ಹುಟ್ಟಿ ಬಾ ಹನುಮಂತಪ್ಪ ದೇಶದ ಹಣತೆಯ ಬೆಳಗಲು
ಅರಿಯದ ಹಸುಳೆಯ ಬಿಟ್ಟು
ಹರೆಯದ ಮಡದಿಯ ತೊರೆದು
ಹುತಾತ್ಮನಾದೆ ಹನುಮಂತಪ್ಪ
ನಿನ್ನ ಪ್ರಾಣಾರ್ಪಣೆಗೆ ಇಲ್ಲವೆ ಬೆಲೆ
ಹರಡಿದೆ ಎಲ್ಲೆಡೆಗೆ ದ್ರೋಹಿಗಳ ಬಲೆ|
ದೇಶದಸ್ತಿತ್ವವನೆ ಪ್ರಶ್ನಿಸುವ ಭಂಡರು
ದೇಶವಿರೋಧಿ ಕಾಯಕಗಳ ಪುಂಡರು
ನಿಯತ್ತಿರದ ನೀಚರೇ ಎಲ್ಲ ಕಡೆಗೆ
ಬುದ್ಧಿಜೀವಿಗಳ ಸೋಗು ಹಾಕುತಿಹರು
ಗೆದ್ದಲಿನ ಹಾಗೆ ದೇಶ ಕೆಡಿಸುತಿಹರು| [ಮಣ್ಣಲ್ಲಿ ಮಣ್ಣಾದ ವೀರಯೋಧ ಹನುಮಂತಪ್ಪ]

ದೇಶಭಕ್ತಿಯ ದಿವ್ಯ ದೇಗುಲಗಳೆನಿಸಿದ
ಯುವಶಕ್ತಿಯ ಉಚ್ಛ ಮಂದಿರಗಳೆನಿಸಿದ
ವಿಶ್ವವಿದ್ಯಾಲಯಗಳೊಳಗೆ ಇಂದು
ಶತ್ರುಗಳ ಜಯಕಾರ ಮೊಳಗುತಿಹುದು
ಅರಿಗಳ ಠೇಂಕಾರ ಕೆಣಕುತಿಹುದು| [JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]
ನಿನ್ನ ಮಹತ್ತರ ಸಮರ್ಪಣೆಗೆ
ಅಸಮಾನ ತ್ಯಾಗದ ಉದಾಹರಣೆಗೆ
ಪಾತ್ರರೆ ಈ ಹುಲು ಜೀವಿಗಳು?
ಸ್ವಂತ ತಾಯಿಗೆ ಎರಡು ಬಗೆಯುವವರು
ಅರಿವಿನ ಜ್ಯೋತಿಗೆ ಬೆನ್ನು ಹಾಕಿದವರು|
ದಂತದರಮನೆಗಳಲಿ ಹೊರಳಿ
ಸುಪ್ಪತ್ತಿಗೆಯ ಸುಖದಲ್ಲಿ ಉರುಳಿ
ರಾಷ್ಟ್ರ ಭಕ್ತರನು ಜರಿಯುವರು ಇವರು
ಅದಾವ ಹೊಸ ಕುಭಾಷ್ಯ ರಚಿಸುತಿಹರು
ವಿಭಜಿಸುವ ಹೊಸ ನೀತಿ ಮಸೆಯುತಿಹರು? [ಚಿತ್ರಗಳು : ತವರಿನಲ್ಲಿ ವೀರಯೋಧನಿಗೆ ಅಂತಿಮ ನಮನ]
ಮತ್ತೊಮ್ಮೆ ಬಾ ಹನುಮಂತಪ್ಪ ನೀ
ವೀರ ಪುತ್ರರ ಕೆಚ್ಚೆದೆಯ ಕಿಡಿಯಾಗಿ
ತಾಯಿ ಭಾರತಿಯ ಕಂದರಾಗ್ರಣಿಯಾಗಿ
ಮೆಟ್ಟಿ ಹಾಕಲು ಕೆಟ್ಟ ದ್ರೋಹಗಳನು
ಸರಿದಾರಿಗೆಳೆಯಲು ಮುನಿದ ಮನಗಳನು|
ವಿಭಜಿಸುವ ಕೂಟನೀತಿಯದು ಸಾಕಾಗಿದೆ
ಒಂದುಗೂಡಿಸುವ ಪ್ರಣತಿಯದು ಬೇಕಾಗಿದೆ
ಹುಟ್ಟಿ ಬಾ ಹನುಮಂತಪ್ಪ ಹಣತೆಯನು ಬೆಳಗಲು
ಒಡೆಯುವ ಮತ ಪಂಥಗಳ ದಮನಕಾಗಿ
ಒಡೆದ ಹೃದಯಗಳ ನೋವ ಶಮನಕಾಗಿ|
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications