ಭದ್ರಾವತಿಯಲ್ಲಿ ಎರಡು ಪ್ರತ್ಯೇಕ ಅಹಿತಕರ ಘಟನೆ, ಬಿಗುವಿನ ವಾತಾವರಣ
ಶಿವಮೊಗ್ಗ, ನವೆಂಬರ್, 14: ಎರಡು ಪ್ರತ್ಯೇಕ ಅಹಿತಕರ ಘಟನೆಯಲ್ಲಿ ಭದ್ರಾವತಿಯಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ವಾಟ್ಸಪ್ ಸ್ಟೇಟಸ್ ವಿಚಾರವಾಗಿ ಜಗಳವಾಗಿದ್ದು, ಯುವಕನೊಬ್ಬನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ಮತ್ತೊಂದೆಡೆ ಮತ್ತೊಬ್ಬ ಯುವಕನ ಕೈಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ.
ಶಿವಮೊಗ್ಗ ಡಿಸಿ ಕಚೇರಿ ಮುಂದೆ ಬೈಕಿಗೆ ಬೆಂಕಿ ಹಚ್ಚಿ ಯುವಕನ ಆಕ್ರೋಶ
ಸ್ಟೇಟಸ್
ವಿಚಾರವಾಗಿ
ಕಿರಿಕ್
ಮೊದಲನೇ
ಗಲಾಟೆ
ಪಟ್ಟಣದ
ಗಾಂಧಿ
ಸರ್ಕಲ್ನಲ್ಲಿ
ಸಂಭವಿಸಿದೆ.
ಹರೀಶ್,
ಗೌತಮ್
ಮತ್ತು
ಜಹೀರ್
ಎಂಬುವವರ
ನಡುವೆ
ಗಲಾಟೆ
ಆಗಿದೆ.
ಜಹೀರ್
ಸೋಶಿಯಲ್
ಮೀಡಿಯಾದಲ್ಲಿ
ಗೌತಮ್
ಎಂಬಾತನ
ಸ್ಟೇಟಸ್ಗೆ
ಕೆಟ್ಟದಾಗಿ
ಕಮೆಂಟ್
ಮಾಡಿದ್ದ
ಎಂದು
ತಿಳಿದುಬಂದಿದೆ.
ಕಳೆದ
ಕೆಲವು
ದಿನಗಳ
ಹಿಂದೆ
ಈ
ಘಟನೆ
ನಡೆದಿದ್ದು,
ಈ
ಹಿನ್ನೆಲೆ
ಭಾನುವಾರ
ರಾತ್ರಿ
ಕಲ್ಲಿನಿಂದ
ಹೊಡೆದುಕೊಳ್ಳಲಾಗಿದೆ
ಎಂದು
ತಿಳಿದುಬಂದಿದೆ.
ಗೌತಮ್ ಮತ್ತು ಹರೀಶ್, ಜಹೀರ್ ಮೇಲೆ ಕಲ್ಲು ತೂರಿದ್ದಾರೆ. ಆಗ ಜಗಳ ಆಗಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ತಕ್ಷಣ ಗಾಯಗೊಂಡಿದ್ದ ಮೂವರನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹರೀಶ್, ಗೌತಮ್ ಮತ್ತು ಜಹೀರ್ ಬಹಳ ದಿನಗಳಿಂದ ಸ್ನೇಹಿತರಾಗಿದ್ದರು. ಇದು ಕೋಮು ಗಲಭೆಯಲ್ಲ. ತನಿಖೆ ನಡೆಯುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆ
ಮುಂಭಾಗ
ಯುವಕನಿಗೆ
ಚಾಕು
ಇರಿತ
ಇನ್ನೊಂದು
ಘಟನೆ
ಸರಕಾರಿ
ಆಸ್ಪತ್ರೆ
ಮುಂಭಾಗದಲ್ಲಿ
ನಡೆದಿದ್ದು,
ರಿಜ್ವಾನ್
ಎಂಬಾತನಿಗೆ
ಚಾಕುವಿನಿಂದ
ಚುಚ್ಚಿ
ದುಷ್ಕರ್ಮಿಗಳು
ಪರಾರಿ
ಆಗಿದ್ದಾರೆ.
ಯಾವ
ಕಾರಣಕ್ಕಾಗಿ
ಕೃತ್ಯ
ಎಸಗಲಾಗಿದೆ
ಎನ್ನುವುದು
ಇನ್ನು
ತಿಳಿದುಬಂದಿಲ್ಲ.
ಪೊಲೀಸರು
ತನಿಖೆ
ನಡೆಸುತ್ತಿದ್ದಾರೆ.
ಘಟನೆಯ
ಬಳಿಕ
ಆಸ್ಪತ್ರೆಯ
ಬಳಿ
ಸೇರಿದ್ದ
ಉದ್ರಿಕ್ತ
ಗುಂಪನ್ನು
ಪೊಲೀಸರು
ಚದುರಿಸಿದ್ದಾರೆ.
ಸದ್ಯ
ಪರಿಸ್ಥಿತಿ
ನಿಯಂತ್ರಣದಲ್ಲಿದೆ.
ಪೊಲೀಸರು
ಎರಡು
ಪ್ರತ್ಯೇಕ
ಪ್ರಕರಣಗಳನ್ನು
ದಾಖಲು
ಮಾಡಿಕೊಂಡು
ತನಿಖೆ
ನಡೆಸುತ್ತಿದ್ದಾರೆ.
ಸದ್ಯ
ಭದ್ರಾವತಿ
ಪಟ್ಟಣದಲ್ಲಿ
ಪರಿಸ್ಥಿತಿ
ತಿಳಿಯಾಗಿದೆ.
ಮುಂಜಾಗ್ರತ
ಕ್ರಮವಾಗಿ
ಪೊಲೀಸ್
ಭದ್ರತೆ
ಕೈಗೊಳ್ಳಲಾಗಿದೆ.