ಕೇಂದ್ರ ಸರ್ಕಾರದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿ ಅಧಿಸೂಚನೆ
ನವದೆಹಲಿ,ಜನವರಿ.11:
ಪೌರತ್ವ
ತಿದ್ದುಪಡಿ
ಕಾಯ್ದೆಯನ್ನು
ಜಾರಿಗೊಳಿಸುವಲ್ಲಿ
ಕೊನೆಗೂ
ಕೇಂದ್ರ
ಸರ್ಕಾರದ
ಹಠವೇ
ಗೆದ್ದಿದೆ.
ಕೇಂದ್ರ
ಗೃಹ
ಸಚಿವಾಲಯ
ಈ
ಸಂಬಂಧ
ಅಧಿಕೃತವಾಗಿ
ಗೆಜೆಟ್
ಅಧಿಸೂಚನೆಯನ್ನು
ಹೊರಡಿಸಿದೆ.
ಒಂದೆಡೆ
ಸಿಎಎ
ಹಾಗೂ
ಎನ್
ಆರ್
ಸಿ
ವಿರುದ್ಧ
ಪ್ರತಿಭಟನೆ
ಕಿಚ್ಚು
ಹೊತ್ತಿ
ಉರಿಯುತ್ತಿದೆ.
ಇದರ
ಮಧ್ಯಯೇ
ಪ್ರಧಾನಮಂತ್ರಿ
ನರೇಂದ್ರ
ಮೋದಿ
ನೇತೃತ್ವದ
ಕೇಂದ್ರ
ಸರ್ಕಾರ
ಅಂದುಕೊಂಡ
ಕೆಲಸವನ್ನು
ಮಾಡಿ
ಮುಗಿಸಿದೆ.
ಜನವರಿ.10ರಿಂದಲೇ
ದೇಶಾದ್ಯಂತ
ಪೌರತ್ವ
ತಿದ್ದುಪಡಿ
ಕಾಯ್ದೆ
ಜಾರಿಗೆ
ಬರಲಿದೆ.
ಇವರು
ಒಪ್ಪುವುದಿಲ್ಲ,
ಅವರು
ಬಿಡುವುದಿಲ್ಲ
ಏನಿದು
CAA-NRC
ಹೋರಾಟ?
ಡಿಸೆಂಬರ್.31,
2014ಕ್ಕಿಂತ
ಮೊದಲು
ನೆರೆಯ
ಅಫ್ಘಾನಿಸ್ತಾನ್,
ಪಾಕಿಸ್ತಾನ್
ಹಾಗೂ
ಬಾಂಗ್ಲಾದೇಶದಿಂದ
ಭಾರತಕ್ಕೆ
ವಲಸೆ
ಬಂದಿರುವ
ಹಿಂದೂ,
ಕ್ರಿಸ್ತ,
ಜೈನ್,
ಬೌದ್ಧ,
ಪಾರ್ಸಿ
ಸಮುದಾಯದ
ಜನರು
ಭಾರತದ
ಪೌರತ್ವವನ್ನು
ಪಡೆಯಲು
ಅರ್ಹರಾಗಿರುತ್ತಾರೆ.
ದೇಶದ ಮೂರು ರಾಜ್ಯಗಳಲ್ಲಿ ಜಾರಿಗೆ ವಿರೋಧ
ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ತೀರ್ಮಾನಿಸಿದ ದಿನದಿಂದಲೂ ಹಲವು ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. ಡಿಸೆಂಬರ್ ಮಧ್ಯಭಾಗದಲ್ಲಿ ಸಂಸತ್ ಉಭಯ ಸದನಗಳಲ್ಲಿ ಮಸೂದೆ ಅಂಗೀಕಾರಗೊಂಡು ಕಾಯ್ದೆಯಾಗಿ ಮಾರ್ಪಾಡುಗೊಂಡಿತು. ಅದಾಗಿಯೂ ತಮ್ಮ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ, ಪಂಜಾಬ್, ಕೇರಳ ರಾಜ್ಯಗಳು ಕಠಿಣವಾಗಿ ಹೇಳಿದ್ದವು.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಉಗ್ರ ಪ್ರತಿಭಟನೆ
ಇನ್ನು, ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿ ನೊಂದಣಿ ಬಗ್ಗೆ ಪ್ರಸ್ತಾಪಿಸಿದ ದಿನದಿಂದಲೂ ಸಾಕಷ್ಟು ಕಡೆಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡವು. ಅದರಲ್ಲೂ ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಅಸ್ಸಾಂನಲ್ಲಿ ಪ್ರತಿಭಟನೆ ಕಿಚ್ಚು ಹೊತ್ತಿ ಉರಿಯಿತು. ಇದರಿಂದ ರಾಜ್ಯಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಇಂಟರ್ ನೆಟ್ ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು.
ವಿವಿ ವಿದ್ಯಾರ್ಥಿಗಳಿಂದ ಸಿಎಎ ವಿರುದ್ಧ ಪ್ರತಿಭಟನೆ
ದೇಶಾದ್ಯಂತ ಸಿಎಎ ಹಾಗೂ ಎನ್ ಆರ್ ಸಿ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೇ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ, ಕೋಲ್ಕತ್ತಾ ವಿಶ್ವವಿದ್ಯಾಲಯ ಹಾಗೂ ಜಾಧವ್ ಪುರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಗ್ರ ಸ್ವರೂಪದ ಪ್ರತಿಭಟನೆ ನಡೆಸಿದರು.
5 ಸಾವಿರ ಮಂದಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು
ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆ ಹಲವೆಡೆಗಳಲ್ಲಿ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತು. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿಗಳು ನಷ್ಟವಾದವು. ಈ ಸಂಬಂಧ 2 ಸಾವಿರಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ಇನ್ನು, ಐದು ಸಾವಿರ ಜನರನ್ನು ವಶಕ್ಕೆ ಪಡೆದುಕೊಂಡಿದ್ದರು.