ಹುಟ್ಟಿ ಬಾ ಹನುಮಂತಪ್ಪ ದೇಶದ ಹಣತೆಯ ಬೆಳಗಲು
ಅರಿಯದ ಹಸುಳೆಯ ಬಿಟ್ಟು
ಹರೆಯದ ಮಡದಿಯ ತೊರೆದು
ಹುತಾತ್ಮನಾದೆ ಹನುಮಂತಪ್ಪ
ನಿನ್ನ ಪ್ರಾಣಾರ್ಪಣೆಗೆ ಇಲ್ಲವೆ ಬೆಲೆ
ಹರಡಿದೆ ಎಲ್ಲೆಡೆಗೆ ದ್ರೋಹಿಗಳ ಬಲೆ|
ದೇಶದಸ್ತಿತ್ವವನೆ ಪ್ರಶ್ನಿಸುವ ಭಂಡರು
ದೇಶವಿರೋಧಿ ಕಾಯಕಗಳ ಪುಂಡರು
ನಿಯತ್ತಿರದ ನೀಚರೇ ಎಲ್ಲ ಕಡೆಗೆ
ಬುದ್ಧಿಜೀವಿಗಳ ಸೋಗು ಹಾಕುತಿಹರು
ಗೆದ್ದಲಿನ ಹಾಗೆ ದೇಶ ಕೆಡಿಸುತಿಹರು| [ಮಣ್ಣಲ್ಲಿ ಮಣ್ಣಾದ ವೀರಯೋಧ ಹನುಮಂತಪ್ಪ]

ದೇಶಭಕ್ತಿಯ ದಿವ್ಯ ದೇಗುಲಗಳೆನಿಸಿದ
ಯುವಶಕ್ತಿಯ ಉಚ್ಛ ಮಂದಿರಗಳೆನಿಸಿದ
ವಿಶ್ವವಿದ್ಯಾಲಯಗಳೊಳಗೆ ಇಂದು
ಶತ್ರುಗಳ ಜಯಕಾರ ಮೊಳಗುತಿಹುದು
ಅರಿಗಳ ಠೇಂಕಾರ ಕೆಣಕುತಿಹುದು| [JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]
ನಿನ್ನ ಮಹತ್ತರ ಸಮರ್ಪಣೆಗೆ
ಅಸಮಾನ ತ್ಯಾಗದ ಉದಾಹರಣೆಗೆ
ಪಾತ್ರರೆ ಈ ಹುಲು ಜೀವಿಗಳು?
ಸ್ವಂತ ತಾಯಿಗೆ ಎರಡು ಬಗೆಯುವವರು
ಅರಿವಿನ ಜ್ಯೋತಿಗೆ ಬೆನ್ನು ಹಾಕಿದವರು|
ದಂತದರಮನೆಗಳಲಿ ಹೊರಳಿ
ಸುಪ್ಪತ್ತಿಗೆಯ ಸುಖದಲ್ಲಿ ಉರುಳಿ
ರಾಷ್ಟ್ರ ಭಕ್ತರನು ಜರಿಯುವರು ಇವರು
ಅದಾವ ಹೊಸ ಕುಭಾಷ್ಯ ರಚಿಸುತಿಹರು
ವಿಭಜಿಸುವ ಹೊಸ ನೀತಿ ಮಸೆಯುತಿಹರು? [ಚಿತ್ರಗಳು : ತವರಿನಲ್ಲಿ ವೀರಯೋಧನಿಗೆ ಅಂತಿಮ ನಮನ]
ಮತ್ತೊಮ್ಮೆ ಬಾ ಹನುಮಂತಪ್ಪ ನೀ
ವೀರ ಪುತ್ರರ ಕೆಚ್ಚೆದೆಯ ಕಿಡಿಯಾಗಿ
ತಾಯಿ ಭಾರತಿಯ ಕಂದರಾಗ್ರಣಿಯಾಗಿ
ಮೆಟ್ಟಿ ಹಾಕಲು ಕೆಟ್ಟ ದ್ರೋಹಗಳನು
ಸರಿದಾರಿಗೆಳೆಯಲು ಮುನಿದ ಮನಗಳನು|
ವಿಭಜಿಸುವ ಕೂಟನೀತಿಯದು ಸಾಕಾಗಿದೆ
ಒಂದುಗೂಡಿಸುವ ಪ್ರಣತಿಯದು ಬೇಕಾಗಿದೆ
ಹುಟ್ಟಿ ಬಾ ಹನುಮಂತಪ್ಪ ಹಣತೆಯನು ಬೆಳಗಲು
ಒಡೆಯುವ ಮತ ಪಂಥಗಳ ದಮನಕಾಗಿ
ಒಡೆದ ಹೃದಯಗಳ ನೋವ ಶಮನಕಾಗಿ|
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications