ಬೌದ್ಧ ಸಾಹಿತ್ಯ, ಧರ್ಮಗ್ರಂಥಗಳ ಗ್ರಂಥಾಲಯ ರೂಪಿಸಲು ಮೋದಿ ಪ್ರಸ್ತಾಪ
ನವದೆಹಲಿ, ಡಿಸೆಂಬರ್ 21: ಪುರಾತನ ಬೌದ್ಧ ಸಾಹಿತ್ಯ ಹಾಗೂ ಧರ್ಮ ಗ್ರಂಥಗಳಿಗೆ ಭಾರತದಲ್ಲಿ ಗ್ರಂಥಾಲಯ ರೂಪಿಸುವ ಪ್ರಸ್ತಾವವನ್ನು ಸೋಮವಾರ ನರೇಂದ್ರ ಮೋದಿ ಜಪಾನ್ ಸರ್ಕಾರದ ಮುಂದಿಟ್ಟಿದ್ದಾರೆ.
ಭಾರತ-ಜಪಾನ್ ಸಂವಾದ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಭಾರತದಲ್ಲಿ ಬೌದ್ಧ ಧರ್ಮದ ಕುರಿತ ಸಾಹಿತ್ಯ, ಧರ್ಮಗ್ರಂಥಗಳಿಗೆ ಗ್ರಂಥಾಲಯ ರೂಪಿಸಬೇಕು. ಭಾರತ ಇದಕ್ಕೆ ಅಗತ್ಯ ಸಹಕಾರ ನೀಡಲು ಸಿದ್ಧ" ಎಂದು ಪ್ರಸ್ತಾವ ಇಟ್ಟಿದ್ದಾರೆ. ಸಂವಾದ್ ಕಾರ್ಯಕ್ರಮದ ಮೂಲಕ ಭಾರತಕ್ಕೆ ನಿರಂತರ ಬೆಂಬಲ ನೀಡುತ್ತಿರುವುದಕ್ಕೆ ಜಪಾನ್ ಸರ್ಕಾರಕ್ಕೆ ಧನ್ಯವಾದವನ್ನೂ ಅರ್ಪಿಸಿದ್ದಾರೆ.
ಸಮಕಾಲೀನ ಸವಾಲುಗಳಿಗೆ ಪೂರಕವಾಗಿ ಈ ಆಧುನಿಕ ಜಗತ್ತಿನಲ್ಲಿ ಬುದ್ಧನ ಸಂದೇಶಗಳನ್ನು ಹೇಗೆ ಅನ್ವಯಿಸಬಹುದು ಎಂಬುದನ್ನು ಗ್ರಂಥಾಲಯ ಸಂಶೋಧನಾ ವಿಭಾಗವು ಒಳಗೊಳ್ಳಬೇಕು. ವಿವಿಧ ದೇಶಗಳಲ್ಲಿರುವ ಬೌದ್ಧ ಸಾಹಿತ್ಯದ ಡಿಜಿಟಲ್ ಪ್ರತಿಗಳನ್ನು ಗ್ರಂಥಾಲಯಕ್ಕೆ ತರಿಸಿಕೊಳ್ಳಲಾಗುವುದು. ಎಲ್ಲಾ ಬೌದ್ಧ ಭಿಕ್ಷುಗಳಿಗೆ ಹಾಗೂ ವಿದ್ವಾಂಸರಿಗೆ ಉಚಿತವಾಗಿ ದೊರೆಯುವಂತೆ ಭಾಷಾಂತರವನ್ನೂ ಮಾಡುವ ಗುರಿಯಿದೆ ಎಂದು ತಿಳಿಸಿದರು.

ಬುದ್ಧನ ಸಿದ್ಧಾಂತ, ತತ್ವಗಳನ್ನು ಜಗತ್ತಿಗೆ ಸಾರುವಲ್ಲಿ, ಅದರಲ್ಲೂ ಯುವಜನತೆಗೆ ತಲುಪಿಸುವಲ್ಲಿ ನಿರತರಾಗಿರುವ ವೇದಿಕೆಯ ಕಾರ್ಯವನ್ನು ಶ್ಲಾಘಿಸಿದರು. "ಭಾರತದಿಂದ ವಿಶ್ವದೆಲ್ಲೆಡೆ ಬುದ್ಧನ ಜ್ಞಾನದ ಬೆಳಕು ಆವರಿಸಿದೆ" ಎಂದರು.
ಈ ಒಂದು ಪ್ರಯಾಣದಲ್ಲಿ ಸಂವಾದ್, ತಮ್ಮ ಮೂಲ ಗುರಿಗಳನ್ನು ಪ್ರಾಮಾಣಿಕವಾಗಿ ಮುನ್ನಡೆಸುತ್ತಿದೆ. ಬೌದ್ಧ ಧರ್ಮದ ಸಂದೇಶಗಳ ಕುರಿತ ಚರ್ಚೆಯನ್ನು ಉತ್ತೇಜಿಸುವ, ಸಿದ್ಧಾಂತಗಳನ್ನು ಸಾರುವ, ಪ್ರಾಚೀನ ಸಿದ್ಧಾಂತ, ಆಧ್ಯಾತ್ಮ ಹಾಗೂ ವಿದ್ವತ್ಪೂರ್ಣ ಅನುಭವಗಳನ್ನು ವಿನಿಮಯ ಮಾಡುವ ತನ್ನ ಗುರಿಗಳನ್ನು ಮುಂದುವರೆಸಿಕೊಂಡು ಬಂದಿದೆ ಎಂದರು.
2015ರಲ್ಲಿ ಬೋದ್ ಗಯಾದಲ್ಲಿ ಮೊದಲ ಸಂವಾದ್ 1 ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ವಾಂಸರು, ಧಾರ್ಮಿಕ ಮುಖಂಡರು, ರಾಜಕೀಯ ವ್ಯಕ್ತಿಗಳು ಸಂವಾದದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications