Breaking news: ಕುವೈತ್ ತೈಲ ಸಂಸ್ಕರಣಾ ಘಟಕದಲ್ಲಿ ಬೆಂಕಿ
ಕುವೈತ್ನ ಮಿನಾ ಅಲ್-ಅಹ್ಮದಿ ತೈಲ ಸಂಸ್ಕರಣಾ ಘಟಕದ ಸಲ್ಫರ್ ತೆಗೆಯುವ ಘಟಕದಲ್ಲಿ ಸೋಮವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೇಶದ ರಾಷ್ಟ್ರೀಯ ಪೆಟ್ರೋಲಿಯಂ ಕಂಪನಿ (ಕೆಎನ್ಪಿಸಿ) ತಿಳಿಸಿದೆ.
ತೈಲ ಸಂಸ್ಕರಣಾ ಘಟಕದ ಸ್ಫೋಟದ ಶಬ್ದಕ್ಕೆ ಫಹಹೀಲ್ ಜಿಲ್ಲೆಯ ನಿವಾಸಿಗಳು ಬೆಚ್ಚಿದ್ದಾರೆ ಎಂದು ಎಪಿ ಹೇಳಿದೆ. ಆದರೆ, ಇಲ್ಲಿ ತನಕ ಯಾವುದೇ ಸಾವು ನೋವುಗಳ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ, ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ಬೆಂಕಿ ತಗುಲಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.
حالياً حريق مصفاة الأحمدي في وحدة الـ ARD&maca=en-ONEINDIA_ENG_option2-33211-xml-msn#القطاع_النفطي pic.twitter.com/5zFhxr43QG
— رصد و متابعة (@rsd_kwt) October 18, 2021
"ತೈಲ ಸಂಸ್ಕರಣಾ ಘಟಕ ಕಾರ್ಯಾಚರಣೆಗಳು ಮತ್ತು ರಫ್ತು ಕಾರ್ಯಾಚರಣೆಗಳ ಮೇಲೆ ಈ ದುರ್ಘಟನೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಸ್ಥಳೀಯ ಮಾರುಕಟ್ಟೆ ಕಾರ್ಯಾಚರಣೆಗಳು ಮತ್ತು ವಿದ್ಯುತ್ ಮತ್ತು ಜಲ ಸಚಿವಾಲಯಕ್ಕೆ ಪೂರೈಕೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ, ಎಲ್ಲವೂ ಸಮರ್ಪಕವಾಗಿವೆ," ಎಂದು KNPC ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿದೆ.
ಕಂಪನಿಯು ವಾತಾವರಣದ ಉಳಿಕೆ ಡೀಸಲ್ಫರೈಸೇಶನ್ ಘಟಕವನ್ನು (ARDS) ಪ್ರತ್ಯೇಕಿಸಿದೆ ಎಂದು ಹೇಳಿದೆ - ಇದು ಅಂತಿಮ ಉತ್ಪನ್ನದಿಂದ ಗಂಧಕ(Sulfur)ವನ್ನು ಬೇರ್ಪಡಿಸುತ್ತದೆ ಮತ್ತು ಘಟನಾ ಸ್ಥಳಕ್ಕೆ ತಲುಪಿರುವ ಅಗ್ನಿಶಾಮಕ ದಳದವರು ಈಗಾಗಲೇ ಅಗ್ನಿಜ್ವಾಲೆಯನ್ನು ನಂದಿಸಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂಬ ವರದಿ ಬಂದಿದೆ.

ಮಿನ ಅಲ್-ಅಹ್ಮದಿ ಸೌಲಭ್ಯದ ಸಾಮರ್ಥ್ಯವನ್ನು ದಿನಕ್ಕೆ 346,000 ಬ್ಯಾರೆಲ್ಗಳಿಗೆ ವಿಸ್ತರಿಸುವುದಾಗಿ KNPC ಕಳೆದ ತಿಂಗಳು ಪ್ರಕಟಿಸಿತ್ತು. ಇದು ಕಡಿಮೆ ಹೊರಸೂಸುವಿಕೆಯೊಂದಿಗೆ ಇಂಧನವನ್ನು ಉತ್ಪಾದಿಸುವ ಯೋಜನೆಯ ಭಾಗವಾಗಿದೆ.
وقع قبل قليل حريق في وحدة إزالة الكبريت من النفط المتبقي ARDS في مصفاة ميناء الأحمدي، وتقوم فرق الإطفاء في المصفاة حاليا بالتعامل مع الحريق، علما أنه لم تقع أي إصابات جراء الحادث.وسنوافيكم بمزيد من التفاصيل قريبا.
— البترول الوطنية | KNPC (@KNPCofficial) October 18, 2021
ಸೌದಿ ಅರೇಬಿಯಾದ ಕುವೈತ್ ಗಡಿಯ ಉತ್ತರದ ಪರ್ಷಿಯನ್ ಕೊಲ್ಲಿಯಲ್ಲಿ ಈ ಸಂಸ್ಕರಣಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಇದು ಮುಖ್ಯವಾಗಿ ದೇಶದ ದೇಶೀಯ ಮಾರುಕಟ್ಟೆಗೆ ಗ್ಯಾಸೋಲಿನ್ ಮತ್ತು ಡೀಸೆಲ್ ಅನ್ನು ಪೂರೈಸುತ್ತದೆ.
ಕುವೈತ್ ದೇಶ 4 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆ ಒದಗಿಸಿದೆ ಮತ್ತು ಇದು ವಿಶ್ವದ ಆರನೇ ಅತಿದೊಡ್ಡ ತೈಲ ಸಂಗ್ರಹವನ್ನು ಹೊಂದಿದೆ.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ...
(Reuters, AP)
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications