ನಾವಿಕ ಸಂಪುಟಕ್ಕೆ ಲೇಖನ ಕಳಿಸಿದಿರಾ?

ಈ ನಿಟ್ಟಿನಲ್ಲಿ “ವಿಶ್ವವ್ಯಾಪಿ ಕನ್ನಡ ಅಂದು, ಇಂದು, ಮುಂದು" ಎಂಬ ಸಂದೇಶವಾಣಿಯನ್ನಿಟ್ಟು ನಾವಿಕ ಸಾಹಿತ್ಯ ಸಮಿತಿಯು, ನಾವಿಕ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಪ್ರಪ್ರಥಮ ವಿಶ್ವಕನ್ನಡ ಸಮ್ಮೇಳನದ ನೆನಪಿಗಾಗಿ ಒಂದು ಸ್ಮರಣ ಸಂಚಿಕೆಯನ್ನು ಹೊರತರಲಿದೆ. ವಿಶ್ವಕನ್ನಡಿಗರ ಸೃಜನಶೀಲತೆಯ ನಾನಾ ರೀತಿಯ ನೈಜ, ಕಲ್ಪನೆಯ ಅಲೆಗಳು “ಅಲೆವಾಣಿ" ಸ್ಮರಣಸಂಚಿಕೆಯಲ್ಲಿ ಮೂಡಲಿವೆ. ನಿಮ್ಮ ಬರವಣಿಗೆ ಆಹ್ವಾನವನ್ನು ಈಗಾಗಲೇ ದಟ್ಸ್ ಕನ್ನಡದಲ್ಲಿ ಪ್ರಕಟಿಸಿದ್ದು, ವಿಶ್ವದೆಲ್ಲೆಡೆಯ ಅನೇಕ ಕನ್ನಡಿಗರು ಈ ಸದವಕಾಶವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಅಲೆವಾಣಿ ಸಂಚಿಕೆಯ ಅನುಕ್ರಮಣಿಕೆ ಹೀಗಿರುತ್ತದೆ.
* ಅಂದು : ಇತಿಹಾಸದ ಪುಟಗಳಲ್ಲಿ ವಿಶ್ವಕನ್ನಡ. ಹಳೆಯ ನೆನಪುಗಳನ್ನು ಹೊತ್ತು ತರುವ ಕಥೆ, ಕವನ, ಪ್ರಬಂಧ, ಐತಿಹಾಸಿಕ ಲೇಖನಗಳು, ಕಲೆ, ಇತ್ಯಾದಿ.
* ಇಂದು : ವರ್ತಮಾನದ ವಿಶ್ವಕನ್ನಡ. ಸಮಕಾಲೀನ ಸಮಸ್ಯೆಗಳ ಬಗ್ಗೆ ಕಥೆ, ಕವನ, ಪ್ರಬಂಧ ಇತ್ಯಾದಿ.
* ಮುಂದು : ಭವಿಷ್ಯದ ವಿಶ್ವಕನ್ನಡ. ಮುಂದಿನ ದಿನಗಳಲ್ಲಿ ಕನ್ನಡದ ಬೆಳವಣಿಗೆ, ಮುಂದಿನ ಪೀಳಿಗೆ, ವೈಜ್ಞಾನಿಕ ಲೇಖನಗಳು, ಎದುರಿಸಬಹುದಾದ ಸಮಸ್ಯೆಗಳು ಇತ್ಯಾದಿ.
ಇದರೊಂದಿಗೆ ಚುಟುಕು, ನಗೆಹನಿ, ಗಾದೆ, ಸುಭಾಷಿತ, ವಚನ, ಕಲೆ, ರಂಗೋಲಿ ಮುಂತಾದ ವಿಚಾರಗಳಿಗೂ ಆಹ್ವಾನವಿದೆ. “ಅಲೆವಾಣಿ"ಯ ಮುಖಪುಟ ವಿನ್ಯಾಸ ಸ್ಪರ್ಧೆಯನ್ನು ಏರ್ಪಡಿಸಿದ್ದು ಆಯ್ಕೆಯಾದ ವಿನ್ಯಾಸಕ್ಕೆ ಸೂಕ್ತ ಬಹುಮಾನವೂ ಇದೆ. ನಿಮ್ಮ ಬರಹ, ಮುಖಪುಟವಿನ್ಯಾಸ ಮುಂತಾದ ಎಲ್ಲ ಸಂಪರ್ಕಗಳನ್ನು [email protected] ಇ-ವಿಳಾಸಕ್ಕೆ ಕಳುಹಿಸಬೇಕಾಗಿ ವಿನಂತಿ.
ಇವೆಲ್ಲವನ್ನೂ ಕಳುಹಿಸಲು ಕೊನೆಯ ದಿನಾಂಕ ಏಪ್ರಿಲ್ 30, 2010.
ಮತ್ತೊಮ್ಮೆ ದಟ್ಸ್ ಕನ್ನಡ ಓದುಗರಲ್ಲಿ “ಅಲೆವಾಣಿ"ಯ ಸಂಪಾದಕರಾದ ಶ್ರೀಕಾಂತ ಬಾಬುರವರ ಆದರಣೀಯ ಕೋರಿಕೆ. ತಾವೆಲ್ಲರೂ ಕನ್ನಡದ ಹಿರಿಮೆಯನ್ನು ಎತ್ತಿಹಿಡಿಯುವಲ್ಲಿ ಮುಂದಾಗಿ, ತಮ್ಮ ಬರಹ ಕಾಣಿಕೆಗಳಿಂದ ಸ್ಮರಣ ಸಂಚಿಕೆಯನ್ನು ಸಂಪದ್ಭರಿತ ಮಾಡಬೇಕಾಗಿ ಕೋರಿಕೆ.
ವಿಶ್ವಾಸದಿಂದ, ಶ್ರೀಕಾಂತ ಬಾಬು, ನಾವಿಕ ಸಾಹಿತ್ಯ ಸಮಿತಿ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications