ಒಡೆಯರ್ ಸಾವಿನ ಮುನ್ನ ಅಪಶಕುನದ ಸಂಕೇತ?
ಮೈಸೂರು, ಡಿ 11: ಮೈಸೂರು ರಾಜಮನೆತನದ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ಮುನ್ನ ಅಪಶಕುನದ ಸಂಕೇತಗಳು ಎದುರಾಗಿದ್ದವು ಎನ್ನುವ ಸುದ್ದಿ ಈಗ ಚಾಲ್ತಿಯಲ್ಲಿದೆ.
ಶ್ರೀಕಂಠದತ್ತ ಒಡೆಯರ್ ಸಾವಿನ ಎರಡು ದಿನದ ಮುನ್ನ ಮೈಸೂರು ಚಾಮುಂಡೇಶ್ವರಿ ದೇವಾಲಯದ ಮಾಜಿ ಪ್ರಧಾನ ಅರ್ಚಕರು ನಿಧನ ಹೊಂದಿದ್ದರು. ಇದು ಮೈಸೂರು ರಾಜಮನೆತನಕ್ಕೆ ಎದುರಾಗಹಬುದಾದ ಅಪಶಕುನದ ಸಂಕೇತವಾಗಿತ್ತು ಎಂದು ಜನರು ಮಾತನಾಡಿ ಕೊಳ್ಳುತ್ತಿದ್ದಾರೆ.
ಇದಲ್ಲದೇ, ಒಡೆಯರ್ ಅವರಿಗೆ ಸರ್ಪದೋಷವಿತ್ತು. ಅದಕ್ಕೆ ಸರಿಯಾದ ಸಮಯಕ್ಕೆ ಅವರು ಪರಿಹಾರ ಕ್ರಮ ಕೈಗೊಂಡಿದ್ದರೆ ಅವರಿಗೆ ಅಕಾಲಿಕ ಸಾವು ಬರುತ್ತಿರಲಿಲ್ಲ ಎಂದು ಬೆಂಗಳೂರು - ಮೈಸೂರು ರಸ್ತೆಯ ಮುಕ್ತಿನಾಗ ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗೇಂದ್ರ ದೀಕ್ಷಿತ್ ಮಂಗಳವಾರ (ಡಿ 11) ಅಭಿಪ್ರಾಯ ಪಟ್ಟಿದ್ದರು. (ಶ್ರೀಕಂಠದತ್ತ ಒಡೆಯರ್ ಉತ್ತರಾಧಿಕಾರಿ ಯಾರು?)

ಕಳೆದ ವಿಜಯದಶಮಿಯ ಜಂಬೂ ಸವಾರಿ ಮೆರವಣೆಗೆ ಸಮಯದಲ್ಲಿ ಅಂಬಾರಿ ಮೇಲೆ ಮಳೆ ಸುರಿದಿತ್ತು, ಚಾಮುಂಡೇಶ್ವರಿಯನ್ನು ಹೊರುವ ಅಂಬಾರಿ ಕೂಡಾ ಆನೆಯ ಮೇಲೆ ಸರಿಯಾಗಿ ಕೂತಿರಲಿಲ್ಲ. ಇದೂ ಒಂದು ಅಪಶಕುನದ ಸಂಕೇತವಾಗಿತ್ತು ಎನ್ನುವುದು ಮೈಸೂರು ಭಾಗದ ಜನ ಆಡಿಕೊಳ್ಳುತ್ತಿರುವ ಮಾತು. [ಮೈಸೂರಿನ ಆಳರಸರ ಮಧುವನ]
ಒಡೆಯರ್ ಅವರಿಗೆ ಕಾರುಗಳ ಕ್ರೇಜ್ ಇತ್ತು. ಸುಮಾರು ಹನ್ನೆರಡು ಐಷಾರಾಮಿ ಕಾರುಗಳನ್ನು ಅವರು ಹೊಂದಿದ್ದರು. ಎಲ್ಲಾ ಕಾರುಗಳ ಮೇಲೆ ಗಂಡಭೇರುಂಡದ ಲಾಂಛನವಿದೆ. ಕಳೆದ ದಸರಾ ಉತ್ಸವದ ಸಮಯದಲ್ಲಿ ಒಡೆಯರ್ ಅವರು ಸಂಪ್ರದಾಯಕ್ಕೆ ವಿರುದ್ದವಾಗಿ ಬೆಳ್ಳಿರಥ ಏರವು ಬದಲು BMW ಕಾರು ಏರಿದ್ದರು. (ಒಡೆಯರ್ ಅವರಿಗೆ ಚಿತ್ರ ನಮನ)
ವಿಜಯದಶಮಿಯ ದಿನದಂದು ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಅರಮನೆಯಿಂದ ಬನ್ನಿಮರದ ಬಳಿಗೆ ಬೆಳ್ಳಿ ರಥದ ಮೂಲಕ ತೆರಳುವುದು ಸಂಪ್ರದಾಯ. ಇದುವರೆಗೂ ಸಂಪ್ರದಾಯ ಮುರಿಯದ ಒಡೆಯರ್ ಈ ಬಾರಿ ಮಾತ್ರ ರಥ ಏರದೇ ಕಾರಿನಲ್ಲಿ ಬಂದು ಪೂಜೆ ಸಲ್ಲಿಸಿ ಕಾರಿನಲ್ಲೇ ಅರಮನೆಗೆ ವಾಪಸಾಗಿದ್ದರು.
ಬೆಳ್ಳಿರಥವನ್ನು ಅರಮನೆಯ ಪ್ರಾಂಗಣದಲ್ಲೇ ಬಿಡಲಾಗಿತ್ತು. ಇದೂ ಒಂದು ಅಪಶಕುನದ ಸಂಕೇತವಾಗಿತ್ತು ಎನ್ನುವುದು ಅರಮನೆ ಆವರಣದಲ್ಲಿ ಕೇಳಿ ಬರುತ್ತಿರುವ ಮಾತು.
ಕಳೆದ ಬಾರಿಯ ದಸರಾ ಸಮಯದಲ್ಲಿ ಬೆಳ್ಳಿ ರಥ ಏರಲಾಗದೇ ಒಡೆಯರ್ ಮುಜುಗರ ಎದುರಿಸ ಬೇಕಾಗಿತ್ತು. ಹಾಗಾಗಿ ಅವರು ರಥವನ್ನು ಏರಲಿಲ್ಲ ಎನ್ನುವ ಮಾತನ್ನೂ ಅರಮನೆ ಸಿಬ್ಬಂದಿಗಳು ಆಡಿಕೊಳ್ಳುತ್ತಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications