ದಲಿತರು ಮುಟ್ಟಿ ಸ್ವಾಮೀಜಿಗಳು ಅಪವಿತ್ರ: ಬಿಜೆಪಿ ಗ್ರೂಪ್ನಲ್ಲಿ ಚರ್ಚೆ
ಮೂಡಿಗೆರೆ, ಫೆಬ್ರವರಿ 24: 'ದಲಿತ ಮುಟ್ಟಿದ್ದರಿಂದ ನಿರ್ಮಲಾನಂದ ಸ್ವಾಮಿಗಳು ಅಪವಿತ್ರ ಆಗಿದ್ದಾರೆ' ಹೀಗೊಂದು ಚರ್ಚೆ 'BJP ಮೂಡಿಗೆರೆ ಮಂಡಲ' ಎಂಬ ವಾಟ್ಸಾಪ್ ಗ್ರೂಪ್ನಲ್ಲಿ ನಡೆದಿದೆ.
ದಲಿತ ಮುಖಂಡ ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ ಅವರು ಮೊನ್ನೆ ನಡೆದ ಪಕ್ಷದ ಕಾರ್ಯಕ್ರಮ ಸಂದರ್ಭ ವೇದಿಕೆ ಮೇಲೆ ನಿರ್ಮಲಾನಂದ ಸ್ವಾಮಿ ಅವರ ಪಾದ ಮುಟ್ಟಿದ ಕಾರಣ ಅವರು ಅಪವಿತ್ರ ಆಗಿದ್ದಾರೆ ಎಂಬರ್ಥ ಹೊಮ್ಮುವಂತೆ ಮೂಡಿಗೆರೆ ಬಿಜೆಪಿ ವಾಟ್ಸಾಪ್ ಗ್ರೂಪ್ನಲ್ಲಿ ಸಂದೇಶ ಹರಿದಾಡಿದೆ ಇದಕ್ಕೆ ಅದೇ ಗ್ರೂಪ್ನಲ್ಲಿ ವಿರೋಧವೂ ವ್ಯಕ್ತವಾಗಿದೆ.
ಮೂಡಿಗೆರೆಯಲ್ಲಿ ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದು, ಅದರಲ್ಲಿ ದಲಿತರಾಗಿರುವ ಕುಮಾರಸ್ವಾಮಿ ಅವರೂ ಕೂಡ ಒಬ್ಬರಾಗಿದ್ದಾರೆ. ಇತ್ತೀಚೆಗೆ ಮೂಡಿಗೆರೆಯಲ್ಲಿ ಬಿಜೆಪಿ ರ್ಯಾಲಿ ನಂತರ ಮೂಡಿಗೆರೆ ಬಿಜೆಪಿಯಲ್ಲಿ ಭಿನ್ನಮತ ಹೆಚ್ಚಾಗಿದ್ದು, ಕುಮಾರಸ್ವಾಮಿ ಅವರ ವಿರೋಧಿ ಬಣದ ಸದಸ್ಯರು ಈ ರೀತಿಯ ಮೆಸೆಜ್ ಒಂದನ್ನು ಗ್ರೂಪ್ನಲ್ಲಿ ಹಾಕಿದ್ದಾರೆ.

ಕುಮಾರಸ್ವಾಮಿ ವಿರೋಧಿ ಬಣದ ಸದಸ್ಯ ಸುಂದ್ರೇಶ್ ಕೆ.ಪಿ ಎಂಬುವರು ಕುಮಾರಸ್ವಾಮಿ ಅವರ ಕುರಿತು 'ಅಯೋಗ್ಯ'ರು ಸ್ವಾಮಿಯನ್ನು ಮುಟ್ಟಿರುವುದರಿಂದ ನಿರ್ಮಲಾನಂದ ಸ್ವಾಮಿಗಳು ಅಪವಿತ್ರರಾಗಿದ್ದಾರೆ ಎಂದು ವಾಟ್ಸಾಪ್ ಗ್ರೂಪ್ನಲ್ಲಿ ಸಂದೇಶ ಹಾಕಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಘುಪತಿ ಬಾಳೂರು ಎಂಬುವರು ದಲಿತರು ಮುಟ್ಟಿದರೆ ಸ್ವಾಮಿಗಳು ಅಪವಿತ್ರ ಆಗುತ್ತಾರೆಯೇ? ಎಂದು ಪ್ರಶ್ನಿಸಿದ್ದರು.
ಆ ನಂತರ ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದ ಸುಂದ್ರೇಶ್ 'ನಾನು ದಲಿತ ಎಂಬ ಪದ ಬಳಸಿಲ್ಲ, ಅಯೋಗ್ಯ ಎಂದಿದ್ದೇನೆ ಅಷ್ಟೆ' ಎಂದು ಮೆಸೆಜ್ ಮಾಡಿದ್ದಾರೆ. ಈ ಚರ್ಚೆ ಹೀಗೆ ಮುಂದುವರೆದಿದೆ.
ಆದರೆ ಈ ಚರ್ಚೆಯಿಂದ ಬಿಜೆಪಿಯಲ್ಲಿಯೇ ದಲಿತ ವಿರೋಧಿ ಮನಸ್ಥಿತಿ ಇನ್ನೂ ಜಾಗೃತವಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ, ಮೂಡಿಗೆರೆಯ ಬಿಜೆಪಿಯೇತರ ಪಕ್ಷದ ಸದಸ್ಯರು ಮೆಸೆಜ್ಗಳ ಸ್ಕ್ರೀನ್ ಶಾಟ್ ಇಟ್ಟುಕೊಂಡು ಬಿಜೆಪಿ ದಲಿತ ವಿರೋಧಿ ಎಂಬುದರ ಸಾಕ್ಷಿ ಇದು ಎನ್ನುತ್ತಿವೆ.
ಘಟನೆ ಬಗ್ಗೆ ಮಾಜಿ ಶಾಸಕ ಕುಮಾರಸ್ವಾಮಿ ಅವರು ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ದೂರು ನೀಡಿದ್ದು, ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications