ನಾವಿಕ ಸಂಪುಟಕ್ಕೆ ಲೇಖನ ಕಳಿಸಿದಿರಾ?

ಈ ನಿಟ್ಟಿನಲ್ಲಿ “ವಿಶ್ವವ್ಯಾಪಿ ಕನ್ನಡ ಅಂದು, ಇಂದು, ಮುಂದು" ಎಂಬ ಸಂದೇಶವಾಣಿಯನ್ನಿಟ್ಟು ನಾವಿಕ ಸಾಹಿತ್ಯ ಸಮಿತಿಯು, ನಾವಿಕ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಪ್ರಪ್ರಥಮ ವಿಶ್ವಕನ್ನಡ ಸಮ್ಮೇಳನದ ನೆನಪಿಗಾಗಿ ಒಂದು ಸ್ಮರಣ ಸಂಚಿಕೆಯನ್ನು ಹೊರತರಲಿದೆ. ವಿಶ್ವಕನ್ನಡಿಗರ ಸೃಜನಶೀಲತೆಯ ನಾನಾ ರೀತಿಯ ನೈಜ, ಕಲ್ಪನೆಯ ಅಲೆಗಳು “ಅಲೆವಾಣಿ" ಸ್ಮರಣಸಂಚಿಕೆಯಲ್ಲಿ ಮೂಡಲಿವೆ. ನಿಮ್ಮ ಬರವಣಿಗೆ ಆಹ್ವಾನವನ್ನು ಈಗಾಗಲೇ ದಟ್ಸ್ ಕನ್ನಡದಲ್ಲಿ ಪ್ರಕಟಿಸಿದ್ದು, ವಿಶ್ವದೆಲ್ಲೆಡೆಯ ಅನೇಕ ಕನ್ನಡಿಗರು ಈ ಸದವಕಾಶವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಅಲೆವಾಣಿ ಸಂಚಿಕೆಯ ಅನುಕ್ರಮಣಿಕೆ ಹೀಗಿರುತ್ತದೆ.
* ಅಂದು : ಇತಿಹಾಸದ ಪುಟಗಳಲ್ಲಿ ವಿಶ್ವಕನ್ನಡ. ಹಳೆಯ ನೆನಪುಗಳನ್ನು ಹೊತ್ತು ತರುವ ಕಥೆ, ಕವನ, ಪ್ರಬಂಧ, ಐತಿಹಾಸಿಕ ಲೇಖನಗಳು, ಕಲೆ, ಇತ್ಯಾದಿ.
* ಇಂದು : ವರ್ತಮಾನದ ವಿಶ್ವಕನ್ನಡ. ಸಮಕಾಲೀನ ಸಮಸ್ಯೆಗಳ ಬಗ್ಗೆ ಕಥೆ, ಕವನ, ಪ್ರಬಂಧ ಇತ್ಯಾದಿ.
* ಮುಂದು : ಭವಿಷ್ಯದ ವಿಶ್ವಕನ್ನಡ. ಮುಂದಿನ ದಿನಗಳಲ್ಲಿ ಕನ್ನಡದ ಬೆಳವಣಿಗೆ, ಮುಂದಿನ ಪೀಳಿಗೆ, ವೈಜ್ಞಾನಿಕ ಲೇಖನಗಳು, ಎದುರಿಸಬಹುದಾದ ಸಮಸ್ಯೆಗಳು ಇತ್ಯಾದಿ.
ಇದರೊಂದಿಗೆ ಚುಟುಕು, ನಗೆಹನಿ, ಗಾದೆ, ಸುಭಾಷಿತ, ವಚನ, ಕಲೆ, ರಂಗೋಲಿ ಮುಂತಾದ ವಿಚಾರಗಳಿಗೂ ಆಹ್ವಾನವಿದೆ. “ಅಲೆವಾಣಿ"ಯ ಮುಖಪುಟ ವಿನ್ಯಾಸ ಸ್ಪರ್ಧೆಯನ್ನು ಏರ್ಪಡಿಸಿದ್ದು ಆಯ್ಕೆಯಾದ ವಿನ್ಯಾಸಕ್ಕೆ ಸೂಕ್ತ ಬಹುಮಾನವೂ ಇದೆ. ನಿಮ್ಮ ಬರಹ, ಮುಖಪುಟವಿನ್ಯಾಸ ಮುಂತಾದ ಎಲ್ಲ ಸಂಪರ್ಕಗಳನ್ನು [email protected] ಇ-ವಿಳಾಸಕ್ಕೆ ಕಳುಹಿಸಬೇಕಾಗಿ ವಿನಂತಿ.
ಇವೆಲ್ಲವನ್ನೂ ಕಳುಹಿಸಲು ಕೊನೆಯ ದಿನಾಂಕ ಏಪ್ರಿಲ್ 30, 2010.
ಮತ್ತೊಮ್ಮೆ ದಟ್ಸ್ ಕನ್ನಡ ಓದುಗರಲ್ಲಿ “ಅಲೆವಾಣಿ"ಯ ಸಂಪಾದಕರಾದ ಶ್ರೀಕಾಂತ ಬಾಬುರವರ ಆದರಣೀಯ ಕೋರಿಕೆ. ತಾವೆಲ್ಲರೂ ಕನ್ನಡದ ಹಿರಿಮೆಯನ್ನು ಎತ್ತಿಹಿಡಿಯುವಲ್ಲಿ ಮುಂದಾಗಿ, ತಮ್ಮ ಬರಹ ಕಾಣಿಕೆಗಳಿಂದ ಸ್ಮರಣ ಸಂಚಿಕೆಯನ್ನು ಸಂಪದ್ಭರಿತ ಮಾಡಬೇಕಾಗಿ ಕೋರಿಕೆ.
ವಿಶ್ವಾಸದಿಂದ, ಶ್ರೀಕಾಂತ ಬಾಬು, ನಾವಿಕ ಸಾಹಿತ್ಯ ಸಮಿತಿ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications