'ಸಾಲ ಮನ್ನಾ ಮಾಡದಿದ್ದರೆ ರೈತ ಸಂಘದಿಂದ ಉಗ್ರ ಹೋರಾಟ'
ಮೈಸೂರು, ಜೂನ್ 13 : ರೈತರ ಸಾಲ ಸಂಪೂರ್ಣ ಮನ್ನಾ ವಿಷಯ ಕುರಿತು ರಾಜ್ಯ ಸರ್ಕಾರ ತೆಗೆದುಕೊಂಡಿದ್ದ ಕಾಲಾವಕಾಶ ಇನ್ನೇನು ಎರಡು ದಿನವಷ್ಟೇ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಸಾಲ ಮನ್ನಾ ಘೋಷಣೆಯಾಗದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎಚ್ಚರಿಸಿದೆ.
ಸಾಲ ಮನ್ನಾ ವಿಷಯವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ರಾಜ್ಯ ಸರ್ಕಾರ ತೆಗೆದುಕೊಂಡಿದ್ದ ಕಾಲವಕಾಶ ಮುಗಿಯುತ್ತಾ ಬಂದಿದೆ.
ರೈತರ ಸಾಲಮನ್ನಾ ಕುರಿತ ಸಭೆಯಲ್ಲಿ ಏನೇನಾಯಿತು? ಇಲ್ಲಿದೆ ಪೂರ್ತಿ ವಿವರ
ಆದರೆ
ಇದುವರೆಗೂ
ಯಾವುದೇ
ನಿರ್ಧಾರ
ತೆಗೆದುಕೊಳ್ಳದೇ
ಇನ್ನೂ
ಮೀನಾಮೇಷ
ಏಣಿಸುತ್ತಿದ್ದಾರೆ.
ಇದು
ಸರ್ಕಾರದ
ಕಾಲಹರಣದ
ತಂತ್ರ
ಎಂದು
ದೂರಿದರು.
ಮುಂಗಾರು
ಸಾಲ
ಪಡೆಯಲು
ಸಹಕಾರಿ
ಬ್ಯಾಂಕ್
ಗಳಲ್ಲಿರುವ
ಸಾಲವನ್ನು
ಜೂ.13ರೊಳಗೆ
ನವಿಕರೀಸಬೇಕು
ಅಥವಾ
ಕಟ್ಟಬೇಕು.
ಇಲ್ಲವಾದಲ್ಲಿ ಶೇ. 12ರಷ್ಟು ಬಡ್ಡಿ ಭರಿಸಬೇಕಾಗುವುದು. ಸರ್ಕಾರ ಕೂಡಲೇ ತನ್ನ ನಿರ್ಣಯ ಪ್ರಕಟಿಸಬೇಕು. ಶೀಘ್ರದಲ್ಲೇ ಭತ್ತದ ಖರೀದಿಗೆ ಕೇಂದ್ರವನ್ನು ಘೋಷಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಇನ್ನು ಜಿ ಟಿ ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿರುವುದು ಸ್ವಾಗತಾರ್ಹ. ಖಾತೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ಎಲ್ಲಾ ಅರ್ಹತೆ ಅವರಿಗಿದೆ. ಯಾವುದೇ ಹಿಂಜರಿಕೆ. ಕೀಳರಿಮೆ ಮಾಡದೇ ಖಾತೆ ತೆಗೆದುಕೊಂಡು ಅಧಿಕಾರಿಗಳ ಸಲಹೆ ಪಡೆಯುವಂತೆ ಒತ್ತಾಯಿಸಿರು.