ವರ್ಷಾಂತ್ಯ ವಿಶೇಷ : 2015ರ ಏಪ್ರಿಲ್ ಹಿನ್ನೋಟ
ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಣಿ : ಏಪ್ರಿಲ್ 2 : ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಏಪ್ರಿಲ್ 2ರಿಂದ ಮೂರು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಿತು. ಕರ್ನಾಟಕದಲ್ಲಿ 1982, 1993, 1999, 2008, 2015 ಸೇರಿ ಒಟ್ಟು 5 ಬಾರಿ ಕಾರ್ಯಕಾರಣಿ ಸಭೆ ನಡೆದಿದೆ.
ಸರ್ಕಾರದಿಂದ
ಜಾತಿ
ಗಣತಿ
:
ಏಪ್ರಿಲ್
11
:
ಸರ್ಕಾರದ
ಮಹತ್ವಾಕಾಂಕ್ಷೆಯ
ಸಾಮಾಜಿಕ
ಮತ್ತು
ಶೈಕ್ಷಣಿಕ
ಸಮೀಕ್ಷೆ
ಏಪ್ರಿಲ್
11
ರಿಂದ
30
ರವರೆಗೆ
ನಡೆಯಿತು.
ಈ
ಸಮೀಕ್ಷೆ
ಮೂಲಕ
ರಾಜ್ಯದ
ಪ್ರತಿಯೊಂದು
ಕುಟುಂಬಕ್ಕೆ
ಸೇರಿದ
ವ್ಯಕ್ತಿಗಳ
ಸಾಮಾಜಿಕ,
ಶೈಕ್ಷಣಿಕ
ಸ್ಥಿತಿ-ಗತಿ,
ಔದ್ಯೋಗಿಕ-ಆರ್ಥಿಕ
ಮಾಹಿತಿಗಳನ್ನು
ಸಂಗ್ರಹಣೆ
ಮಾಡಲಾಯಿತು.
[ಜಾತಿ
ಗಣತಿ
:
ಏಕೆ,
ಏನು,
ಇದೆಲ್ಲಾ
ಬೇಕೆ?]
ಹುಬ್ಬಳ್ಳಿಗೆ ವಿಮಾನ ಸೇವೆ ಆರಂಭ : ಏಪ್ರಿಲ್ 12 : ಬೆಂಗಳೂರು-ಹುಬ್ಬಳ್ಳಿ ನಡುವಿನ ವಿಮಾನಯಾನ ಸೇವೆವೆ ಏರ್ ಪೆಗಾಸಸ್ ಚಾಲನೆ ನೀಡಿತು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಏರ್ ಪೆಗಾಸಸ್ ವಿಮಾನಯಾನ ಸೇವೆಗೆ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು. [ವರ್ಷಾಂತ್ಯ ವಿಶೇಷ : 2015ರ ಜನವರಿ ಹಿನ್ನೋಟ]
ಕಾವೇರಿಗಾಗಿ ಕರ್ನಾಟಕ ಬಂದ್ : ಏಪ್ರಿಲ್ 18 : ಕುಡಿಯುವ ನೀರಿಗಾಗಿ ಕರ್ನಾಟಕ ಸರ್ಕಾರ ಆರಂಭಿಸಲಿರುವ ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಕ್ರಮ ಖಂಡಿಸಿ ಏ.18ರಂದು 'ಕನ್ನಡ ಒಕ್ಕೂಟ' ಹೆಸರಿನಲ್ಲಿ ಕರ್ನಾಟಕ ಬಂದ್ ನಡೆಸಿತು. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. [ಮೇಕೆದಾಟು ಯೋಜನೆ ವಿವಾದ ಏಕೆ, ಏನು?]
ಬದನವಾಳು
ಸತ್ಯಾಗ್ರಹ
:
ಏಪ್ರಿಲ್
19
:
'ಯಂತ್ರ
ನಾಗರೀಕತೆ
ನಿಗ್ರಹಿಸೋಣ,
ಶ್ರಮ
ಸಹಿತ
ಸರಳ
ಬದುಕನ್ನು
ಪೋಷಿಸೋಣ'
ಎಂಬ
ಘೋಷಣೆಯೊಂದಿಗೆ
ಏಪ್ರಿಲ್
19ರಂದು
ಬದನವಾಳು
ಗ್ರಾಮದಲ್ಲಿ
'ಸುಸ್ಥಿರ
ಬದುಕಿನ
ರಾಷ್ಟ್ರೀಯ
ಸಮಾವೇಶ'
ನಡೆಯಿತು.
ಖ್ಯಾತ
ಬಾಲಿವುಡ್
ನಟ
ಇರ್ಫಾನ್
ಖಾನ್
ಈ
ಸಮಾವೇಶಕ್ಕೆ
ಬೆಂಬಲ
ನೀಡಿದರು.
ಮೈಸೂರು
ಜಿಲ್ಲೆಯ
ದಕ್ಷಿಣ
ತುದಿಯಲ್ಲಿ
ಚಾಮರಾಜನಗರ
ಜಿಲ್ಲೆಗೆ
ಅಂಟಿಕೊಡಂತೆ
ಬದನವಾಳು
ಗ್ರಾಮವಿದೆ.
ಐಐಟಿ ಸ್ಥಾಪನೆಗೆ ಮೂರು ಜಿಲ್ಲೆ ಆಯ್ಕೆ : ಏಪ್ರಿಲ್ 25 : ಕರ್ನಾಟಕದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಮೂರು ಜಿಲ್ಲೆಗಳನ್ನು ಗುರುತಿಸಿತು. ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ರಾಯಚೂರು, ಧಾರವಾಡ, ಮೈಸೂರು ಜಿಲ್ಲೆಗಳನ್ನು ಐಐಟಿ ಸ್ಥಾಪನೆಗೆ ಗುರುತಿಸಲಾಗಿದೆ ಎಂದು ಹೇಳಿದರು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು.
ಮೆಟ್ರೋ ಸಂಚಾರ ಆರಂಭ : ಏಪ್ರಿಲ್ 29 : ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಡುವಿನ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಮೇ 1 ರಂದು ಚಾಲನೆ ದೊರೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ನಾಗಸಂದ್ರ ನಿಲ್ದಾಣದಲ್ಲಿ ನಮ್ಮ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಈ ಮಾರ್ಗದಲ್ಲಿ ಗರಿಷ್ಠ 23 ರೂ., ಕನಿಷ್ಠ 10 ರೂ. ಪ್ರಯಾಣದರವಿದೆ. [ನಾಗಸಂದ್ರ-ಪೀಣ್ಯ ಇಂಡಸ್ಟ್ರಿ ದರ ಪಟ್ಟಿ]