ಚಲಿಸುತ್ತಿರುವ ಬುಲೆಟ್ ಬೈಕ್ ನಲ್ಲಿ ಕಾಣಿಸಿಕೊಂಡ ನಾಗರಹಾವು, ಮುಂದೇನಾಯ್ತು?
ಮಂಗಳೂರು, ನವೆಂಬರ್. 20: ಬೈಕ್ ಸವಾರರೇ, ನಿಮ್ಮ ಜತೆ ವಿಷಕಾರಿ ಹಾವುಗಳು ಸವಾರಿ ಮಾಡಬಹುದು. ಎಚ್ಚರವಹಿಸಿ! ಯಾಕೆಂದರೆ ನಾಗರಹಾವೊಂದು ಬೈಕ್ ನಲ್ಲಿ ಅಡಗಿ ಕುಳಿತು ಬೈಕ್ ಸವಾರನನ್ನೇ ಬೆಚ್ಚಿ ಬೀಳಿಸಿದ ಪ್ರಸಂಗವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೈಕ್ ನಲ್ಲಿ ಸ್ಟೈಲ್ ಆಗಿ ರೌಂಡ್ಸ್ ಹೊಡಿಬೇಕು ಅನ್ಕೊಂಡಿದ್ರೆ, ಹೊರಡೋ ಮುನ್ನ ಒಮ್ಮೆ ಬೈಕ್ ಚೆಕ್ ಮಾಡಿ. ಇಲ್ಲದಿದ್ದರೆ ಬೈಕ್ ನಲ್ಲಿ ಬೆಚ್ಚಗೆ ಮಲಗಿದ್ದ ಹಾವು ನಿಮ್ಮೊಂದಿಗೆ ರೈಡ್ ಗೆ ಬರಬಹುದು. ಅಂದಹಾಗೆ ನಾಗ ಪ್ರತ್ಯಕ್ಷವಾಗಿರುವುದು ಬುಲೆಟ್ ಬೈಕ್ ನಲ್ಲಿ.
ಘಟನೆಯ ವಿವರ
ಚಲಿಸುತ್ತಿರುವ ಬುಲೆಟ್ ಬೈಕ್ ನ ಒಳಗಿನಿಂದ ಧಿಡೀರನೆ ಹೊರಬಂದ ನಾಗರಹಾವು ಬುಸುಗುಟ್ಟಿರುವ ಘಟನೆ ಮರಕಡ ಎಂಬಲ್ಲಿ ಬೆಳಕಿಗೆ ಬಂದಿದೆ.

ಮರಕಡ ನಿವಾಸಿ ಬದ್ರುದ್ದೀನ್ ಕುಳೂರು ಎಂಬುವವರು ಬುಲೆಟ್ ಬೈಕ್ ನಲ್ಲಿ ಸಂಚರಿಸುತ್ತಿರುವ ವೇಳೆಯಲ್ಲಿ ಮೀಟರ್ ಗೇಜ್ ಪಕ್ಕದಿಂದಲೇ ದಿಢೀರ್ ಎಂದು ಹೊರಬಂದು ಹೆಡೆ ಎತ್ತಿ ನಿಂತಿದೆ. ವಿಚಲಿತರಾದ ಬದ್ರುದ್ದೀನ್ ನಂತರ ಸಮಾಧಾನವಾಗಿ ಭಯ ಪಡದೆ ಬೈಕ್ ಪಕ್ಕಕ್ಕೆ ನಿಲ್ಲಿಸಿದ್ದಾರೆ.

ನಂತರ ಉರಗ ಪ್ರೇಮಿ ಗಂಗಯ್ಯ ಬೋಳಾರ್ ಬುಲೆಟ್ ಒಳಗಿನಿಂದ ಹಾವನ್ನು ಹೊರತೆಗೆದು ರಕ್ಷಿಸಿದ್ದಾರೆ. ಮನೆಯಲ್ಲಿ ಬೈಕ್ ನಿಲ್ಲಿಸಿದ್ದ ಸಂದರ್ಭದಲ್ಲಿ ನಾಗರಹಾವು ಬುಲೆಟ್ ಹತ್ತಿರಬಹುದು ಎಂದು ಅಂದಾಜಿಸಲಾಗಿದೆ. ಬುಲೆಟ್ ನಲ್ಲಿದ್ದ ನಾಗರಹಾವು ಸಣ್ಣ ಮರಿಯಾಗಿದ್ದು, ಆಶ್ಚರ್ಯದಿಂದಲೇ ಜನ ನೋಡಲು ಮುಗಿಬಿದ್ದಿದ್ದಾರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications