ್ಸೆಗೆಂದು ಬೆಂಗಳೂರಿನ ಎರಡು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಟ್ಟು ಒಂದು ತಿಂಗಳ ಕಾಲ ಒಳರೋಗಿಯಾಗಿ ಸೇರಿಸಿದ್ದ ಸಂದರ್ಭದಲ್ಲಿ ನಾನು ಇಡೀ ತಿಂಗಳು ಹಗಲಿರುಳು ಆ ಎರಡು ಆಸ್ಪತ್ರೆಗಳಲ್ಲಿ ಕಳೆದೆ. ಆಗ ನಾನು ಗಮನಿಸಿದ ಸಂಗತಿಯೆಂದರೆ, ಡೆಂಗ್ಯೂ ಜ್ವರದಿಂದಾಗಿ ತೀವ್ರವಾಗಿ ಬಳಲುತ್ತಿದ್ದ ಒಳರೋಗಿಗಳು ಆ ಆಸ್ಪತ್ರೆಗಳಲ್ಲಿದ್ದರು. ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿತ್ತು. ಹತ್ತಿಪ್ಪತ್ತು ದಿನಗಳ ಕಾಲ ರೋಗಿಗೆ ಚಿಕಿತ್ಸೆ ಕೊಡಿಸಿ, ಲಕ್ಷದ ಲೆಕ್ಕದಲ್ಲಿ ಹಣ ಖರ್ಚುಮಾಡಿ, ಒಳಗೆ ತೀವ್ರ ನಿಗಾ ಘಟಕದಲ್ಲಿ ರೋಗಿಯಿದ್ದರೆ ಹೊರಗೆ ರೋಗಿಯ ಬಂಧುಗಳು ಪ್ರತಿ ಕ್ಷಣವನ್ನೂ ಕಳವಳದಿಂದ ಕಳೆಯುತ್ತಿದ್ದುದನ್ನು ನಾನು ಕಣ್ಣಾರೆ ಕಂಡೆ.

ಸಾಮಾಜಿಕ ಕಾರ್ಯಗಳಿಗಾಗಿ ಊರೂರು-ಗಲ್ಲಿಗಲ್ಲಿ ಸುತ್ತುವ ನಾನು ಚಿಕುನ್ ಗುನ್ಯಾ ಪೀಡಿತ ಬಡ ಸಂಸಾರಸ್ಥರನ್ನು ಸಾಕಷ್ಟು ನೋಡಿದ್ದೇನೆ. ಕುಟುಂಬ ಸದಸ್ಯರ ಚಿಕುನ್ ಗುನ್ಯಾ ಮರಣದಿಂದಾಗಿ ಎಷ್ಟೋ ಬಡಸಂಸಾರಗಳು ದಿಕ್ಕೆಟ್ಟುಹೋಗಿರುವುದು ನನ್ನ ಗಮನಕ್ಕೆ ಬಂದಿದೆ. ಎಚ್1ಎನ್1 ("ಹಂದಿಜ್ವರ") ಕಾಯಿಲೆಯ ಘೋರಸ್ವರೂಪವಂತೂ ಇಡೀ ಜಗತ್ತಿಗೇ ವೇದ್ಯವಾಗಿದೆ. ಬೆಂಗಳೂರಿನಲ್ಲಿ ಅದು ಯುವಕ ಯುವತಿಯರನ್ನು ಬಲಿತೆಗೆದುಕೊಳ್ಳತೊಡಗಿದೆ.

ನಮ್ಮ ಆರೋಗ್ಯ ಮಂತ್ರಿಗಳು ತಾನು ಗಂಟೆಗೊಮ್ಮೆ ಎಲ್ಲ ಜಿಲ್ಲೆಗಳನ್ನೂ ಸಂಪರ್ಕಿಸುತ್ತಿದ್ದೇನೆಂದು ಹೇಳುತ್ತಾರೆ. ಇದೆಲ್ಲಾದರೂ ಸಾಧ್ಯವೆ? ಸಾಧ್ಯವಾದರೂ, ಒಂದೊಂದು ಜಿಲ್ಲೆಯ ಅಧಿಕಾರಿಗಳೊಡನೆ ಕೇವಲ ಒಂದೋ ಎರಡೋ ನಿಮಿಷ ಮಾತನಾಡಿ ನಮ್ಮ ಆರೋಗ್ಯ ಸಚಿವರು ಅದೇನು ಉಸ್ತುವಾರಿ ಮಾಡಿಯಾರು? ಇಷ್ಟು ದಿನಗಳೂ ಅಹರ್ನಿಶಿ ಅವರು ದೂರವಾಣಿಯಲ್ಲಿ ಮಾತಾಡುತ್ತಲೇ ಇದ್ದರೇ?! ಇಷ್ಟಾಗಿಯೂ "ಹಂದಿಜ್ವರ" ಶಂಕಿತರ ತಪಾಸಣಾ ವರದಿ ಹೊರಬೀಳುವಲ್ಲಿ ವಿಳಂಬ ಏಕೆ? ವರದಿ ವಿಳಂಬವಾದ (ದುರ್)ದೆಸೆಯಿಂದಲೇ ಬೆಂಗಳೂರಿನಲ್ಲಿ ಒಂದು ಸಾವು ಸಂಭವಿಸಲಿಲ್ಲವೆ?

ಬೆಂಗಳೂರು ಇಂದು ಅಕ್ಷರಶಃ ತಿಪ್ಪೆಗುಂಡಿಯಾಗಿದೆ. ಎಲ್ಲ ರಸ್ತೆಗಳಲ್ಲೂ ಎಲ್ಲ ಬಡಾವಣೆಗಳಲ್ಲೂ ಕೊಳೆತ ಕಸದ ರಾಶಿ ಎಲ್ಲೆಂದರಲ್ಲಿ ಕಣ್ಣಿಗೆ ರಾಚುತ್ತಿದೆ. ಮಧ್ಯಮ ದರ್ಜೆಯ ಬಹುಪಾಲು ಹೋಟೆಲ್‌ಗಳು ಜನರನ್ನು ಬೀದಿಯಲ್ಲಿ ನಿಲ್ಲಿಸಿ ತಿಂಡಿ ತಿನ್ನಿಸುತ್ತಿವೆ. ಕಳೆದ ವರ್ಷ ನಾಯಿಗಳ ಉಪಟಳದ ಬಗ್ಗೆ ಬೆಂಗಳೂರು ಮಹಾನಗರಪಾಲಿಕೆಯೊಡನೆ ಏರ್ಪಟ್ಟಿದ್ದ ಸಮಾಲೋಚನೆಯೊಂದರಲ್ಲಿ ಪಾಲಿಕೆಯು ನನಗೆ ಒಂದು ತಿಂಗಳೊಳಗೆ ಮರುಸಭೆ ಕರೆಯುವ ಆಶ್ವಾಸನೆ ನೀಡಿತ್ತು. ವರ್ಷ ಕಳೆದರೂ ಇನ್ನೂ ಸಭೆಯ ಸುಳಿವೇ ಇಲ್ಲ! ಕಸ ವಿಲೇವಾರಿಗೆ ಜಿಪಿಎಸ್ ತಂತ್ರಜ್ಞಾನ ಬಳಸುವ ಆಶ್ವಾಸನೆಯೂ ಅಂದಿನ ಸಮಾಲೋಚನೆಯಲ್ಲಿ ಬಂದರೂ ಇದುವರೆಗೂ ಅದೂ ಕಾರ್ಯಗತವಾಗಿಲ್ಲ. ಪಾಲಿಕೆಯ ಆರೋಗ್ಯಾಧಿಕಾರಿಣಿಯವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆಂಬುದೇ ಗೊತ್ತಾಗುತ್ತಿಲ್ಲ. ರಾಜ್ಯದ ಇತರೆಡೆಗಳ ಸ್ಥಿತಿಯೂ ಭಿನ್ನವೇನಲ್ಲ.

ಮಂತ್ರಿಗಳು ಬರಿದೆ ಮಾತಾಡಬಾರದು. ಕೆಲಸ ಮಾಡಿ ತೋರಿಸಬೇಕು. ಮಾತಿಗೆ ಮರುಳಾಗುವಷ್ಟು ದಡ್ಡರಲ್ಲ ಜನತೆ ಎಂಬುದನ್ನು ಸದಾಕಾಲ ಅವರು ನೆನಪಿಟ್ಟುಕೊಳ್ಳಬೇಕು. ಜನತೆ ಅಂತಿಮವಾಗಿ ಪರಿಗಣಿಸುವುದು ಸರ್ಕಾರದ ಕಾರ್ಯಚಟುವಟಿಕೆಗಳ ಫಲಿತಾಂಶವನ್ನೇ ಹೊರತು ಸರ್ಕಾರವು ನೀಡುವ ಸಮರ್ಥನೆಗಳನ್ನಲ್ಲ. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಬಗ್ಗೆ ನಾಲಕ್ಕು ಮಾತು ಹೇಳಬೇಕಾಗಿದೆ.

ವರ್ಷಗಳ ಕಾಲ ಬಳ್ಳಾರಿಯಲ್ಲಿದ್ದ ನಾನು ಶ್ರೀರಾಮುಲು ಅವರನ್ನೂ ಮತ್ತು ರೆಡ್ಡಿ ಸೋದರರನ್ನೂ ಹತ್ತಿರದಿಂದ ಗಮನಿಸಿ ಬಲ್ಲೆ. ಶ್ರೀರಾಮುಲು ಓರ್ವ ಮಹತ್ವಾಕಾಂಕ್ಷಿ. ಆದರೆ ತಿಳಿವಳಿಕೆ ಕೊಂಚ ಕಮ್ಮಿ. ಕಾರ್ಯಸಾಧನೆಗಾಗಿ ಏನೂ ಮಾಡಬಲ್ಲ ಧೈರ್ಯ ಮತ್ತು ಉಮೇದು ಆತನದು. ಬಳ್ಳಾರಿಯಲ್ಲಿ ಮತ್ತು ಸುತ್ತಮುತ್ತ ಆತ ಮೊದಲಿನಿಂದಲೂ ಜನಪ್ರಿಯ. ಆತನ ಈ ಗುಣಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡವರು ಹಾಗೂ ಬಳಸಿಕೊಳ್ಳುತ್ತಿರುವವರು ಗಣಿರೆಡ್ಡಿ ಸೋದರರು. ಆದ್ದರಿಂದಲೇ ಅವರು ಸದಾಕಾಲ ಶ್ರೀರಾಮುಲುವಿನ ಸಮರ್ಥನೆಯಲ್ಲಿ ತೊಡಗಿರುತ್ತಾರೆ. ಶ್ರೀರಾಮುಲುವಿನ ನೆರವಿಲ್ಲದಿರುತ್ತಿದ್ದರೆ ರೆಡ್ಡಿ ಸೋದರರು ರಾಜಕೀಯ ಕ್ಷೇತ್ರದಲ್ಲಿ ಮಿಂಚಲು ಸರ್ವಥಾ ಸಾಧ್ಯವಾಗುತ್ತಿರಲಿಲ್ಲ. ಇನ್ನಾದರೂ ಈ ಸೋದರರಿಗೆ ಶ್ರೀರಾಮುಲು ಹೆಸರೇ ಶ್ರೀರಕ್ಷೆ.

ಹೀಗಿರುವಾಗ ಯಡಿಯೂರಪ್ಪನವರು ರೆಡ್ಡಿಗಳ ತೆಕ್ಕೆಯಿಂದ ಶ್ರೀರಾಮುಲುವನ್ನು ಬಿಡಿಸಬೇಕು. ಆದರೆ ಅದು ಸಾಧ್ಯವಾಗದಂತೆ ರೆಡ್ಡಿಗಳು ಶ್ರೀರಾಮುಲುವನ್ನು ತಮ್ಮ ಗಣಿ (ಅ)ವ್ಯವಹಾರದ ಪಾಲುದಾರನನ್ನಾಗಿ ಮಾಡಿಕೊಂಡುಬಿಟ್ಟಿದ್ದಾರೆ! ಜೊತೆಗೆ, ನಾಡಿನ ಖನಿಜಸಂಪತ್ತನ್ನು ಲೂಟಿಮಾಡಿ ಗಳಿಸಿದ ಹಣದಲ್ಲಿ ಒಂದಂಶವನ್ನು ಯಡಿಯೂರಪ್ಪನವರ ಸರ್ಕಾರದ ಭದ್ರತೆಗಾಗಿ ಖರ್ಚುಮಾಡಿ ಯಡಿಯೂರಪ್ಪನವರನ್ನೂ ದಾಕ್ಷಿಣ್ಯದಲ್ಲಿ ಸಿಕ್ಕಿಸಿದ್ದಾರೆ.

ಆದಾಗ್ಗ್ಯೂ, ಯಡಿಯೂರಪ್ಪ ಓರ್ವ ಸಮರ್ಥ ರಾಜಕಾರಣಿ ಮತ್ತು ಮುತ್ಸದ್ಧಿ ಆಗಿದ್ದಲ್ಲಿ ಯಾವ ದಾಕ್ಷಿಣ್ಯವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ರೆಡ್ಡಿ ಸೋದರರನ್ನೂ ಮತ್ತು ಶ್ರೀರಾಮುಲುವನ್ನೂ ಎಲ್ಲಿಡಬೇಕೋ ಅಲ್ಲಿಡಬೇಕು. ಆಗ ಮಾತ್ರ ರಾಜ್ಯದ ಏಳಿಗೆ ಸಾಧ್ಯ. ಇಂಥ ಧೈರ್ಯದ ನಡೆಯನ್ನು ನಾವು ಯಡಿಯೂರಪ್ಪನವರಿಂದ ನಿರೀಕ್ಷಿಸಬಹುದೇ? ಇದು ಈಗ ಮಿಲಿಯನ್ ಡಾಲರ್ ಪ್ರಶ್ನೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+