ಆರ್ಡರ್ ಮಾಡಿದ್ದೊಂದು ಪಿಜ್ಜಾ, ಮನೆಗೆ ಬಂದಿದ್ದೇ ಬೇರೆ; ಕೋಟಿ ರೂ ಪರಿಹಾರ ಕೇಳಿದ ಮಹಿಳೆ
ನವದೆಹಲಿ, ಮಾರ್ಚ್ 13: ತಾನು ಸಸ್ಯಾಹಾರಿ ಪಿಜ್ಜಾಗೆ ಆರ್ಡರ್ ಮಾಡಿದ್ದು, ಮಾಂಸಾಹಾರಿ ಪಿಜ್ಜಾ ನೀಡಲಾಗಿದೆ ಎಂದು ಮಹಿಳೆಯೊಬ್ಬರು ಅಮೆರಿಕ ಮೂಲದ ಪಿಜ್ಜಾ ರೆಸ್ಟೊರೆಂಟ್ ಮೇಲೆ ದೂರು ನೀಡಿದ್ದು, ಈ ತಪ್ಪಿಗೆ ಒಂದು ಕೋಟಿ ಪರಿಹಾರ ನೀಡಬೇಕೆಂದು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಅಷ್ಟಕ್ಕೂ ಈ ಸಂಗತಿ ನಡೆದಿರುವುದು ಒಂದು ವರ್ಷದ ಹಿಂದೆ. ಉತ್ತರ ಪ್ರದೇಶದ ಘಾಜಿಬಾದ್ ನಿವಾಸಿ ದೀಪಾಲಿಯವರು 2019ರ ಮಾರ್ಚ್ 21ರಂದು ರೆಸ್ಟೊರೆಂಟ್ ನಿಂದ ಪಿಜ್ಜಾ ಆರ್ಡರ್ ಮಾಡಿದ್ದರು. ಆದರೆ ಅವರ ಮನೆಗೆ ತಪ್ಪಾಗಿ ಮಾಂಸಾಹಾರಿ ಪಿಜ್ಜಾ ನೀಡಲಾಗಿತ್ತು.
ಈ ಬಗ್ಗೆ ವಿವರಣೆ ನೀಡಿರುವ ದೀಪಾಲಿ, "ಅಂದು ಹೋಲಿ ಹಬ್ಬವಿದ್ದು, ಹಬ್ಬದ ಆಚರಣೆ ನಂತರ ನಮ್ಮ ಕುಟುಂಬದವರಿಗೆ ತುಂಬಾ ಹಸಿವಾಗಿತ್ತು. ಹೀಗಾಗಿ ಸಸ್ಯಾಹಾರಿ ಪಿಜ್ಜಾ ಆರ್ಡರ್ ಮಾಡಿದ್ದೆವು. ಆದರೆ 30 ನಿಮಿಷ ತಡವಾಗಿ ಡೆಲಿವರಿ ಮಾಡಲಾಗಿದೆ. ಅದನ್ನೂ ಕ್ಷಮಿಸಿ, ಹಸಿವಾಗಿದ್ದರಿಂದ ಪಿಜ್ಜಾ ತಿನ್ನಲು ಶುರು ಮಾಡಿದೆವು. ಆದರೆ ಬಾಯಿಗೆ ಇಟ್ಟ ನಂತರ ಅದು ಮಾಂಸಾಹಾರಿ ಎಂದು ತಿಳಿಯಿತು. ಅಣಬೆ ಬದಲು ಅದರಲ್ಲಿ ಮಾಂಸದ ತುಂಡುಗಳನ್ನು ಇಡಲಾಗಿತ್ತು" ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಕ್ಷಣವೇ ಕಸ್ಟಮರ್ ಕೇರ್ಗೆ ಕರೆ ಮಾಡಿದ್ದು, ದೂರು ನೀಡಿದೆ. ಆನಂತರ ಮಾರ್ಚ್ 26ರಂದು ಪಿಜ್ಜಾ ರೆಸ್ಟೊರೆಂಟ್ ನಿರ್ದೇಶಕರು ಕರೆ ಮಾಡಿ, ತಮ್ಮ ಔಟ್ಲೆಟ್ನಿಂದ ಇಡೀ ಕುಟುಂಬಕ್ಕೆ ಉಚಿತವಾಗಿ ಪಿಜ್ಜಾ ನೀಡುವುದಾಗಿ ತಿಳಿಸಿದರು. ಇದು ಸಾಮಾನ್ಯ ವಿಷಯವಲ್ಲ. ನಮ್ಮ ಧಾರ್ಮಿಕ ನಂಬಿಕೆಗಳನ್ನೇ ಕಂಪನಿ ಹಾಳು ಮಾಡಿದೆ. ಶಾಶ್ವತವಾಗಿ ಮಾನಸಿಕ ನೋವನ್ನು ನೀಡಿದೆ. ಈ ಪಾಪವನ್ನು ತೊಳೆದುಕೊಳ್ಳಲು ಹಲವು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ಹಣ ಖರ್ಚಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕಾಗಿ ಒಂದು ಕೋಟಿ ರೂಪಾಯಿ ಪರಿಹಾರವನ್ನು ಕೇಳಿದ್ದಾರೆ.
ದೆಹಲಿ ಜಿಲ್ಲಾ ಗ್ರಾಹಕ ನ್ಯಾಯಾಲಯ, ಮಹಿಳೆಯ ದೂರಿಗೆ ಉತ್ತರಿಸುವಂತೆ ಪಿಜ್ಜಾ ರೆಸ್ಟೊರೆಂಟ್ಗೆ ಸೂಚಿಸಿದ್ದು, ಮಾರ್ಚ್ 17ಕ್ಕೆ ವಿಚಾರಣೆ ಮುಂದೂಡಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications