ಕನ್ನಡತನ - ನಿನ್ನೆ, ಇಂದು ಮತ್ತು ನಾಳೆ

ಕಾವೇರಿಯಿಂದಮಾ ಗೋ
ದಾವರಿವರಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ....
ಎಂದು ಕವಿರಾಜಮಾರ್ಗದಲ್ಲಿ ಹೇಳಿದೆ. ಇದು ಭೌಗೋಳಿಕವಾಗಿ ಕನ್ನಡನಾಡನ್ನು ವಿವರಿಸುತ್ತದೆ ಎಂದರೆ ಅದು 'ಭಾವಿತ'ಕನ್ನಡ ನಾಡನ್ನು ಮಿತಿಗೊಳಿಸುತ್ತದೆ. ಅದು ನೃಪತುಂಗನ ಆಶಯವೂ ಆಗಿರಲಿಲ್ಲ. ಕನ್ನಡ ಭಾಷೆಯ ಮೂಲ ಫಿನ್ನೋ ಉಗ್ರಿಯನ್ ಭಾಷಾವರ್ಗಕ್ಕೆ ಸೇರಿದ್ದಿರಬಹುದು ಎಂದು ಭಾಷಾತಜ್ಞರು ವಾದಿಸುತ್ತಾರೆ. ಅಲ್ಲಿಂದ ಹುಟ್ಟಿ ಅಫ್ಗಾನಿಸ್ತಾನದ ಮೂಲಕ ಭಾರತವನ್ನು ಪ್ರವೇಶಿಸಿ ಮಧ್ಯ ಭಾರತದಲ್ಲಿ ಒಂದಿಷ್ಟು ದಿನ ತಂಗಿ ನಂತರ ಕರ್ನಾಟಕದಲ್ಲಿ ನೆಲೆಸಿತು ಎಂದು ಒಂದು ವಾದ. ಇರಲಿ. ನಾವು ಯಾವುದನ್ನು ಒಂದು ಪ್ರಾಂತ್ಯಕ್ಕೆ ಸೇರಿದ ಭಾಷೆ ಅಂದುಕೊಳ್ಳುತ್ತೇವೋ ಅದು ಆ ಪ್ರಾಂತ್ಯದಲ್ಲಿ ಇರಲಿಲ್ಲ ಅನ್ನುವುದು ನಮ್ಮ ಭಾಷೆಯ, ಸಂಸ್ಕೃತಿಯ ಚಲನಶೀಲತೆಯನ್ನು ಹೇಳುತ್ತದೆ.
ಇದು ಯಾಕೆ ಮುಖ್ಯ ಅಂದರೆ, ಕರ್ನಾಟಕ ಏಕೀಕರಣ ಆದಮೇಲೆ ಕರ್ನಾಟಕಕ್ಕೆ ಒಂದು ಭೌಗೋಳಿಕ ಪರಿಧಿ ಒದಗಿರಬಹುದು. ಆದರೆ, ಕರ್ನಾಟಕದಿಂದ ಕನ್ನಡಿಗರು ಹೊರಗೆ ಹೋಗುವುದು, ಕರ್ನಾಟಕಕ್ಕೆ ಬೇರೆ ಭಾಷೆಯ ಜನ ಬಂದು ನೆಲಸುವುದು ಅನಾದಿಕಾಲದಿಂದಲೂ ನಡೆದೇ ಇದೆ. ಹೀಗಾಗುತ್ತಿರುವುದರಿಂದ ಒಂದು ರೀತಿ ಕೊಡುಕೊಳ್ಳುವಿಕೆಯಿಂದ ಭಾಷೆಯೂ ಸಮೃದ್ಧವಾಗಿದೆ ಎಂತಲೇ ನಂಬಿಕೆ. ಇದು ನಿಜವೇ? ನಗರೀಕರಣ, ಜಾಗತೀಕರಣ, ಮುಕ್ತಮಾರುಕಟ್ಟೆ, ವಲಸೆ-ಇವೆಲ್ಲ ಕನ್ನಡಕ್ಕೆ ಹಿಂದೆಂದೂ ಇಲ್ಲದ ಭೌಗೋಳಿಕ, ಸಾಂಸ್ಕೃತಿಕ, ರಾಜಕೀಯ ಆಯಾಮವನ್ನು ಕೊಟ್ಟಿದೆ.
ಹೀಗಾಗಿ ಕನ್ನಡಿಗನೆಂದರೆ ಯಾರು? ಕರ್ನಾಟಕದಲ್ಲಿ ವಾಸಿಸುವವನೇ- ಎಷ್ಟೋ ಜನ ಕನ್ನಡದಲ್ಲಿ ಒಂದಕ್ಷರ ಮಾತಾಡದಿದ್ದರೂ ಕರ್ನಾಟಕದಲ್ಲಿ ನೆಲಸಿಲ್ಲವೇ? ಇದೇ ವಾದವನ್ನು, ಕನ್ನಡದ ಓದು, ಬರಹಕ್ಕೂ ವಿಸ್ತರಿಸಬಹುದು. ಇದು ಕನ್ನಡಕ್ಕೆ ಮಾತ್ರ ಸೀಮಿತವಾದ ಪರಿಕಲ್ಪನೆಯೇ? ಅಥವಾ ಭಾರತದ ಬೇರೆ ಪ್ರಾದೇಶಿಕ ಭಾಷೆಗಳಿಗೂ ಇಂತಹ ಒಂದು ಕಾಳಜಿ, ಕಳಕಳಿ ಇದೆಯೇ ನಿಮ್ಮ ದೃಷ್ಟಿಯಲ್ಲಿ ಕನ್ನಡಿಗನೆಂದರೆ ಯಾರು? ಕನ್ನಡದ ಮನಸ್ಸು ಎಂದರೆ ಏನು? ಕರ್ನಾಟಕದಿಂದ ಹೊರಗೆ ಭಾರತದಲ್ಲಿಯೇ ಇರುವ ಕನ್ನಡಿಗರಿಗಿಂತ ದೇಶದ ಹೊರಗಿರುವ ಕನ್ನಡಿಗರ ಕನ್ನಡತನ ಬೇರೆಯೇ? ಬೇರೆಯಾದರೆ ಹೇಗೆ ಬೇರೆ?
ಅನಿವಾಸಿ ಕನ್ನಡಿಗ ಎಂಬ ಲಗತ್ತು ಹಚ್ಚಿ ಕಲೆ, ಸಾಹಿತ್ಯ ಇವುಗಳನ್ನು ಪ್ರತ್ಯೇಕಿಸಿ ನೋಡುವುದು ಎಷ್ಟು ಸಾಧು? ಒಳ ಹೊರ ವಲಸೆಯಿಂದಾಗಿರುವ ಈ ಕೊಡುಕೊಳ್ಳುವಿಕೆಯಿಂದ ಕನ್ನಡ ಭಾಷೆ ನಿಜವಾಗಿಯೂ ಸಮೃದ್ಧವಾಗಿದೆ ಎಂದು ಅನಿಸುತ್ತದೆಯೇ? ಇದರಿಂದ ಕನ್ನಡ ದೇಸೀ ಭಾಷೆಗೆ, ಸಂಸ್ಕೃತಿಗೆ ಯಾವ ಹೊಡೆತವೂ ಬಿದ್ದಿಲ್ಲವೇ? ನಾವು ಇಂದು ಕರ್ನಾಟಕ ಎನ್ನುವ ಪ್ರದೇಶ ಹಿಂದಿನಿಂದಲೂ ಎಲ್ಲ ಮತಗಳಿಗೂ, ಸಂಸ್ಕೃತಿಗಳಿಗೂ, ಭಾಷೆಗಳಿಗೂ ಆಶ್ರಯವಿತ್ತ ನೆಲ ಎಂಬುದನ್ನು ಗಮನಿಸಬೇಕಲ್ಲವೇ?
ಇವೇ ಮೊದಲಾದ ಪ್ರಶ್ನೆಗಳನ್ನಿಟ್ಟುಕೊಂಡು ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಒಂದು ಸಂವಾದವನ್ನು ಏರ್ಪಡಿಸಿದೆ. ಭಾನುವಾರ, ಸೆಪ್ಟೆಂಬರ್ 5, ಮ. 1:30ರಿಂದ 3:30, ಡಿವಿಜಿ ಭವನದಲ್ಲಿ. ದಯವಿಟ್ಟು ಸಂವಾದದಲ್ಲಿ ಪಾಲ್ಗೊಳ್ಳಿ. ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.
ಸಂಪರ್ಕ : ಗುರುಪ್ರಸಾದ್ ಕಾಗಿನೆಲೆ, 507-358-7292
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications