ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಥ್ಯಕ್ಕೆ ಸರಿದ ಹೆಂಗಳೆಯರ ನೆಚ್ಚಿನ 'ಮೈಸೂರು ಮಲ್ಲಿಗೆ'

|
Google Oneindia Kannada News

ಮೈಸೂರು, ಏಪ್ರಿಲ್ 23:ಮೈಸೂರು ನಗರಿ ಅಂದರೆ ಸಾಕು ನೆನಪಾಗುವುದು ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ದಸರಾ ಹೀಗೆ ಹತ್ತು ಹಲವು ಹೆಸರುಗಳು. ಅದರೊಟ್ಟಿಗೆ ಮೈಸೂರು ಮಲ್ಲಿಗೆ ತನ್ನದೇ ಆದ ಐತಿಹಾಸಿಕ ಹೆಸರನ್ನು ಎಲ್ಲೆಡೆ ಪಸರಿಸಿದೆ. ಆದರೆ ಇದೇ ಹೂವು ಕಾರಣಾಂತರಗಳಿಂದ ನೇಪಥ್ಯಕ್ಕೆ ಸರಿಯುತ್ತಿದೆ.

ವಿಶೇಷ ಪುಟ

ಹೌದು, ಮಲ್ಲಿಗೆ ನಗರಿಯ ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಮಂದಿ ಬೆಳೆಯಲ್ಪಡುತ್ತಿದ್ದ ಮೈಸೂರು ಮಲ್ಲಿಗೆ ಈಗ ಕಣ್ಮರೆಯಾಗಿದೆ. ದಿನನಿತ್ಯವೂ ದೇವರಾಜ ಮಾರುಕಟ್ಟೆ ಭಾಗದಲ್ಲಿ ಎರಡು ಸಾಲುಗಳಲ್ಲಿ ದುಬಾರಿ ಬೆಲೆಗೆ ಮೈಸೂರು ಮಲ್ಲಿಗೆ ಹೂ ಮಾರಾಟ ಆಗುತ್ತಿತ್ತು.

ನಿನಗಾಗಿ ನಾನೇ ಕಟ್ಟಿದ ಮಲ್ಲಿಗೆ ಹೂ ದಂಡೆ ಹೇಗಿದೆ ಹೇಳು ಚೆಲುವೆನಿನಗಾಗಿ ನಾನೇ ಕಟ್ಟಿದ ಮಲ್ಲಿಗೆ ಹೂ ದಂಡೆ ಹೇಗಿದೆ ಹೇಳು ಚೆಲುವೆ

ಪ್ರವಾಸಿಗರು ಬಂದರೆ ಸಾಕು ಮೊದಲು ಮೈಸೂರು ಮಲ್ಲಿಗೆಯ ಘಮಲನ್ನು ಪಡೆದು ಮುಡಿದು ತೆರಳದೇ ಇರುತ್ತಿರಲಿಲ್ಲ. ಆದರೆ ಸದ್ಯ ಇದೇ ಮೈಸೂರು ಮಲ್ಲಿಗೆ ಬೆಳೆಯುವವರೇ ಇಲ್ಲದಂತಾಗಿದೆ.

ಮೈಸೂರು ಮಲ್ಲಿಗೆ, ನಂಜನಗೂಡು ಬಾಳೆ ಹಾಗೂ ಸಹೃದಯಿ ವೀಳೆಯದೆಲೆ!ಮೈಸೂರು ಮಲ್ಲಿಗೆ, ನಂಜನಗೂಡು ಬಾಳೆ ಹಾಗೂ ಸಹೃದಯಿ ವೀಳೆಯದೆಲೆ!

ತಮಿಳುನಾಡಿನ ಸತ್ಯಮಂಗಲ ಮತ್ತು ಕೊಯಮತ್ತೂರುಗಳಲ್ಲಿ ಬೆಳೆದ ಮಲ್ಲಿಗೆ ಮೈಸೂರಿಗೆ ಸದ್ಯ ಬರುತ್ತಿದೆ. ಈ ಕೇಂದ್ರದಿಂದಲೇ ಮೈಸೂರು ಮಲ್ಲಿಗೆ ಹೆಸರಿನಲ್ಲಿ ಬೆಂಗಳೂರು, ಹಾಸನ, ಭದ್ರಾವತಿ, ಶಿವಮೊಗ್ಗ, ಮಂಗಳೂರು ಮುಂತಾದ ಕಡೆ ಕಳುಹಿಸಲಾಗುತ್ತದೆ. ಮೈಸೂರು ಮಲ್ಲಿಗೆ ಎರಡು ವರ್ಷಗಳಿಗೊಮ್ಮೆ ಮಾತ್ರವೇ ಫಲ ಕೊಡುವ ಹೂವು.

ಎರಡು ವರ್ಷದವರೆಗೆ ಅದರ ನಿರ್ವಹಣೆ, ಕೂಲಿ, ಆಳಿನ ಕೆಲಸ ರೈತನ ಹೆಗಲ ಮೇಲೆ ಬೀಳಲಿದೆ. ಅಲ್ಲದೆ ಎರಡು ವರ್ಷದವರೆಗೆ ಯಾವುದೇ ಲಾಭವಿಲ್ಲದ ಕಾರಣ ರೈತರು ಈ ಹೂ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಯಾಕೆ ಗೊತ್ತಾ?

ರೈತರಿಗೆ ಸಹಾಯ ಧನ

ರೈತರಿಗೆ ಸಹಾಯ ಧನ

ತೋಟಗಾರಿಕಾ ಇಲಾಖೆ ಸಹ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯೆದೆಲೆ ಉಳಿಸಲು ಸಾಕಷ್ಟು ಉತ್ತೇಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ಈ ಬೆಳೆಗಳನ್ನು ಗುಂಪು ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸಾಮಾನ್ಯ ರೈತರಿಗೆ ಶೇ.50ರಷ್ಟು ಮತ್ತು ಎಸ್ಸಿ ಎಸ್ಟಿಗಳಿಗೆ ಶೇ.90 ಸಹಾಯಧನ ನೀಡುತ್ತಿದೆ.

ಮೈಸೂರು ಮಲ್ಲಿಗೆ ಪರಿಮಳ ಉಳಿಸಲು ಪೇಟೆಂಟ್ ಅಸ್ತ್ರ

ಇಳುವರಿ ಬಹಳ ಕಡಿಮೆ

ಇಳುವರಿ ಬಹಳ ಕಡಿಮೆ

ಮೈಸೂರು ಮಲ್ಲಿಗೆ ಇಳುವರಿ ಬಹಳ ಕಡಿಮೆ, ಸುಗಂಧ ಹೆಚ್ಚು. ಮಾತ್ರವಲ್ಲ ವರ್ಷಕ್ಕೆ ಮಾರ್ಚ್ ನಂತರ ಮೇ ವರೆಗೆ ಮಾತ್ರವೇ ಹೂ ಬಿಡುತ್ತದೆ. ಅಷ್ಟೇ ಬೇಗ ಅರಳಿ, ಅಷ್ಟೇ ಬೇಗ ಮುದುಡುತ್ತದೆ.

 ಉಡುಪಿಯಲ್ಲಿ ಶಂಕರಪುರ ಮಲ್ಲಿಗೆಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು ಉಡುಪಿಯಲ್ಲಿ ಶಂಕರಪುರ ಮಲ್ಲಿಗೆಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು

ಬೆಳೆಯುವುದನ್ನೇ ಬಿಟ್ಟಿದ್ದಾರೆ

ಬೆಳೆಯುವುದನ್ನೇ ಬಿಟ್ಟಿದ್ದಾರೆ

ಇನ್ನು ತಮಿಳುನಾಡಿನ ಗಿಡ ವರ್ಷಪೂರ್ತಿ ಹೂ ಬಿಡಲಿದ್ದು, ಪರಿಮಳ ಕಡಿಮೆ ಇದ್ದರೂ ನೋಡಲು ಸುಂದರವಾಗಿ ಕಾಣಿಸುತ್ತದೆ. ಬೇಗ ಬಾಡದ ಹಿನ್ನೆಲೆಯಲ್ಲಿ ಬೇರೆಡೆಗೆ ರಫ್ತು ಮಾಡುವುದಕ್ಕೂ ಸಹಕಾರಿ ಆಗಿರುವುದರಿಂದ ಆ ಹೂವಿಗೆ ಹೆಚ್ಚು ಬೇಡಿಕೆ. ರೈತರು ಮೈಸೂರು ಮಲ್ಲಿಗೆ ಬೆಳೆಯುವುದನ್ನೇ ಬಿಟ್ಟಿದ್ದಾರೆ ಎನ್ನುತ್ತಾರೆ ಹೂ ಬೆಳೆಗಾರರು.

ಶೃಂಗಾರ ಭಾವದ ಮಾಲೆ ಕಟ್ಟಿದ ಮಲ್ಲಿಗೆ, ಹಿತ ಚೆಲ್ಲುವ ಬೆಳದಿಂಗಳುಶೃಂಗಾರ ಭಾವದ ಮಾಲೆ ಕಟ್ಟಿದ ಮಲ್ಲಿಗೆ, ಹಿತ ಚೆಲ್ಲುವ ಬೆಳದಿಂಗಳು

ಹೆಚ್ಚು ಜನರು ಕೊಳ್ಳುವುದಿಲ್ಲ

ಹೆಚ್ಚು ಜನರು ಕೊಳ್ಳುವುದಿಲ್ಲ

ಮೈಸೂರು ಮಲ್ಲಿಗೆಗೆ ಹೋಲಿಸಿದರೆ ತಮಿಳುನಾಡಿನ ಮಲ್ಲಿಗೆಯ ಬೆಲೆಯಲ್ಲೂ ಸಹ ವ್ಯತಾಸವಿದೆ. ಮೈಸೂರು ಮಲ್ಲಿಗೆಯ ಬೆಲೆ ಅಧಿಕವಾಗಿದ್ದು, ಹೆಚ್ಚು ಜನರು ಕೊಳ್ಳುವುದಿಲ್ಲ ಎಂಬುದು ಹೂವಿನ ವ್ಯಾಪಾರಿಗಳ ನಿಲುವು. ಬೆಳೆ ಇಲ್ಲದೇ ಮೈಸೂರು ಮಲ್ಲಿಗೆ ನೇಪಥ್ಯಕ್ಕೆ ಸರಿಯುತ್ತಿರುವುದು ಮಾತ್ರ ಬೇಸರದ ಸಂಗತಿ.

English summary
In Market no demand to Mysuru Mallige.Farmers are refusing to grow a jasmine flower on their lands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X