ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಮಲ್ಲಿಕಾರ್ಜುನ ಖರ್ಗೆ ಸಂತಾಪ
ವಿಜಯಪುರ, ಜನವರಿ, 02: ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಯವರು ಲಿಂಗೈಕ್ಯರಾದ ಸುದ್ದಿಯು ಅತ್ಯಂತ ದುಃಖದಾಯಕವಾಗಿದೆ. ಜನರ ಆಸ್ತಿಕ ಭಾವನೆಗಳು ಮೌಢ್ಯಗಳತ್ತ ಜಾರದಂತೆ ಆಧ್ಯಾತ್ಮಿಕ ಶಕ್ತಿ ತುಂಬಿ, ಸನ್ಮಾರ್ಗ ತೋರುತ್ತಾ, ಸಾಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಸದಾ ಲೋಕದ ಹಿತವನ್ನು ಬಯಸುತ್ತಿದ್ದ ಶ್ರೀಗಳನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಗಳ
ನಿಧನಕ್ಕೆ
ಸಿಎಂ
ಸಂತಾಪ
ಶ್ರೀಗಳ
ನಿಧನದ
ಹಿನ್ನೆಲೆಯಲ್ಲಿ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಮಂಗಳವಾರ
ಬೆಳಗ್ಗೆ
ವಿಜಯಪುರಕ್ಕೆ
ಆಗಮಿಸಲಿದ್ದಾರೆ.
ಅಲ್ಲದೆ
ಜಿಲ್ಲೆಯಲ್ಲಿರುವ
ಎಲ್ಲಾ
ಶಾಲಾ
ಕಾಲೇಜುಗಳಿಗೆ
ಜನವರಿ
03ರಂದು
ಮಂಗಳವಾರ
ರಜೆಯನ್ನು
ಘೋಷಿಸಲಾಗಿದೆ.
ಶ್ರೀಗಳ
ನಿಧನಕ್ಕೆ
ತೀವ್ರ
ಸಂತಾಪ
ವ್ಯಕ್ತಪಡಿಸಿರುವ
ಸಿಎಂ
ಬೊಮ್ಮಾಯಿ
ವಿಜಯಪುರದ
ಜ್ಞಾನ
ಯೋಗಾಶ್ರಮದ
ಪರಮ
ಪೂಜ್ಯ
ಶ್ರೀ
ಸಿದ್ದೇಶ್ವರ
ಸ್ವಾಮೀಜಿಯವರು
ಲಿಂಗೈಕ್ಯರಾದ
ಸುದ್ದಿ
ತಿಳಿದು
ಅತ್ಯಂತ
ದುಃಖವಾಗಿದೆ.
ಸಿದ್ದೇಶ್ವರ ಶ್ರೀ ನಿಧನ; ಜ. 3ರಂದು ವಿಜಯಪುರ ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ
ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ ಹಾಗೂ ಅನನ್ಯವಾದುದು ಎಂದು ಕಂಬನಿ ಮಿಡಿದಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಅಂತ್ಯಕ್ರಿಯೆ ಜರುಗಲಿದ್ದು, ಸೈನಿಕ ಶಾಲೆಯಲ್ಲಿ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ. ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸಚಿವ ಸಂಪುಟದ ಸದಸ್ಯರು ಸಹಿತ ವಿಜಯಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈಗಾಗಲೇ ಶ್ರೀಗಳ ಅಂತಿಮ ದರ್ಶನ ಪಡೆಯುವುದಕ್ಕೆ ವಿಜಯಪುರದ ಜ್ಞಾನಯೋಗಾಶ್ರಮದತ್ತ ಭಕ್ತರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ.