Winter Session Day 10 Roundup:ಕಲಾಪದ ಪ್ರಮುಖಾಂಶಗಳು
ನವದೆಹಲಿ, ಡಿಸೆಂಬರ್ 10: ಸಂಸತ್ ಚಳಿಗಾಲದ ಅಧಿವೇಶನ ಹತ್ತು ದಿನಕ್ಕೆ ತಲುಪಿದೆ. ಲೋಕಸಭೆಯಲ್ಲಿ ಕೋವಿಡ್ ಬೂಸ್ಟರ್ ಡೋಸ್ ವಿಷಯದ ಮೂಲಕ ಕಲಾಪ ಆರಂಭವಾಗಿತ್ತು. ಜತೆಗೆ ಹವಾಮಾನ ವೈಪರೀತ್ಯ, ಪರಿಹಾರ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬಂದವು.
ಇನ್ನು ರಾಜ್ಯಸಭೆಯಲ್ಲಿ ಕಲಾಪಗಳು ಸುಸೂತ್ರವಾಗಿ ನಡೆದವು. ಯಾವುದೇ ಪ್ರತಿಭಟನೆಗಳು ಇರಲಿಲ್ಲ. ತಮಿಳುನಾಡಿನಲ್ಲಿ ಡಿಸೆಂಬರ್ 08ರಂದು ಸೇನಾ ಹೆಲಿಕಾಪ್ಟರ್ ಪತನದಲ್ಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ ಒಟ್ಟು 13 ಮಂದಿ ಮೃತಪಟ್ಟಿದ್ದರು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಿನ್ನೆಲೆಯಲ್ಲಿ ವಿರೋಧಪಕ್ಷಗಳು ಪ್ರತಿಭಟನೆಯನ್ನು ಹಿಂಪಡೆದಿದ್ದವು.
ನವೆಂಬರ್ 29ರಿಂದ ಚಳಿಗಾಲದ ಅಧಿವೇಶನ ಶುರುವಾಗಿದ್ದು, ಇದೇ ಮೊದಲ ಬಾರಿಗೆ ವಿರೋಧ ಪಕ್ಷ ನಾಯಕರು ಪ್ರತಿಭಟನೆ ನಡೆಸದೆ ಶಾಂತವಾಗಿ ವರ್ತಿಸಿದ್ದಾರೆ. ಗ್ಲಾಸ್ಕೋದಲ್ಲಿ ನಡೆದ ಹವಾಮಾನ ವೈಪರಿತ್ಯ ಕುರಿತ ಶೃಂಗಸಭೆಯಲ್ಲಿ 2070ರೊಳಗೆ ನೆಟ್ ಝೀರೋ ಎಮಿಷನ್ ಗುರಿಯನ್ನು ನಿಗದಿಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಲಾಯಿತು.

ಭಾರತ ಸರ್ಕಾರವು ವಾರಕ್ಕೂ ಮುನ್ನ ಶೂನ್ಯ ನಿವ್ವಳ ಗುರಿಯನ್ನು ಘೋಷಿಸಲು ಒಲವು ತೋರಿಲ್ಲ. ನಿವ್ವಳ ಶೂನ್ಯ ಅಥವಾ ಇಂಗಾಲದ ತಟಸ್ಥಗೊಳಿಸುವಿಕೆ ಎಂದರೆ ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಪ್ರಮಾಣಕ್ಕೆ ಹೊರಸೂಸುವಿಕೆಗಳನ್ನು ಸೇರಿಸದೇ ಇರುವುದಾಗಿದೆ.
ಗ್ಲಾಸ್ಗೋ ಶೃಂಗಸಭೆಯಲ್ಲಿ ಭಾರತವು ಮೊದಲ ಬಾರಿಗೆ ನಿವ್ವಳ ಶೂನ್ಯ ಗುರಿ ನಿಗದಿಪಡಿಸಿದ ಪ್ರತಿಜ್ಞೆಯನ್ನು ಮೋದಿಯವರು ಮಾಡಿದ್ದಾರೆ. ಇದೇ ಸಮಯದಲ್ಲಿ ಚೀನಾ 2060ರ ವೇಳೆಗೆ ಇಂಗಾಲದ ತಟಸ್ಥತೆಯ ಯೋಜನೆಗಳನ್ನು ಘೋಷಿಸಿದ್ದು ಅಮೆರಿಕ ಹಾಗೂ ಯುರೋಪಿಯನ್ ಯೂನಿಯನ್ ಈ ಗುರಿಯನ್ನು 2050ರ ವೇಳೆಗೆ ಸಾಧಿಸುವ ಗುರಿ ಪ್ರಕಟಪಡಿಸಿವೆ.
ರೈತರ ಪ್ರತಿಭಟನೆಯಲ್ಲಿ ಪೊಲೀಸರ ಕ್ರಮದಿಂದ ಯಾವ ರೈತರೂ ಮೃತಪಟ್ಟಿಲ್ಲ: ರೈತರ ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ವರ್ಷಗಳಟ್ಟಲೆ ನಡೆಸಿದ್ದ ಪ್ರತಿಭಟನೆಯಲ್ಲಿ ಪೊಲೀಸರ ಕ್ರಮದಿಂದಾಗಿ ಯಾವ ರೈತನೂ ಮೃತಪಟ್ಟಿಲ್ಲ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಉನ್ನತ ಸಚಿವರ ಜತೆ ಪ್ರಧಾನಿ ಮೋದಿ ಸಭೆ: ಸಂಸತ್ನಲ್ಲಿ ಉನ್ನತ ಸಚಿವರ ಜತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಚಳಿಗಾಲದ ಸಂಸತ್ ಅಧಿವೇಶನ ಕುರಿತು ಮಾಹಿತಿ ಕೇಳಿದ್ದಾರೆ. ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಚಿವ ಅನುರಾಗ್ ಠಾಕೂರ್, ಪೀಯುಷ್ ಗೋಯಲ್ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು.
108 ದೇಶಗಳು ಭಾರತೀಯ ಕೊರೊನಾ ಲಸಿಕೆ ಪ್ರಮಾಣಪತ್ರ ಅಂಗೀಕರಿಸಿವೆ:
ಭಾರತೀಯ ಕೋವಿಡ್-19 ಲಸಿಕೆ ಪ್ರಮಾಣಪತ್ರವನ್ನು ಪ್ರಯಾಣದ ಉದ್ದೇಶಕ್ಕಾಗಿ ಒಟ್ಟು 108 ದೇಶಗಳು ಅಂಗೀಕರಿಸಿವೆ ಎಂದು ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಲೋಕಸಭೆಗೆ ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಯ ಪಟ್ಟಿ(EUL) ಗುಣಮಟ್ಟ, ಸುರಕ್ಷತೆ, ದಕ್ಷತೆ ಮತ್ತು ಕಾರ್ಯಕ್ಷಮತೆಯ ಕುರಿತು ಲಭ್ಯವಿರುವ ದತ್ತಾಂಶಗಳ ಅಗತ್ಯ ಗುಂಪಿನ ಆಧಾರದ ಮೇಲೆ ನಿರ್ದಿಷ್ಟ ಲಸಿಕೆಗಳನ್ನು ಬಳಸುವ ಸ್ವೀಕಾರಾರ್ಹತೆಯನ್ನು ನಿರ್ಧರಿಸಲು ಆಸಕ್ತಿ ಹೊಂದಿರುವ ಯುಎನ್ ಸದಸ್ಯ ರಾಷ್ಟ್ರಗಳು ಮತ್ತು ದೇಶಗಳಿಗೆ ಸಹಾಯ ಮಾಡುತ್ತದೆ ಎಂದು ಪವಾರ್ ಲಿಖಿತವಾಗಿ ತಿಳಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಿಂದ ಪೀಡಿತ ಜನರಿಗೆ ಈ ಉತ್ಪನ್ನಗಳ ಆದಷ್ಟು ಬೇಗ ಸಿಗುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಕೋವಿಡ್ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಮತ್ತು ನಿರ್ವಹಿಸಲು ದೇಶಗಳು ತಮ್ಮದೇ ಆದ ನಿಯಂತ್ರಕ ಅನುಮೋದನೆಯನ್ನು ತ್ವರಿತಗೊಳಿಸಲು ಅನುಮತಿಸುತ್ತದೆ ಎಂದು ಅವರು ಹೇಳಿದರು.
ಡಬ್ಲ್ಯುಎಚ್ಒ-ಇಯುಎಲ್ ಅಡಿಯಲ್ಲಿ ಪಟ್ಟಿ ಮಾಡಲಾದ ಅಂತಹ ಲಸಿಕೆಗಳನ್ನು ಹಾಕಿಸಿಕೊಂಡವರನ್ನು ಅನೇಕ ದೇಶಗಳ ಅಧಿಕಾರಿಗಳು ರಕ್ಷಿಸುತ್ತಾರೆ ಜೊತೆಗೆ ಅಂತಾರಾಷ್ಟ್ರೀಯವಾಗಿ ಪ್ರಯಾಣಿಸಲು ಅನುಮತಿಸುತ್ತಾರೆ ಎಂದು ಪವಾರ್ ಹೇಳಿದರು












Click it and Unblock the Notifications