ಪ್ರತಿಯೊಬ್ಬ ರೈತ, ಕಾರ್ಮಿಕನೂ ಇಲ್ಲಿ ಸತ್ಯಾಗ್ರಹಿ: ರಾಹುಲ್ ಗಾಂಧಿ
ನವದೆಹಲಿ, ಜನವರಿ 03: ಪ್ರತಿಯೊಬ್ಬ ರೈತ, ಕಾರ್ಮಿಕನೂ ಇಲ್ಲಿ ಸತ್ಯಾಗ್ರಹಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರೈತರ ಪ್ರತಿಭಟನೆಯನ್ನು ರಾಹುಲ್ ಗಾಂಧಿ ಚಂಪಾರನ್ ಪ್ರತಿಭಟನೆಗೆ ಹೋಲಿಸಿದ್ದಾರೆ.ರಾಜಧಾನಿ ದೆಹಲಿಯ ಗಡಿಭಾಗದಲ್ಲಿ ಮುಂದುವರಿದಿರುವ ರೈತರ ಪ್ರತಿಭಟನೆಯನ್ನು ಬ್ರಿಟಿಷ್ ಆಡಳಿತ ಸಮಯದಲ್ಲಿ ನಡೆದ ಚಂಪಾರನ್ ಪ್ರತಿಭಟನೆಗೆ ಹೋಲಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈಗ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ರೈತರೂ ಸತ್ಯಾಗ್ರಹಿಯಾಗಿದ್ದು ಅವರ ಹಕ್ಕುಗಳನ್ನು ಅವರು ಪಡೆದೇ ತೀರುತ್ತಾರೆ ಎಂದಿದ್ದಾರೆ.
ಆದರೆ, ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ರೈತ ಕಾರ್ಮಿಕನೂ ಕೂಡ ಸತ್ಯಾಗ್ರಹಿಯಾಗಿದ್ದು ಅವರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ, ಅದನ್ನು ಅವರು ಪಡೆದೇ ತೀರುತ್ತಾರೆ ಎಂದಿದ್ದಾರೆ.

ಚಂಪಾರನ್ ರೀತಿಯ ದುರಂತವನ್ನು ದೇಶ ಎದುರಿಸಲಿದೆ. ಆ ಸಮಯದಲ್ಲಿ ಬ್ರಿಟಿಷರು ಕಂಪೆನಿ ಬಹದ್ದೂರರಾಗಿದ್ದರೆ, ಇಂದು ಮೋದಿ ಮತ್ತು ಅವರ ಸ್ನೇಹಿತರು ಕಂಪೆನಿ ಬಹದ್ದೂರರಾಗಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಕೇಂದ್ರದ ಎನ್ ಡಿಎ ಸರ್ಕಾರವನ್ನು ತಿವಿದಿದ್ದಾರೆ.
देश एक बार फिर चंपारन जैसी त्रासदी झेलने जा रहा है।
— Rahul Gandhi (@RahulGandhi) January 3, 2021
तब अंग्रेज कम्पनी बहादुर था, अब मोदी-मित्र कम्पनी बहादुर हैं।
लेकिन आंदोलन का हर एक किसान-मज़दूर सत्याग्रही है जो अपना अधिकार लेकर ही रहेगा।
ರೈತರ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸುತ್ತಲೇ ಬಂದಿದ್ದು, ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿದೆ.
ಬಿಹಾರ ರಾಜ್ಯದ ಚಂಪಾರನ್ ಜಿಲ್ಲೆಯಲ್ಲಿ ಬ್ರಿಟಿಷರ ವಸಾಹತುಶಾಹಿ ಆಡಳಿತ ವಿರುದ್ಧ ರೈತರು ನಡೆಸಿದ್ದ ಪ್ರತಿಭಟಟನೆಯನ್ನು ಚಂಪಾರನ್ ಚಳವಳಿ ಎಂದು ಕರೆಯಲಾಗುತ್ತದೆ.
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ 1917ರ ಚಂಪಾರನ್ ಸತ್ಯಾಗ್ರಹ ಪ್ರಮುಖವಾದದ್ದು. ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ಚಂಪಾರನ್ ಸತ್ಯಾಗ್ರಹ ನಡೆದಿದ್ದು, ಭಾರತದ ಇತಿಹಾಸದಲ್ಲಿ ಪ್ರಮುಖವಾದದ್ದಾಗಿದೆ.












Click it and Unblock the Notifications