ಒಡೆಯರ್ ಸಾವಿನ ಮುನ್ನ ಅಪಶಕುನದ ಸಂಕೇತ?
ಮೈಸೂರು, ಡಿ 11: ಮೈಸೂರು ರಾಜಮನೆತನದ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ಮುನ್ನ ಅಪಶಕುನದ ಸಂಕೇತಗಳು ಎದುರಾಗಿದ್ದವು ಎನ್ನುವ ಸುದ್ದಿ ಈಗ ಚಾಲ್ತಿಯಲ್ಲಿದೆ.
ಶ್ರೀಕಂಠದತ್ತ ಒಡೆಯರ್ ಸಾವಿನ ಎರಡು ದಿನದ ಮುನ್ನ ಮೈಸೂರು ಚಾಮುಂಡೇಶ್ವರಿ ದೇವಾಲಯದ ಮಾಜಿ ಪ್ರಧಾನ ಅರ್ಚಕರು ನಿಧನ ಹೊಂದಿದ್ದರು. ಇದು ಮೈಸೂರು ರಾಜಮನೆತನಕ್ಕೆ ಎದುರಾಗಹಬುದಾದ ಅಪಶಕುನದ ಸಂಕೇತವಾಗಿತ್ತು ಎಂದು ಜನರು ಮಾತನಾಡಿ ಕೊಳ್ಳುತ್ತಿದ್ದಾರೆ.
ಇದಲ್ಲದೇ, ಒಡೆಯರ್ ಅವರಿಗೆ ಸರ್ಪದೋಷವಿತ್ತು. ಅದಕ್ಕೆ ಸರಿಯಾದ ಸಮಯಕ್ಕೆ ಅವರು ಪರಿಹಾರ ಕ್ರಮ ಕೈಗೊಂಡಿದ್ದರೆ ಅವರಿಗೆ ಅಕಾಲಿಕ ಸಾವು ಬರುತ್ತಿರಲಿಲ್ಲ ಎಂದು ಬೆಂಗಳೂರು - ಮೈಸೂರು ರಸ್ತೆಯ ಮುಕ್ತಿನಾಗ ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗೇಂದ್ರ ದೀಕ್ಷಿತ್ ಮಂಗಳವಾರ (ಡಿ 11) ಅಭಿಪ್ರಾಯ ಪಟ್ಟಿದ್ದರು. (ಶ್ರೀಕಂಠದತ್ತ ಒಡೆಯರ್ ಉತ್ತರಾಧಿಕಾರಿ ಯಾರು?)

ಕಳೆದ ವಿಜಯದಶಮಿಯ ಜಂಬೂ ಸವಾರಿ ಮೆರವಣೆಗೆ ಸಮಯದಲ್ಲಿ ಅಂಬಾರಿ ಮೇಲೆ ಮಳೆ ಸುರಿದಿತ್ತು, ಚಾಮುಂಡೇಶ್ವರಿಯನ್ನು ಹೊರುವ ಅಂಬಾರಿ ಕೂಡಾ ಆನೆಯ ಮೇಲೆ ಸರಿಯಾಗಿ ಕೂತಿರಲಿಲ್ಲ. ಇದೂ ಒಂದು ಅಪಶಕುನದ ಸಂಕೇತವಾಗಿತ್ತು ಎನ್ನುವುದು ಮೈಸೂರು ಭಾಗದ ಜನ ಆಡಿಕೊಳ್ಳುತ್ತಿರುವ ಮಾತು. [ಮೈಸೂರಿನ ಆಳರಸರ ಮಧುವನ]
ಒಡೆಯರ್ ಅವರಿಗೆ ಕಾರುಗಳ ಕ್ರೇಜ್ ಇತ್ತು. ಸುಮಾರು ಹನ್ನೆರಡು ಐಷಾರಾಮಿ ಕಾರುಗಳನ್ನು ಅವರು ಹೊಂದಿದ್ದರು. ಎಲ್ಲಾ ಕಾರುಗಳ ಮೇಲೆ ಗಂಡಭೇರುಂಡದ ಲಾಂಛನವಿದೆ. ಕಳೆದ ದಸರಾ ಉತ್ಸವದ ಸಮಯದಲ್ಲಿ ಒಡೆಯರ್ ಅವರು ಸಂಪ್ರದಾಯಕ್ಕೆ ವಿರುದ್ದವಾಗಿ ಬೆಳ್ಳಿರಥ ಏರವು ಬದಲು BMW ಕಾರು ಏರಿದ್ದರು. (ಒಡೆಯರ್ ಅವರಿಗೆ ಚಿತ್ರ ನಮನ)
ವಿಜಯದಶಮಿಯ ದಿನದಂದು ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಅರಮನೆಯಿಂದ ಬನ್ನಿಮರದ ಬಳಿಗೆ ಬೆಳ್ಳಿ ರಥದ ಮೂಲಕ ತೆರಳುವುದು ಸಂಪ್ರದಾಯ. ಇದುವರೆಗೂ ಸಂಪ್ರದಾಯ ಮುರಿಯದ ಒಡೆಯರ್ ಈ ಬಾರಿ ಮಾತ್ರ ರಥ ಏರದೇ ಕಾರಿನಲ್ಲಿ ಬಂದು ಪೂಜೆ ಸಲ್ಲಿಸಿ ಕಾರಿನಲ್ಲೇ ಅರಮನೆಗೆ ವಾಪಸಾಗಿದ್ದರು.
ಬೆಳ್ಳಿರಥವನ್ನು ಅರಮನೆಯ ಪ್ರಾಂಗಣದಲ್ಲೇ ಬಿಡಲಾಗಿತ್ತು. ಇದೂ ಒಂದು ಅಪಶಕುನದ ಸಂಕೇತವಾಗಿತ್ತು ಎನ್ನುವುದು ಅರಮನೆ ಆವರಣದಲ್ಲಿ ಕೇಳಿ ಬರುತ್ತಿರುವ ಮಾತು.
ಕಳೆದ ಬಾರಿಯ ದಸರಾ ಸಮಯದಲ್ಲಿ ಬೆಳ್ಳಿ ರಥ ಏರಲಾಗದೇ ಒಡೆಯರ್ ಮುಜುಗರ ಎದುರಿಸ ಬೇಕಾಗಿತ್ತು. ಹಾಗಾಗಿ ಅವರು ರಥವನ್ನು ಏರಲಿಲ್ಲ ಎನ್ನುವ ಮಾತನ್ನೂ ಅರಮನೆ ಸಿಬ್ಬಂದಿಗಳು ಆಡಿಕೊಳ್ಳುತ್ತಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications