ಸಿಡ್ನಿಯಲ್ಲಿ ಎಂಎಸ್ ಶೀಲಾ ಅಮೋಘ ಗಾಯನ

ಸುಮಾರು ನೂರು ನಿಮಿಷಗಳ ಕಚೇರಿ, ಜನ ಅತ್ತ ಇತ್ತ ನೋಡದೆ ಆಲಿಸಿದರು. ಭಗವಂತನನ್ನು ಕಳಕಳಿಯಿಂದ ಕೇಳಿಕೊಂಡಂಥ "ಓರಜೂಪು ಚೂಚೇದಿ ನ್ಯಾಯಮಾ" ಸಭಿಕರು ತಲೆದೂಗುವಂತೆ ಮಾಡಿತು. ಅವರು ನಿರೂಪಿಸಿದ "ಹಿಮಾದ್ರಿ ಸುತೆ" (ಕಲ್ಯಾಣಿ) ಮತ್ತು "ಪಕ್ಕಲನಿಲಬಡಿ" (ಖರಹರಪ್ರಿಯ) ನೆರುವಲ್ ಮತ್ತು ಸ್ವರಪ್ರಸ್ತಾರಗಳ ಮೂಲಕ ಸುಂದರವಾಗಿ ಮೂಡಿಬಂದವು.
ಮನಮುಟ್ಟುವ ನೇರ ಸಂಗೀತ ಅವರದ್ದು. ಅವರು "ಜಗದೋದ್ಧಾರನಾ" ಹಾಡಿದ್ದು ಎಂಎಸ್ ಸುಬ್ಬಲಕ್ಷ್ಮಿ ಅವರ ನೆನಪನ್ನು ತಂದುಕೊಟ್ಟಿತು. ನಂತರ ಅವರ "ರಂಗ ಬಾರೋ" ಜನರನ್ನು ಮತ್ತಾವುದೋ ನೆಲೆಗೆ ಕೊಂಡೊಯ್ಯಿತು. ಆಗ ಜನರ ಕಣ್ಣಲ್ಲಿ ಮೂಡಿದ ಕಣ್ಣೀರೇ ಕಚೇರಿಯ ಸಾರ್ಥಕತೆಗೆ ಸಾಕ್ಷಿ ಆಯಿತು. ಶೀಲಾ ಅವರು ಕರ್ನಾಟಕ ಸಂಗಿತದ ಮುಂಚೂಣಿ ಪ್ರದೇಶದಲ್ಲಿದ್ದಾರೆ ಎಂಬುದಕ್ಕೆ ಅವರ ಸಂಗೀತವೇ ಸಾಕ್ಷಿ.
ಇಂತಹ ಕಚೇರಿ ಕೇಳಿ ಕುಣಿದಾಡಿದವರು ಯಾರೆಂದು ನನ್ನನ್ನು ಕೇಳಬೇಡಿ. ಹತ್ತು ಹನ್ನೆರಡು ಜನ ಕನ್ನಡಿಗರನ್ನು ಬಿಟ್ಟರೆ ಮಿಕ್ಕವರೆಲ್ಲಾ ಕನ್ನಡೇತರರು. ಓರ್ವ ದೊಡ್ದ ಕಲಾವಿದರು ಬಂದು ಇಲ್ಲೇ ಒಂದು ವಾರವಿದ್ದರೂ ನಾವು (ಕನ್ನಡಿಗರು) ಗಮನಿಸದೇ ಹೋಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ; ಅದು ಸ್ವಾಭಾವಿಕ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications