ಸಿಂಗಪುರ ಉತ್ಸವದಲ್ಲಿ ಕರ್ನಾಟಕ ಜನಪದ ನೃತ್ಯ ವೈಭವ

ಸಿಂಗಪುರದಲ್ಲಿ ದೀಪಾವಳಿ ಹಬ್ಬದ ಆಚರಣೆಯ ವೈಭೋಗವೇ ಬೇರೆಯ ರೀತಿಯದು. ದೀಪಾವಳಿ ಆಚರಣೆಯ ಭಾಗವಾಗಿ ನಡೆಯುವ 'ಉತ್ಸವ 2010'ದಲ್ಲಿ ಇಡೀ ಸಿಂಗಪುರವೇ ಸಿಂಗರಿಸಿಕೊಂಡು ನಿಲ್ಲುತ್ತದೆ. ಅಕ್ಟೋಬರ್ 30ರಂದು ಸಿಂಗಪುರದ ಹಿಂದೂಗಳೆಲ್ಲ ಸಡಗರದಿಂದ ಬೀದಿಬೀದಿಗಳಲ್ಲಿ ಸೇರಿ ಉತ್ಸವ 2010ರನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ.
ಹೆರಿಟೇಜ್ ಅಸೋಸಿಯೇಶನ್ ಮತ್ತು ಭಾರತೀಯ ಅಂಗಡಿ ಮಾಲಿಕರ ಸಹಯೋಗದೊಂದಿದೆ ಹಿಂದೂ ಎಂಡೋಮೆಂಟ್ ಬೋರ್ಡ್ ದೀಪಾವಳಿ ಉತ್ಸವವನ್ನು ಆಯೋಜಿಸಿದೆ. ರಂಗ್ಬಿರಂಗಿ ದೀಪಗಳಿಂದ ಝಗಮಗಿಸುವ ಬೀದಿಬೀದಿಗಳಲ್ಲಿ ಅಂದು ಸಂಜೆ ನಡೆಯಲಿರುವ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸುಮಾರು 20ಕ್ಕೂ ಹೆಚ್ಚು ತಂಡಗಳು ಭಾಗವಹಿಸುತ್ತಿದ್ದು, ಕರ್ನಾಟಕ ವೈಭವ ಕೂಡ ಕರ್ನಾಟಕ ಜನಪದದ ಶ್ರೀಮಂತಿಕೆಯನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಿದೆ. ಈ ಮೆರವಣಿಗೆಯಲ್ಲಿ ತಮಿಳುನಾಡು ಸರಕಾರ ಮತ್ತು ಶ್ರೀಲಂಕಾ ಪ್ರಾಯೋಜಿಸಿರುವ ತಂಡಗಳು ಕೂಡ ಭಾಗವಹಿಸುತ್ತಿವೆ.
ಕರ್ನಾಟಕ ವೈಭವದ ಜನಪದ ನೃತ್ಯ : ಡಾ. ಸಂಜಯ್ ಶಾಂತಾರಾಮ್ ಅವರು ಸಂಯೋಜಿಸಿರುವ ಕರ್ನಾಟಕ ಜನಪದ ನೃತ್ಯವನ್ನು ಕರ್ನಾಟಕ ವೈಭವ ಈ ಬಾರಿ ಪ್ರಸ್ತುತಪಡಿಸಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಕನ್ನಡಿಗರು ಮತ್ತು ಕನ್ನಡೇತರರಿಗೆ ಡಾ. ಸಂಜಯ್ ಈಗಾಗಲೆ ತರಬೇತಿಯನ್ನು ನೀಡಲು ಪ್ರಾರಂಭಿಸಿದ್ದಾರೆ. ಇದರಲ್ಲಿ ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ಸುಗ್ಗಿ ಗೀತ, ಕೋಲಾಟ ಮತ್ತು ಯಕ್ಷಗಾನಗಳು ಸಿಂಗಪುರಿಗರನ್ನು ರಂಜಿಸಲಿವೆ.
ಈ ನೃತ್ಯ ಸಂಯೋಜನೆಗೆ ಕರ್ನಾಟಕ ಜನಪದ ನೃತ್ಯ ವೈಭವ ಎಂದು ನಾಮಕರಣ ಮಾಡಲಾಗಿದ್ದು, ಅಕ್ಟೋಬರ್ 30ರ ಶನಿವಾರ, ಸಂಜೆ 7ರಿಂದ 10ರವರೆಗೆ ನಡೆಯಲಿರುವ ಸಿಂಗಪುರ ದೀಪಾವಳಿ ಉತ್ಸವವನ್ನು 15 ಸಾವಿರಕ್ಕೂ ಹೆಚ್ಚಿನ ಸ್ಥಳೀಯ ಮತ್ತು ವಿದೇಶಿಗರು ವೀಕ್ಷಿಸಲಿದ್ದಾರೆ. ಈ ಮೆರವಣಿಗೆ ರೇಸ್ ಕೋರ್ಸ್ ರಸ್ತೆಯಲ್ಲಿ ನಡೆಯಲಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications