ಉಡುಪಿಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆ: ಸಾಕ್ಷಿ ಸಮೇತ ಅನಾವರಣಗೊಂಡ ದೈವ ಸಾನಿಧ್ಯ
ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರು ಗ್ರಾಮದ ಪರ್ಪೆಲೆಗಿರಿಯಲ್ಲಿ ಕಳೆದ ತಿಂಗಳ 26ರಿಂದ ಮೂರು ದಿನಗಳ ಕಾಲ ಸ್ವರ್ಣಾರೂಢ ಅಷ್ಟಮಂಗಲ ಪ್ರಶ್ನಾ ಚಿಂತನೆ ಧಾರ್ಮಿಕ ಕಾರ್ಯಕ್ರಮ ನಡೆದಿದೆ.
ಕೇರಳದ ಪಯ್ಯನೂರಿನ ದೈವಜ್ಞ ನಾರಾಯಣ ಪೊದುವಾಳ್ ನಡೆಸಿಕೊಟ್ಟ ಈ ಪ್ರಶ್ನಾ ಚಿಂತನೆಯ ನೇತೃತ್ವವನ್ನು ಹಿರಿಯ ಧಾರ್ಮಿಕ ಚಿಂತಕ ಹಿರಣ್ಯ ವೆಂಕಟೇಶ್ ಭಟ್ ವಹಿಸಿದ್ದರು. ಕಾರ್ಕಳದ ಹಿಂದೂ ಜಾಗರಣ ವೇದಿಕೆ ಮತ್ತು ಕೃಷ್ಣಗಿರಿ ಕಲ್ಕುಡ (ಕಲ್ಕುರ್ಟಿ) ದೈವಸ್ಥಾನ ಟ್ರಸ್ಟ್ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಹಲವು ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಕಳ ತಾಲೂಕಿನ ಅನೇಕ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಜೀರ್ಣೋದ್ದಾರ ಮಾಡಲು ಮುಂದಾದಾಗ ಪರ್ಪೆಲೆಗಿರಿಯಲ್ಲಿರುವ ದೈವಸ್ಥಾನವನ್ನು ಮೊದಲು ಪುನರುಥ್ಥಾನಗೊಳಿಸುವಂತೆ,ಅಷ್ಠಮಂಗಲ ಪ್ರಶ್ನೆಯ ವೇಳೆ, ಪೊದುವಾಳ್ ಅವರು ಸೂಚಿಸಿದ್ದಾರೆ.
ಅಷ್ಠಮಂಗಲಕ್ಕೆ ಹಾಕುವ ಮಂಡಲ, ಹೂವು, ಗಂಧ ಮತ್ತು ಪುಷ್ಪವನ್ನು ಒಂದು ತಟ್ಟೆಯಲ್ಲಿಟ್ಟು, ಅದರಲ್ಲಿ ಸಣ್ಣ ಚಿನ್ನವನ್ನು ಇಟ್ಟು, ಆ ತಟ್ಟೆಯನ್ನು ಬಾಲಕಿಯೊಬ್ಬಳ ಕೈಯಲ್ಲಿ ಕೊಟ್ಟು, ಮಂಡಲಕ್ಕೆ, ಬಾಲಕಿ ಮೂರು ಪ್ರದಕ್ಷಿಣಿ ಹಾಕುವ ಮೂಲಕ ಈ ಪ್ರಶ್ನಾ ಚಿಂತನೆ ಆರಂಭವಾಯಿತು. ಸಾಕ್ಷಿ ಸಮೇತ ಸಿಕ್ಕ ದೈವ ಸಾನಿಧ್ಯ, ಮುಂದೆ ಓದಿ...

ಹನ್ನೆರಡು ರಾಶಿಯ ಮಂಡಲದಲ್ಲಿ ಆ ತಟ್ಟೆಯನ್ನು ಇಡಲು ಬಾಲಕಿ ಇಡುತ್ತಾಳೆ
ಆನಂತರ, ಹನ್ನೆರಡು ರಾಶಿಯ ಮಂಡಲದಲ್ಲಿ ಆ ತಟ್ಟೆಯನ್ನು ಬಾಲಕಿ ಇಡುತ್ತಾಳೆ. ಬಾಲಕಿ ತನ್ನ ಇಚ್ಚೆಗೆ ಅನುಗುಣವಾಗಿ ಯಾವ ರಾಶಿಯ ಮಂಡಲದಲ್ಲಿ ಸ್ವರ್ಣವಿರುವ ತಟ್ಟೆಯನ್ನು ಇಡುತ್ತಾಳೋ (ಕನ್ಯಾ ರಾಶಿ) ಮತ್ತು ಅಷ್ಟಮಂಗಲ ಕವಡೆಯಲ್ಲಿ ಯಾವ ಸಂಖ್ಯೆ ಬರುತ್ತದೋ ಅದನ್ನು ಆಧರಿಸಿ ಈ ಪ್ರಶ್ನಾ ಚಿಂತನವನ್ನು ನಡೆಸಲಾಯಿತು.

ಸ್ತ್ರೀ ಚೈತನ್ಯಗಿಂತ ಪುರುಷ ಚೈತನ್ಯ ಪ್ರದಾನವಾದದ್ದು
ಕ್ಷೇತ್ರದಲ್ಲಿ ಸ್ತ್ರೀ ಚೈತನ್ಯಗಿಂತ ಪುರುಷ ಚೈತನ್ಯ ಪ್ರದಾನವಾದದ್ದು. ದೈವಗಳ ಸಂಬಂಧದಲ್ಲಿ ಕಲ್ಕುಡ, ದೇವರ ಸಂಬಂಧದಲ್ಲಿ ಈಶ್ವರನ ಫಲದಾನ ಈ ಭೂಮಿಯಲ್ಲಿ ಹೆಚ್ಚು ಎಂದು ಪೊದುವಾಳ್ ಅವರು ಹೇಳಿದ್ದಾರೆ. ದೈವಕ್ಕೆ ಹಲವು ಕಡೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಕೆಯಾಗಿ, ಮೂಲಸ್ಥಾನದಲ್ಲಿ ಸರಿಯಾಗಿ ಪೂಜೆಯಾಗದಿದ್ದರೆ, ಇಡೀ ಸೀಮೆಗೇ ಆಪತ್ತು ಎಂದು ಪ್ರಶ್ನೆಯಲ್ಲಿ ಉತ್ತರ ಬಂದಿದೆ.

ಹಿಂದೆ ಈ ಸೀಮೆಯಲ್ಲಿದ್ದವರೂ ಭಾಗವಹಿಸಬೇಕು
ಹಾಗಾಗಿ, ಇದನ್ನು ಸರಿಪಡಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಸೀಮೆಯಲ್ಲಿ ದೈವಕ್ಕೆ ಸರಿಯಾದ ಪೂಜೆ ಸಲ್ಲಿಕೆಯಾಗದೇ ಇರುವುದರಿಂದ, ಸುಖ, ನಿದ್ದೆಯಿಲ್ಲದೇ ಇರುವುದು, ಆರೋಗ್ಯ ಸಮಸ್ಯೆ, ಪರಿಸರಕ್ಕೆ ಸಂಬಂಧಿಸಿದಂತೆ ತೊಂದರೆ ಇದೆ. ಪ್ರಾಕಾರ, ಗೋಪುರ, ಪ್ರತಿಷ್ಥೆ, ಕುಂಭಾಬಿಷೇಕ ನಡೆಯಬೇಕು. ಈ ಎಲ್ಲಾ ಕೆಲಸಗಳಲ್ಲಿ ಹಿಂದೆ ಈ ಸೀಮೆಯಲ್ಲಿದ್ದವರೂ ಭಾಗವಹಿಸಬೇಕು ಎಂದು ಪೊದುವಾಳ್ ಹೇಳಿದ್ದಾರೆ.

ದೈವಗಳ ಸಾನಿದ್ಯವಿದೆ ಈ ಸೀಮೆಯಲ್ಲಿದೆ
ದೈವಗಳ ಸಾನಿದ್ಯ ಈ ಸೀಮೆಯಲ್ಲಿದೆ ಎಂದು ಪೂರ್ವಿಕರು ಹೇಳುತ್ತಾ ಬರುತ್ತಿದ್ದರು. ಈ ಸಂಗತಿ ಅಷ್ಟಮಂಗಲ ಪ್ರಶ್ನೆಯ ವೇಳೆಯೂ ಬಂದಿದೆ. ಜೊತೆಗೆ, ಈ ಭಾಗದಲ್ಲಿರುವ ಗುಹೆಗಳ ವಿಷಯಗಳೂ ಕುತೂಹಲವನ್ನು ಹುಟ್ಟುಹಾಕಿದೆ. ಈ ಗುಹೆಯಲ್ಲಿ ಖುಷಿಮುನಿಗಳು ತಪಸ್ಸನ್ನು ಆಚರಿಸುತ್ತಿದ್ದರು ಎನ್ನುವ ವಿಷಯ ಪ್ರಶ್ನೆಯ ವೇಳೆ ಬಂದಿದೆ.
Recommended Video

ಅಜ್ಞಾತ ಶಕ್ತಿ ಈ ಗುಹೆಯೊಳಗೆ ಇದೆ ಎನ್ನುವ ವಿಚಾರ
ಗುಹೆಯೊಳಗೆ ಎರಡು ಬಾವಿ ಇರುವುದು, ಒಂದು ಬಾವಿಯಲ್ಲಿ ಶಿವನ ಲಿಂಗ, ಬೆಲೆಬಾಳುವ ವಸ್ತುಗಳು ಇವೆ, ಜೊತೆಗೆ ಕಾಳಿಂಗ ಸರ್ಪವಿದೆ ಎನ್ನುವ ವಿಚಾರವೂ ಪ್ರಶ್ನೆಯ ವೇಳೆ ಹೊರಗೆ ಬಂದಿದೆ. ನೀರು ಬತ್ತದ ಬಾವಿ ಇದಾಗಿದ್ದು, ಇದರ ನೀರನ್ನು ಕುಡಿದರೆ ಚರ್ಮರೋಗಕ್ಕೆ ಪರಿಹಾರವಿದೆ. ಅಜ್ಞಾತ ಶಕ್ತಿ ಈ ಗುಹೆಯೊಳಗೆ ಇದೆ ಎನ್ನುವ ವಿಚಾರವೂ ಪ್ರಶ್ನೆಯ ವೇಳೆ ಹೊರಗೆ ಬಂದಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications