ಕೊಡಗಿನ ನೆರೆ ಸಂತ್ರಸ್ತರಿಗೆ ಸೈಕಲ್ ನೆರವು ನೀಡಿದ ತಂದೆ-ಮಗ
ಮಡಿಕೇರಿ, ಆಗಸ್ಟ್ 11: ಈ ವರ್ಷವೂ ಕೊಡಗಿನಲ್ಲಿ ಪ್ರವಾಹ ಸ್ಥಿತಿ ಎದುರಾಗಿತ್ತು, ಈ ಸಂದರ್ಭದಲ್ಲಿ ರೈತರು ಹಾಗೂ ವಿದ್ಯಾರ್ಥಿಗಳಿಗೆ ತಂದೆ-ಮಗ ಸೇರಿ ಸೈಕಲ್ ನೆರವು ನೀಡಿದ್ದಾರೆ.
Recommended Video
ಬೆಂಗಳೂರಿನಲ್ಲಿ 50 ಸಾವಿರ ಅಂಗಡಿಗಳು ಬಂದ್ | Oneindia Kannada
ಕೊರೊನಾದಿಂದಾಗಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ವಿಶಾಲ್ ಶಿವಪ್ಪ ಹಾಗೂ ಅವರ ತಂದೆ ವಿನೋದ್ ಕೆಲವು ಮಂದಿಗೆ ಸೈಕಲ್ ವಿತರಿಸಿದ್ದಾರೆ. ವಿಶಾಲ್ ಮಾತನಾಡಿ ನಮ್ಮ ಅಜ್ಜ, ತಂದೆ ಎಲ್ಲೂ ವಿವಿಧ ಚಾರಿಟಿಗಳಿಗೆ ಹಣ ನೀಡುತ್ತಿದ್ದರು. ನಾವು ಕೂಡ ಅದೇ ಹಾದಿ ತುಳಿದಿದ್ದೇವೆ.
ಕೊರೊನಾ ವೈರಸ್ ವಿಪರೀತ ವಾಗಿದ್ದ ಸಂದರ್ಭದಲ್ಲಿ ಕಿಲೋಮೀಟರ್ಗಟ್ಟಲೆ ಉದ್ಯೋಗವನ್ನರಸಿ ಹೋಗಬೇಕಿತ್ತು, ಅಂತವರಿಗೆ ಸಹಾಯವಾಗಲಿ ಎಂದು ಸೈಕಲ್ ನೀಡಿದ್ದೇವೆ.

ಈ ಸೈಕಲ್ ನಿಜವಾಗಿಯೂ ಅವರಿಗೆ ಸಹಾಯ ಮಾಡುತ್ತದೆ. ಅವರ ಗುರಿಯನ್ನು ಬಹುಬೇಗ ತಲುಪುತ್ತಾರೆ. ರೈತರಿಗೆ ಸಹಾಯವಾಗುವಂತಹ ಸಾಕಷ್ಟು ಕೆಲಸಗಳಲ್ಲಿ ಅವರನ್ನು ತೊಡಗಿಸಿಕೊಂಡಿದ್ದಾರೆ.
ನಮ್ಮ ಕಾರ್ಯವನ್ನು ತಮ್ಮ ಮಗ ವಿಶಾಲ್ ಕೂಡ ಮುಂದುವರೆಸಿಕೊಂಡು ಹೋಗುತ್ತಿರುವುದು ಖುಷಿ ತಂದಿದೆ ಎಂದು ವಿನೋದ್ ತಿಳಿಸಿದ್ದಾರೆ.












Click it and Unblock the Notifications