ಕತಾರ್ ನಲ್ಲಿ ಸಿಂಪಲ್ಲಾಗಿ ಸುಗಮ ಸಂಗೀತ ಸಂಭ್ರಮ
ಈ ನಾದಮಯ ಯಾನದಲ್ಲಿ ಸುಗಮ ಸಂಗೀತದಲ್ಲಿ ಹೆಸರು ಮಾಡಿರುವ ರತ್ನಮಾಲ ಪ್ರಕಾಶ್, ಇಂದು ವಿಶ್ವನಾಥ್ ಮತ್ತು ಯುವ ಪ್ರತಿಭೆ ಪಂಚಮ್ ಹಳಿಬಂಡಿ ಕತಾರ್ ಕನ್ನಡಿಗರನ್ನು ರಸಮಯ, ಆನಂದಮಯ, ಕಾವ್ಯಮಯ ಲೋಕಕ್ಕೆ ಕರೆದೊಯ್ಯಲಿದ್ದಾರೆ.
ಕತಾರ್ ಕನ್ನಡ ಸಂಘ ವನಿತಾ ಪ್ರತಿಭಾ ಸಂಭ್ರಮ ಮತ್ತು ಮಕ್ಕಳ ಪ್ರತಿಭಾನ್ವೇಷಣೆ ಕಾರ್ಯಕ್ರಮವನ್ನು ಫೆಬ್ರವರಿ 10, ಶುಕ್ರವಾರ ಸಂಜೆಯಂದು ಇಂಡಿಯನ್ ಕಲ್ಚರ್ ಸೆಂಟರ್ ನ ಅಶೋಕ ಹಾಲ್ ನಲ್ಲಿ ಹಮ್ಮಿಕೊಂಡಿದೆ.
ಸಂಜೆ 4.30ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕದ ಸುಗಮ ಸಂಗೀತ ಕ್ಷೇತ್ರದ ದಿಗ್ಗಜರು ಭಾವ ಸಂಗಮದ ಅನಾವರಣ ಮಾಡಲಿದ್ದು, ಮಧುರ ಗೀತೆಗಳ ಭೋರ್ಗರೆತದ ಜಲಪಾತ ಸೃಷ್ಟಿಸಲಿದ್ದಾರೆ.
ಈ ನಾದಮಯ ಯಾನದಲ್ಲಿ ಸುಗಮ ಸಂಗೀತದಲ್ಲಿ ಹೆಸರು ಮಾಡಿರುವ ರತ್ನಮಾಲ ಪ್ರಕಾಶ್, ಇಂದು ವಿಶ್ವನಾಥ್ ಮತ್ತು ಯುವ ಪ್ರತಿಭೆ ಪಂಚಮ್ ಹಳಿಬಂಡಿ ಕತಾರ್ ಕನ್ನಡಿಗರನ್ನು ರಸಮಯ, ಆನಂದಮಯ, ಕಾವ್ಯಮಯ ಲೋಕಕ್ಕೆ ಕರೆದೊಯ್ಯಲಿದ್ದಾರೆ.

ಇಷ್ಟು ಮಾತ್ರವಲ್ಲ, ನೋಡಿದಾಕ್ಷಣ ನಮ್ ಮನೆ ಹುಡ್ಗಿ ಎನಿಸುವ, 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದಲ್ಲಿ ಬೆರಗುಗೊಳಿಸುವಂತೆ ನಟನೆ ಮಾಡಿದ್ದ ತಾರೆ ಶ್ವೇತಾ ಶ್ರೀವಾತ್ಸವ್ ಸಮಾರಂಭಕ್ಕೆ ಮೆರುಗು ತರಲಿದ್ದಾರೆ.
ಇನ್ನೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕನ್ನಡಿಗರನ್ನು ರಂಚಿಸಲು ತಯಾರಾಗುತ್ತಿವೆ. ಸ್ಥಳೀಯ ಕನ್ನಡಿಗರಿಗಾಗಿ ಫ್ಯಾಷನ್ ಶೋ, ಗೆದ್ದ ಸ್ಪರ್ಧಿಗಳಿಗೆ ಬಹುಮಾನಗಳ ವಿತರಣೆ ಇರಲಿದೆ.
ನಾರಿಶಕ್ತಿ ಮತ್ತು ಮಕ್ಕಳ ಸಾಧನೆಗಳ ಸುಂದರ ಕ್ಷಣಗಳಿಗೆ ನೀವೂ ಸಾಕ್ಷಿಯಾಗಿ. ಮರೆಯದೆ ಬನ್ನಿ. ನಿಮ್ಮ ಕುಟುಂಬ/ ಸ್ನೇಹಿತರೊಂದಿಗೆ ಬನ್ನಿ. ಹೆಚ್ಚಿನ ವಿವರಗಳಿಗಾಗಿ ಕತಾರ್ ಕನ್ನಡ ಸಂಘದ ವೆಬ್ ಸೈಟಿಗೆ ಭೇಟಿ ನೀಡಿ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications