ಬುಲಂದ್ ಶಹರ್ ನಲ್ಲಿ ಇನ್ ಸ್ಪೆಕ್ಟರ್ ಹತ್ಯೆಯ ಅಂತಿಮ ಕ್ಷಣಗಳು ವಿಡಿಯೋದಲ್ಲಿ ಸೆರೆ
ಲಖನೌ, ಡಿಸೆಂಬರ್ 5: ಸಿಟ್ಟಾಗಿದ್ದ ಗುಂಪು ರಸ್ತೆಗಳಲ್ಲಿ ಓಡುತ್ತಾ, ಮಾರೋ ಮಾರೋ ಎಂದು ಕೂಗುತ್ತಿದ್ದು, ಕೆಲ ನಿಮಿಷದಲ್ಲಿ ಚಲನೆ ಇಲ್ಲದೆ ನೆಲದ ಮೇಲೆ ಬಿದ್ದಿದ್ದ ವ್ಯಕ್ತಿಯ ದೇಹ ಕಾಣಿಸುತ್ತದೆ. ಮೂರು ನಿಮಿಷಗಳ ಕಾಲ ಮೊಬೈಲ್ ನಲ್ಲಿ ಸೆರೆ ಆಗಿರುವ ದೃಶ್ಯಾವಳಿಗಳು ಇವು. ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ಸೋಮವಾರ ಪೊಲೀಸ್ ಅಧಿಕಾರಿಯನ್ನು ಗುಂಪು ಹಲ್ಲೆ ಮಾಡಿ ಕೊಲ್ಲಲಾಗಿದೆ. ಆ ಹತ್ಯೆಗೆ ಸಂಬಂಧಿಸಿದ ವಿಡಿಯೋ ಇದು.
ಗೋಹತ್ಯೆ ಆರೋಪದಲ್ಲಿ ಈ ಘಟನೆ ನಡೆದಿದೆ. ಹತ್ಯೆಯಾದ ಇನ್ ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಹಾಗೂ ಇಪ್ಪತ್ತು ವರ್ಷದ ಸುಮಿತ್ ಸಾವು ಈ ವಿಡಿಯೋಗೆ ಸಂಬಂಧಿಸಿದೆ. ಪೊಲೀಸರು ಗುಂಡು ಹಾರಿಸಿದ ಪ್ರತೀಕಾರವಾಗಿ ಇನ್ ಸ್ಪೆಕ್ಟರ್ ನನ್ನು ಕೊಲ್ಲಲಾಗಿದೆ. ಆ ನಂತರ ಪ್ರತಿಭಟನಾನಿರತರ ಪೈಕಿ ಒಬ್ಬಾತ ಗುಂಡಿಗೆ ಬಲಿಯಾಗಿದ್ದಾನೆ.
ಈ ವಿಡಿಯೋ ಬಗ್ಗೆ ಉತ್ತರಪ್ರದೇಶ ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ. ಇನ್ನು ಸುಮಿತ್ ಗೆ ಎದೆಯಲ್ಲಿ ಗುಂಡಿನ ಗಾಯವಾಗಿದೆ. ಅವನು ಆ ಗಲಾಟೆ ನೋಡುತ್ತಿದ್ದ ಎಂಬುದು ಆತನ ಕುಟುಂಬದವರ ವಾದವಾದರೆ, ಆತ ಪೊಲೀಸರತ್ತ ಕಲ್ಲು ತೂರುತ್ತಿದ್ದ ಎಂಬುದು ವಿಡಿಯೋದಲ್ಲಿ ದಾಖಲಾಗಿದೆ.

ಉದ್ರಿಕ್ತ ಗುಂಪು ಪ್ರವೇಶ ಮಾಡಿ, ಆ ಪೈಕಿ ಕೆಲವರು ಗುಂಡು ಹಾರಿಸಿದ್ದಾರೆ ಎಂದು ಜೋರಾಗಿ ಕೂಗುತ್ತಿರುವುದು ಕೇಳಿಬಂದಿದೆ. ಆ ನಂತರ ರಕ್ತ ಒಸರುತ್ತಿದ್ದ ಸುಮಿತ್ ನ ರಕ್ಷಣೆಗೆ ಇಬ್ಬರು ವ್ಯಕ್ತಿಗಳು ಸಹಾಯ ಮಾಡಿದ್ದಾರೆ. ಗನ್ ಹಿಡಿದಿದ್ದ ಕಾನ್ಸ್ ಟೇಬಲ್ ಕೂಡ ವಿಡಿಯೋದಲ್ಲಿ ಕಂಡುಬಂದಿದ್ದು, ಗನ್ ಕಸಿದುಕೊಳ್ಳಿ, ಮಾರೋ ಮಾರೋ ಎಂದು ಕೂಗುವ ದೃಶ್ಯಾವಳಿಗಳು ಸೆರೆಯಾಗಿವೆ. ವಿಡಿಯೋದ ಅಂತಿಮ ದೃಶ್ಯದಲ್ಲಿ ಇನ್ ಸ್ಪೆಕ್ಟರ್ ನೆಲದ ಮೇಲೆ ಚಲನೆ ಇಲ್ಲದೆ ಬಿದ್ದಿರುವುದು ಕಾಣುತ್ತದೆ.
ಆ ನಂತರ ಇನ್ ಸ್ಪೆಕ್ಟರ್ ಚಾಲಕ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ಗುಂಪಿನಿಂದ ಗುಂಡು ಹಾರಿಸಿದ್ದು, ಎಸ್ ಯುವಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಗಿದೆ. ಆದರೆ ವಾಹನವನ್ನು ತಡೆಯಲಾಗಿದೆ. ಆ ಗುಂಪನ್ನು ಬಲಪಂಥೀಯ ಬಜರಂಗ ದಳದ ಕಾರ್ಯಕರ್ತ ಯೋಗೇಶ್ ರಾಜ್ ಮುನ್ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ಕಾಡಿನಲ್ಲಿ ಗೋವಿನ ಮೃತ ದೇಹಗಳು ಪತ್ತೆಯಾಗಿವೆ, ಗೋ ಹತ್ಯೆ ಮಾಡಲಾಗಿದೆ ಎಂದು ಆತ ಪೊಲೀಸರಲ್ಲಿ ದೂರು ನೀಡಿದ್ದ.
ಉದ್ರಿಕ್ತಗೊಂಡಿದ್ದ್ ಗುಂಪನ್ನು ಚದುರಿಸಲು ಪೊಲೀಸರು ಯತ್ನಿಸಿದ್ದಾರೆ. ಯಾವಾಗ ಗುಂಪಿನಿಂದ ದಾಳಿಗೆ ಯತ್ನಿಸಲಾಯಿತೋ ಆಗ ಸನ್ನಿವೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಲುವಾಗಿ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications