ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಟ್ಟಿ ಬಾ ಹನುಮಂತಪ್ಪ ದೇಶದ ಹಣತೆಯ ಬೆಳಗಲು

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಅರಿಯದ ಹಸುಳೆಯ ಬಿಟ್ಟು
ಹರೆಯದ ಮಡದಿಯ ತೊರೆದು
ಹುತಾತ್ಮನಾದೆ ಹನುಮಂತಪ್ಪ
ನಿನ್ನ ಪ್ರಾಣಾರ್ಪಣೆಗೆ ಇಲ್ಲವೆ ಬೆಲೆ
ಹರಡಿದೆ ಎಲ್ಲೆಡೆಗೆ ದ್ರೋಹಿಗಳ ಬಲೆ|

ದೇಶದಸ್ತಿತ್ವವನೆ ಪ್ರಶ್ನಿಸುವ ಭಂಡರು
ದೇಶವಿರೋಧಿ ಕಾಯಕಗಳ ಪುಂಡರು
ನಿಯತ್ತಿರದ ನೀಚರೇ ಎಲ್ಲ ಕಡೆಗೆ
ಬುದ್ಧಿಜೀವಿಗಳ ಸೋಗು ಹಾಕುತಿಹರು
ಗೆದ್ದಲಿನ ಹಾಗೆ ದೇಶ ಕೆಡಿಸುತಿಹರು| [ಮಣ್ಣಲ್ಲಿ ಮಣ್ಣಾದ ವೀರಯೋಧ ಹನುಮಂತಪ್ಪ]

A Kannada poem on Hanumanthappa Koppad

ದೇಶಭಕ್ತಿಯ ದಿವ್ಯ ದೇಗುಲಗಳೆನಿಸಿದ

ಯುವಶಕ್ತಿಯ ಉಚ್ಛ ಮಂದಿರಗಳೆನಿಸಿದ
ವಿಶ್ವವಿದ್ಯಾಲಯಗಳೊಳಗೆ ಇಂದು
ಶತ್ರುಗಳ ಜಯಕಾರ ಮೊಳಗುತಿಹುದು
ಅರಿಗಳ ಠೇಂಕಾರ ಕೆಣಕುತಿಹುದು| [JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]

ನಿನ್ನ ಮಹತ್ತರ ಸಮರ್ಪಣೆಗೆ
ಅಸಮಾನ ತ್ಯಾಗದ ಉದಾಹರಣೆಗೆ
ಪಾತ್ರರೆ ಈ ಹುಲು ಜೀವಿಗಳು?
ಸ್ವಂತ ತಾಯಿಗೆ ಎರಡು ಬಗೆಯುವವರು
ಅರಿವಿನ ಜ್ಯೋತಿಗೆ ಬೆನ್ನು ಹಾಕಿದವರು|

ದಂತದರಮನೆಗಳಲಿ ಹೊರಳಿ
ಸುಪ್ಪತ್ತಿಗೆಯ ಸುಖದಲ್ಲಿ ಉರುಳಿ
ರಾಷ್ಟ್ರ ಭಕ್ತರನು ಜರಿಯುವರು ಇವರು
ಅದಾವ ಹೊಸ ಕುಭಾಷ್ಯ ರಚಿಸುತಿಹರು
ವಿಭಜಿಸುವ ಹೊಸ ನೀತಿ ಮಸೆಯುತಿಹರು? [ಚಿತ್ರಗಳು : ತವರಿನಲ್ಲಿ ವೀರಯೋಧನಿಗೆ ಅಂತಿಮ ನಮನ]

ಮತ್ತೊಮ್ಮೆ ಬಾ ಹನುಮಂತಪ್ಪ ನೀ
ವೀರ ಪುತ್ರರ ಕೆಚ್ಚೆದೆಯ ಕಿಡಿಯಾಗಿ
ತಾಯಿ ಭಾರತಿಯ ಕಂದರಾಗ್ರಣಿಯಾಗಿ
ಮೆಟ್ಟಿ ಹಾಕಲು ಕೆಟ್ಟ ದ್ರೋಹಗಳನು
ಸರಿದಾರಿಗೆಳೆಯಲು ಮುನಿದ ಮನಗಳನು|

ವಿಭಜಿಸುವ ಕೂಟನೀತಿಯದು ಸಾಕಾಗಿದೆ
ಒಂದುಗೂಡಿಸುವ ಪ್ರಣತಿಯದು ಬೇಕಾಗಿದೆ
ಹುಟ್ಟಿ ಬಾ ಹನುಮಂತಪ್ಪ ಹಣತೆಯನು ಬೆಳಗಲು
ಒಡೆಯುವ ಮತ ಪಂಥಗಳ ದಮನಕಾಗಿ
ಒಡೆದ ಹೃದಯಗಳ ನೋವ ಶಮನಕಾಗಿ|

English summary
A Kannada poem on Siachen hero Hanumanthappa Koppad by Vasant Kulkarni from Singapore. We need many soldiers like Hanumanthappa to safeguard our country India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X