ಬಿಕೋ ಎನ್ನುತ್ತಿದೆ ಪೇಜಾವರ ಶ್ರೀಗಳ ನಗೆಯಿಲ್ಲದ ಮಠ
ಉಡುಪಿ, ಜನವರಿ 01: ಪೇಜಾವರ ಶ್ರೀಗಳು ಅಗಲಿ ಎರಡು ದಿನಗಳು ಸರಿದಿವೆ. ಅವರಿಲ್ಲದ ಪೇಜಾವರ ಮಠ ಅಕ್ಷರಶಃ ಬಿಕೋ ಅನ್ನುತ್ತಿದೆ. ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದ ಮಠದಲ್ಲಿ ಪೇಜಾವರರ ಇರುವಿಕೆಯಿಲ್ಲದೇ ಮೌನ ಆವರಿಸಿದೆ.
ಎಂಬತ್ತೊಂಬತ್ತರ ಹರೆಯದಲ್ಲೂ ಪಾದರಸದಂತೆ ಚುರುಕಾಗಿದ್ದ ಶ್ರೀಗಳು ಉಡುಪಿಯ ಪೇಜಾವರ ಮಠದಲ್ಲಿ ಮಕ್ಕಳಿಗೆ ನಿತ್ಯ ಪಾಠ ಮಾಡುತ್ತಿದ್ದರು. ದಿನವೂ ಅಲ್ಲಲ್ಲಿ ಪ್ರಯಾಣಿಸುತ್ತಿದ್ದರು. ಮತ್ತೆ ಮಠಕ್ಕೆ ವಾಪಸ್ಸಾಗಿ ಭಕ್ತರ ಜೊತೆ ಬೆರೆಯುತ್ತಿದ್ದರು. ಮಠದೊಳಗೆ ಪೂಜೆ, ತಪ ಎಂದು ನಿರಂತರ ಓಡಾಡುತ್ತಿದ್ದರು. ಆದರೆ ಶ್ರೀಗಳಿಲ್ಲದ ಮಠದಲ್ಲೀಗ ನೀರವ ಮೌನ...
ಪೇಜಾವರ ಶ್ರೀಗಳು ಎಲ್ಲಿಗೇ ಪ್ರಯಾಣಿಸಲಿ, ಏನೇ ಕಾರ್ಯಕ್ರಮ ಇಟ್ಟುಕೊಂಡಿರಲಿ, ಮಕ್ಕಳಿಗೆ ನಿತ್ಯದ ಪಾಠ ಮಾತ್ರ ತಪ್ಪಿಸುತ್ತಿರಲಿಲ್ಲ. ಕೆಲವು ಕಡೆಗಳಿಗೆ ಮಕ್ಕಳನ್ನು ಕಟ್ಟಿಕೊಂಡೇ ಹೋಗುತ್ತಿದ್ದರು. ಮಕ್ಕಳಿಗೆ ನಿತ್ಯ ತಾವೇ ಪಾಠ ಮಾಡಿದರೆ ಮಾತ್ರ ಅವರಿಗೆ ನೆಮ್ಮದಿ. ಈ ಮಕ್ಕಳೀಗ ಪೇಜಾವರ ಮಠದಲ್ಲಿ ಗುರುಗಳನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಮಠದ ಒಳಹೊಕ್ಕ ತಕ್ಷಣ ಜಪ, ಪೂಜೆ ನಿರತ ಪೇಜಾವರರು ಕಾಣಸಿಗುತ್ತಿದ್ದರು. ಅವರು ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಈಗ ಅವರ ಭಾವಚಿತ್ರ ಮಾತ್ರ ಕಾಣುತ್ತಿದೆ. ಯಾರೇ ಬರಲಿ, ಭಕ್ತರಿರಲಿ, ಮಕ್ಕಳಿರಲಿ, ವೃದ್ಧರಿರಲಿ ಎಲ್ಲರಿಗೂ ಭೇಟಿಯ ಅವಕಾಶ ನೀಡುತ್ತಾ ತುಂಬ ಸರಳವಾಗಿ ಬದುಕಿದ್ದವರು. ಶ್ರೀಗಳೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವವರು ಬಂದರೂ ಭೇಟಿಗೆ ಯಾವತ್ತೂ ಹಿಂದೇಟು ಹಾಕಿದವರಲ್ಲ.
ಮಠಾಧೀಶರು ಕೃಷ್ಣೈಕ್ಯರಾದ ಹನ್ನೆರಡು ಅಥವಾ ಹದಿಮೂರನೇ ದಿನಕ್ಕೆ ಆರಾಧನೆ ನಡೆಯುವುದು ಸಂಪ್ರದಾಯ. ಆದರೆ ಶ್ರೀಗಳ ಬೃಂದಾವನ ಬೆಂಗಳೂರಿನ ವಿದ್ಯಾಪೀಠದಲ್ಲಿರುವುದರಿಂದ ಪೇಜಾವರ ಮಠದಲ್ಲಿ ಅದು ನಡೆಯುವುದಿಲ್ಲ. ಹೀಗಾಗಿ ಮಠದಲ್ಲಿ ಯಾರೆಂದರೆ ಯಾರೂ ಇಲ್ಲ. ಅವರ ಆಪ್ತ ಸಹಾಯಕರು ಮತ್ತು ಅಡುಗೆಯವರು ಶ್ರೀಗಳನ್ನು ನೆನೆದು ದುಃಖಿಸುತ್ತಿದ್ದಾರೆ.

ಪೇಜಾವರ ಮಠ ಮಾತ್ರವಲ್ಲ, ಇಡೀ ರಥಬೀದಿಯೇ ಸ್ತಬ್ಧವಾದಂತೆ ಕಾಣುತ್ತಿದೆ. ಕೃಷ್ಣಮಠ ಅಂದರೆ ಪೇಜಾವರ ಶ್ರೀಗಳು, ಪೇಜಾವರ ಶ್ರೀಗಳೆಂದರೆ ಕೃಷ್ಣಮಠ ಎಂಬಷ್ಟು ಛಾಪು ಒತ್ತಿ ಮರೆಯಾದ ಶ್ರೀಗಳು ಇಂದು ನೆನಪಾಗಿ ಉಳಿದಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications