ಕಾರ್ಯಕಾರಿಸಮಿತಿ ಆಯ್ಕೆಗೆ ಡಿ.14ರಂದು ‘ಕಾವೇರಿ’ಸಭೆ
ಹೊಸ ವರ್ಷ ಹೊಸಿತಿಲಲ್ಲಿರುವಂತೆಯೇ ಕನ್ನಡ ಸಂಘಗಳಲ್ಲಿ ವರ್ಷಾಂತ್ಯದ ವಿಧಿ ವಿಧಾನಗಳ ಚಟುವಟಿಕೆ ಜೋರಾಗಿದೆ. ಹಳೆಯ ಕಾರ್ಯಕಾರಿ ಸಮಿತಿಗೆ ವಿದಾಯ, ಹೊಸ ಕಾರ್ಯಕಾರಿ ಸಮಿತಿಯ ಆಯ್ಕೆ- ಇದೆಲ್ಲಾ ವರ್ಷಂಪ್ರತಿ ಆಗಲೇಬೇಕು. ಕನ್ನಡ ಚಟುವಟಿಕೆಗಳು ನಿರಂತರವಾಗಿರಬೇಕು.
ಅಮೆರಿಕೆಯ ಬಹು ಮುಖ್ಯ ಕನ್ನಡ ಸಂಘಗಳಲ್ಲೊಂದಾದ ವಾಷಿಂಗ್ಟನ್ ಡಿ.ಸಿ.ಯ ‘ಕಾವೇರಿ ಕನ್ನಡ ಸಂಘ’ ಕೂಡ ಹೊಸ ಕಾರ್ಯಕಾರಿ ಸಮಿತಿಯ ಆಯ್ಕೆಗೆ ಸಜ್ಜಾಗಿದೆ. ಬರುವ ಡಿಸೆಂಬರ್ 14 ರ ಶನಿವಾರ ಕಾವೇರಿ ಕನ್ನಡ ಸಂಘದ ಸರ್ವ ಸದಸ್ಯರ ಸಭೆ ನಡೆಯಲಿದೆ. 2002 ನೇ ಸಾಲಿನ ಕಾರ್ಯಕಾರಿ ಸಮಿತಿಯ ಸಾಧನೆಗಳ ಸಮೀಕ್ಷೆ, ವರ್ಷದ ವಿತ್ತ ವರದಿಯ ಮಂಡನೆ ಹಾಗೂ 2003 ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ- ಸರ್ವ ಸದಸ್ಯರ ಸಭೆಯ ಉದ್ದೇಶ.
ಡಿ.14, ಶನಿವಾರದ ಕಾರ್ಯಕ್ರಮದಲ್ಲಿ ಸ್ವಾದಿಷ್ಟ ಊಟವೂ ಒಂದಂಗವಾಗಿದೆ. ಕಾವೇರಿ ಸ್ವಯಂಸೇವಕರು ಈ ರಸಪಾಕವನ್ನು ಸಿದ್ಧಗೊಳಿಸುವರು.
ಶ್ರೀ ಶಿವ ವಿಷ್ಣು ದೇಗುಲದ ಸಭಾಂಗಣದಲ್ಲಿ ಸರ್ವ ಸದಸ್ಯರ ಸಭೆ ನಡೆಯಲಿದೆ, ಸಂಜೆ 5 ರಿಂದ ರಾತ್ರಿ 8 ರವರೆಗೆ. ಪ್ರವೇಶ ಶುಲ್ಕವಿಲ್ಲ.
(ಕಾವೇರಿ ವಾರ್ತೆ)
ಡಿ.8 ರಂದು ಭೂಮಿಕಾ ವಾರ್ಷಿಕ ಮಂಥನ :
‘ಭೂಮಿಕಾ’ ಬಳಗದ ವರ್ಷಾಂತ್ಯದ ಕೊನೆಯ ಕಾರ್ಯಕ್ರಮ ಡಿಸೆಂಬರ್ 8 ರ ಭಾನುವಾರ Bauer Community Center ನಲ್ಲಿ ನಡೆಯಲಿದೆ. ಮಧ್ಯಾಹ್ನ 2 ಕ್ಕೆ ಕಾರ್ಯಕ್ರಮ ಪ್ರಾರಂಭ. ಈ ವಾರ್ಷಿಕ ಮಂಥನ ಕಾರ್ಯಕ್ರಮದಲ್ಲಿ ಮುಕ್ತ ಸಲಹೆ-ಸೂಚನೆಗಳಿಗೆ ಸ್ವಾಗತ. ಇದೇ ಸಂದರ್ಭದಲ್ಲಿ ‘ಕರ್ನಾಟಕದ ಮೂಲಗಳು’ (Roots of Karnatakas) ವಿಷಯದ ಕುರಿತು ಡಾ.ನರೇಂದ್ರ ಕುಮಾರ್ ಉಪನ್ಯಾಸ ನೀಡುವರು.
(ಭೂಮಿಕಾ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications