ಕಟುಕರನ್ನು ಗಲ್ಲಿಗೇರಿಸುವ ಹ್ಯಾಂಗ್ಮ್ಯಾನ್ಗಳ ಸಂಬಳ ಎಷ್ಟಿರುತ್ತೆ ಗೊತ್ತೆ?
ನವದೆಹಲಿ, ಡಿಸೆಂಬರ್ 14: ನಿರ್ಭಯಾ ಅತ್ಯಾಚಾರಿಗಳು ಸೇರಿ ದೇಶದಲ್ಲಿನ ಕಟುಕರನ್ನು ಗಲ್ಲಿಗೇರಿಸಲು ಒಬ್ಬ ನಿರ್ಧಿಷ್ಟ ವ್ಯಕ್ತಿಯನ್ನು ಗುರುತಿಸಲಾಗಿದೆ. ಆತನೂ ಒಬ್ಬ ಸರ್ಕಾರಿ ನೌಕರನಾಗಿದ್ದು, ಸಂಬಳ ಕೇಳಿದರೆ ಮಾತ್ರ ನೀವು ಬೆಚ್ಚಿಬೀಳುತ್ತೀರಿ..
ಕಟುಕರನ್ನು ಗಲ್ಲಿಗೇರಿಸುವವರಿಗೆ ಕೇವಲ ಮಾಸಿಕ 5 ಸಾವಿರ ರೂ. ನೀಡಲಾಗುತ್ತಿದೆ. ಈ ಹಿಂದೆ 3 ಸಾವಿರ ರೂ. ನೀಡುತ್ತಿದ್ದುದನ್ನು ಕಳೆದ ವರ್ಷ ಹೋರಾಟದ ಬಳಿಕ ಐದು ಸಾವಿರ ರೂ.ಗೆ ಏರಿಸಲಾಗಿದೆ.
ಹೈದರಾಬಾದಿನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕರನ್ನು ಪೊಲೀಸರು ಎನ್ಕೌಂಟರ್ ಮಾಡಿ ಹತ್ಯೆ ಮಾಡಿದ್ದರು. ಆರೋಪಿಗಳ ಹತ್ಯೆ ಬಳಿಕ ನಿರ್ಭಯಾ ಹಂತಕರನ್ನೂ ಗಲ್ಲಿಗೇರಿಸುವಂತೆ ಒತ್ತಡ ಕೇಳಿಬಂದಿತ್ತು.

ಬೇರೆಡೆ ಕೆಲಸವೂ ಸಿಗುವುದಿಲ್ಲ
ಸಾಮಾನ್ಯವಾಗಿ ಗಲ್ಲಿಗೇರಿಸುವವರು ಒಂದೇ ಕುಟುಂಬದ ಸದಸ್ಯರಾಗಿರುತ್ತಾರೆ.ಈಗ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಮುಂದಾಗಿರುವ ಹ್ಯಾಂಗ್ಮ್ಯಾನ್ ಮೂರನೇ ತಲೆಮಾರಿನವರಾಗಿದ್ದಾರೆ.

ತಂದೆ, ಅಜ್ಜನದು ಕೂಡ ಇದೇ ಕಸುಬು
ಇವರ ತಂದೆ ಹಾಗೂ ಅಜ್ಜ ಕೂಡ ಇದೇ ಕಸುಬು ಮಾಡುತ್ತಿದ್ದರು. ಇವರ ಉದ್ಯೋಗದ ಹಿನ್ನೆಲೆ ಹೊರ ಜಗತ್ತಿಗೆ ಗೊತ್ತಾಗುತ್ತಿದ್ದಂತೆ ಯಾವುದೇ ಪಾರ್ಟ್ ಟೈಂ ಕೆಲಸ ಕೂಡ ಸಿಗುವುದಿಲ್ಲ. ಹೀಗಾಗಿ ಈ ದುಬಾರಿ ಜಗತ್ತಿನಲ್ಲಿ ಐದು ಸಾವಿರ ರೂ. ಸಂಬಳದಲ್ಲೇ ಕುಟುಂಬವನ್ನು ಮುನ್ನಡೆಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಕಟುಕರನ್ನು ಗಲ್ಲಿಗೇರಿಸಿ ದೇಶದಲ್ಲಿ ಲಕ್ಷಾಂತರ ಜನರಲ್ಲಿ ನಿರಾಳ ಭಾವ ಮೂಡಿಸುವಲ್ಲಿ ನೆರವಾಗುವ ಈ ಹ್ಯಾಂಗ್ಮ್ಯಾನ್ಗಳ ಜೀವವನ್ನು ಹಸನಾಗಿಸುವ ನಿಟ್ಟಿನಲ್ಲಿ ಪ್ರಯತ್ನ ಕೂಡ ನಡೆಯಬೇಕಿದೆ.

ಇಂದಿರಾಗಾಂಧಿ ಹಂತಕರನ್ನು ಗಲ್ಲಿಗೇರಿಸಿದ್ದರು
ಈಗ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಸಿದ್ಧರಾಗಿರುವ ಮೀರತ್ ಜೈಲಿನ ಹ್ಯಾಂಗ್ಮೆನ್ ಕುಟುಂಬಕ್ಕೆ ಭಾರಿ ಹಿನ್ನೆಲೆಯಿದೆ.
ಇವರ ಅಜ್ಜ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಂತಕರನ್ನು ಗಲ್ಲಿಗೇರಿಸಿದ್ದರು.ಇಂದಿರಾಗಾಂಧಿ ಹಂತಕರಿಬ್ಬರನ್ನು ಗಲ್ಲಿಗೇರಿಸುವಲ್ಲಿ ಇವರು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಮೀರತ್ ಹಾಗೂ ಲಕ್ನೋ ಜೈಲಿನ ಹ್ಯಾಂಗ್ಮ್ಯಾನ್ಗಳಿಗೆ ಮನವಿ
ತಿಹಾರ್ ಜೈಲಿನ ಮೂಲಗಳ ಪ್ರಕಾರ ಮೀರತ್ ಹಾಗೂ ಲಕ್ನೋ ಜೈಲಿನ ಹ್ಯಾಂಗ್ಮೆನ್ಗಳನ್ನು ನಿರ್ಭಯಾ ಅತ್ಯಾಚಾರಿಗಳ ಗಲ್ಲು ಪ್ರಕ್ರಿಯೆಗೆ ಮನವಿ ಮಾಡಲಾಗಿತ್ತು. ಆದರೆ ಲಕ್ನೋ ಜೈಲಿನ ಹ್ಯಾಂಗ್ಮೆನ್ ಆರೋಗ್ಯ ಸರಿ ಇರದ ಹಿನ್ನೆಲೆಯಲ್ಲಿ ಮೀರತ್ ಜೈಲಿನ ಹ್ಯಾಂಗ್ಮೆನ್ಗೆ ಸಿದ್ಧವಿರುವಂತೆ ಸೂಚಿಸಲಾಗಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications