Get Updates
Get notified of breaking news, exclusive insights, and must-see stories!

ಮುಂಬರಲಿರುವ ಚುನಾವಣೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲ್ಲ: ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ

ರಾಮನಗರ, ಮೇ 18: ರಾಜ್ಯದಲ್ಲಿ ಮುಂಬರುವ 2024ರ ಲೋಕಸಭಾ ಇಲ್ಲವೇ 2028ರ ವಿಧಾನಸಭಾ ಚುನಾವಣೆ ಬಗ್ಗೆ ನಾನು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ರಾಮನಗರದ ಪರಾಜಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಚನ್ನಪಟ್ಟಣದಲ್ಲಿ ಗುರುವಾರ ಮಾತನಾಡಿದ ಅವರು, ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ನಿಖಿಲ್ ಪ್ರಸಕ್ತ ವಿಧಾನಸಭೆಯಲ್ಲೂ ಸೋತರು. ಆದರೆ ತಾನು ಕ್ಷೇತ್ರ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದಿರುವ ಅವರು, ಮುಂಬರಲಿರುವ ಲೋಕಸಭೆ ಮತ್ತು 2028ರ ವಿಧಾನಸಭೆ ಚುನಾವಣೆ ಬಗ್ಗೆ ನಿರ್ಧರಿಸುವುದಿಲ್ಲ ಎಂದು ಹೇಳಿದ್ದಾರೆ.

Not Decided To Contest Next Lok Sabha Elections, 2028 Assembly Election: Nikhil Kumaraswamy

ಅಧಿಕಾರ ಇಲ್ಲದಿದ್ದರೂ ಇಲ್ಲಿನ ಜನರಿಗೆ ಸೇವೆ ಮಾಡುತ್ತೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸರ್ಧೆ ಮಾಡುವ ವಿಚಾರ ಚಿಂತನೆ, ಪ್ರಶ್ನೆ ನನ್ನಲ್ಲಿ ಇಲ್ಲ. ಸದ್ಯ ತಂದೆ ಎಚ್‌.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆ ಬಗ್ಗೆ ರಾಜ್ಯದ ಜನತೆಗೆ ತಿಳಿಸುವ ಒತ್ತಡದಲ್ಲಿದ್ದರು. ಹೀಗಿದ್ದರೂ ಸಹ ಚನ್ನಪಟ್ಟಣ ಜನ ನಮ್ಮನ್ನು ಕೈ ಬಿಡಲಿಲ್ಲ ಎಂದು ಮತದಾರರಿಗೆ ಅವರು ಅಭಿನಂದನೆ ತಿಳಿಸಿದರು.

ರಾಮನಗರದಲ್ಲಿ ಸೋತರು ಜನ ಅಪಾರ ಪ್ರೀತಿ ಕೊಟ್ಟಿದ್ದಾರೆ

ಚುನಾವಣೆ ಅಂದಮೇಲೆ ಅಲ್ಲಿ ಯಾರದರೂ ಒಬ್ಬರು ಗೆಲ್ಲಲೇಬೇಕು. ಸೋತ ಮಾತ್ರಕ್ಕೆ ನಾನು ಮನೆ ಸೇರುವ ವ್ಯಕ್ತಿಯಲ್ಲ.

ಯಾವ ಕಾರಣಕ್ಕೂ ರಾಮನಗರ ಬಿಡುವ ಪ್ರಶ್ನೆಯೇ ಇಲ್ಲ, ಕಾರ್ಯಕರ್ತರು ಎದೆಗುಂದಲೂ ನಾನು ಬಿಡುವುದಿಲ್ಲ. ನನಗೆ ರಾಮನಗರದಲ್ಲಿ 76 ಸಾವಿರಕ್ಕೂ ಹೆಚ್ಚು ಮತಗಳನ್ನು ಜನ‌ ನೀಡಿದ್ದಾರೆ. ತಾಂತ್ರಿಕವಾಗಿ ನಾನು ಚುನಾವಣೆಯಲ್ಲಿ‌ ಸೋತಿರಬಹುದು ಆದರೆ, ಕ್ಷೇತ್ರದ ಜನರು ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

Not Decided To Contest Next Lok Sabha Elections, 2028 Assembly Election: Nikhil Kumaraswamy

ನನಗೆ ನೋವುಂಟಾದ ವಿಚಾರವೆಂದರೆ, 2004 ರಿಂದಲೂ ಕುಮಾರಸ್ವಾಮಿ ಅವರು ರಾಮನಗರ ದಿಂದ ಸ್ಪರ್ಧೆ ಮಾಡಿದ್ದಾರೆ. ಅಲ್ಲಿಂದ ಈವರೆಗೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದರೆ ಜನರು ಚುನಾವಣೆಯಲ್ಲಿ ಮಾತ್ರ ಬೇರೆಯದ್ದೇ ನಿರ್ಧಾರ ಕೈಗೊಂಡಿದ್ದಾರೆ. ಕಳೆದ ಬಾರಿ ಮಂಡ್ಯದಲ್ಲಾದಂತೆ ರಾಮನಗರದಲ್ಲಿಯೂ ಆಗಿದೆ ಎಂದು ಚುನಾವಣಾ ಅನುಭವ ಹಂಚಿಕೊಂಡರು.

ಜನರ ದಾರಿ ತಪ್ಪಿಸಿದ್ದಾರೆಂದು ಆರೋಪ

ಕಾಂಗ್ರೆಸ್‌ನಲ್ಲಿ ಯಾರು (ಒಕ್ಕಲಿಗ) ಸಿಎಂ ಆಗಬೇಕು ಎಂಬುದು ಅದು ಕಾಂಗ್ರೆಸ್ ಪಕ್ಷದೊಳಗಿನ ವಿಚಾರ, ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ರಾಮನಗರದಲ್ಲಿ ಆರ್ಥಿಕವಾಗಿ ಹಿಂದೂಳಿದವರ ಮತ ಪಡೆಯಲು ಮಧ್ಯರಾತ್ರಿ ಕೂಪನ್ ಓಚರ್ ಕೊಟ್ಟು ಅವರನ್ನು ದಾರಿ ತಪ್ಪಿಸಿದ್ದಾರೆ. ಜನರಿಗೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಅರಿವಾಗಲಿದೆ ಎಂದು ಆರೋಪಿಸಿದರು.

ಎಚ್‌.ಡಿ.ದೇವೇಗೌಡರು ಕಟ್ಟಿರುವ ಪಕ್ಷವನ್ನ ಬಲಿಷ್ಠಗೊಳಿಸುವ ಚಿಂತನೆ ನಡೆಸುತ್ತಿದ್ದೇನೆ. 2028ಕ್ಕೆ ರಾಮನಗರದಲ್ಲಿ ನನಗಿಂತ ಪ್ರಬಲ ಅಭ್ಯರ್ಥಿ ಕಣಕ್ಕಿಳಿಯಲು ಸಿದ್ಧವಿದ್ದರೆ ಆ ಬಗ್ಗೆ ಆಗ ಕಾರ್ಯಕರ್ತರಲ್ಲಿ ಚರ್ಚಿಸುತ್ತೇನೆ. ನಿಷ್ಠಾವಂತ ಕಾರ್ಯಕರ್ತರು ರಾಮನಗರದ ಜಿಲ್ಲೆಯ ಚನ್ನಪಟ್ಟಣದಲ್ಲೇ ಹೆಚ್ಚಿದ್ದಾರೆ. ರಾಮನಗರದ ಸೋಲಿನ ವಿಚಾರದ ಬಗ್ಗೆ ಪಕ್ಷಾತೀತವಾಗಿ ಜನ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+