ಸಿಂಗಪುರದಲ್ಲಿ ಮೇ 26ರಂದು ಕನ್ನಡದ ಕೋಗಿಲೆಗಳ ಇಂಚರ
ಕನ್ನಡ ಸಂಘ (ಸಿಂಗಪುರ)ದ 23ನೇ ವಾರ್ಷಿಕ ಮಹಾಸಭೆಯು ಇದೇ 31ನೇ ಮಾರ್ಚ್ 2019 ಭಾನುವಾರದಂದು ಜರುಗಿತು. ಮಹಾಸಭೆಯ ಕಾರ್ಯಕಲಾಪಗಳ ನಂತರ 2019-2021ರ ಸಾಲಿನ ಪದಾಧಿಕಾರಿಗಳ ಚುನಾವಣೆ / ನೇಮಕಾತಿ ನಡೆಯಿತು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ರಶ್ಮಿ ಉದಯಕುಮಾರ್ ಅವರ ನೇತೃತ್ವದಲ್ಲಿ ನವೀನ ಕಾರ್ಯಕಾರಿ ಸಮಿತಿಯು ಸಂಘದ ಕಾರ್ಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ಚಟುವಟಿಕೆಗಳನ್ನು ಆರಂಭಿಸಿದೆ. ನವಚೇತನದೊಂದಿಗೆ ಹೊಸ ವರುಷವನ್ನು ಸ್ವಾಗತಿಸಲು 'ಇಂಚರ' ಎಂಬ ಮೆಗಾ ಕಾರ್ಯಕ್ರಮವನ್ನು ಮೇ 26ರಂದು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
'ಚಲ್ತಾ ಹೈ' ಮನೋಭಾವಕ್ಕೆ ನಾವು ಭಾರತೀಯರು ಕೊಕ್ಕೆ ಹಾಕುವುದೆಂದು?
ಈ ಚಲನಚಿತ್ರ ಆಧಾರಿತ ಕಾರ್ಯಕ್ರಮಕ್ಕೆ ಸಿಂಗಪುರಕ್ಕೆ ಆಗಮಿಸುತ್ತಿರುವ ಕರ್ನಾಟಕದ ಕನ್ನಡ ಕಲಾವಿದರು ಯಾರೆಂಬ ಕುತೂಹಲವೇ? ವಿವರಗಳಿಗೆ ಇಲ್ಲಿ ನೋಡಿ.
* "ಜೋಗಿ" ಖ್ಯಾತಿಯ ಕಲಾವಿದೆ ಸುನೀತಾ.
* "ಕನ್ನಡ-ಕೋಗಿಲೆ" ಸಂಗೀತ ಸ್ಪರ್ಧೆಯ ಸೆಮಿ-ಫೈನಲಿಸ್ಟ್ ಸುರಕ್ಷಾ ದಾಸ್.
* "ಕನ್ನಡ-ಕೋಗಿಲೆ" ಸಂಗೀತ ಸ್ಪರ್ಧೆಯ ಸೆಮಿ-ಫೈನಲಿಸ್ಟ್ ಗಣೇಶ್ ಕಾರಂತ್.
* "ಮಿಮಿಕ್ರಿ ಕಲಾವಿದ" ಮಿಮಿಕ್ರಿ ಗೋಪಿ.
* ಕನ್ನಡ ದೂರದರ್ಶನದ ಹಾಗೂ ರೇಡಿಯೋ ಕಲಾವಿದೆ ಆಂಕರ್ ಅಪರ್ಣಾ ವಸ್ತಾರೆ.
* ಕೀಬೋರ್ಡ್ ಕಲಾವಿದ ಉಮಾಶಂಕರ್.
* ರಿದಮ್ ಪ್ಯಾಡ್ ಕಲಾವಿದ ಶ್ರೀನಿವಾಸ್.
ಸ್ಥಳ : ಸ್ಪ್ರಿಂಗ್ ಆಡಿಟೋರಿಯಂ
ಸಮಯ : 26 ಮೇ, 2019, ಭಾನುವಾರ, ಸಂಜೆ 5 ಘಂಟೆಯಿಂದ.
ಇನ್ನೇಕೆ ತಡ? ನಿಮ್ಮ ಸಂಬಂಧಿಗಳಿಗೆ, ಸ್ನೇಹಿತರಿಗೆ, ಕಲಾಪ್ರೇಮಿಗಳಿಗೆ ಈ ವಿಷಯ, ವಿವರ ತಿಳಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆನಂದಿಸಿ!
ಟಿಕೆಟ್ ಮತ್ತಿತರ ವಿವರಗಳಿಗೆ www.singara.org ಅಂತರ್ಜಲ ತಾಣಕ್ಕೆ ಭೇಟಿ ಕೊಡಿ.