ರಂಜಾನ್ ತಿಂಗಳಲ್ಲಿ ಹೆಚ್ಚಾಗುತ್ತಿದೆ ಉಗ್ರರ ದಾಳಿ!
ಬೆಂಗಳೂರು, ಜೂನ್ 27 : ಈ ಹಿಂದೆ ಭಯೋತ್ಪಾದಕ ಸಂಘಟನೆಗಳಲ್ಲಿ ಒಂದು ನಿಯಮವಿತ್ತು. ರಂಜಾನ್ ತಿಂಗಳಿನಲ್ಲಿ ಉಗ್ರರು ಯಾವುದೇ ದಾಳಿಗಳನ್ನು ನಡೆಸುತ್ತಿರಲಿಲ್ಲ. ವಿಶ್ವದ ಅನೇಕ ಉಗ್ರ ಸಂಘಟನೆಗಳು ಈ ನಿಯಮವನ್ನು ಪಾಲಿಸುತ್ತಿದ್ದವು.
ಆದರೆ, ಇಂದಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ. ರಂಜಾನ್ ತಿಂಗಳಿನಲ್ಲಿಯೇ ಉಗ್ರರ ದಾಳಿ ಹೆಚ್ಚಾಗುತ್ತಿದೆ. ಈ ವರ್ಷ ರಂಜಾನ್ ತಿಂಗಳು ಆರಂಭವಾದ ಬಳಿಕ ವಿಶ್ವದಲ್ಲಿ ನಡೆದ ದಾಳಿಗಳಲ್ಲಿ 543 ಜನರು ಸಾವನ್ನಪ್ಪಿದ್ದಾರೆ. ಶನಿವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದಾಳಿಯೂ ಇದರಲ್ಲಿ ಸೇರಿದೆ. [ರಂಜಾನ್ ಉಪವಾಸದ ನಂತರ ಹೊಟ್ಟೆ ತುಂಬಿಸುವ ಸಮೋಸ]

ರಂಜಾನ್ ಮಾಸದಲ್ಲಿಯೇ ಉಗ್ರರು ಏಕೆ ದಾಳಿ ನಡೆಸುತ್ತಾರೆ?. ಈ ಕುರಿತು ಐದು ಅಂಶಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. [ರಂಜಾನ್ ಕುರಿತು ಸೈಯದ್ ಹಮಿದ್ ಮೊಹ್ಸಿನ್ ಲೇಖನ]
* ಸಾಮಾನ್ಯವಾಗಿ ರಂಜಾನ್ ತಿಂಗಳಿನಲ್ಲಿ ಭದ್ರತೆ ಸಾಕಷ್ಟು ಕಡಿಮೆ ಇರುತ್ತದೆ. ಹಲವಾರು ಭದ್ರತಾ ಸಂಸ್ಥೆಗಳು ಉಗ್ರರು ಈ ತಿಂಗಳಿನಲ್ಲಿ ದಾಳಿ ನಡೆಸುವುದಿಲ್ಲ ಎಂದು ಇಂದಿಗೂ ನಂಬಿದ್ದಾರೆ.
* ಉಗ್ರರು ಇಸ್ಲಾಂನಲ್ಲಿನ ನಿಯಮಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದಾರೆ. ರಂಜಾನ್ ತಿಂಗಳಿನಲ್ಲಿ ದಾಳಿಗಳನ್ನು ಮಾಡುವ ಉಗ್ರರು ಇಸ್ಲಾಂ ಧರ್ಮದಂತೆ ಮಾಡಿದ್ದೇವೆ ಎಂದು ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ.
* ರಂಜಾನ್ ತಿಂಗಳಿನಲ್ಲಿ ಹತ್ಯೆ ಮಾಡುವುದು ಪವಿತ್ರ ಎಂದು ಉಗ್ರರು ಭಾವಿಸಿದ್ದಾರೆ. ದೇವರ ಬಗ್ಗೆ ನಂಬಿಕೆ ಇಲ್ಲದವರನ್ನು ನಾವು ಹತ್ಯೆ ಮಾಡಿದ್ದೇವೆ ಎಂದು ಅವರು ಅಂದುಕೊಳ್ಳುತ್ತಾರೆ.
* ಈ ತಿಂಗಳಿನಲ್ಲಿ ಹುತಾತ್ಮರಾದರೆ ಅವರು ದೇವರಿಗೆ ಅತ್ಯಂತ ಹತ್ತಿರವಾಗುತ್ತಾರೆ ಎಂದು ನಂಬುತ್ತಾರೆ. ದೇವರನ್ನು ನಂಬದವರನ್ನು ಕೊಂದರೆ ದೇವರು ಅವರನ್ನು ಮೆಚ್ಚಿಕೊಳ್ಳುತ್ತಾರೆ ಎಂದು ಉಗ್ರರು ನಂಬಿದ್ದಾರೆ.
* ಈ ತಿಂಗಳಿನಲ್ಲಿ ದಾಳಿಗಳನ್ನು ಮಾಡಿದರೆ ಹೆಚ್ಚಿನ ಬಹುಮಾನ ಸಿಗುತ್ತದೆ ಎಂಬುದು ಉಗ್ರರ ನಂಬಿಕೆ. ರಂಜಾನ್ ಮಾಸದಲ್ಲಿ ಹುತಾತ್ಮರಾದರೆ ಜಿಹಾದ್ಗೆ ಅತ್ಯಂತ ಶ್ರೇಷ್ಠ ತ್ಯಾಗ ಮಾಡಿದಂತೆ ಎಂಬುದು ಅವರ ನಂಬಿಕೆಯಾಗಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications