ಯುಪಿ ಕುಂಭಮೇಳ ಖರ್ಚಿನ ಬಗ್ಗೆ ಪ್ರಶ್ನೆ ಎತ್ತಿದ ಸಿಎಜಿ ವರದಿ
ಲಕ್ನೋ, ಆಗಸ್ಟ್ 24: ಉತ್ತರ ಪ್ರದೇಶ ಸರ್ಕಾರವು ರಾಜ್ಯ ವಿಪತ್ತು ನಿರ್ವಹಣೆ ನಿಧಿಯಿಂದ ಸುಮಾರು 67.87 ರೂಪಾಯಿ ಕೋಟಿಯನ್ನು 2019 ರಲ್ಲಿ ಕುಂಭ ಮೇಳಕ್ಕೆ ರಕ್ಷಣಾ ಸಾಧನಗಳ ಖರೀದಿ ಮಾಡಲು ಬಳಸಿಕೊಂಡಿದೆ ಎಂದು ಭಾರತದ ಪರಿಶೋಧಕ ಹಾಗೂ ಮಹಾಲೇಖಪಾಲರ (ಪರಿಶೋಧಕ ಹಾಗೂ ಮಹಾಲೇಖಪಾಲ- ಸಿಎಜಿ) ವರದಿಯು ಆರೋಪ ಮಾಡಿದೆ.
ಕುಂಭ ಮೇಳಕ್ಕೆ ರಕ್ಷಣಾ ಸಾಧನಗಳ ಖರೀದಿ ಮಾಡುವ ಉದ್ದೇಶಕ್ಕಾಗಿ ಹಣವನ್ನು ರಾಜ್ಯ ಬಜೆಟ್ನಿಂದ ಪಡೆಯಬೇಕು ಎಂದು ವರದಿ ಹೇಳಿದೆ. ಹಾಗೆಯೇ ಲೋಕೋಪಯೋಗಿ ಇಲಾಖೆಯು ಸುಮಾರು 1.69 ಕೋಟಿ ರೂಪಾಯಿಯ ಆರು ಕಾರ್ಯಗಳನ್ನು ಮಾಡಿದೆ. ಲೋಕೋಪಯೋಗಿ ಇಲಾಖೆಯು ರಸ್ತೆ ದುರಸ್ತಿ ಹಾಗೂ ಬೀದಿ ಬದಿಯ ಮರಗಳಿಗೆ ಬಣ್ಣ ಬಳಿಯಲು ಕಾರ್ಯವನ್ನು ಆರ್ಥಿಕ ಮಂಜೂರಾತಿ ಆಗದೆಯೇ ಸುಮಾರು 1.69 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಿದೆ ಎಂದು ಪರಿಶೋಧಕ ಹಾಗೂ ಮಹಾಲೇಖಪಾಲ ವರದಿಯು ವಿವರಿಸಿದೆ.
ಇನ್ನು ಕುಂಭಮೇಳ ಅಧಿಕಾರಿಯ (ಕೆಎಂಎ) ವಿರುದ್ದವು ಮಹಾಲೇಖಪಾಲ ವರದಿಯು ಉಲ್ಲೇಖ ಮಾಡಿದೆ. ಕುಂಭಮೇಳ ಅಧಿಕಾರಿಯು ಡೇರೆಗಳು ಮತ್ತು ಪೀಠೋಪಕರಣಗಳ ಮೇಲ್ವಿಚಾರಣೆಯನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಇದರಿಂದಾಗಿ ಮಾರಾಟಗಾರರು ಕಾಣೆಯಾದ ವಸ್ತುಗಳ ಮೇಲೆ 21.75 ಕೋಟಿ ರೂ.ಗಳ ಪರಿಹಾರವನ್ನು ನೀಡಬೇಕು ಎಂದು ಹೇಳಿದ್ದಾರೆ. ಆದರೆ ಕಾಣೆಯಾದ ವಸ್ತುಗಳಿಗೆ ಖಾತೆಯಿಂದ ಎಷ್ಟು ಪಾವತಿ ಮಾಡಬೇಕು ಎಂಬ ಬಗ್ಗೆ ಕೆಎಂಎ ಖಚಿತಪಡಿಸಿಲ್ಲ ಎಂದು ವರದಿಯು ಹೇಳಿದೆ.

ಲೆಕ್ಕಪರಿಶೋಧನೆಯು ರಸ್ತೆ ಕೆಲಸಗಳಿಗಾಗಿ ರೂ 3.11 ಕೋಟಿ ಅಂದಾಜು ಮಾಡಿದೆ ಮತ್ತು ಗುತ್ತಿಗೆದಾರರಿಗೆ ಅನಿಯಮಿತ ಕೆಲಸವನ್ನು ನೀಡುವುದನ್ನು ಗಮನಿಸಿದೆ. ತಡೆಗೋಡೆ ಕೆಲಸಗಳಿಗೆ (3.24 ಕೋಟಿ) ಮತ್ತು ಫೈಬರ್ ರಿನ್ಫೋರ್ಸ್ ಪ್ಲಾಸ್ಟಿಕ್ ಶೌಚಾಲಯದ ಕೆಲಸಗಳಿಗೆ (8.75 ಕೋಟಿ) ಮತ್ತು ಗುತ್ತಿಗೆದಾರರಿಗೆ ಹೆಚ್ಚುವರಿ ಪಾವತಿ (ರೂ 1.27 ಕೋಟಿ) ನೀಡಲಾಗಿದೆ ಎಂದು ಕೂಡಾ ವರದಿಯು ತಿಳಿಸಿದೆ.
ಕುಂಭ ಮೇಳದ ಆರಂಭದ ಸಂದರ್ಭದಲ್ಲಿ 58 ಶಾಶ್ವತ ಮತ್ತು 11 ತಾತ್ಕಾಲಿಕ ಕಾರ್ಯಗಳನ್ನು (ಶೇಕಡ 15 ಕೆಲಸಗಳು) ಪೂರ್ಣಗೊಳಿಸದ ಕಾರಣ ರಾಜ್ಯ ಸರ್ಕಾರವು ನಿಗದಿತ ವೇಳಾಪಟ್ಟಿಯನ್ನು ಪಾಲಿಸಿಲ್ಲ ಎಂದು ಸಿಎಜಿ ತಿಳಿಸಿದೆ. ಹಾಗೆಯೇ ಗೃಹ ಇಲಾಖೆಯ ಅಸಮರ್ಪಕ ಖರೀದಿ ಪ್ರಕ್ರಿಯೆಯಿಂದಾಗಿ, ಸುಮಾರು ರೂ. 7.83 ಕೋಟಿ ವೆಚ್ಚದ ಅಗ್ನಿಶಾಮಕ ವಾಹನಗಳು, ಬ್ಯಾಗೇಜ್ ಸ್ಕ್ಯಾನರ್ಗಳು, ಡಿಜಿಟಲ್ ರೇಡಿಯೋ ಎಚ್ಎಫ್ ಸೆಟ್ಗಳು ಮತ್ತು ಡ್ರೋನ್ ಕ್ಯಾಮೆರಾಗಳನ್ನು ಕುಂಭ ಮೇಳದ ಸಮಯದಲ್ಲಿ ಬಳಸಿಕೊಳ್ಳಲಿಲ್ಲ ಅಥವಾ ಪಡೆದಿಲ್ಲ ಎಂದು ವರದಿಗಳು ತಿಳಿಸಿದೆ.
ಮುನ್ಸಿಪಾಲ್ಗಳು ಘನ ತ್ಯಾಜ್ಯ (ಎಂಎಸ್ಡಬ್ಲ್ಯೂ) ನಿರ್ವಹಣೆಯ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಬಗೆಹರಿಸಿಲ್ಲ ಎಂದು ಕೂಡಾ ವರದಿಯು ಉಲ್ಲೇಖ ಮಾಡಿದೆ. ಕಾರ್ಯನಿರ್ವಹಿಸದ ಎಂಎಸ್ಡಬ್ಲ್ಯೂ ಸಂಸ್ಕರಣಾ ಘಟಕದಿಂದಾಗಿ, ಕುಂಭ ಮೇಳಕ್ಕೆ ಮುನ್ನ ಬನ್ಸ್ವರ್ ಪ್ಲಾಂಟ್ ಸ್ಥಳದಲ್ಲಿ ಬೃಹತ್ ಘನತ್ಯಾಜ್ಯ ಇತ್ತು. ಈ ಘನತ್ಯಾಜ್ಯವು ಜನವರಿ 2019 ಮತ್ತು ಮಾರ್ಚ್ 2019 ರ ನಡುವೆ 52,727 ಮೆಟ್ರಿಕ್ ಟನ್ ಅಧಿಕವಾಗಿದೆ ಎಂದು ಕೂಡಾ ವರದಿಯು ವಿವರಿಸಿದೆ.
2012 ಮತ್ತು 2019 ರ ನಡುವೆ ಉತ್ತರ ಪ್ರದೇಶದಲ್ಲಿ ಇಂಡೋ-ನೇಪಾಳ ಗಡಿ ರಸ್ತೆ ಯೋಜನೆಯ (ಐಎನ್ಬಿಆರ್ಪಿ) ಪೂರ್ವಸಿದ್ಧತಾ ಹಂತ, ಪ್ರಾಜೆಕ್ಟ್ ಎಕ್ಸಿಕ್ಯೂಶನ್, ಮಾನಿಟರಿಂಗ್ ಮತ್ತು ಹಣಕಾಸು ನಿರ್ವಹಣೆಯಲ್ಲಿ ಸಿಎಜಿ ನ್ಯೂನತೆಗಳನ್ನು ಭಾರತದ ಪರಿಶೋಧಕ ಹಾಗೂ ಮಹಾಲೇಖಪಾಲರ ವರದಿಯು ಬಹಿರಂಗಪಡಿಸಿದೆ. ಈ ಯೋಜನೆಯನ್ನು ಪಿಡಬ್ಲ್ಯೂಡಿ ಜಾರಿಗೊಳಿಸಿದೆ. ಉತ್ತರ ಪ್ರದೇಶ ರಾಜ್ಯದ 640 ಕಿಮೀ ಇಂಡೋ-ನೇಪಾಳ ಗಡಿ (ಐಎನ್ಬಿ) ರಸ್ತೆಯ ಆರಂಭಿಕ ಜೋಡಣೆಯನ್ನು ಸಮೀಕ್ಷೆಯ ನಂತರ 574.59 ಕಿಮೀಗೆ ಪರಿಷ್ಕರಣೆ ಮಾಡಲಾಗಿದೆ.
(ಒನ್ ಇಂಡಿಯಾ ಸುದ್ದಿ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications