Get Updates
Get notified of breaking news, exclusive insights, and must-see stories!

ಕೋವಿಡ್ ಸಾವನ್ನು ಪಿಣರಾಯಿ ವಿಜಯನ್ ಮರೆ ಮಾಚಿದ್ದಾರೆ: UDF

ತಿರುವನಂತಪುರಂ, ಅಕ್ಟೋಬರ್ 09: ಕೊರೊನಾ ಸಾವಿನ ಸಂಖ್ಯೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮರೆ ಮಾಚಿದ್ದಾರೆ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರೋಪಿಸಿದೆ.

ಅಷ್ಟೇ ಅಲ್ಲದೆ ಸಿಎಂ ಐಸಿಎಂಆರ್ ಮಾರ್ಗಸೂಚಿಯನ್ನೂ ಉಲ್ಲಂಘಿಸಿದ್ದಾರೆ ಎಂದು ಹೇಳಿ ಯುಡಿಎಫ್ ವಿಧಾನಸಭೆಯಿಂದ ಹೊರನಡೆದಿದೆ.

ಈ ಕುರಿತು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿ, ಆಸ್ಪತ್ರೆಗಳಲ್ಲಿ ಕೊರೊನಾದಿಂದ ಮೃತಪಟ್ಟವರ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೊದಲೇ ಸುಮಾರು 7 ಸಾವಿರಕ್ಕೂ ಅಧಿಕ ಸಾವು ಸಂಭವಿಸಿದೆ ಎಂದರು.

Congress-led UDF Accuses Kerala CM Pinarayi Vijayan Of Hiding COVID-19 Deaths

ಈ ವರ್ಷದ ಜೂನ್ ತಿಂಗಳಿನಲ್ಲಿ ಆಸ್ಪತ್ರೆಗಳು ಆನ್‌ಲೈನ್‌ನಲ್ಲಿ ಕೊರೊನಾದಿಂದ ಮೃತಪಟ್ಟಿರುವವರ ಸಂಖ್ಯೆಯನ್ನು ಅಪ್‌ಲೋಡ್ ಮಾಡಲು ಆರಂಭಿಸಿದವು.

ಕೇರಳದಲ್ಲಿ ಕೋವಿಡ್ ಸಾವುಗಳನ್ನು ಕಡಿಮೆ ವರದಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಪ್ರತಿಭಟನೆ ಮಾಡುತ್ತಿರುವ ಬೆನ್ನಲ್ಲೇ ಈಗ,ರಾಜ್ಯ ಸರ್ಕಾರವು ಶುಕ್ರವಾರ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ ಇನ್ನೂ 7,000 ಜನರನ್ನು ತನ್ನ ಅಧಿಕೃತ ಸಾವಿನ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಿದೆ.

ಆಸ್ಪತ್ರೆಗಳು ಆನ್‌ಲೈನ್‌ನಲ್ಲಿ ಇಂತಹ ಸಾವಿನ ಡೇಟಾವನ್ನು ಅಪ್‌ಲೋಡ್ ಮಾಡಲು ಆರಂಭಿಸುವ ಮುನ್ನ ಸಂಭವಿಸಿದ ಇನ್ನೂ 7,000 ಸಾವುಗಳನ್ನು ರಾಜ್ಯದಲ್ಲಿ COVID ಸಾವಿನ ಪಟ್ಟಿಗೆ ಸೇರಿಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.ಈ ವರ್ಷದ ಜೂನ್‌ನಲ್ಲಿ ಆಸ್ಪತ್ರೆಗಳು COVID-19 ಸಾವುಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು ಪ್ರಾರಂಭಿಸಿದವು.

ಈ ಸಾವುಗಳನ್ನು ದಾಖಲಿಸಲಾಗಿಲ್ಲ ಮತ್ತು ಅಧಿಕೃತ ಸಾವಿನ ಪಟ್ಟಿಗೆ ಸೇರಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಶುಕ್ರವಾರ ಈ ವಿಷಯವು ವಿಧಾನಸಭೆಯಲ್ಲಿ ಪ್ರಸ್ತಾಪವಾದಾಗ, ಸಚಿವರು ವಿರೋಧ ಪಕ್ಷದ ಆರೋಪವನ್ನು ತಿರಸ್ಕರಿಸಿದರು.

ಕೇಂದ್ರದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಕೋವಿಡ್ ಡೆತ್ ಅಸೆಸ್ಮೆಂಟ್ ಕಮಿಟಿಗಳನ್ನು ಸ್ಥಾಪಿಸಿದ ರಾಜ್ಯಗಳಲ್ಲಿ ಕೇರಳ ಮೊದಲನೆಯದು ಮತ್ತು ಸಂತ್ರಸ್ತರ ಕುಟುಂಬ ಸದಸ್ಯರಿಗೆ ಕೋವಿಡ್ ಮರಣ ಪ್ರಮಾಣಪತ್ರಗಳನ್ನು ಯಾವುದೇ ತೊಂದರೆಗಳಿಲ್ಲದೆ ಒದಗಿಸಲು ಕ್ರಮಗಳನ್ನು ಸರ್ಕಾರ ಚುರುಕುಗೊಳಿಸಿದೆ ಎಂದು ಜಾರ್ಜ್ ಹೇಳಿದರು.

ಸಾಂಕ್ರಾಮಿಕ ಸಾವುಗಳ ಪಟ್ಟಿಯಲ್ಲಿ ಸೇರ್ಪಡೆಯಾಗದವರ ಕುಟುಂಬ ಸದಸ್ಯರಿಗೆ ಆನ್‌ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಲು ಸಹಾಯ ಮಾಡಲು ಹೊಸ ಮಾಹಿತಿ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ವಿರೋಧ ಪಕ್ಷದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸದಸ್ಯರು ಮುಂದೂಡುವಂತೆ ಕೋರಿದ ನೋಟಿಸ್‌ಗೆ ಉತ್ತರಿಸುವಾಗ ಹೇಳಿದರು.

ಡಿಜಿಟಲ್ ಮೂಲಕ ಅರ್ಜಿ ಸಲ್ಲಿಸಲು ಯಾವುದೇ ತೊಂದರೆ ಎದುರಿಸುತ್ತಿರುವವರು ತಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಅವರು ಹೇಳಿದರು."ನೋಂದಾಯಿತ ಕುಟುಂಬಗಳ ಕಳವಳಗಳನ್ನು ಮುಂದಿನ 30 ದಿನಗಳಲ್ಲಿ ಪರಿಹರಿಸಲಾಗುವುದು" ಎಂದು ಜಾರ್ಜ್ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+