ಸಾರಿಗೆ ನೌಕರ ಬೇಡಿಕೆ ಈಡೇರಿಸುವ ಬಗ್ಗೆ ಯಡಿಯೂರಪ್ಪ ಮಹತ್ವದ ಹೇಳಿಕೆ!

ಬೆಂಗಳೂರು,

ಡಿ.
11:
ತಮ್ಮನ್ನು
ಸರ್ಕಾರಿ
ನೌಕರರು
ಎಂದು
ಪರಿಗಣಿಸುವುದೂ
ಸೇರಿದಂತೆ
ಹಲವು
ಬೇಡಿಕೆಗಳನ್ನು
ಇಟ್ಟುಕೊಂಡು
ಸಾರಿಗೆ
ಸಿಬ್ಬಂದಿ
ನಡೆಸುತ್ತಿರುವ
ಮುಷ್ಕರದ
ಕುರಿತು
ಮುಖ್ಯಮಂತ್ರಿ
ಬಿ.ಎಸ್.
ಯಡಿಯೂರಪ್ಪ
ಮಹತ್ವದ
ಹೇಳಿಕೆ
ನೀಡಿದ್ದಾರೆ.
ಜೊತೆಗೆ
ಸಾರಿಗೆ
ಸಚಿವರೂ
ಆಗಿರುವ
ಡಿಸಿಎಂ
ಲಕ್ಷ್ಮಣ
ಸವದಿ
ಅವರು
ಕೂಡ
ಸಾರಿಗೆ
ನೌಕರರಲ್ಲಿ
ಮನವಿ
ಮಾಡಿಕೊಂಡಿದ್ದಾರೆ.
ನಿನ್ನೆ
(ಡಿ.
10)
ಪ್ರತಿಭಟನೆ
ನಡಸಿದ್ದ
ಸಾರಿಗೆ
ನಿಗಮಗಳ
ನೌಕರರು
ಇವತ್ತು
ಮುಷ್ಕರ
ಆರಂಭಿಸಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಸಾರಿಗೆ

ನಿಗಮದ
ನಿಗಮಗಳ
ಮುಷ್ಕರಿಂದ
ಜನರು
ಸಂಕಷ್ಟಕ್ಕೆ
ಸಿಲುಕಿದ್ದಾರೆ.
ನಿನ್ನೆ
ವಿಧಾನಸೌಧಕ್ಕೆ
ಮುತ್ತಿಗೆ
ಹಾಕಲು
ಸಿಬ್ಬಂದಿ
ಪ್ರಯತ್ನಿಸಿತ್ತು.
ಸಂದರ್ಭದಲ್ಲಿ
ಹಲವರನ್ನು
ವಶಕ್ಕೆ
ಪಡೆಯಲಾಗಿತ್ತು.
ಬಂಧನ
ಖಂಡಿಸಿ
ಹಾಗೂ
ಬೇಡಿಕೆ
ಈಡೇರಿಸಲೇಬೇಕು
ಎಂದು
ಕೆಎಸ್‌ಆರ್‌ಟಿಸಿ,
ಬಿಎಂಟಿಸಿ,
ವಾಯುವ್ಯ
ಸಾರಿಗೆ
ಹಾಗೂ
ಈಶಾನ್ಯ
ಸಾರಿಗೆ
ನಿಗಮಗಳ
ಮುಷ್ಕರ
ಆರಂಭಿಸಿದ್ದಾರೆ.
ಸಾರಿಗೆ
ನೌಕರರ
ಬೇಡಿಕೆ
ಈಡೇರಿಸುವ
ಕುರಿತು
ಮುಖ್ಯಮಂತ್ರಿ
ಯಡಿಯೂರಪ್ಪ
ಅವರು
ಮಹತ್ವದ
ಹೇಳಿಕೆ
ನೀಡಿದ್ದಾರೆ.

id='are-slot-2'
class='oiad
oi-axt
oiadv'>

ಲಾಕ್‌ಡೌನ್‌ನಲ್ಲಿಯೂ ಸಂಬಳ ಕೊಟ್ಟಿದ್ದೇವೆ

ಲಾಕ್‌ಡೌನ್‌ನಲ್ಲಿಯೂ ಸಂಬಳ ಕೊಟ್ಟಿದ್ದೇವೆ

ಕೊರೊನಾ ವೈರಸ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಬೇರೆ ಯಾವುದೇ ರಾಜ್ಯಗಳಲ್ಲಿ ಸಾರಿಗೆ ನೌಕರರಿಗೆ ಸಂಬಳ ಕೊಟ್ಟಿಲ್ಲ. ಆದರೆ ನಾವು ನಾಲ್ಕು ತಿಂಗಳುಗಳ ಸಂಬಳವನ್ನು ನೀಡಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ನಮ್ಮ ನೌಕರರಿಗೆ ಸಂಬಳ ಕೊಡಿಸಿದ್ದೇವೆ. ಇದನ್ನು ಸಾರಿಗೆ ನೌಕರರು ತಿಳಿದುಕೊಳ್ಳಬೇಕು. ಧರಣಿ ವಾಪಸ್ ಪಡೆಯಿರಿ, ಸರ್ಕಾರ ನಿಮ್ಮ ಜೊತೆಗಿದೆ ಎಂದು ಲಕ್ಷ್ಮಣ ಸವದಿ ಅವರು ಮನವಿ ಮಾಡಿಕೊಂಡಿದ್ದಾರೆ.

ಏನೂ ಮಾಡುವುದಕ್ಕೆ ಆಗಲ್ಲ!

ಏನೂ ಮಾಡುವುದಕ್ಕೆ ಆಗಲ್ಲ!

ಸಾರಿಗೆ ನೌಕರರ ಮುಷ್ಕರದಿಂದ ಸಾರ್ವನಿಕರಿಗೆ ಆಗುತ್ತಿರುವ ಸಮಸ್ಯೆ ಆಗುತ್ತಿರುವ ಕುರಿತು ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಬೆಂಗಳೂರಿನಲ್ಲಿ ಮಾತನಾಡಿರುವ ಸವದಿ, ಕೋವಿಡ್‌ ಲಾಕ್‌ಡೌನ್ ಕಾಲದಲ್ಲಿ ಸತತ ಎರಡು ತಿಂಗಳುಗಳ ಕಾಲ ಬಂದ್ ಇತ್ತು. ಆಗಲೂ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸ್ವಲ್ಪ ಸಮಸ್ಯೆ ಆಗುತ್ತದೆ. ಆದರೆ ಸಾರ್ವಜನಿಕರೂ ನಮ್ಮ ಜೊತೆ ಕೈ ಜೋಡಿಸಬೇಕು. ಒಂದೇ ಸಲಕ್ಕೆ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡೋಕೆ ಆಗುವುದಿಲ್ಲ. ಪರ್ಯಾಯ ವ್ಯವಸ್ಥೆ ಮಾಡುತ್ತೇವೆ, ಅಲ್ಲಿಯವರೆಗೆ ಜನರು ಸಹಕಾರ ಕೊಡ್ಬೇಕು ಎಂದು ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.

ಇವತ್ತು ಸಭೆ ಮಾಡುತ್ತೇವೆ

ಇವತ್ತು ಸಭೆ ಮಾಡುತ್ತೇವೆ

ನಿನ್ನೆಯ ಅಧಿವೇಶನದಲ್ಲಿ ನಾವೆಲ್ಲರೂ ಸದನದಲ್ಲಿ ಇರಬೇಕಿತ್ತು. ಎಲ್ಲಾ ಸದಸ್ಯರು ಇದ್ದು ವಿಧೇಯಕಗಳನ್ನು ಪಾಸ್ ಮಾಡಬೇಕಿಕಾಗಿತ್ತು. ಪರಿಷತ್‌ನಲ್ಲಿ ನಮಗೆ ಬಹುಮತ ಇರಲಿಲ್ಲ, ಹೀಗಾಗಿ ನಾನು ವಿಧಾನ ಪರಿಷತ್‌ನಲ್ಲಿರಲೇ ಬೇಕಾಗಿತ್ತು.

ಹೀಗಾಗಿ ಸಾರಿಗೆ ನೌಕರರ ಪ್ರತಿಭಟನೆ ಸ್ಥಳಕ್ಕೆ ಹೋಗುವುದಕ್ಕೆ ಆಗಿರಲಿಲ್ಲ. ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಅವರು ಮುತ್ತಿಗೆ ಹಾಕುವ ಕೆಲಸ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಆಗಬಹುದಾಗಿದ್ದ ಅನಾಹುತ ತಪ್ಪಿಸಲು ಪೊಲೀಸರು ಅವರನ್ನು ಬಂಧಿಸಿ, ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. ಇವತ್ತು ಮೊದಲು ಅಧಿಕಾರಿಗಳೊಂದಿಗೆ ನೌಕರರ ಬೇಡಿಕೆ ಈಡೇರಿಸುವ ಕುರಿತು ಸಭೆ ಮಾಡುತ್ತೇನೆ. ಬಳಿಕ ನೌಕರರೊಂದಿಗೆ ಸಭೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

Recommended Video

    Team India ಇಂದು ಅಭ್ಯಸ ಪಂದ್ಯದಲ್ಲಿ ಹೀನಾಯ ಪ್ರದರ್ಶನ | Oneindia Kannada
    ಬೇಡಿಕೆ ಈಡೇರಿಸುವುದು ಕಷ್ಟ: ಬಿಎಸ್‌ವೈ

    ಬೇಡಿಕೆ ಈಡೇರಿಸುವುದು ಕಷ್ಟ: ಬಿಎಸ್‌ವೈ

    ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದಾರೆ. ಸದ್ಯ ಕೋವಿಡ್ ಹಾಗೂ ಆರ್ಥಿಕ ಸಂಕಷ್ಟ ಪರಿಸ್ಥಿತಿ ಇದೆ. ಹೀಗಾಗಿ ಈಗಲೇ ಅವರ ಬೇಡಿಕೆ ಈಡೇರಿಸುವುದು ಕಷ್ಟ. ಈಗಾಗಲೇ ಸಂಬಂಧಿಸಿದ ಸಚಿವರು ಅವರ ಜೊತೆ ಚರ್ಚೆ ಮಾಡಿದ್ದಾರೆ ಎಂದ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಆ ಮೂಲಕ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+