ಕೆಸಿಎ ಅಧ್ಯಕ್ಷ ಗಾದಿಯ ವಿಶ್ವೇಶ್ವರ್ ದೀಕ್ಷಿತ್ ಜಾಗಕ್ಕೆ ಬಿ.ಎನ್.ನಾಗರಾಜ್
ಹಳೆನೀರು ಹೋಗುತ್ತದೆ. ಹೊಸನೀರು ಬರುತ್ತದೆ. ಹಸಿರಿಗೆ ಉಸಿರು ತುಂಬಿ ಬೀಗಿದ ಸಾರ್ಥಕ್ಯ ಹಳೆನೀರಿಗೆ. ಹಳೆನೀರನ್ನೂ ಮೀರಿಸಿ ಹಸಿರಿಗೆ ಜೀವಕಳೆ ತುಂಬುವೆನೆಂಬ ಅದಮ್ಯ ಉತ್ಸಾಹ ಹೊಸನೀರಿಗೆ. ಸಾಧನೆಯ ಹಾದಿಯಲ್ಲಿ ಹೊಸ- ಹಳೆ ನೀರಿನ ಹರಿವು ಬಹು ಮುಖ್ಯ. ದಕ್ಷಿಣ ಕ್ಯಾಲಿಫೋರ್ನಿಯಾದ ಕೆಸಿಎಗೂ ಈಗ ಹೊಸನೀರು ಬಂದಿದೆ. ಅರ್ಥಾತ್ ಹೊಸ ಆಫೀಸ್ ಬೇರರ್ಗಳ ದಂಡು ಜವಾಬ್ದಾರಿ ಹೊತ್ತು ನಿಂತಿದೆ; ಇನ್ನೆರಡು ವರ್ಷ (2002-04) ಕೈಂಕರ್ಯಕ್ಕೆ ಟೊಂಕ ಕಟ್ಟಿ.
ಏಪ್ರಿಲ್ 27ರಂದು ಚುನಾಯಿತರಾಗಿರುವ ಕೆಸಿಎ ಆಫೀಸ್ ಬೇರರ್ಗಳಿವರು. ಇವರಿಗೆ ದಟ್ಸ್ಕನ್ನಡ ಡಾಟ್ ಕಾಂನ ಶುಭಾಶಯಗಳು-
ಬಿ.ಎನ್.ನಾಗರಾಜ್- ಅಧ್ಯಕ್ಷ (ಫೋನ್ : (714) 441-1420
ವಿಜಯಾ ಕೊಟ್ರಪ್ಪ- ಉಪಾಧ್ಯಕ್ಷ (ಫೋನ್ : (909) 392-1454
ಲಕ್ಷ್ಮೀ ಕೃಷ್ಣಮೂರ್ತಿ- ಖಜಾಂಚಿ (ಫೋನ್ : (909) 899-4273)
ನಾಗನ ಗೌಡ- ಕಾಯದರ್ಶಿ (ಫೋನ್ : (310) 541-9293
ನಿರ್ದೇಶಕರು
ಜಯಂತಿ ರವಿಕುಮಾರ್ (ಫೋನ್ : (714) 838-8505
ಸೋಮಶೇಖರ್ ಹೊಸಕೆರೆ (ಫೋನ್ : (714) 964-0123
ಹರೀಶ್ ಕುಮಾರ್ (ಫೋನ್ : (714) 523-3463
ಜಗನ್ನಾಥ್ ಶಂಖಂ (ಫೋನ್ : (714) 832-2757
ರಮೇಶ್ ಬಸವಾಪಟ್ಣ (ಫೋನ್ : (562) 924-0406
ಹೊಸದಾಗಿ ಅಧ್ಯಕ್ಷ ಗಾದಿ ಏರಿರುವ ಬಿ.ಎನ್.ನಾಗರಾಜ್ ಅವರಲ್ಲಿ ತುಂಬು ಉತ್ಸಾಹ. ಕೆಸಿಎ ಸದಸ್ಯರ ಸಂಖ್ಯೆಯನ್ನು ಸಾಕಷ್ಟು ಏರಿಸುವ ಉಮೇದಿ ನಾಗರಾಜ್ ಅವರಿಗೆ.
ಅಧ್ಯಕ್ಷ ಗಾದಿಗೇರಿದ ನಾಗರಾಜ್ ಹೇಳುವುದೇನೆಂದರೆ....
ನಮಸ್ಕಾರ,
ಕೆಸಿಎ ಅಧ್ಯಕ್ಷ ಸ್ಥಾನವನ್ನು ನಾನು ತುಂಬು ವಿನಯದಿಂದ ಸ್ವೀಕರಿಸಿದ್ದೇನೆ. ಇದು ನನಗೆ ಸಿಕ್ಕಿರುವ ದೊಡ್ಡ ಗೌರವ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿನ ನಮ್ಮ ಕನ್ನಡ ಸಮೂಹಕ್ಕೆ ಅಳಿಲು ಸೇವೆ ಸಲ್ಲಿಸಲು ದೊರೆತಿರುವ ವಿಶೇಷ ಅವಕಾಶ. ಏನೇ ಮಾಡಬೇಕಿದ್ದರೂ ನಿಮ್ಮ ಸಹಾಯ ಬೇಕು ಎಂದು ಬೇರೆಯಾಗಿ ಹೇಳಬೇಕಿಲ್ಲ.
ಕೆಸಿಎಯ ಎಲ್ಲಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ನೀವೆಲ್ಲಾ ಭಾಗವಹಿಸಬೇಕು. ನಮ್ಮ ತಂಡದಲ್ಲಿ ಪ್ರತಿಭಾನ್ವಿತ ಹಾಗೂ ಚುರುಕುಮತಿಯ ನಿರ್ದೇಶಕರಿದ್ದಾರೆ. ಕನ್ನಡಿಗರಿಗೆ ಸೇವೆ ಸಲ್ಲಿಸಲು ನಾವು ಶತಾಯಗತಾಯ ಯತ್ನಿಸುತ್ತೇವೆ.
ಯುವಕರು, ಹಿರೀಕರು, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿಸಿ, ಕೆಸಿಎ ಒಗ್ಗಟ್ಟನ್ನು ಇನ್ನಷ್ಟು ಹೆಚ್ಚಿಸುವುದು ನನ್ನ ಬಹು ದಿನಗಳ ತುಡಿತ. ಈ ಗುರಿಯನ್ನು ನಾವು ಮುಟ್ಟಿಯೇ ತೀರುತ್ತೇವೆಂಬ ಅಚಲ ನಂಬಿಕೆ ನನ್ನದು.
ನಾವು ಇನ್ನಷ್ಟು ಮುಂದುವರೆಯಲು ನೆರವಾಗಬಲ್ಲ ನಿಮ್ಮ ಸಲಹೆಗಳಿಗೆ ಸುಸ್ವಾಗತ. ಯಾರ್ಯಾರು ಸಂಘದ ಸದಸ್ಯರಾಗಿಲ್ಲವೋ ಅಥವಾ ಆಜೀವ ಸದಸ್ಯರಾಗಿಲ್ಲವೋ, ಅಂಥವರು ಕೆಸಿಎ ಸದಸ್ಯತ್ವ ಪಡೆಯಿರಿ ಎಂದು ಈ ಸಂದರ್ಭದಲ್ಲಿ ಹೇಳಲಿಚ್ಛಿಸುತ್ತೇನೆ. ಸದಸ್ಯತ್ವದ ಶುಲ್ಕ- ಪ್ರತಿ ಕುಟುಂಬಕ್ಕೆ ವಾರ್ಷಿಕ 50 ಡಾಲರ್ಗಳು, ಆಜೀವ ಸದಸ್ಯತ್ವಕ್ಕೆ 500 ಡಾಲರ್ಗಳು.
ಕೆಸಿಎ ತನ್ನ ಚಟುವಟಿಕೆಗಳನ್ನು ಒಂದು ಪಿಕ್ನಿಕ್ ಮೂಲಕ ಪ್ರಾರಂಭಿಸಲಿದೆ. ಜುಲೈ 27ರ ಶನಿವಾರ ಎಲ್ಲ ಸೇರಿ ಪಿಕ್ನಿಕ್ ಹೋಗುವ ಕಾರ್ಯಕ್ರಮವಿದೆ. ವಿವರಗಳನ್ನು ಸದ್ಯದಲ್ಲೇ ಪ್ರತಿ ಸದಸ್ಯನಿಗೂ ಮುಟ್ಟಿಸಲಾಗುವುದು. ದಯವಿಟ್ಟು ಎಲ್ಲರೂ ಪಿಕ್ನಿಕ್ಗೆ ಬನ್ನಿ.
ಕೊನೆಯದಾಗಿ, ಈವರೆಗೆ ಅಧ್ಯಕ್ಷರಾಗಿದ್ದ ವಿಶ್ವೇಶ್ವರ ದೀಕ್ಷಿತ್ ಅವರಿಗೆ ನನ್ನ ಧನ್ಯವಾದಗಳು. ದೀಕ್ಷಿತ್ ಹಾಗೂ ಅವರ ತಂಡ ಕೆಸಿಎಗೆ ಸುಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ತಂಡದ ಕೆಲಸ ಶ್ಲಾಘನಾರ್ಹ.
ಮತ್ತೊಮ್ಮೆ ಧನ್ಯವಾದಗಳು. ನಿಮ್ಮೊಂದಿಗೆ ಕೆಲಸ ಮಾಡಲು ನಾನು ತೀವ್ರ ಉತ್ಸುಕನಾಗಿದ್ದೇನೆ.
ಬಿ.ಎನ್.ನಾಗರಾಜ್
901, ಆ್ಯಷ್ಟನ್ ಪ್ಲೇಸ್
ಫುಲ್ಲರ್ಟನ್, ಸಿಎ 92833-1401
ಟೆಲಿ ಫೋನ್ ಸಂಖ್ಯೆ- (714)441-1420
ಫ್ಯಾಕ್ಸ್ : (714)441-2716
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications