ಅದ್ಯಾವ ಗಳಿಗೆಯಲ್ಲಿ ಡಿಕೆಶಿಗೆ, ರಮೇಶ್ ಕುಮಾರ್ ಮಾತು ಕೊಟ್ರೋ? ಹಾಗೇ ಆಯ್ತು
Recommended Video
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ವಿಶ್ವಾಸ ಗೊತ್ತುವಳಿಯ ವೇಳೆ, ಸಚಿವರಾಗಿದ್ದ ಡಿ ಕೆ ಶಿವಕುಮಾರ್, ಬಿಜೆಪಿ ವಿರುದ್ದ ಟೀಕೆಯೇ ಪ್ರವಾಹವನ್ನೇ ಹರಿಸುತ್ತಿದ್ದರು. ಸತತ ಇಡಿ/ಐಟಿ ಅಧಿಕಾರಿಗಳ ವಿಚಾರಣೆಯ ಸಿಟ್ಟು ಅವರಲ್ಲಿ ಮಾತಿನಲ್ಲಿ, ಮುಖದಲ್ಲಿ ಕಾಣುತ್ತಿತ್ತು.
"ನಾನು ಪಟ್ಟಂಹತ ನೋವು, ಹಿಂಸೆ, ಯಾವ ಶತ್ರುವಿಗೂ ಬಾರದಿರಲಿ" ಎಂದು ಹೇಳುತ್ತಾ ಡಿಕೆಶಿ, ' ನನಗೆ, ನನ್ನ ಕುಟುಂಬವನ್ನು, ಏನೂ ಅರಿಯದ ನನ್ನ ತಾಯಿಯನ್ನೂ ಅಧಿಕಾರಿಗಳು ಬಿಟ್ಟಿಲ್ಲ, ಸಮಯ ಸಂದರ್ಭ ಎನ್ನುವುದು ಇದೆ, ಹಾಗಾಗಿ, ಸೂಕ್ತ ಸಮಯದಲ್ಲಿ ಇದಕ್ಕೆಲ್ಲಾ ಉತ್ತರ ನೀಡುತ್ತೇನೆ" ಎಂದು ವಾಗ್ದಾಳಿ ನಡೆಸುತ್ತಿದ್ದರು.
"ನಾವು ಆಡಳಿತ ಪಕ್ಷದಲ್ಲಿರುವುದೂ ಶಾಸ್ವತವಲ್ಲ, ನೀವು ವಿರೋಧ ಪಕ್ಷದಲ್ಲಿ ಇರುವುದು ಶಾಸ್ವತ ಅಲ್ಲ ಎನ್ನುವುದನ್ನು ನಾನು ಅರಿತಿದ್ದೇನೆ, ಕಾಲಚಕ್ರದ ಸುಳಿಯಲ್ಲಿ ಎಲ್ಲರೂ ಒಂದಲ್ಲಾ ಒಂದು ಸಿಲುಕಿ ಹಾಕಿಕೊಳ್ಳಲೇಬೇಕು", ಹೀಗೆ, ಪರೋಕ್ಷವಾಗಿ ತಾನು ಎದುರಿಸುತ್ತಿರುವ ವಿಚಾರಣೆಯ ನೋವನ್ನು ಡಿಕೆಶಿ ತೋಡಿಕೊಳ್ಳುತ್ತಿದ್ದರು.
ಹೀಗೆ, ಮಾತು ಮುಂದುವರಿಸುತ್ತಾ ಡಿಕೆಶಿ, "ಇಂದಲ್ಲಾ.. ನಾಳೆ.. ನಾನು ಜೈಲಿಗೆ ಹೋಗುತ್ತೇನೆ. ನಾನು ಒಂದು ವೇಳೆ ಜೈಲಿಗೆ ಹೋದರೆ, ನನ್ನನ್ನು ನೋಡಲು ನೀವು ಬರುತ್ತೀರಾ" ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಪ್ರಶ್ನಿಸುತ್ತಾರೆ.

ಹಿಂದೆಲ್ಲಾ ಶಾಸಕರನ್ನು ನೋಡಿದರೆ ಜನರು ಕೈಮುಗೀತಾ ಇದ್ದರು
"ಹಿಂದೆಲ್ಲಾ ಶಾಸಕರನ್ನು ನೋಡಿದರೆ ಜನರು ಕೈಮುಗೀತಾ ಇದ್ದರು, ಕಾಲಿಗೆ ಬೀಳುತ್ತಿದ್ದರು. ಈಗ, ಜನಪ್ರತಿನಿಧಿಗಳನ್ನು ನೋಡಿದರೆ, ಜನ ಛೀ..ಥೂ.. ಎಂದು ಉಗೀತಾರೆ. ಪರಿಸ್ಥಿತಿ ಹೀಗಿರುವಾಗ, ನಾವೆಲ್ಲಾ ತುಂಬಾ ಎಚ್ಚರಿಕೆಯಿಂದ ರಾಜಕಾರಣ ಮಾಡುವ ಅವಶ್ಯಕತೆಯಿದೆ. ಇಲ್ಲಿ, ಯಾರೂ ಶಾಸ್ವತವಲ್ಲ ಎನ್ನುವುದನ್ನು ನನ್ನ ಬಿಜೆಪಿ ಮಿತ್ರರಿಗೆ ಹೇಳಲು ಇಷ್ಟ ಪಡುತ್ತೇನೆ" ಎಂದು, ಅಂದು ಡಿಕೆಶಿ ಹೇಳಿದ್ದರು.

ನಾನು ಬಂಡೆಯಂತವನು, ಯಾವುದಕ್ಕೂ ಜಗ್ಗುವುದಿಲ್ಲ
"ವಿಚಾರಣೆಯ ಹೆಸರಿನಲ್ಲಿ ನನ್ನ ಮೇಲೆ ದ್ವೇಷ ಸಾಧಿಸಲಾಗುತ್ತಿದೆ. ಆದರೆ, ನಾನು ಬಂಡೆಯಂತವನು, ಯಾವುದಕ್ಕೂ ಜಗ್ಗುವುದಿಲ್ಲ. ಇಂದಲ್ಲಾ ನಾಳೆ, ನಾನು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬರಬಹುದು ಎನ್ನುವುದನ್ನು ಅರಿತಿದ್ದೇನೆ. ಮಾನಸಿಕವಾಗಿ ಸಿದ್ದನಾಗಿದ್ದೇನೆ ಕೂಡಾ" ಎಂದು ಡಿಕೆಶಿ ಹೇಳಿದ್ದರು.

ಡಿಕೆಶಿ, ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರಲ್ಲಿ ಕೇಳಿಕೊಂಡಿದ್ದು
" ನಾನು ಒಂದು ವೇಳೆ ಜೈಲಿಗೆ ಹೋದರೆ, ಯಾರು ನನ್ನನ್ನು ನೋಡಲು ಬರುತ್ತಾರೋ, ಇಲ್ಲವೋ, ನೀವಂತೂ ಬರುತ್ತೀರಾ ಎಂದು ನಂಬಿದ್ದೇನೆ" ಎಂದು ಡಿಕೆಶಿ, ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರಲ್ಲಿ ಹೇಳಿದ್ದರು. ಅದಕ್ಕೆ ರಮೇಶ್ ಕುಮಾರ್ "ಹಂಗೆಲ್ಲಾ ಮಾತಾಡೋಕೆ ಹೋಗಬೇಡಿ" ಎಂದು ಹೇಳಿದ್ದರು.

ನಾನಂತೂ ನಿನ್ನನ್ನು ನೋಡಲು ಬರುತ್ತೇನೆ
ರಮೇಶ್ ಕುಮಾರ್ ಮಾತು ಮುಂದವರಿಸುತ್ತಾ, " ನೀನು ನನಗೆ ಸಹೋದರ ಇದ್ದ ಹಾಗೇ.. ನೀನು ಜೈಲಿಗೆ ಹೋಗಬಾರದು ಎಂದು ಹಿತೈಷಿಯಾಗಿ ಬಯಸುತ್ತೇನೆ. ಒಂದು ವೇಳೆ, ಪರಿಸ್ಥಿತಿ ಕೈಮೀರಿ, ನೀನೇನಾದರೂ ಜೈಲಿಗೆ ಹೋಗಿದ್ದೇ ಆದಲ್ಲಿ, ಯಾರು ಬರುತ್ತಾರೋ, ಗೊತ್ತಿಲ್ಲ, ನಾನಂತೂ ನಿನ್ನನ್ನು ನೋಡಲು ಪ್ರತೀದಿನಾ ಬರುತ್ತೇನೆ" ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದರು.

ರಮೇಶ್ ಕುಮಾರ್ - ಡಿಕೆಶಿ ಈ ಚರ್ಚೆಯ ವಿಷಯ
ಇಡಿಯಿಂದ ಡಿಕೆಶಿ ಬಂಧನವಾದ ನಂತರ, ರಮೇಶ್ ಕುಮಾರ್ - ಡಿಕೆಶಿ ಈ ಚರ್ಚೆಯ ವಿಷಯ ಮತ್ತೆ ಮುನ್ನಲೆಗೆ ಬಂದಿದೆ. ಅದ್ಯಾವ ಗಳಿಗೆಯಲ್ಲಿ ಈ ವಿಷಯ ಚರ್ಚೆಗೆ ಬಂತೋ ಎಂದು ಡಿಕೆಶಿ ಅಭಿಮಾನಿಗಳು, ಕಾರ್ಯಕರ್ತರು ನೊಂದುಕೊಳ್ಳುವಂತಾಗಿದೆ.
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications