ಸಿಡ್ನಿಯಲ್ಲಿ ಎಂಎಸ್ ಶೀಲಾ ಅಮೋಘ ಗಾಯನ

ಸುಮಾರು ನೂರು ನಿಮಿಷಗಳ ಕಚೇರಿ, ಜನ ಅತ್ತ ಇತ್ತ ನೋಡದೆ ಆಲಿಸಿದರು. ಭಗವಂತನನ್ನು ಕಳಕಳಿಯಿಂದ ಕೇಳಿಕೊಂಡಂಥ "ಓರಜೂಪು ಚೂಚೇದಿ ನ್ಯಾಯಮಾ" ಸಭಿಕರು ತಲೆದೂಗುವಂತೆ ಮಾಡಿತು. ಅವರು ನಿರೂಪಿಸಿದ "ಹಿಮಾದ್ರಿ ಸುತೆ" (ಕಲ್ಯಾಣಿ) ಮತ್ತು "ಪಕ್ಕಲನಿಲಬಡಿ" (ಖರಹರಪ್ರಿಯ) ನೆರುವಲ್ ಮತ್ತು ಸ್ವರಪ್ರಸ್ತಾರಗಳ ಮೂಲಕ ಸುಂದರವಾಗಿ ಮೂಡಿಬಂದವು.
ಮನಮುಟ್ಟುವ ನೇರ ಸಂಗೀತ ಅವರದ್ದು. ಅವರು "ಜಗದೋದ್ಧಾರನಾ" ಹಾಡಿದ್ದು ಎಂಎಸ್ ಸುಬ್ಬಲಕ್ಷ್ಮಿ ಅವರ ನೆನಪನ್ನು ತಂದುಕೊಟ್ಟಿತು. ನಂತರ ಅವರ "ರಂಗ ಬಾರೋ" ಜನರನ್ನು ಮತ್ತಾವುದೋ ನೆಲೆಗೆ ಕೊಂಡೊಯ್ಯಿತು. ಆಗ ಜನರ ಕಣ್ಣಲ್ಲಿ ಮೂಡಿದ ಕಣ್ಣೀರೇ ಕಚೇರಿಯ ಸಾರ್ಥಕತೆಗೆ ಸಾಕ್ಷಿ ಆಯಿತು. ಶೀಲಾ ಅವರು ಕರ್ನಾಟಕ ಸಂಗಿತದ ಮುಂಚೂಣಿ ಪ್ರದೇಶದಲ್ಲಿದ್ದಾರೆ ಎಂಬುದಕ್ಕೆ ಅವರ ಸಂಗೀತವೇ ಸಾಕ್ಷಿ.
ಇಂತಹ ಕಚೇರಿ ಕೇಳಿ ಕುಣಿದಾಡಿದವರು ಯಾರೆಂದು ನನ್ನನ್ನು ಕೇಳಬೇಡಿ. ಹತ್ತು ಹನ್ನೆರಡು ಜನ ಕನ್ನಡಿಗರನ್ನು ಬಿಟ್ಟರೆ ಮಿಕ್ಕವರೆಲ್ಲಾ ಕನ್ನಡೇತರರು. ಓರ್ವ ದೊಡ್ದ ಕಲಾವಿದರು ಬಂದು ಇಲ್ಲೇ ಒಂದು ವಾರವಿದ್ದರೂ ನಾವು (ಕನ್ನಡಿಗರು) ಗಮನಿಸದೇ ಹೋಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ; ಅದು ಸ್ವಾಭಾವಿಕ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications