Get Updates
Get notified of breaking news, exclusive insights, and must-see stories!

ಖಂಡಗ್ರಾಸ ಸೂರ್ಯಗ್ರಹಣ; ಗೋಕರ್ಣ ಮಹಾಬಲೇಶ್ವರನ ವಿಶೇಷ ದರ್ಶನ

ಕಾರವಾರ, ಜೂನ್ 20: ಭಾನುವಾರ ಜರುಗಲಿರುವ ಖಂಡಗ್ರಾಸ ಚೂಡಾಮಣಿ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಗೋಕರ್ಣ ಕ್ಷೇತ್ರದಲ್ಲಿ ಮಹಾಬಲೇಶ್ವರನ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗಿದೆ.

Recommended Video

      Solar Eclipse June 21 : ಗ್ರಹಣ ಸಮಯದಲ್ಲಿ ಇದನ್ನು ತಪ್ಪದೇ ಮಾಡಿ | Roopa Iyer | Oneindia Kannada

      ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬೆಳಿಗ್ಗೆ 9.30ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ,‌ ಭಾನುವಾರ ಸೂರ್ಯ ಗ್ರಹಣ ಬೆಳಿಗ್ಗೆ 10.04ಕ್ಕೆ ಪ್ರಾರಂಭಗೊಂಡು ಮಧ್ಯಾಹ್ನ 1.23ಕ್ಕೆ ಮೋಕ್ಷ ಪಡೆಯಲಿದೆ. ಈ ಕಾರಣದಿಂದ ಬೆಳಗ್ಗೆಯಿಂದ ಗ್ರಹಣ ಮೋಕ್ಷದ ಸಮಯ 1.23ರವರೆಗೂ ಮಹಾಬಲೇಶ್ವರನ ದರ್ಶನಕ್ಕೆ ಅವಕಾಶ ನೀಡಲಾಗಿದೆ.

      Special Darshana In Karwar Gokarna Mahabaleshwara Temple On Solar Eclipse June 21

      ಹಿಂದಿನ ನಿಯಮದಂತೆ ನಂದಿ ಮಂಟಪದವರೆಗೆ ಭಕ್ತಾದಿಗಳು ತೆರಳಿ ಗೋಕರ್ಣನ ದರ್ಶನ ಮಾಡಬಹುದಾಗಿದೆ ಹೊರತು ಆತ್ಮಲಿಂಗದ ಸ್ಪರ್ಶ ದರ್ಶನಕ್ಕೆ ಅವಕಾಶವಿಲ್ಲ. ಗ್ರಹಣ ಕಾಲದಿಂದ ಮೋಕ್ಷ ಕಾಲದವರೆಗೆ ಮಹಾಬಲೇಶ್ವರನಿಗೆ ವಿಶೇಷ ಗಂಗಾಜಲಾಭಿಷೇಕ ನಡೆಯಲಿದ್ದು, ಗ್ರಹಣ ಮೋಕ್ಷದ ಬಳಿಕ ಕ್ಷೇತ್ರ ಶುಚಿಗೊಳಿಸಿ, ಮಹಾಪೂಜೆ ನಡೆಯಲಿದೆ. ಇನ್ನು ಗ್ರಹಣದ ದೋಷ ನೀಗಿಸಲು ಕ್ಷೇತ್ರದಲ್ಲಿ ಯಾವುದೇ ಪೂಜೆ, ದಾನ- ಧರ್ಮಾಧಿ ಪ್ರಕ್ರಿಯೆಗಳಿಗೆ ಅವಕಾಶವಿಲ್ಲ ಎಂದು ತಿಳಿದುಬಂದಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+