ಬೋಸ್ಟನ್ನಲ್ಲಿ 2ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2013
ಕನ್ನಡ ನಾಡಿನ ಪ್ರಸಿದ್ದ ಕವಿಗಳ ಈ ಕನ್ನಡ ನಾಣ್ನುಡಿಗಳನ್ನೇ ಧ್ಯೇಯ ಮಾಡಿಕೊಂಡು ಅಮೆರಿಕಾದಲ್ಲಿರುವ ನ್ಯೂ ಇಂಗ್ಲೆಂಡ್ ಕನ್ನಡಿಗರು, ನಮ್ಮ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಇಲ್ಲಿಯೂ ಸಹ ಪಸರಿಸಲು ಮುಂದಿನ ವರುಷ 2013ರ ಆಗಸ್ಟ್ 30ರಿಂದ ಸೆಪ್ಟೆಂಬರ್ 1ರವರೆಗೆ ಬೋಸ್ಟನ್ನಲ್ಲಿ "ನಾವಿಕ(ನಾವು ವಿಶ್ವ ಕನ್ನಡಿಗರು)" ಸಂಸ್ಥೆಯ ಆಶ್ರಯದಲ್ಲಿ ಎರಡನೇ ವಿಶ್ವ ಕನ್ನಡ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ.
ಅಮೆರಿಕಾದ ಅತ್ಯಂತ ಹಳೆಯ ನಗರ, 18ನೆ ಶತಮಾನದಲ್ಲಿ ಅಮೆರಿಕನ್ ಕ್ರಾಂತಿಗೆ ಪ್ರಸಿದ್ದಿಯಾಗಿರುವ, ಅನೇಕ ಸುಂದರ ಪ್ರೇಕ್ಷಣೀಯ-ಆಕರ್ಷಣೀಯ ಸ್ಥಳಗಳನ್ನು ಹೊಂದಿರುವ, ನ್ಯೂ ಇಂಗ್ಲೆಂಡ್ನಲ್ಲೇ ಅತ್ಯಂತ ದೊಡ್ಡ ನಗರಗಲ್ಲಿ ಒಂದಾಗಿರುವ ಬೋಸ್ಟನ್ನಿನಲ್ಲಿ ಈ ನುಡಿಹಬ್ಬ ನಡೆಯಲಿದೆ.
ಮಂದಾರ - ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಹಾಗು ಹೊಯ್ಸಳ - ಕನೆಕ್ಟಿಕಟ್ ಕನ್ನಡ ಕೂಟಗಳ ಸಹಕಾರದೊಂದಿಗೆ ಜರುಗಲಿರುವ ಈ ವಿಶ್ವ ಕನ್ನಡ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಸಿದ್ದತೆ ಮಾಡಿಕೊಳ್ಳಲು ಹಾಗು ನಾವಿಕ ಸಂಸ್ಥೆಯ ಸ್ಥಾಪನೆಯ ಉದ್ದೇಶ ಹಾಗು ಚಟುವಟಿಕೆಗಳ ಬಗ್ಗೆ ವಿವರಿಸಲು ಕನೆಕ್ಟಿಕಟ್ನಲ್ಲಿನ ಶ್ರೀ ಸ್ವಾಮಿ ಸತ್ಯನಾರಾಯಣ ದೇವಸ್ಥಾನದಲ್ಲಿ ಸಭೆಯನ್ನು ಜೂನ್ 17ರಂದು ಡಾ. ರಾಜೂರ್ ಅವರ ನೇತೃತ್ವದಲ್ಲಿ ಕರೆಯಲಾಗಿತ್ತು. ನಾವಿಕದ ಪದಾಧಿಕಾರಿಗಳಾದ ಡಾ. ಕೃಪಾ ರಾಜೂರ, ಗುರು ಪ್ರಸಾದ್ ಹಾಗೂ ಪಲ್ಲವಿ ನಾಗೇಶ ಅವರು ಡಾ. ರಾಜೂರ್ ಅವರ ಜೊತೆಗೂಡಿ ಈ ಸಮಾವೇಶದ ಉದ್ದೇಶ ಹಾಗು ಯೋಜನೆಗಳನ್ನು ವಿವರಿಸಿದರು.

ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಕಲಾ ಪ್ರತಿಭೆಯನ್ನು ತೋರಲು ಹಾಗು ಕನ್ನಡನಾಡಿನಲ್ಲಿರುವ ಪ್ರಸಿದ್ದ ಕಲಾಕಾರರನ್ನು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳನ್ನು ಇಲ್ಲಿಗೆ ಆಹ್ವಾನಿಸಿ ಹೊರನಾಡ ಕನ್ನಡಿಗರಿಗೆ ಸಾಂಸ್ಕೃತಿಕ-ಕಲಾತ್ಮಕ ಮನೋರಂಜನೆ ನೀಡಲು ಹೊರಟಿರುವ ನಾವಿಕದ ಈ ಕಾರ್ಯಕ್ಕೆ ಸ್ವಯಂಸೇವಕರ ಕೈ ಕೊಡುಗೆ ಬಹಳ ಮುಖ್ಯ. ಅದಕ್ಕಾಗಿ ಹಣಕಾಸು, ಪ್ರಚಾರ, ಮನೋರಂಜನೆ, ಊಟದ ಮೇಲ್ವಿಚಾರಣೆ, ನೋಂದಣಿ - ಹೀಗೆ ಹಲವಾರು ತಂಡಗಳನ್ನು ಮಾಡಿ ಅವುಗಳ ಸದಸ್ಯರ ಪರಿಚಯದೊಂದಿಗೆ ಮತ್ತೆ ಹೊಸದಾಗಿ ಇನ್ನು ಹತ್ತು ಹಲವಾರು ಸ್ವಯಂಸೇವಕರನ್ನು ಭರ್ತಿ ಮಾಡಿಕೊಳ್ಳಲಾಯಿತು.
ಈ ಮಾಹಿತಿ ಸಭೆಗೆ ಮಂದಾರ ಕನ್ನಡ ಕೂಟದ ಸದಸ್ಯರು, ಹೊಯ್ಸಳ ಕನ್ನಡ ಕೂಟದ ಅಧ್ಯಕ್ಷ ವೇಣು ಗುಡ್ದೆರ ಹಾಗು ಹಲವಾರು ಸದಸ್ಯರು ಭಾಗವಹಿಸಿದ್ದಲ್ಲದೆ ಹಲವಾರು ಕಮಿಟಿಗಳಿಗೆ ಸ್ವಯಂ ಕಾರ್ಯಕರ್ತರಾಗಿ ನೊಂದಣಿ ಮಾಡಿಸಿದರು. ಎಲ್ಲರ ಮುಖದಲ್ಲಿ "ಕನ್ನಡ ಭಾಷಾಭಿಮಾನ, ಕನ್ನಡಕ್ಕಾಗಿ ಯಾವ ಸೇವೆಗಾದರು ನಾವು ಸಿದ್ದ" ಎಂಬ ಮನೋಭಾವ ಕಂಡು ಬರುತ್ತಿದ್ದರಲ್ಲಿ ಎರಡು ಮಾತಿಲ್ಲ. ಲಘು ಉಪಹಾರದೊಂದಿಗೆ ಈ ಚಿಕ್ಕ ಹಾಗು ಚೊಕ್ಕ ವಿಶ್ವ ಕನ್ನಡ ಸಮ್ಮೇಳನದ ಪೂರ್ವಭಾವಿ ಮಾಹಿತಿ ಕಾರ್ಯಕ್ರಮ ಮುಗಿದಾಗ ಸಂಜೆ ಏಳಾಗಿತ್ತು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : http://navika.org/2012/a_rajurmessage.php
ಸಂಪರ್ಕ : [email protected]
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications