ಕುದುರೆ ಏರಿ ಪರೀಕ್ಷೆಗೆ ಹೊರಟ ವಿದ್ಯಾರ್ಥಿನಿಗೆ ಆನಂದ್ ಮಹೀಂದ್ರಾ ಉಘೇ!
ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಈ ವಿದ್ಯಾರ್ಥಿನಿ ಈಗ ಇಂಟರ್ ನೆಟ್ ನಲ್ಲಿ ಭರ್ಜರಿ ಸುದ್ದಿ ಆಗಿದ್ದಾಳೆ. ಹತ್ತನೇ ತರಗತಿ ಪರೀಕ್ಷೆ ಬರೆಯುವ ಸಲುವಾಗಿ ಈ ವಿದ್ಯಾರ್ಥಿನಿ ತಾನು ಸ್ವತಃ ಕುದುರೆ ಓಡಿಸಿಕೊಂಡು ತೆರಳಿದ್ದಾಳೆ. ಹಾಗೆ ತೆರಳುವ ವೇಳೆ ಆ ದೃಶ್ಯದ ವಿಡಿಯೋ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾಗಿದೆ. ಇದಕ್ಕೆ ಅಪಾರ ಪ್ರಮಾಣದ ಲೈಕ್ಸ್ ಬಂದು, ಶೇರ್ ಆಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆದರೆ, ಎಲ್ಲಕ್ಕಿಂತ ವಿಶಿಷ್ಟ ಹಾಗೂ ಆಸಕ್ತಿಕರ ಏನೆಂದರೆ, ಆ ವಿಡಿಯೋವನ್ನು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಗಮನವನ್ನೂ ಸೆಳೆದಿದೆ. ಈ ವಿದ್ಯಾರ್ಥಿನಿಯನ್ನು 'ಹೀರೋ' ಎಂದು ಮನಸಾರೆ ಹೊಗಳಿರುವ ಅವರು, ಶಿಕ್ಷಣದ ಬಗ್ಗೆ ಆಕೆಗಿರುವ ಬದ್ಧತೆಯನ್ನು ಮೆಚ್ಚುಗೆ ಸೂಚಿಸಿದ್ದಾರೆ.
This video clip from my #whatsappwonderbox shows how a girl student is going to write her Class X final exam in Thrissur district, Kerala. This story made my Sunday morning brew of @arakucoffeein taste better! After all, ARAKU coffee is about #cupofchange #GirlPower @NanhiKali pic.twitter.com/45zOeFEnwV
— Manoj Kumar (@manoj_naandi) 7 April 2019
ಮನೋಜ್ ಕುಮಾರ್ ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂದಿಕೊಂಡಿದ್ದಾರೆ. ಈ ವಿಡಿಯೋ ಕ್ಲಿಪ್ ನನ್ನ ವಾಟ್ಸ್ ಅಪ್ ವಂಡರ್ ಬಾಕ್ಸ್ ನದು. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಹೇಗೆ ಹೋಗುತ್ತಾಳೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಆನಂದ್ ಮಹೀಂದ್ರಾ ಅವರು ಈ ವಿಡಿಯೋವನ್ನು ಮೆಚ್ಚಿಕೊಂಡು, ಇದು ಜಾಗತಿಕ ಮಟ್ಟದಲ್ಲಿ ವೈರಲ್ ಆಗಬೇಕು. ತ್ರಿಶೂರ್ ನಲ್ಲಿ ಈ ವಿದ್ಯಾರ್ಥಿನಿ ಬಗ್ಗೆ ಯಾರಿಗಾದರೂ ಗೊತ್ತಿದೆಯಾ? ಆಕೆ ಮತ್ತು ಕುದುರೆಯ ಭಾವಚಿತ್ರ ನನಗೆ ಬೇಕು ಮತ್ತು ಅದನ್ನು ಸ್ಕ್ರೀನ್ ಸೇವರ್ ಆಗಿ ಮಾಡಿಕೊಳ್ಳುತ್ತೇನೆ. ಆಕೆ ನನ್ನ ಹೀರೋ ಎಂದು ಹೊಗಳಿದ್ದಾರೆ.
ಆನಂದ್ ರ ಮನವಿಗೆ ಪ್ರತಿಕ್ರಿಯೆ ಸಿಕ್ಕಿದ್ದು, ಆ ವಿದ್ಯಾರ್ಥಿನಿ ಹೆಸರು ಕೃಷ್ಣಾ ಹಾಗೂ ಆಕೆ ಕುದುರೆ ಹೆಸರು ರಾಣಾಕೃಷ್ ಎಂದು ಹೇಳಲಾಗಿದೆ.












Click it and Unblock the Notifications