ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ನವದೆಹಲಿ, ನವೆಂಬರ್ 26: ಫುಟ್ಬಾಲ್ ದಂತಕಥೆ, ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
"ಅವರ ಫುಟ್ಬಾಲ್ ವೃತ್ತಿ ಜೀವನದುದ್ದಕ್ಕೂ ಅವರು ಮೈದಾನದಲ್ಲಿ ಕೆಲವು ಅತ್ಯುತ್ತಮ ಕ್ರೀಡಾ ಕ್ಷಣಗಳನ್ನು ನಮಗೆ ನೀಡಿದ್ದರು. ಅವರ ಅಕಾಲಿಕ ಸಾವು ನಮ್ಮೆಲ್ಲರನ್ನೂ ದುಃಖಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಪ್ರಧಾನಿ ಹೇಳಿದ್ದಾರೆ.
ಕೊಕೇನ್ ಬಳಕೆ ಮತ್ತು ಸ್ಥೂಲಕಾಯದೊಂದಿಗೆ ಹೋರಾಡುವ ಮುನ್ನ ಅರ್ಜೆಂಟೀನಾದ ಮರಡೋನಾ ಅವರು ಶ್ರೇಷ್ಠ ಆಟಗಾರರಾಗಿದ್ದರು. 1986 ರ ವಿಶ್ವಕಪ್ ಪ್ರಶಸ್ತಿಯಲ್ಲಿ ತನ್ನ ದೇಶವನ್ನು ಮುನ್ನಡೆಸಿದ್ದ ಡಿಯಾಗೋ ಮರಡೋನಾ ಅವರು ನವೆಂಬರ್ 25 ರ ಬುಧವಾರ ನಿಧನರಾಗಿದ್ದು, ಅವರಿಗೆ 60 ವರ್ಷ ವಯಸ್ಸಾಗಿತ್ತು.

ಡಿಯಾಗೋ ಮರಡೋನಾ ಅವರ ನಿಧನದಿಂದಾಗಿ ಅರ್ಜೆಂಟೀನಾ ಅಧ್ಯಕ್ಷರ ಕಚೇರಿ ಮೂರು ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ತೀರ್ಪು ನೀಡಿದ್ದು ಮತ್ತು ಅರ್ಜೆಂಟೀನಾದ ಸಾಕರ್ ಅಸೋಸಿಯೇಷನ್ ಟ್ವಿಟರ್ನಲ್ಲಿ ತನ್ನ ದುಃಖವನ್ನು ವ್ಯಕ್ತಪಡಿಸಿದೆ. ಮರಡೋನಾ ಅವರ ಮಿದುಳಿನ ಶಸ್ತ್ರಚಿಕಿತ್ಸೆಯ ನಂತರ ಬ್ಯೂನಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಎರಡು ವಾರಕ್ಕೆ ನಿಧನರಾಗಿದ್ದಾರೆ.
1986ರ ವಿಶ್ವಕಪ್ ಕ್ವಾರ್ಟರ್ ಫೈನಲ್ನಲ್ಲಿ ಚೆಂಡನ್ನು ಇಂಗ್ಲೆಂಡ್ನ ಬಲೆಗೆ ಹೊಡೆದ "ಹ್ಯಾಂಡ್ ಆಫ್ ಗಾಡ್' ಗೋಲಿಗೆ ಹೆಸರು ವಾಸಿಯಾಗಿದ್ದ ಮರಡೋನಾ, ಎರಡು ದಶಕಗಳ ತಮ್ಮ ವೃತ್ತಿಜೀವನದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಮೋಡಿ ಮಾಡಿದ್ದರು.
ಮರಡೋನಾ ಅವರ ವ್ಯಸನಗಳಿಂದಾಗಿ ಮತ್ತು ರಾಷ್ಟ್ರೀಯ ತಂಡದ ಉಸ್ತುವಾರಿ ವಹಿಸಿಕೊಂಡಿದ್ದರಿಂದ ಅವರ ಖ್ಯಾತಿಗೆ ಕಳಂಕ ಬಂದಿದ್ದರೂ, ಅವರು ಸಾಕರ್-ಹುಚ್ಚು ಅರ್ಜೆಂಟೀನಾದಲ್ಲಿ "ಪೈಬೆ ಡಿ ಓರೊ" ಅಥವಾ "ಗೋಲ್ಡನ್ ಬಾಯ್' ಎಂದು ಪೂಜಿಸಲ್ಪಟ್ಟಿದ್ದರು.
ಅವರು ಧರಿಸಿದ್ದ ಸಂಖ್ಯೆ 10 ನಂಬರಿನ ಜೆರ್ಸಿ ಅವರೊಂದಿಗೆ ಸಮಾನಾರ್ಥಕವಾದಂತಿತ್ತು. ಇದು ಬ್ರೆಜಿಲ್ ನ ಮಹಾನ್ ಆಟಗಾರ ಪೀಲೆ ಹಾಗೂ ಮರಡೋನಾರನ್ನು ಸಾರ್ವಕಾಲಿಕ ಅತ್ಯುತ್ತಮ ಜೋಡಿ ಎಂದು ಕರೆಯಲಾಗುತ್ತದೆ.
ವೇಗವಾದ ಮತ್ತು ಸಂಪೂರ್ಣ ಅನಿರೀಕ್ಷಿತ ದಾಳಿಯ ಮಾಸ್ಟರ್ ಆಗಿದ್ದ ಮರಡೋನಾ, ಚೆಂಡನ್ನು ಸುಲಭವಾಗಿ ಕಣ್ಕಟ್ಟು ಮಾಡಿದಂತೆ ಅವರು ಇನ್ನೊಬ್ಬರಿಗೆ ಕಳಿಸುತ್ತಿದ್ದರು.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications