Get Updates
Get notified of breaking news, exclusive insights, and must-see stories!

'ಎಸ್‌ಪಿ ನಾಯಕರಿಗೆ ನಿದ್ದೆ ಮಾಡಿದಾಗೆಲ್ಲಾ ಅಧಿಕಾರದ ಕನಸು' ಎಂದ ಪ್ರಧಾನಿ

ಉನ್ನಾವೋ, ಫೆಬ್ರವರಿ 20: ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. "ಮೊದಲ ಎರಡು ಹಂತಗಳಲ್ಲಿ ಸೋತ ನಂತರವೂ, ಈ ಜನರು (ಸಮಾಜವಾದಿ ಪಕ್ಷದ ನಾಯಕರು) ಮಲಗಿದಾಗಲೆಲ್ಲಾ ಅವರು ಅಧಿಕಾರಕ್ಕೆ ಬರುವ ಕನಸುಗಳನ್ನು ಕಾಣುತ್ತಾರೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

"ಮೊದಲ ಎರಡು ಹಂತಗಳಲ್ಲಿ ಸೋತ ನಂತರವೂ, ಸಮಾಜವಾದಿ ಪಕ್ಷದ ನಾಯಕರು ಮಲಗಿದಾಗಲೆಲ್ಲಾ ಅವರು ಅಧಿಕಾರಕ್ಕೆ ಬರುವ ಕನಸುಗಳನ್ನು ನೋಡುತ್ತಾರೆ. 2017 ರಲ್ಲಿ ಅವರನ್ನು ಸೋಲಿಸಲಾಯಿತು, 2022 ರಲ್ಲಿ ಅವರನ್ನು ಸೋಲಿಸಲಾಗುತ್ತದೆ. ಯುಪಿಯಲ್ಲಿ ಜನರು ಯೋಗಿಯನ್ನು ಮರಳಿ ಕರೆತರುತ್ತಾರೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉನ್ನಾವೊದಲ್ಲಿ ತಿಳಿಸಿದ್ದಾರೆ.

ಎಸ್‌ಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಎಸ್‌ಪಿ ಅತ್ಯಂತ ಸುರಕ್ಷಿತ ಎಂದು ಪರಿಗಣಿಸುತ್ತಿದ್ದ ಸ್ಥಾನವು ಅವರ ಕೈ ತಪ್ಪುತ್ತಿದೆ. ನೀವು ನೋಡಿರಬೇಕು, ವೇದಿಕೆಯಿಂದ ತಳ್ಳಲ್ಪಟ್ಟ (ಚುನಾವಣೆಯೊಂದ ಹೊರಕ್ಕೆ) ತಂದೆ (ಮುಲಾಯಂ ಎಸ್ ಯಾದವ್) ಅವರನ್ನು ಅವಮಾನಿಸಲಾಯಿತು. ಅವರ ಪಕ್ಷವನ್ನು ವಶಪಡಿಸಿಕೊಳ್ಳಲಾಯಿತು. ಅವರ ಮಗನ ಸ್ಥಾನವನ್ನು ಉಳಿಸಲು ಮನವಿ ಮಾಡಬೇಕಾಯಿತು," ಎಂದು ಕೂಡಾ ಟೀಕೆ ಮಾಡಿದ್ದಾರೆ.

Uttar Pradesh Poll: SP Leaders Sleep, They Watch Dreams of Coming Into Power: PM Modi in Unnao

"ಅವರು (ಸಮಾಜವಾದಿ ಪಕ್ಷ) ಯುಪಿಯ ಅಂತಹ ಚಿತ್ರವನ್ನು ಇಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಯೋಗಿ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸುಧಾರಣೆ ತೋರಿಸಿದೆ. ರಾಜ್ಯದಲ್ಲಿ ಭದ್ರತೆ, ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ತಂದ ಯೋಗಿ ಜಿ ಅವರನ್ನು ಯುಪಿ ಮರಳಿ ಅಧಿಕಾರಕ್ಕೆ ತರುತ್ತದೆ," ಎಂದು ಕೂಡಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಚನ್ನಿ ಹೇಳಿಕೆ ವಿರೋಧಿಸಿದ ಎಸ್‌ಪಿ ವಿರುದ್ಧ ಮೋದಿ ವಾಗ್ದಾಳಿ

"ಕೆಲ ದಿನಗಳ ಹಿಂದೆ ಚುನಾವಣೆಯಲ್ಲಿ ಮತ ಪಡೆಯುವ ಉದ್ದೇಶದಿಂದ ಉತ್ತರ ಪ್ರದೇಶದ ಬಡವರು, ದಲಿತರು, ಹಿಂದುಳಿದವರನ್ನು ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರು ನಿಂದಿಸಿದ್ದರು. ಆದರೆ ಇಲ್ಲಿನ ಸಮಾಜವಾದಿ ಪಕ್ಷ ಒಮ್ಮೆಯೂ ವಿರೋಧಿಸಲಿಲ್ಲ," ಎಂದು ಆರೋಪ ಕೂಡಾ ಮಾಡಿದ್ದಾರೆ.

ಉತ್ತರಪ್ರದೇಶದ ಹರ್ದೋಯಿಯಲ್ಲಿ ಪ್ರಧಾನಿ ನರೇಂದ್ರ ಮೋದಿ

"ಅಹಮದಾಬಾದ್ ಸ್ಫೋಟದ ಉಗ್ರರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ದೇಶದ ಮುಂದೆ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ. ಇಂತಹ ಭಯೋತ್ಪಾದಕರನ್ನು ಬೆಂಬಲಿಸುವ ಕೆಲವು ರಾಜಕೀಯ ಪಕ್ಷಗಳೂ ಇವೆ. ಈ ಜನರು ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ಪಣಕ್ಕಿಟ್ಟಿದ್ದಾರೆ," ಎಂದು ಇದಕ್ಕೂ ಮುನ್ನ ಉತ್ತರಪ್ರದೇಶದ ಹರ್ದೋಯಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+